AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK: ‘ನೀನು ಹಾಲು ಇದ್ದಂಗೆ, ಒಮ್ಮೆಲೆ ಉಕ್ಕುತ್ತೀಯ’: ಸೋನು ಗೌಡ ವ್ಯಕ್ತಿತ್ವವನ್ನು ಈ ರೀತಿ ಬಣ್ಣಿಸಿದ ಗುರೂಜಿ

Sonu Srinivas Gowda: ನಾಲ್ಕನೇ ವಾರದಲ್ಲಿ ಸೋನು ಶ್ರೀನಿವಾಸ್​ ಗೌಡ ಜೈಲು ಸೇರಿದರು. ಎಲ್ಲರೂ ಸೇರಿ ತಮಗೆ ಕಳಪೆ ಪಟ್ಟ ಕೊಟ್ಟರು ಎಂಬ ಕಾರಣಕ್ಕೆ ಅವರು ತುಂಬ ಬೇಸರ ಮಾಡಿಕೊಂಡರು.

BBK: ‘ನೀನು ಹಾಲು ಇದ್ದಂಗೆ, ಒಮ್ಮೆಲೆ ಉಕ್ಕುತ್ತೀಯ’: ಸೋನು ಗೌಡ ವ್ಯಕ್ತಿತ್ವವನ್ನು ಈ ರೀತಿ ಬಣ್ಣಿಸಿದ ಗುರೂಜಿ
ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ
TV9 Web
| Edited By: |

Updated on: Sep 04, 2022 | 5:27 PM

Share

ವೂಟ್​ ಸೆಲೆಕ್ಟ್​ ಮೂಲಕ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಈಗ ನಾಲ್ಕನೇ ವಾರವನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಆರನೇ ವಾರಕ್ಕೆ ಈ ಕಾರ್ಯಕ್ರಮ ಮುಕ್ತಾಯ ಆಗಲಿದೆ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ಈ ಶೋನಲ್ಲಿ ಭಾಗಿ ಆಗಿದ್ದಾರೆ. ವೈರಲ್​ ಹುಡುಗಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಸಖತ್​ ಹೈಲೈಟ್​ ಆಗುತ್ತಿದ್ದಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೂಲಕ ಅವರ ಕೆಲವರ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಬಿಗ್ ಬಾಸ್​ಗೂ ಎದುರುತ್ತರ ನೀಡಿ ಸೋನು ಬೈಯಿಸಿಕೊಂಡಿದ್ದಾರೆ. ಕಳಪೆ ಆಟ ಪ್ರದರ್ಶಿಸಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಒಟ್ಟಾರೆ ಸೋನು ಗೌಡ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಆರ್ಯವರ್ಧನ್​ ಗುರೂಜಿ (Aryavardhan Guruji) ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ.

ನಾಲ್ಕನೇ ವಾರದಲ್ಲಿ ಸೋನು ಶ್ರೀನಿವಾಸ್​ ಗೌಡ ಜೈಲು ಸೇರಿದರು. ಎಲ್ಲರೂ ಸೇರಿ ತಮಗೆ ಕಳಪೆ ಪಟ್ಟ ಕೊಟ್ಟರು ಎಂಬ ಕಾರಣಕ್ಕೆ ಅವರು ತುಂಬ ಬೇಸರ ಮಾಡಿಕೊಂಡರು. ಜೈಲಿನಲ್ಲಿ ಇದ್ದಷ್ಟು ಹೊತ್ತು ಅವರು ಸಿಟ್ಟು ಮಾಡುಕೊಂಡೇ ಇದ್ದರು. ಈ ವೇಳೆ ಅವರನ್ನು ಸಮಾಧಾನ ಮಾಡಲು ಅನೇಕರು ಪ್ರಯತ್ನಿಸಿದರು. ಆರ್ಯವರ್ಧನ್​ ಗುರೂಜಿ ಕೂಡ ಆಗಾಗ ಬಂದು ಮಾತನಾಡಿಸಿದರು.

‘ನಾನು ಗಮನಿಸಿದಂತೆ ನೀನು ಒಂಥರ ಹಾಲು ಇದ್ದಂಗೆ. ಸಿಟ್ಟಾದರೆ ಒಂದೇ ಸಲ ಉಕ್ಕುತ್ತೀಯ. ಪಾತ್ರೆ ಸರಿ ಇಲ್ಲ ಎಂದರೆ ಒಂದೇ ಸಲ ಒಡೆದು ಹೋಗ್ತೀಯ’ ಎಂದು ಆರ್ಯವರ್ಧನ್​ ಗುರೂಜಿ ಹೇಳಿದರು. ಆ ಮಾತು ಕೇಳಿ ಸೋನುಗೆ ನಗು ಬಂತು. ‘ಆದರೆ ನಾನು ಮತ್ತೆ ಹಾಲಾಗಲು ಟ್ರೈ ಮಾಡಲ್ಲ. ಮಾತಾಡ್ತೀನಿ, ನಾರ್ಮಲ್​ ಆಗಿ ಇರ್ತೀನಿ. ಆದರೆ ಮೊದಲು ಇದಷ್ಟು ಪ್ರೀತಿ, ಮೊದಲು ಇದ್ದಷ್ಟು ಕಾಳಜಿ ತೋರಿಸಲ್ಲ. ಅಷ್ಟು ಪ್ರೀತಿ ಇದ್ದಿದ್ದಕ್ಕಾಗಿಯೇ ನನಗೆ ಈ ಜಾಗ’ ಎಂದು ಸೋನು ಗೌಡ ಹೇಳಿದ್ದಾರೆ.

ಸೋನು ಗೌಡ ಮತ್ತು ರಾಕೇಶ್​ ಅಡಿಗ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಸೋನು ಜೈಲಿಗೆ ಹೋಗಿದ್ದಕ್ಕೆ ರಾಕೇಶ್​ಗೆ ಬೇಸರ ಆಗಿದೆ. ಹಾಗಾಗಿ ಅವರ ಕೂಡ ಬೇರೆ ಯಾವುದೇ ಆಹಾರ ತಿನ್ನದೇ ಬರೀ ರಾಗಿ ಗಂಜಿ ತಿಂದುಕೊಂಡು ಕಾಲ ಕಳೆದಿದ್ದಾರೆ. ‘ಇದು ಯಾವ ರೀತಿ ಲವ್​ ಸ್ಟೋರಿಯೋ ಗೊತ್ತಾಗ್ತಾ ಇಲ್ಲ’ ಎಂದು ಸಾನ್ಯಾ ಐಯ್ಯರ್​ ಹೇಳಿದರು. ‘ಇದು ಲವ್​ ಅಲ್ಲಮ್ಮ, ಜೈಲಿಗೆ ಕಳಿಸಿದ್ದಕ್ಕೆ ಶಿಕ್ಷೆ’ ಎಂದು ರಾಕೇಶ್​ ಸಮಜಾಯಿಷಿ ನೀಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!