Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Srinivas Gowda: ‘ರಾತ್ರಿ ಮಲಗುವಾಗ ಬೆಡ್​ ಹತ್ರ ಅವ್ಳು ಇಲ್ಲ ಅಂತ ಮಿಸ್​ ಮಾಡಿಕೊಳ್ತೀನಿ’: ಸೋನು ಗೌಡ ಹೇಳಿದ್ದು ಯಾರ ಬಗ್ಗೆ?

BBK | Sonu Srinivas Gowda: ‘ಮನೆ ಖಾಲಿ ಖಾಲಿ ಕಾಣಿಸುತ್ತಿದೆಯೇ’ ಎಂದು ಕಿಚ್ಚ ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಮನೆಯ ಪ್ರತಿಯೊಬ್ಬರೂ ಬೇರೆ ಬೇರೆ ಉತ್ತರ ನೀಡಿದರು.

Sonu Srinivas Gowda: ‘ರಾತ್ರಿ ಮಲಗುವಾಗ ಬೆಡ್​ ಹತ್ರ ಅವ್ಳು ಇಲ್ಲ ಅಂತ ಮಿಸ್​ ಮಾಡಿಕೊಳ್ತೀನಿ’: ಸೋನು ಗೌಡ ಹೇಳಿದ್ದು ಯಾರ ಬಗ್ಗೆ?
ಸೋನು ಶ್ರೀನಿವಾಸ್ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on: Sep 04, 2022 | 9:25 PM

ಹಲವು ಟ್ವಿಸ್ಟ್​ಗಳು ‘ಬಿಗ್​ ಬಾಸ್ ಕನ್ನಡ ಒಟಿಟಿ’​ (Bigg Boss OTT Kannada) ಆಟದಲ್ಲಿ ಎದುರಾಗುತ್ತವೆ. ಯಾರು ಯಾವಾಗ ಎಲಿಮಿನೇಟ್​ (Bigg Boss Elimination) ಆಗುತ್ತಾರೆ ಎಂಬುದು ಮೊದಲೇ ಗೊತ್ತಾಗುವುದಿಲ್ಲ. ಒಬ್ಬರು ಎಲಿಮಿನೇಟ್​ ಆದಾಗ ಅವರ ಜೊತೆ ಆಪ್ತವಾಗಿ ಇದ್ದವರಿಗೆ ಬೇಸರ ಆಗುವುದು ಸಹಜ. ಅದೇ ವಿಚಾರ ಈ ವಾರದ ‘ಸೂಪರ್​ ಸಂಡೇ ವಿಥ್​ ಸುದೀಪ’ ಎಪಿಸೋಡ್​ನಲ್ಲಿ ಚರ್ಚೆ ಆಗಿದೆ. ಕಿಚ್ಚ ಸುದೀಪ್​ ಅವರು ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಎಲ್ಲ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಶನಿವಾರ (ಸೆ.3) ಡಬಲ್​ ಎಲಿಮಿನೇಷನ್​ ಆಯಿತು. ಅಕ್ಷತಾ ಕುಕ್ಕಿ (Akshata Kuki) ಮತ್ತು ಚೈತ್ರಾ ಹಳ್ಳಿಕೇರಿ ಅವರು ಔಟ್​ ಆದರು. ಅವರ ಎಲಿಮಿನೇಷನ್​ ನಂತರ ಮನೆಯ ವಾತಾವರಣ ಹೇಗಿದೆ ಎಂಬ ಬಗ್ಗೆ ಭಾನುವಾರ (ಸೆ.4) ಮಾತುಕತೆ ಆಗಿದೆ.

‘ಮನೆ ಖಾಲಿ ಖಾಲಿ ಕಾಣಿಸುತ್ತಿದೆಯೇ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಮನೆಯ ಪ್ರತಿಯೊಬ್ಬರೂ ಬೇರೆ ಬೇರೆ ಉತ್ತರ ನೀಡಿದರು. ಅಕ್ಷತಾ ಕುಕ್ಕಿ ಅವರು ಔಟ್​ ಆಗಿದ್ದು ಸೋನು ಗೌಡ ಅವರಿಗೆ ಬೇಸರ ಮೂಡಿಸಿದೆ. ‘ರಾತ್ರಿ ಮಲಗುವಾಗ ಬೆಡ್​ ಹತ್ರ ಅವಳು ಇಲ್ಲ ಅಂತ ಮಿಸ್​ ಮಾಡಿಕೊಳ್ತೀನಿ’ ಎಂದು ಸೋನು ಹೇಳಿದ್ದಾರೆ. ಸೋನು ಮತ್ತು ಅಕ್ಷತಾ ಕುಕ್ಕಿ ನಡುವೆ ಸ್ನೇಹ ಬೆಳೆದಿತ್ತು.

ಅಕ್ಷತಾ ಕುಕ್ಕಿ ಎಲಿಮಿನೇಟ್​ ಆಗುವುದಕ್ಕೂ ಮುನ್ನ ಸೋನು ಗೌಡ ಅವರಿಗೆ ಕನಸು ಬಿದ್ದಿತ್ತು. ‘ಅಕ್ಷತಾಳನ್ನು ಸಮಾಧಾನ ಮಾಡಲು ನಾನು ಕೂಡ ಮನೆಯಿಂದ ಹೊರಗೆ ಹೋದೆ. ಆಗ ನಮ್ಮ ಅಮ್ಮ ನನಗೆ ಹೊಡೆಯುತ್ತಿದ್ದರು. ಆ ರೀತಿ ಕನಸು ಬಿದ್ದಿತ್ತು’ ಎಂದು ಸೋನು ವಿವರಿಸಿದ್ದಾರೆ. ಇಂಥ ಹಲವು ವಿಚಾರಗಳಿಂದ ಅವರು ಹೈಲೈಟ್​ ಆಗುತ್ತಿದ್ದಾರೆ.

ಇದನ್ನೂ ಓದಿ
Image
Sonu Srinivas Gowda: ‘ಬಿಗ್ ಬಾಸ್’ ಮನೆಯಲ್ಲಿ ಕಳಪೆ ಆಟ ತೋರಿದ ಸೋನು ಶ್ರೀನಿವಾಸ್ ಗೌಡಗೆ ಶಿಕ್ಷೆ
Image
‘ಬಿಗ್ ಬಾಸ್​ಗೆ ಬಂದಿದ್ದು ಆಟ ಆಡೋಕೆ, ಶೋಕಿ ಮಾಡೋಕೆ’: ಸೋನು ಶ್ರೀನಿವಾಸ್ ಗೌಡ
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

ಕಣ್ಣೀರು ಹಾಕಿದ ಜಯಶ್ರೀ ಆರಾಧ್ಯ:

ಚೈತ್ರಾ ಹಳ್ಳಿಕೇರಿ ಅವರು ಎಲಿಮಿನೇಟ್​ ಆಗಿದ್ದು ಜಯಶ್ರೀ ಆರಾಧ್ಯ ಅವರಿಗೆ ತೀವ್ರ ನೋವು ಉಂಟು ಮಾಡಿದೆ. ಶನಿವಾರ ರಾತ್ರಿ ಜಯಶ್ರೀ ಎದೆ ಬಡಿದುಕೊಂಡು ಅತ್ತಿದ್ದಾರೆ. ‘ನನಗೆ ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ’ ಎಂದು ಕಣ್ಣೀರು ಹಾಕಿದ್ದಾರೆ. ‘ನಗುನಗುತ್ತಾ ಜೀವನ ಎದುರಿಸಬಹುದು ಅನ್ನೋದು ನಿಮ್ಮಿಂದ ಕಲಿತೆ’ ಎಂದು ಜಯಶ್ರೀ ಹೇಳಿದ್ದಾರೆ.

ಐದನೇ ವಾರಕ್ಕೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಕಾಲಿಟ್ಟಿದೆ. 9 ಜನರ ನಡುವೆ ಸ್ಪರ್ಧೆ ಜೋರಾಗಿದೆ. ನಂದಿನಿ, ಜಶ್ವಂತ್​, ಸಾನ್ಯಾ ಐಯ್ಯರ್​, ಸೋಮಣ್ಣ ಮಾಚಿಮಾಡ, ಆರ್ಯವರ್ಧನ್​ ಗುರೂಜಿ, ರಾಕೇಶ್​ ಅಡಿಗ, ಜಯಶ್ರೀ ಆರಾಧ್ಯ, ಸೋನು ಗೌಡ, ರೂಪೇಶ್​ ಶೆಟ್ಟಿ ನಡುವೆ ಪೈಪೋಟಿ ಮುಂದುವರಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ