‘ದಯವಿಟ್ಟು ಕಾಫಿ ವಿತ್ ಕರಣ್​ ಶೋಗೆ ಬನ್ನಿ’; ಸೆಲೆಬ್ರಿಟಿಗಳಿಗೆ ಕರೆ ಮಾಡಿ ಬೇಡಿದ ಕರಣ್ ಜೋಹರ್

| Updated By: ರಾಜೇಶ್ ದುಗ್ಗುಮನೆ

Updated on: Jun 28, 2022 | 4:49 PM

ಕರಣ್​ ಜೋಹರ್ ಅವರು ಯಶಸ್ವಿಯಾಗಿ ‘ಕಾಫಿ ವಿತ್ ಕರಣ್​’ ಶೋನ ಆರು ಸೀಸನ್​ಗಳನ್ನು ಪೂರೈಸಿದ್ದಾರೆ. ಈಗ ಏಳನೇ ಸೀಸನ್ ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಪ್ರಸಾರ ಆಗುತ್ತಿದೆ.

‘ದಯವಿಟ್ಟು ಕಾಫಿ ವಿತ್ ಕರಣ್​ ಶೋಗೆ ಬನ್ನಿ’; ಸೆಲೆಬ್ರಿಟಿಗಳಿಗೆ ಕರೆ ಮಾಡಿ ಬೇಡಿದ ಕರಣ್ ಜೋಹರ್
ಕರಣ್
Follow us on

ಕರಣ್ ಜೋಹರ್ (Karan Johar) ಅವರಿಗೆ ಬಾಲಿವುಡ್​ನಲ್ಲಿ ಬಹುಬೇಡಿಕೆ ಇದೆ. ಅವರು ನಿರ್ಮಾಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಅವರ ಮಾತು ನಡೆಯುತ್ತದೆ. ಅವರು ಪಾರ್ಟಿ ಆಯೋಜನೆ ಮಾಡಿದರೆ ಸಾಕು, ಇಡೀ ಬಾಲಿವುಡ್​ ಈ ಪಾರ್ಟಿಗೆ ಹಾಜರಿ ಹಾಕುತ್ತದೆ. ಅಷ್ಟರ ಮಟ್ಟಿಗೆ ಕರಣ್ ಜೋಹರ್ ಫೇಮಸ್. ಈಗ ಕರಣ್ ಜೋಹರ್ ನಡೆಸಿಕೊಡುತ್ತಿರುವ ‘ಕಾಫಿ ವಿತ್ ಕರಣ್​’ ಶೋನ (Koffee With Karan Chat Show) ಏಳನೇ ಸೀಸನ್ ಬರುತ್ತಿದೆ. ಈ ಚಾಟ್ ಶೋಗೆ ಬರುವಂತೆ ಸೆಲೆಬ್ರಿಟಿಗಳ ಎದುರು ಬೇಡುವ ಪರಿಸ್ಥಿತಿ ಕರಣ್​ಗೆ ಬಂದಿದೆ. ಈ ಫನ್ನಿ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.

ಕರಣ್​ ಜೋಹರ್ ಅವರು ಯಶಸ್ವಿಯಾಗಿ ‘ಕಾಫಿ ವಿತ್ ಕರಣ್​’ ಶೋನ ಆರು ಸೀಸನ್​ಗಳನ್ನು ಪೂರೈಸಿದ್ದಾರೆ. ಈಗ ಏಳನೇ ಸೀಸನ್ ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಪ್ರಸಾರ ಆಗುತ್ತಿದೆ. ಜುಲೈ 7ರಿಂದ ಈ ಶೋ ಪ್ರಸಾರ ಆರಂಭಿಸಲಿದೆ. ಇದಕ್ಕೆ ಈಗಾಗಲೇ ಪ್ರಮೋಷನ್ ಕಾರ್ಯಗಳು ಆರಂಭವಾಗಿದೆ. ಇದರ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
ಶಾರುಖ್-ಕರಣ್ ಸಂಬಂಧದ ಬಗ್ಗೆ ಹುಟ್ಟಿತ್ತು ಅನುಮಾನ; ಎಲ್ಲವನ್ನೂ ವಿವರಿಸಿದ್ದ ಜೋಹರ್  
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
‘ನನ್ನನ್ನೇಕೆ ದೂಷಿಸುತ್ತೀರಿ?’; ಏಕಾಏಕಿ ಸಿಟ್ಟಾದ ನಿರ್ಮಾಪಕ ಕರಣ್​ ಜೋಹರ್
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಡಿಸ್ನಿ+ ಹಾಟ್​ಸ್ಟಾರ್ ಹಂಚಿಕೊಂಡಿರುವ ಪ್ರೋಮೋದಲ್ಲಿ ‘ನನ್ನ ಶೋಗಾಗಿ ಎಲ್ಲರೂ ಕಾದಿದ್ದಾರೆ’ ಎಂದು ಹೇಳುತ್ತಾರೆ ಕರಣ್. ಸೋಶಿಯಲ್ ಮೀಡಿಯಾದಲ್ಲಿ ‘ಕಾಫಿ ವಿತ್​ ಕರಣ್​’ ಶೋ ಬಗ್ಗೆ ಕಾಣಿಸಿದ ನೆಗೆಟಿವ್ ಕಾಮೆಂಟ್​ಗಳನ್ನು ತೋರಿಸಲಾಗುತ್ತದೆ. ‘ಎಲ್ಲರೂ ಅಲ್ಲ, ಆದರೆ, ಸೆಲೆಬ್ರಿಟಿಗಳೆಲ್ಲರೂ ನನ್ನ ಶೋಗೆ ಬರೋಕೆ ಇಷ್ಟಪಡುತ್ತಾರೆ’ ಎಂದು ಹೇಳುತ್ತಾರೆ ಕರಣ್​. ಈ ಬೆನ್ನಲ್ಲೇ ಅವರು ಸೆಲೆಬ್ರಿಟಿಗಳಿಗೆ ಕರೆ ಮಾಡಿ ತಮ್ಮ ಶೋಗೆ ಬರುವಂತೆ ಬೇಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಎರಡು ಹ್ಯಾಂಪರ್, ಸಿನಿಮಾದಲ್ಲಿ ಆಫರ್ ನೀಡುವ ಆಮಿಷ ಒಡ್ಡುತ್ತಾರೆ. ಆದರೆ, ಯಾರೊಬ್ಬರೂ ಈ ಶೋಗೆ ಬರೋಕೆ ಆಸಕ್ತಿ ತೋರುವುದಿಲ್ಲ. ಈ ಪ್ರೋಮೋ ಸಖತ್ ಫನ್ನಿ ಆಗಿದೆ.

‘ಕಾಫಿ ವಿತ್ ಕರಣ್’ ಮೊದಲ ಸೀಸನ್ ಪ್ರಸಾರವಾಗಿದ್ದು 2004ರಲ್ಲಿ. ಇದೇ ಮೊದಲ ಬಾರಿಗೆ ಈ ಶೋ ಟಿವಿಯಲ್ಲಿ ಪ್ರಸಾರವಾಗದೆ ಒಟಿಟಿಯಲ್ಲಿ ಟೆಲಿಕಾಸ್ಟ್​ ಆಗುತ್ತಿದೆ. ಈ ಬಾರಿ ದಕ್ಷಿಣದ ಕಲಾವಿದರಾದ ಸಮಂತಾ, ವಿಜಯ್ ದೇವರಕೊಂಡ ಮೊದಲಾದವರು ಈ ಶೋನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ಶೋನಲ್ಲಿ ಕೆಲ ಪ್ರಶ್ನೆಗಳು ತುಂಬಾನೇ ನೇರವಾಗಿರುತ್ತದೆ. ಇದರಿಂದ ವಿವಾದಗಳು ಹೊತ್ತಿಕೊಂಡಿದ್ದೂ ಇದೆ. ರಣಬೀರ್ ಕಪೂರ್ ಅವರು ಈ ಶೋ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಸಲ್ಮಾನ್ ಖಾನ್, ಶಾರುಖ್ ಸೇರಿ ಅನೇಕರು ಈ ಶೋನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ನಿರ್ಮಾಪಕ ಕರಣ್ ಜೋಹರ್​​ನಿಂದ ಐದು ಕೋಟಿ ರೂಪಾಯಿ ಸುಲಿಗೆ ಮಾಡಲು ನಡೆದಿತ್ತು ಪ್ಲ್ಯಾನ್​

ಶಾರುಖ್-ಕರಣ್ ಸಂಬಂಧದ ಬಗ್ಗೆ ಹುಟ್ಟಿತ್ತು ಅನುಮಾನ; ಎಲ್ಲವನ್ನೂ ವಿವರಿಸಿದ್ದ ಜೋಹರ್