AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ

‘ಮನಿ ಹೈಸ್ಟ್​’ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರತಿ ಪಾತ್ರಕ್ಕೂ ಖ್ಯಾತ ನಗರಗಳ ಹೆಸರನ್ನು ಇಟ್ಟಿರೋದು ವಿಶೇಷ. ಬ್ಯಾಂಕ್​ ದರೋಡೆ ಮಾಡುವ ಒಂದು ತಂಡದ ಕಥೆಯನ್ನು ಈ ವೆಬ್​ ಸೀರಿಸ್​ ಹೇಳುತ್ತಿದೆ.

Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ
Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ
TV9 Web
| Edited By: |

Updated on: Sep 01, 2021 | 6:59 PM

Share

‘ಮನಿ ಹೈಸ್ಟ್​ ಸೀಸನ್​ 5’ ರಿಲೀಸ್​ಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್​​ 3ರಂದು ಈ ಸಿರೀಸ್​ ರಿಲೀಸ್​ ಆಗುತ್ತಿದೆ. ಮೂಲತಃ ಸ್ಪ್ಯಾನಿಶ್​ ವೆಬ್​ ಸೀರಿಸ್​ ಇದಾಗಿದ್ದು, ಇಂಗ್ಲಿಷ್​ನಲ್ಲೂ ಡಬ್​ ಆಗಿ ನೆಟ್​ಫ್ಲಿಕ್ಸ್​ನಲ್ಲಿ ತೆರೆಕಾಣುತ್ತಿದೆ. ಭಾರತದಲ್ಲಿಯೂ ಈ ವೆಬ್​ ಸೀರಿಸ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ರಿಲೀಸ್​ ದಿನಾಂಕ ಸಮೀಪಿಸಿದಂತೆ ಈ ವೆಬ್​ ಸೀರಿಸ್​ ಕ್ರೇಜ್​ ಜೋರಾಗಿದೆ. ಅಚ್ಚರಿ ಎಂದರೆ, ಈ ವೆಬ್​ ಸೀರಿಸ್​ ರಿಲೀಸ್​ ಆಗುವ ದಿನ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಿದೆ.

‘ಮನಿ ಹೈಸ್ಟ್​’ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರತಿ ಪಾತ್ರಕ್ಕೂ ಖ್ಯಾತ ನಗರಗಳ ಹೆಸರನ್ನು ಇಟ್ಟಿರೋದು ವಿಶೇಷ. ಬ್ಯಾಂಕ್​ ದರೋಡೆ ಮಾಡುವ ಒಂದು ತಂಡದ ಕಥೆಯನ್ನು ಈ ವೆಬ್​ ಸೀರಿಸ್​ ಹೇಳುತ್ತಿದೆ. ಸಾಕಷ್ಟು ಕುತೂಹಲಕಾರಿ ಅಂಶ ಹಾಗೂ ಪ್ರಶ್ನೆಗಳೊಂದಿಗೆ ನಾಲ್ಕನೇ ಸೀಸನ್​ ಅಂತ್ಯವಾಗಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಸೀಸನ್​ 5ರಲ್ಲಿ ಉತ್ತರ ಸಿಗುವ ನಿರೀಕ್ಷೆ ಪ್ರೇಕ್ಷಕರಲ್ಲಿದೆ. ಈ ಕಾರಣಕ್ಕೆ ಈ ವೆಬ್​ ಸೀರಿಸ್​ ನೋಡೋಕೆ ಅನೇಕರು ತುದಿಗಾಲಿನಲ್ಲಿ ನಿಂತಿದ್ದಾರೆ.

ಜೈಪುರ ಮೂಲದ ಕಂಪೆನಿ ಸೆಪ್ಟೆಂಬರ್​ 3ರಂದು ರಜೆ ಘೋಷಿಸಿದೆ. ಈ ವಿಶೇಷ ರಜೆಗೆ ‘ನೆಟ್​ಫ್ಲಿಕ್ಸ್​ ಮತ್ತು ಚಿಲ್​ ಹಾಲಿಡೇ’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಕಂಪೆನಿಯ ಸಿಇಒ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಕಳೆದ ಎರಡು ವರ್ಷಗಳಿಂದ ಎಲ್ಲಾ ಸಿಬ್ಬಂದಿ ಪ್ರಾಮಾಣಿಕವಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸೆಪ್ಟೆಂಬರ್​ 3ರಂದು ‘ಮನಿ ಹೈಸ್ಟ್’​ ನೋಡೋಕೆ ನಾವು ಅವಕಾಶ ಮಾಡಿಕೊಡುತ್ತಿದ್ದೇವೆ. ಅಂದು ಸಿಬ್ಬಂದಿಗೆ ರಜೆ ನೀಡುತ್ತಿದ್ದೇವೆ. ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ಇಲ್ಲದವರಿಗೆ ಅದನ್ನೂ ನೀಡುತ್ತಿದ್ದೇವೆ’ ಎಂದಿದ್ದಾರೆ ಅಭಿಷೇಕ್.

ಸದ್ಯ, ಈ ಸಿಇಒ ಹೇಳಿಕೆ ಸಾಕಷ್ಟು ವೈರಲ್​ ಆಗುತ್ತಿದೆ. ಅನೇಕರು ಈ ಬಗ್ಗೆ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮನಿ ಹೈಸ್ಟ್​ ಪ್ರೊಫೆಸರ್​ಗೆ ಕಾಡಿತ್ತು ಕ್ಯಾನ್ಸರ್​; ಅವರ ಮುಂದಿತ್ತು ಸಾವು ಅಥವಾ ಕಾಲು ಕತ್ತರಿಸುವ ಆಯ್ಕೆ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?