AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶೋ ನಂತರವೂ ನಾವು ಕನೆಕ್ಟ್​ ಆಗುತ್ತೇವೆ’; ಶಮಿತಾ ಬಗ್ಗೆ ರಾಕೇಶ್​ ಅಚ್ಚರಿಯ ಹೇಳಿಕೆ

ಎಲ್ಲಾ ಸ್ಪರ್ಧಿಗಳ ಬಗ್ಗೆ ತಮ್ಮತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಅವಕಾಶವನ್ನು ಬಿಗ್​ ಬಾಸ್​ ನೀಡಿದ್ದರು. ಈ ವೇಳೆ ರಾಕೇಶ್​ ಅವರು ಶಮಿತಾ ಬಗ್ಗೆ ಮಾತನಾಡೋಕೆ ಆರಂಭಿಸಿದರು.

‘ಶೋ ನಂತರವೂ ನಾವು ಕನೆಕ್ಟ್​ ಆಗುತ್ತೇವೆ’; ಶಮಿತಾ ಬಗ್ಗೆ ರಾಕೇಶ್​ ಅಚ್ಚರಿಯ ಹೇಳಿಕೆ
‘ಶೋ ನಂತರವೂ ನಾವು ಕನೆಕ್ಟ್​ ಆಗುತ್ತೇವೆ’; ಶಮಿತಾ ಬಗ್ಗೆ ರಾಕೇಶ್​ ಅಚ್ಚರಿಯ ಹೇಳಿಕೆ
TV9 Web
| Edited By: |

Updated on: Sep 02, 2021 | 6:54 PM

Share

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಹಾಗೂ ರಾಕೇಶ್​ ಬಾಪಟ್​ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಕನೆಕ್ಟ್​ ಆಗುತ್ತಿದ್ದಾರೆ. ಅವರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗುಮಾನಿ ಅಭಿಮಾನಿಗಳಲ್ಲಿದೆ. ಹೀಗಿರುವಾಗಲೇ ಅವರು ಬಿಗ್​ ಬಾಸ್​ ಮನೆಯಲ್ಲಿ ನಾನಾ ರೀತಿಯ ಹೇಳಿಕೆ ನೀಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ಶೋ ನಂತರವೂ ನಾವು ಕನೆಕ್ಟ್​ ಆಗುತ್ತೇವೆ ಎಂದು ಹೇಳುವ ಮೂಲಕ ರಾಕೇಶ್​ ಅಚ್ಚರಿ ಮೂಡಿಸಿದ್ದಾರೆ.

ಎಲ್ಲಾ ಸ್ಪರ್ಧಿಗಳ ಬಗ್ಗೆ ತಮ್ಮತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಅವಕಾಶವನ್ನು ಬಿಗ್​ ಬಾಸ್​ ನೀಡಿದ್ದರು. ಈ ವೇಳೆ ರಾಕೇಶ್​ ಅವರು ಶಮಿತಾ ಬಗ್ಗೆ ಮಾತನಾಡೋಕೆ ಆರಂಭಿಸಿದರು. ಅವರು ಮಾತನಾಡುತ್ತಾ ಭಾವುಕರಾಗಿದ್ದು ವೀಕ್ಷಕರ ಗಮನಕ್ಕೆ ಬಂದಿದೆ. ಅವರ ನಡುವೆ ಹುಟ್ಟಿರುವ ಸಂಬಂಧ ಎಂಥದ್ದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

‘ಶಮಿತಾ ಮನಸ್ಸು ಶುದ್ಧವಾಗಿದೆ. ನಾನು ಅವಳನ್ನು ನಿಜವಾಗಲೂ ಇಷ್ಟಪಡುತ್ತೇನೆ. ಅವಳು ಅದ್ಭುತ ವ್ಯಕ್ತಿ. ಶೋ ಮುಗಿದ ನಂತರವೂ ನಾವು ಕನೆಕ್ಟ್​ ಆಗುತ್ತೇವೆ ಎಂದು ನನಗೆ ಅನಿಸುತ್ತದೆ. ನನಗೆ ಯಾರದ್ದಾದರೂ ಜೊತೆಗೆ ಸಂಬಂಧ ಬೆಳೆಸುವುದು ಎಂದರೆ ಭಯ. ಆದರೆ, ನಾನು ಅವಳಿಗೆ ಸಿಕ್ಕಾಪಟ್ಟೆ ಕನೆಕ್ಟ್​​ ಆಗುತ್ತೇನೆ’ ಎಂದು ಖುಷಿ ವ್ಯಕ್ತಪಡಿಸಿದರು.

ದಿವ್ಯಾ ಅಗರ್​​ವಾಲ್​ ಜೊತೆ ರಾಕೇಶ್​ ಮಾತನಾಡುವುದನ್ನು ಶಮಿತಾ ತಡೆಯುತ್ತಿದ್ದಾರೆ. ಇದು ರಾಕೇಶ್​​ಗೆ ಇಷ್ಟವಾಗಲಿಲ್ಲ. ಈ ವಿಚಾರವಾಗಿ ಶಮಿತಾ ಜತೆ ಮಾತನಾಡಿದ ರಾಕೇಶ್,​ ‘ದಿವ್ಯಾ ಎಂದರೆ ನನಗೆ ಇಷ್ಟವಿಲ್ಲ. ಅವಳು ನನಗೆ ಮುಖ್ಯಳಲ್ಲ. ಆದರೆ ಒಂದೇ ಮನೆಯಲ್ಲಿರುವಾಗ ಅವಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದಿದ್ದಾರೆ​. ‘ನಾನು ಮೊದಲ ದಿನದಿಂದಲೂ ನಿನ್ನ ಜತೆ ನಡೆದುಕೊಂಡಿದ್ದ ರೀತಿ ನಕಲಿ ಅಲ್ಲ. ನನ್ನ ಕೈಗೆ, ಕುತ್ತಿಗೆಗೆ ಕಿಸ್​ ಮಾಡೋಕೆ ಅವಕಾಶ ಕೊಟ್ಟೆ. ಇದಕ್ಕೆ ಕಾರಣ ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ’ ಎಂದು ಶಮಿತಾ ಒಪ್ಪಿಕೊಂಡರು.

ಇದನ್ನೂ ಓದಿ: ‘ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ, ಅದಕ್ಕೆ ಕಿಸ್​ ಮಾಡೋಕೆ ಬಿಟ್ಟೆ’; ರಾಕೇಶ್​ ಎದುರು ಎಲ್ಲವನ್ನೂ ಹೇಳಿಕೊಂಡ ಶಮಿತಾ ಶೆಟ್ಟಿ

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ