AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶೋ ನಂತರವೂ ನಾವು ಕನೆಕ್ಟ್​ ಆಗುತ್ತೇವೆ’; ಶಮಿತಾ ಬಗ್ಗೆ ರಾಕೇಶ್​ ಅಚ್ಚರಿಯ ಹೇಳಿಕೆ

ಎಲ್ಲಾ ಸ್ಪರ್ಧಿಗಳ ಬಗ್ಗೆ ತಮ್ಮತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಅವಕಾಶವನ್ನು ಬಿಗ್​ ಬಾಸ್​ ನೀಡಿದ್ದರು. ಈ ವೇಳೆ ರಾಕೇಶ್​ ಅವರು ಶಮಿತಾ ಬಗ್ಗೆ ಮಾತನಾಡೋಕೆ ಆರಂಭಿಸಿದರು.

‘ಶೋ ನಂತರವೂ ನಾವು ಕನೆಕ್ಟ್​ ಆಗುತ್ತೇವೆ’; ಶಮಿತಾ ಬಗ್ಗೆ ರಾಕೇಶ್​ ಅಚ್ಚರಿಯ ಹೇಳಿಕೆ
‘ಶೋ ನಂತರವೂ ನಾವು ಕನೆಕ್ಟ್​ ಆಗುತ್ತೇವೆ’; ಶಮಿತಾ ಬಗ್ಗೆ ರಾಕೇಶ್​ ಅಚ್ಚರಿಯ ಹೇಳಿಕೆ
TV9 Web
| Edited By: |

Updated on: Sep 02, 2021 | 6:54 PM

Share

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಹಾಗೂ ರಾಕೇಶ್​ ಬಾಪಟ್​ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಕನೆಕ್ಟ್​ ಆಗುತ್ತಿದ್ದಾರೆ. ಅವರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗುಮಾನಿ ಅಭಿಮಾನಿಗಳಲ್ಲಿದೆ. ಹೀಗಿರುವಾಗಲೇ ಅವರು ಬಿಗ್​ ಬಾಸ್​ ಮನೆಯಲ್ಲಿ ನಾನಾ ರೀತಿಯ ಹೇಳಿಕೆ ನೀಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ಶೋ ನಂತರವೂ ನಾವು ಕನೆಕ್ಟ್​ ಆಗುತ್ತೇವೆ ಎಂದು ಹೇಳುವ ಮೂಲಕ ರಾಕೇಶ್​ ಅಚ್ಚರಿ ಮೂಡಿಸಿದ್ದಾರೆ.

ಎಲ್ಲಾ ಸ್ಪರ್ಧಿಗಳ ಬಗ್ಗೆ ತಮ್ಮತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಅವಕಾಶವನ್ನು ಬಿಗ್​ ಬಾಸ್​ ನೀಡಿದ್ದರು. ಈ ವೇಳೆ ರಾಕೇಶ್​ ಅವರು ಶಮಿತಾ ಬಗ್ಗೆ ಮಾತನಾಡೋಕೆ ಆರಂಭಿಸಿದರು. ಅವರು ಮಾತನಾಡುತ್ತಾ ಭಾವುಕರಾಗಿದ್ದು ವೀಕ್ಷಕರ ಗಮನಕ್ಕೆ ಬಂದಿದೆ. ಅವರ ನಡುವೆ ಹುಟ್ಟಿರುವ ಸಂಬಂಧ ಎಂಥದ್ದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

‘ಶಮಿತಾ ಮನಸ್ಸು ಶುದ್ಧವಾಗಿದೆ. ನಾನು ಅವಳನ್ನು ನಿಜವಾಗಲೂ ಇಷ್ಟಪಡುತ್ತೇನೆ. ಅವಳು ಅದ್ಭುತ ವ್ಯಕ್ತಿ. ಶೋ ಮುಗಿದ ನಂತರವೂ ನಾವು ಕನೆಕ್ಟ್​ ಆಗುತ್ತೇವೆ ಎಂದು ನನಗೆ ಅನಿಸುತ್ತದೆ. ನನಗೆ ಯಾರದ್ದಾದರೂ ಜೊತೆಗೆ ಸಂಬಂಧ ಬೆಳೆಸುವುದು ಎಂದರೆ ಭಯ. ಆದರೆ, ನಾನು ಅವಳಿಗೆ ಸಿಕ್ಕಾಪಟ್ಟೆ ಕನೆಕ್ಟ್​​ ಆಗುತ್ತೇನೆ’ ಎಂದು ಖುಷಿ ವ್ಯಕ್ತಪಡಿಸಿದರು.

ದಿವ್ಯಾ ಅಗರ್​​ವಾಲ್​ ಜೊತೆ ರಾಕೇಶ್​ ಮಾತನಾಡುವುದನ್ನು ಶಮಿತಾ ತಡೆಯುತ್ತಿದ್ದಾರೆ. ಇದು ರಾಕೇಶ್​​ಗೆ ಇಷ್ಟವಾಗಲಿಲ್ಲ. ಈ ವಿಚಾರವಾಗಿ ಶಮಿತಾ ಜತೆ ಮಾತನಾಡಿದ ರಾಕೇಶ್,​ ‘ದಿವ್ಯಾ ಎಂದರೆ ನನಗೆ ಇಷ್ಟವಿಲ್ಲ. ಅವಳು ನನಗೆ ಮುಖ್ಯಳಲ್ಲ. ಆದರೆ ಒಂದೇ ಮನೆಯಲ್ಲಿರುವಾಗ ಅವಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದಿದ್ದಾರೆ​. ‘ನಾನು ಮೊದಲ ದಿನದಿಂದಲೂ ನಿನ್ನ ಜತೆ ನಡೆದುಕೊಂಡಿದ್ದ ರೀತಿ ನಕಲಿ ಅಲ್ಲ. ನನ್ನ ಕೈಗೆ, ಕುತ್ತಿಗೆಗೆ ಕಿಸ್​ ಮಾಡೋಕೆ ಅವಕಾಶ ಕೊಟ್ಟೆ. ಇದಕ್ಕೆ ಕಾರಣ ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ’ ಎಂದು ಶಮಿತಾ ಒಪ್ಪಿಕೊಂಡರು.

ಇದನ್ನೂ ಓದಿ: ‘ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ, ಅದಕ್ಕೆ ಕಿಸ್​ ಮಾಡೋಕೆ ಬಿಟ್ಟೆ’; ರಾಕೇಶ್​ ಎದುರು ಎಲ್ಲವನ್ನೂ ಹೇಳಿಕೊಂಡ ಶಮಿತಾ ಶೆಟ್ಟಿ

Follow Us
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ