AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ಲೀಕ್ ವಿಚಾರದಲ್ಲಿ ಸೋನುಗೆ ಬುದ್ಧಿವಾದ ಹೇಳಿದ ಮನೆ ಮಂದಿ​; ಇದನ್ನು ಅವರು ಸ್ವೀಕರಿಸ್ತಾರಾ?

ರೂಪೇಶ್ ಹಾಗೂ ಸೋನು ಮಾತನಾಡುತ್ತಿದ್ದರು. ಈ ವೇಳೆ ವಿಡಿಯೋ ವಿಚಾರ ಮುನ್ನೆಲೆಗೆ ಬಂತು. ‘ನೀನು ಆವಾಗಲೇ ದೂರು ಕೊಡಬೇಕಿತ್ತು’ ಎಂದರು ರೂಪೇಶ್. ಇದಕ್ಕೆ ಸೋನು ಉತ್ತರಿಸಿದ್ದಾರೆ.

ವಿಡಿಯೋ ಲೀಕ್ ವಿಚಾರದಲ್ಲಿ ಸೋನುಗೆ ಬುದ್ಧಿವಾದ ಹೇಳಿದ ಮನೆ ಮಂದಿ​; ಇದನ್ನು ಅವರು ಸ್ವೀಕರಿಸ್ತಾರಾ?
ಸೋನು
TV9 Web
| Edited By: |

Updated on:Aug 08, 2022 | 10:41 PM

Share

ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಸೋನು ಗೌಡ (Sonu Gowda) ಅವರು ಈಗ ‘ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟಿದ್ದಾರೆ. ಖಾಸಗಿ ವಿಡಿಯೋ ಲೀಕ್ ವಿಚಾರದಲ್ಲಿ ಅವರು ಓಪನ್ ಆಗಿ ಮಾತನಾಡಿದ್ದಾರೆ. ಈ ವಿಡಿಯೋ ಲೀಕ್ ಆಗುವುದರ ಹಿಂದೆ ಬಾಯ್​ಫ್ರೆಂಡ್ ಕೈವಾಡ ಇದೆ ಎಂದು ಅವರು ಆರೋಪ ಮಾಡಿದ್ದರು. ಈ ವಿಚಾರ ದೊಡ್ಮನೆಯಲ್ಲೂ ಚರ್ಚೆ ಆಗುತ್ತಿದೆ. ಕೆಲವರಿಗೆ ಸೋನು ಗೌಡ ಅವರ ವಿಡಿಯೋ ಲೀಕ್ ವಿಚಾರ ಗೊತ್ತು, ಇನ್ನೂ ಕೆಲವರಿಗೆ ಗೊತ್ತಿಲ್ಲ. ಸೋನು ಗೌಡ ಅವರಿಗೆ ಈ ವಿಚಾರದಲ್ಲಿ ಕೆಲವರು ಬುದ್ಧಿವಾದ ಹೇಳಿದ್ದಾರೆ. ಅದನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರೂಪೇಶ್ ಹಾಗೂ ಸೋನು ಮಾತನಾಡುತ್ತಿದ್ದರು. ಈ ವೇಳೆ ವಿಡಿಯೋ ವಿಚಾರ ಮುನ್ನೆಲೆಗೆ ಬಂತು. ‘ನೀನು ಆವಾಗಲೇ ದೂರು ಕೊಡಬೇಕಿತ್ತು’ ಎಂದರು ರೂಪೇಶ್. ‘ಗುರು ನಾನು ಎಫ್​ಐಆರ್ ಕೂಡ ಮಾಡಿಸಿದ್ದೇನೆ. ಅವನು ಅಮೆರಿಕದಲ್ಲಿ ಇದ್ದಾನೆ. ಅವನ ಹುಡುಕೋದು ಹೇಗೆ’ ಎಂದು ಪ್ರಶ್ನೆ ಮಾಡಿದರು ಸೋನು. ‘ನೀವು ಗರ್ಲ್ಸ್​​ ಯಾಕೆ ಅಷ್ಟು ನಂಬಿಕೆ ಇಡ್ತೀರಾ’ ಎಂದು ಸೋನುಗೆ ರೂಪೇಶ್ ಕೇಳಿದ್ದಾರೆ.

‘ನೀನು ಈಗ ಆ ವಿಚಾರದಲ್ಲಿ ಕ್ಲ್ಯಾರಿಟಿ ಕೊಟ್ಟಾಗಿದೆ. ಮತ್ತೆ ಆ ವಿಚಾರದಲ್ಲಿ ಮಾತನಾಡಬೇಡ. ಹಾಗಿದ್ದಾಗ ಮಾತ್ರ ನೀನು ಇಲ್ಲಿಂದ ಹೊರ ಹೋಗುವಾಗ ಬೇರೆ ರೀತಿಯ ಸೋನು ಆಗಿರ್ತೀಯಾ’ ಎಂದು ರೂಪೇಶ್ ಕಿವಿಮಾತು ಹೇಳಿದರು. ಇದಕ್ಕೆ ಸೋನು ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಬಂತು.

ಇದನ್ನೂ ಓದಿ
Image
ಮಗು ಜನಿಸಿ ಮೂರು ದಿನಕ್ಕೆ ಎರಡನೇ ಪತ್ನಿ ಬಗ್ಗೆ ಮೊದಲ ಹೆಂಡತಿಗೆ ಹೇಳಿದ್ದ ಬಿಗ್ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್
Image
‘ಮದುವೆ ಆದ ವ್ಯಕ್ತಿ ಜತೆ ರಿಲೇಶನ್​ಶಿಪ್​ನಲ್ಲಿದ್ದೆ, ಅವರಿಂದ ಜೂಜು ಕಲಿತೆ’; ಮಾರಿಮುತ್ತು ಮೊಮ್ಮೊಗಳು ಜಯಶ್ರೀ ಆರಾಧ್ಯ
Image
ರಾಕೇಶ್​​ಗೆ ಸ್ಫೂರ್ತಿ ಗೌಡ ಮೇಲೆ ಲವ್​​? ‘ಬಿಗ್​​ ಬಾಸ್​’ನಲ್ಲಿ ಮೊದಲ ವಾರವೇ ಹುಟ್ಟಿತು ಪ್ರೀತಿ-ಪ್ರೇಮದ ಚರ್ಚೆ
Image
‘ಅವಳನ್ನು ಮರೆತು ಬದುಕೋಕೆ ಆಗುತ್ತಿಲ್ಲ’; ಮಾಜಿ ಪತ್ನಿ ನೆನೆದು ಸೋಮಣ್ಣ ಮಾಚಿಮಾಡ ಕಣ್ಣೀರು

ಜಯಶ್ರೀ ಕೂಡ ಸೋನುಗೆ ಕಿವಿಮಾತು ಹೇಳಿದರು. ‘ನಾನು ಆಡಿಯನ್ಸ್ ಆಗಿ ನಿನಗೆ ಕೆಲ ಮಾತನ್ನು ಹೇಳಬೇಕಿದೆ. ನಾನು ಹೇಳ್ತೀನಿ ಬೇಜಾರು ಮಾಡಿಕೊಳ್ಳಬೇಡ. ನೀನು ಕೆಲ ವಿಡಿಯೋ ಮಾಡಿ ಉರ್ಕೊಳೋರು ಉರ್ಕೊಳಿ ಎಂದು ಕ್ಯಾಪ್ಶನ್ ಕೊಡ್ತೀಯಾ. ಅದು ಹೇಟರ್​​ಗಳನ್ನು ಮತ್ತೂ ಪ್ರವೋಕೆ ಮಾಡುತ್ತದೆ. ನಿನ್ನ ವ್ಯಕ್ತಿತ್ವ ಏನು ಎಂಬುದನ್ನು ಇಲ್ಲಿ ಪ್ರೂವ್ ಮಾಡು. ನಾಲ್ಕು ಜನ ರೆಸ್ಪೆಕ್ಟ್ ನೀಡುವ ರೀತಿ ಮಾತನಾಡು’ ಎಂದು ಸೋನುಗೆ ಹೇಳಿದ್ದಾರೆ ಜಯಶ್ರೀ.

ಇದನ್ನೂ ಓದಿ: ‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ

ಸೋನುಗೆ ಮಕ್ಕಳ ಬುದ್ಧಿ ಇನ್ನೂ ಹೋಗಿಲ್ಲ ಎಂದು ಕೆಲವರು ಆಡಿಕೊಂಡಿದ್ದು ಇದೆ. ಇದು ಸೋನುಗೂ ಗೊತ್ತಿದೆ. ಮನೆಯಿಂದ ಹೊರ ಹೋಗುವ ಮೊದಲು ತಮ್ಮನ್ನು ತಾವು ಸಾಬೀತು ಮಾಡಿ ಹೋಗುವ ಉದ್ದೇಶದಲ್ಲಿ ಅವರಿದ್ದಾರೆ.

Published On - 10:14 pm, Mon, 8 August 22

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?