AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ಲೀಕ್ ವಿಚಾರದಲ್ಲಿ ಸೋನುಗೆ ಬುದ್ಧಿವಾದ ಹೇಳಿದ ಮನೆ ಮಂದಿ​; ಇದನ್ನು ಅವರು ಸ್ವೀಕರಿಸ್ತಾರಾ?

ರೂಪೇಶ್ ಹಾಗೂ ಸೋನು ಮಾತನಾಡುತ್ತಿದ್ದರು. ಈ ವೇಳೆ ವಿಡಿಯೋ ವಿಚಾರ ಮುನ್ನೆಲೆಗೆ ಬಂತು. ‘ನೀನು ಆವಾಗಲೇ ದೂರು ಕೊಡಬೇಕಿತ್ತು’ ಎಂದರು ರೂಪೇಶ್. ಇದಕ್ಕೆ ಸೋನು ಉತ್ತರಿಸಿದ್ದಾರೆ.

ವಿಡಿಯೋ ಲೀಕ್ ವಿಚಾರದಲ್ಲಿ ಸೋನುಗೆ ಬುದ್ಧಿವಾದ ಹೇಳಿದ ಮನೆ ಮಂದಿ​; ಇದನ್ನು ಅವರು ಸ್ವೀಕರಿಸ್ತಾರಾ?
ಸೋನು
TV9 Web
| Edited By: |

Updated on:Aug 08, 2022 | 10:41 PM

Share

ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಸೋನು ಗೌಡ (Sonu Gowda) ಅವರು ಈಗ ‘ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟಿದ್ದಾರೆ. ಖಾಸಗಿ ವಿಡಿಯೋ ಲೀಕ್ ವಿಚಾರದಲ್ಲಿ ಅವರು ಓಪನ್ ಆಗಿ ಮಾತನಾಡಿದ್ದಾರೆ. ಈ ವಿಡಿಯೋ ಲೀಕ್ ಆಗುವುದರ ಹಿಂದೆ ಬಾಯ್​ಫ್ರೆಂಡ್ ಕೈವಾಡ ಇದೆ ಎಂದು ಅವರು ಆರೋಪ ಮಾಡಿದ್ದರು. ಈ ವಿಚಾರ ದೊಡ್ಮನೆಯಲ್ಲೂ ಚರ್ಚೆ ಆಗುತ್ತಿದೆ. ಕೆಲವರಿಗೆ ಸೋನು ಗೌಡ ಅವರ ವಿಡಿಯೋ ಲೀಕ್ ವಿಚಾರ ಗೊತ್ತು, ಇನ್ನೂ ಕೆಲವರಿಗೆ ಗೊತ್ತಿಲ್ಲ. ಸೋನು ಗೌಡ ಅವರಿಗೆ ಈ ವಿಚಾರದಲ್ಲಿ ಕೆಲವರು ಬುದ್ಧಿವಾದ ಹೇಳಿದ್ದಾರೆ. ಅದನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರೂಪೇಶ್ ಹಾಗೂ ಸೋನು ಮಾತನಾಡುತ್ತಿದ್ದರು. ಈ ವೇಳೆ ವಿಡಿಯೋ ವಿಚಾರ ಮುನ್ನೆಲೆಗೆ ಬಂತು. ‘ನೀನು ಆವಾಗಲೇ ದೂರು ಕೊಡಬೇಕಿತ್ತು’ ಎಂದರು ರೂಪೇಶ್. ‘ಗುರು ನಾನು ಎಫ್​ಐಆರ್ ಕೂಡ ಮಾಡಿಸಿದ್ದೇನೆ. ಅವನು ಅಮೆರಿಕದಲ್ಲಿ ಇದ್ದಾನೆ. ಅವನ ಹುಡುಕೋದು ಹೇಗೆ’ ಎಂದು ಪ್ರಶ್ನೆ ಮಾಡಿದರು ಸೋನು. ‘ನೀವು ಗರ್ಲ್ಸ್​​ ಯಾಕೆ ಅಷ್ಟು ನಂಬಿಕೆ ಇಡ್ತೀರಾ’ ಎಂದು ಸೋನುಗೆ ರೂಪೇಶ್ ಕೇಳಿದ್ದಾರೆ.

‘ನೀನು ಈಗ ಆ ವಿಚಾರದಲ್ಲಿ ಕ್ಲ್ಯಾರಿಟಿ ಕೊಟ್ಟಾಗಿದೆ. ಮತ್ತೆ ಆ ವಿಚಾರದಲ್ಲಿ ಮಾತನಾಡಬೇಡ. ಹಾಗಿದ್ದಾಗ ಮಾತ್ರ ನೀನು ಇಲ್ಲಿಂದ ಹೊರ ಹೋಗುವಾಗ ಬೇರೆ ರೀತಿಯ ಸೋನು ಆಗಿರ್ತೀಯಾ’ ಎಂದು ರೂಪೇಶ್ ಕಿವಿಮಾತು ಹೇಳಿದರು. ಇದಕ್ಕೆ ಸೋನು ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಬಂತು.

ಇದನ್ನೂ ಓದಿ
Image
ಮಗು ಜನಿಸಿ ಮೂರು ದಿನಕ್ಕೆ ಎರಡನೇ ಪತ್ನಿ ಬಗ್ಗೆ ಮೊದಲ ಹೆಂಡತಿಗೆ ಹೇಳಿದ್ದ ಬಿಗ್ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್
Image
‘ಮದುವೆ ಆದ ವ್ಯಕ್ತಿ ಜತೆ ರಿಲೇಶನ್​ಶಿಪ್​ನಲ್ಲಿದ್ದೆ, ಅವರಿಂದ ಜೂಜು ಕಲಿತೆ’; ಮಾರಿಮುತ್ತು ಮೊಮ್ಮೊಗಳು ಜಯಶ್ರೀ ಆರಾಧ್ಯ
Image
ರಾಕೇಶ್​​ಗೆ ಸ್ಫೂರ್ತಿ ಗೌಡ ಮೇಲೆ ಲವ್​​? ‘ಬಿಗ್​​ ಬಾಸ್​’ನಲ್ಲಿ ಮೊದಲ ವಾರವೇ ಹುಟ್ಟಿತು ಪ್ರೀತಿ-ಪ್ರೇಮದ ಚರ್ಚೆ
Image
‘ಅವಳನ್ನು ಮರೆತು ಬದುಕೋಕೆ ಆಗುತ್ತಿಲ್ಲ’; ಮಾಜಿ ಪತ್ನಿ ನೆನೆದು ಸೋಮಣ್ಣ ಮಾಚಿಮಾಡ ಕಣ್ಣೀರು

ಜಯಶ್ರೀ ಕೂಡ ಸೋನುಗೆ ಕಿವಿಮಾತು ಹೇಳಿದರು. ‘ನಾನು ಆಡಿಯನ್ಸ್ ಆಗಿ ನಿನಗೆ ಕೆಲ ಮಾತನ್ನು ಹೇಳಬೇಕಿದೆ. ನಾನು ಹೇಳ್ತೀನಿ ಬೇಜಾರು ಮಾಡಿಕೊಳ್ಳಬೇಡ. ನೀನು ಕೆಲ ವಿಡಿಯೋ ಮಾಡಿ ಉರ್ಕೊಳೋರು ಉರ್ಕೊಳಿ ಎಂದು ಕ್ಯಾಪ್ಶನ್ ಕೊಡ್ತೀಯಾ. ಅದು ಹೇಟರ್​​ಗಳನ್ನು ಮತ್ತೂ ಪ್ರವೋಕೆ ಮಾಡುತ್ತದೆ. ನಿನ್ನ ವ್ಯಕ್ತಿತ್ವ ಏನು ಎಂಬುದನ್ನು ಇಲ್ಲಿ ಪ್ರೂವ್ ಮಾಡು. ನಾಲ್ಕು ಜನ ರೆಸ್ಪೆಕ್ಟ್ ನೀಡುವ ರೀತಿ ಮಾತನಾಡು’ ಎಂದು ಸೋನುಗೆ ಹೇಳಿದ್ದಾರೆ ಜಯಶ್ರೀ.

ಇದನ್ನೂ ಓದಿ: ‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ

ಸೋನುಗೆ ಮಕ್ಕಳ ಬುದ್ಧಿ ಇನ್ನೂ ಹೋಗಿಲ್ಲ ಎಂದು ಕೆಲವರು ಆಡಿಕೊಂಡಿದ್ದು ಇದೆ. ಇದು ಸೋನುಗೂ ಗೊತ್ತಿದೆ. ಮನೆಯಿಂದ ಹೊರ ಹೋಗುವ ಮೊದಲು ತಮ್ಮನ್ನು ತಾವು ಸಾಬೀತು ಮಾಡಿ ಹೋಗುವ ಉದ್ದೇಶದಲ್ಲಿ ಅವರಿದ್ದಾರೆ.

Published On - 10:14 pm, Mon, 8 August 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ