ಪ್ರೀ ರಿಲೀಸ್ನಲ್ಲಿ ಕಾರ್ಯಕ್ರಮದಲ್ಲಿ ಎಐ ಬಳಕೆ: ನಟನ ಬುದ್ಧಿವಂತಿಕೆ ಮೆಚ್ಚಿದ ಅಭಿಮಾನಿಗಳು
Pradeep Ranganathan: ಎಷ್ಟೋ ಮಂದಿ ಸ್ಟಾರ್ ನಟರು, ತಮ್ಮ ಭಾಷೆಯ ಮಿತಿಯಿಂದಾಗಿಯೇ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ ಇದೀಗ ಯುವ ನಟನೊಬ್ಬ ಬುದ್ಧಿವಂತಿಕೆ ತೋರಿಸಿದ್ದು, ಎಐ ಬಳಸಿ ಬೇರೆ ರಾಜ್ಯದಲ್ಲಿ ಪ್ರಚಾರ ಮಾಡಿರುವುದು ಮಾತ್ರವಲ್ಲ, ಸಖತ್ ಜನ ಸ್ಪಂದನೆಯನ್ನೂ ಸಹ ಪಡೆದಿದ್ದಾರೆ.

ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಹವಾ ಜೋರಾದ ಮೇಲೆ ಸ್ಟಾರ್ ನಟರು ಬೇರೆ ಬೇರೆ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ ಮಾಡುವುದು ಕಡ್ಡಾಯ ಆಗಿಬಿಟ್ಟಿದೆ. ಆದರೆ 22 ಅಧಿಕೃತ ಭಾಷೆಗಳಿರುವ ಭಾರತದಲ್ಲಿ ಎಲ್ಲ ಪ್ರೇಕ್ಷಕರನ್ನು ಅವರ ಸ್ವಂತ ಭಾಷೆಗಳ ಮೂಲಕ ತಲುಪುವುದು ಬಹಳ ಕಷ್ಟ. ಎಷ್ಟೋ ಮಂದಿ ಸ್ಟಾರ್ ನಟರು, ತಮ್ಮ ಭಾಷೆಯ ಮಿತಿಯಿಂದಾಗಿಯೇ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ ಇದೀಗ ಯುವ ನಟನೊಬ್ಬ ಬುದ್ಧಿವಂತಿಕೆ ತೋರಿಸಿದ್ದು, ಎಐ ಬಳಸಿ ಬೇರೆ ರಾಜ್ಯದಲ್ಲಿ ಪ್ರಚಾರ ಮಾಡಿರುವುದು ಮಾತ್ರವಲ್ಲ, ಸಖತ್ ಜನ ಸ್ಪಂದನೆಯನ್ನೂ ಸಹ ಪಡೆದಿದ್ದಾರೆ.
ತಮಿಳಿನ ಸ್ಟಾರ್ ಯುವನಟ ಪ್ರದೀಪ್ ರಂಗನಾಥನ್ ನಟನೆಯ ‘ಎಲ್ಐಕೆ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹೈದರಾಬಾದ್ನಲ್ಲಿ ಆಯೋಜಿಸಲಾಗಿತ್ತು. ಪ್ರದೀಪ್, ಪ್ರತಿಬಾರಿಯೂ ತಮ್ಮ ಸಿನಿಮಾ ಬಿಡುಗಡೆ ಆಗುವಾಗ ತೆಲುಗು ರಾಜ್ಯಗಳಿಗೆ ಬಂದು ಪ್ರಚಾರ ಮಾಡುತ್ತಾರೆ. ಆದರೆ ತೆಲುಗು ಸರಿಯಾಗಿ ಬರದ ಕಾರಣ ಈಹಿಂದೆ ಕೆಲವು ಸಮಸ್ಯೆಗಳನ್ನು ಅವರು ಎದುರಿಸಿದ್ದರು.
ಇದೇ ಕಾರಣಕ್ಕೆ ಈ ಬಾರಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಪ್ರೀ ರಿಲೀಸ್ ಭಾಷಣದ ವೇಳೆ ಎಐ ಮೊರೆ ಹೋಗಿದ್ದಾರೆ. ‘ಕಳೆದ ಬಾರಿ ನಾನು ತೆಲುಗಿನಲ್ಲಿ ಮಾತನಾಡಿದಾಗ ಸಾಕಷ್ಟು ಸಮಸ್ಯೆ ಆಗಿತ್ತು. ನನಗೆ ತೆಲುಗು ಸರಿಯಾಗಿ ಬರದು, ಹಾಗಾಗಿ ನಾನು ತಮಿಳಿನಲ್ಲಿ ಹೇಳಿದ್ದನ್ನು ಎಐ ತೆಲುಗಿನಲ್ಲಿ ಹೇಳಲಿದೆ ಎಂದು ಹೇಳಿ. ತಮ್ಮ ಮೊಬೈಲ್ ನ ಎಐ ಆಪ್ ಬಳಸಿ ಪ್ರದೀಪ್ ರಂಗನಾಥ್ ಭಾಷಣ ಮಾಡಿದರು.
ಇದನ್ನೂ ಓದಿ:ಎಐನಿಂದ ಮಾಡಲ್ಪಟ್ಟ ರಾಮಾಯಣದ ಬಿಟಿಎಸ್
ಪ್ರದೀಪ್ ರಂಗನಾಥನ್ ಅವರು ‘ಎಲ್ಐಕೆ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದಾರೆ. ಇದು 2040ರ ಕತೆಯನ್ನು ಒಳಗೊಂಡಿದೆ. ಪ್ರಪಂಚ ಬಹಳ ಅಡ್ವಾನ್ಸ್ ಆಗಿಬಿಟ್ಟಿದೆ, ಮಾನವ ಸಂಬಂಧಗಳು ಬಹಳ ತೆಳುವಾಗಿವೆ. ಅಂಥಹಾ ಸಂದರ್ಭದಲ್ಲಿ ಯುವಕನೊಬ್ಬ ಪ್ರೀತಿಯನ್ನು ಅರಸಿ ಹೋಗುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕೃತಿ ಶೆಟ್ಟಿ ನಾಯಕಿ, ಎಸ್ಜೆ ಸೂರ್ಯ ವಿಲನ್.
ಪ್ರದೀಪ್ ರಂಗನಾಥನ್ ಭಿನ್ನ ರೀತಿಯ ನಟ. ಈ ವರೆಗೆ ಮೂರು ಸಿನಿಮಾಗಳಲ್ಲಿ ಪ್ರದೀಪ್ ನಟಿಸಿದ್ದು, ಮೂರೂ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿವೆ. ಪ್ರದೀಪ್ ನಟಿಸಿರುವ ಮೂರೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ. ಇದೀಗ ನಾಲ್ಕನೇ ಸಿನಿಮಾ ‘ಎಲ್ಐಕೆ’ (ಲವ್ ಇನ್ಶ್ಯುರೆನ್ಸ್ ಕಂಪೆನಿ)ಯಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ನಯನತಾರಾ ಪತಿ ವಿಘ್ನೇಶ್ ಶಿವನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
