AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್​’ಗೆ ಎರಡು ಬಾರಿ ನೋ ಅಂದಿದ್ದ ಪೃಥ್ವಿರಾಜ್ ಸುಕುಮಾರ್ ಕೊನೆಗೆ ಒಪ್ಪಿದ್ದು ಏಕೆ?

Prithviraj Sukumaran: ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರ್ ಸಹ ನಟಿಸಿದ್ದಾರೆ. ಬಹಳ ಪ್ರಾಮುಖ್ಯತೆ ಇರುವ ಪಾತ್ರ ಅವರದ್ದು, ಆದರೆ ‘ಸಲಾರ್’ ಸಿನಿಮಾದಲ್ಲಿ ನಟಿಸಲು ಎರಡು ಬಾರಿ ನೋ ಎಂದಿದ್ದರಂತೆ ಪೃಥ್ವಿರಾಜ್.

‘ಸಲಾರ್​’ಗೆ ಎರಡು ಬಾರಿ ನೋ ಅಂದಿದ್ದ ಪೃಥ್ವಿರಾಜ್ ಸುಕುಮಾರ್ ಕೊನೆಗೆ ಒಪ್ಪಿದ್ದು ಏಕೆ?
ಮಂಜುನಾಥ ಸಿ.
|

Updated on:Dec 21, 2023 | 4:12 PM

Share

ಪ್ರಭಾಸ್ (Prabhas) ನಟಿಸಿ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮಾಡಿರುವ ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಅಷ್ಟೇ ಪ್ರಮುಖ ಪಾತ್ರದಲ್ಲಿ ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಪೃಥ್ವಿರಾಜ್ ಅವರ ವೇಷ-ಭೂಷಣ ನೋಡಿದರೆ ಅವರದ್ದು ಸಖತ್ ಭಿನ್ನ ಶೇಡ್​ಗಳುಳ್ಳ ಪಾತ್ರ ಎಂಬುದು ಖಾತ್ರಿಯಾಗುತ್ತದೆ. ಅವರ ಅತ್ಯುತ್ತಮ ಅಭಿನಯದ ಝಲಕ್​ಗಳು ಟ್ರೈಲರ್​ನಲ್ಲಿ ಕಾಣಲು ಸಿಗುತ್ತವೆ. ಆದರೆ ‘ಸಲಾರ್’ ಸಿನಿಮಾದಲ್ಲಿ ನಟಿಸಲು ಎರಡು ಬಾರಿ ನೋ ಎಂದಿದ್ದರಂತೆ ಪೃಥ್ವಿರಾಜ್, ಆದರೆ ಕೊನೆಗೆ ಒಪ್ಪಿದ್ದು ಹೇಗೆ?

ರಾಜಮೌಳಿ ಮಾಡಿರುವ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಪೃಥ್ವಿರಾಜ್ ಸುಕುಮಾರ್, ‘‘ನಾನು ಪ್ರಶಾಂತ್ ನೀಲ್ ಅನ್ನು ಖುದ್ದಾಗಿ ಭೇಟಿ ಆಗಿರಲಿಲ್ಲ. ಅವರಿಂದ ಮೊದಲಿಗೆ ಆಫರ್ ಬಂದಾಗ, ಅದೂ ಪ್ರಭಾಸ್ ಆ ಸಿನಿಮಾದ ನಾಯಕ ಎಂದಾಗ ನಾನು ನೋ ಹೇಳಲು ರೆಡಿಯಾಗಿದ್ದೆ’’ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

‘‘ನಾನು ಮಲಯಾಳಂ ಚಿತ್ರರಂಗದ ನಟ, ನಮಗೆ ವಿಶಾಲವಾಗಿ ಯೋಚಿಸುವುದು ಅಷ್ಟಾಗಿ ಬರುವುದಿಲ್ಲ. ಪರಭಾಷೆಯ ಆಫರ್ ಬಂದರೂ ಸಹ ಅದು ಸಣ್ಣ ಪಾತ್ರವೇ ಆಗಿರುತ್ತದೆ ಎಂಬುದು ನಮ್ಮ ಮನಸ್ಸಿನಲ್ಲಿ ಬೇರೂರಿ ಬಿಟ್ಟಿದೆ. ಬಹುತೇಕವಾಗಿ ಪರಭಾಷೆಯಿಂದ ಬರುವುದು ಸಹ ಸಣ್ಣ ಪಾತ್ರಗಳೇ. ಹಾಗಾಗಿ ಇದೂ ಸಹ ಸಣ್ಣ ಪಾತ್ರವೇ ಆಗಿರುತ್ತದೆ ಎಂದು ನಾನು ನೋ ಹೇಳಬೇಕು ಎಂದುಕೊಂಡಿದ್ದೆ. ಆದರೆ ಒಮ್ಮೆ ಭೇಟಿಯಾಗಿ ಕತೆ ಕೇಳಿದ ಬಳಿಕ ನೋ ಅನ್ನೋಣ ಎಂದು ನಿರ್ಧರಿಸಿದ್ದೆ’’ ಎಂದರು.

ಇದನ್ನೂ ಓದಿ:‘ಡಂಕಿ’ v/s‘ಸಲಾರ್’: ಮಲ್ಟಿಪ್ಲೆಕ್ಸ್​ನಿಂದ ತಾರತಮ್ಯ, ಪಾಠ ಕಲಿಸಲು ಮುಂದಾದ ಹೊಂಬಾಳೆ?

‘‘ಬಳಿಕ ಹೈದರಾಬಾದ್​ನಲ್ಲಿ ನೀಲ್​ರನ್ನು ಭೇಟಿಯಾದಾಗ ಅವರ ಕಚೇರಿಗೆ ಹೋಗಿದ್ದೆ, ಅಲ್ಲಿ ಅವರು ನನ್ನ ಕೈಗೆ ಚಿತ್ರಕತೆ ಕೊಟ್ಟು ಕೆಳಗೆ ಬೇರೆ ಕೆಲಸಕ್ಕೆ ಹೋದರು, ಅಲ್ಲೇ ಪಕ್ಕದಲ್ಲಿ ನೋಡಿದರೆ ದೊಡ್ಡ ಬೋರ್ಡ್​ನಲ್ಲಿ ‘ಸಲಾರ್’ ಸಿನಿಮಾದ ಅಷ್ಟೂ ಪಾತ್ರಗಳ ಚಾರ್ಟ್ ಇತ್ತು, ಅದರಲ್ಲಿ ಅವರ ಹಿನ್ನೆಲೆ ವ್ಯಕ್ತಿತ್ವ ಪರಸ್ಪರರ ಪಾತ್ರಗಳೊಟ್ಟಿಗೆ ಸಂಬಂಧ ಎಲ್ಲವೂ ಬರೆದಿತ್ತು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ಪಾತ್ರದ ಬಗ್ಗೆ ನೀಲ್ ಹೇಳಿದಾಗಿ ಈ ಪಾತ್ರ ಮಾಡಲೇ ಬೇಕು ಅನ್ನಿಸಿ ಓಕೆ ಎಂದೆ’’ ಎಂದಿದ್ದಾರೆ ಪೃಥ್ವಿರಾಜ್.

ಆದರೆ ಅದಾದ ಬಳಿಕ ಸಮಸ್ಯೆ ಎದುರಾಯ್ತು, ನಾನು ನಟಿಸುತ್ತಿದ್ದ ‘ಆಡುಜೀವಿತಂ’ ಸಿನಿಮಾದ ಚಿತ್ರೀಕರಣ ಕೋವಿಡ್ ಕಾರಣದಿಂದ ತಡವಾಯ್ತು. ನಾನು ಆ ಸಿನಿಮಾಕ್ಕಾಗಿ 35 ಕೆಜಿ ತೂಕ ಇಳಿಸಿಕೊಂಡಿದ್ದೆ, ಉದ್ದ ಗಡ್ಡ ಬಿಟ್ಟಿದ್ದೆ, ಆ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲು ನಾನು ಜೋರ್ಡನ್​ಗೆ ಹೋಗಲೇ ಬೇಕಿತ್ತು. ಪ್ರಶಾಂತ್​ರನ್ನು ಭೇಟಿಯಾಗಿ ನಾನು ನಿಮ್ಮ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಬಿಟ್ಟೆ. ಪ್ರಶಾಂತ್ ಸಹ ಬಹಳ ಬೇಜಾರು ಮಾಡಿಕೊಂಡರು. ಇಬ್ಬರೂ ದೂರಾಗುತ್ತಿರುವ ಪ್ರೇಮಿಗಳಂತೆ ಮೌನವಾಗಿ ಅಂದು ದೂರಾಗಿದ್ದೆವು, ಆದರೆ ಕೊನೆಗೆ ‘ಸಲಾರ್’ ಸಿನಿಮಾದ ಚಿತ್ರೀಕರಣವೂ ಸಹ ತಡವಾಯ್ತು, ಹಾಗಾಗಿ ಮತ್ತೆ ನಾನು ‘ಸಲಾರ್’ ಸಿನಿಮಾದಲ್ಲಿ ನಟಿಸುವಂತಾಯ್ತು’’ ಎಂದು ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Thu, 21 December 23

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ