AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೇಮ್ಸ್​’ ಕೌಂಟ್​ಡೌನ್ 5 ದಿನ: ​ಮಾರ್ಚ್​​ 13ಕ್ಕೆ ‘ಜೇಮ್ಸ್’ ಪ್ರೀ-ರಿಲೀಸ್​ ಇವೆಂಟ್​; ಯಾರೆಲ್ಲ ಬರ್ತಾರೆ? ಫ್ಯಾನ್ಸ್​ಗೆ ಎಂಟ್ರಿ ಹೇಗೆ?

ಪ್ಯಾಲೇಸ್​ ಗ್ರೌಂಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಮುಖ್ಯ ಅತಿಥಿಯಾಗಿ ಪುನೀತ್​ ಸಹೋದರ ಶಿವರಾಜ್​ಕುಮಾರ್ ಆಗಮಿಸುತ್ತಿದ್ದಾರೆ. ಇವರಲ್ಲದೆ, ಚಿತ್ರರಂಗದ ಅನೇಕ ಪ್ರಮುಖರು ಈ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ.

‘ಜೇಮ್ಸ್​’ ಕೌಂಟ್​ಡೌನ್ 5 ದಿನ: ​ಮಾರ್ಚ್​​ 13ಕ್ಕೆ ‘ಜೇಮ್ಸ್’ ಪ್ರೀ-ರಿಲೀಸ್​ ಇವೆಂಟ್​; ಯಾರೆಲ್ಲ ಬರ್ತಾರೆ? ಫ್ಯಾನ್ಸ್​ಗೆ ಎಂಟ್ರಿ ಹೇಗೆ?
ಪುನೀತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 12, 2022 | 7:35 AM

ಪುನೀತ್​ ರಾಜ್​ಕುಮಾರ್ (Puneeth Rajkumar)ನಟನೆಯ ‘ಜೇಮ್ಸ್​’ ಸಿನಿಮಾ (James Movie) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಹೀರೋ ಆಗಿ ಪುನೀತ್​ ರಾಜ್​ಕುಮಾರ್​ ನಟಿಸಿದ ಕೊನೆಯ ಸಿನಿಮಾ ಇದು ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್​ ಆಗಿದ್ದಾರೆ. ಪುನೀತ್​ ರಾಜ್​ಕುಮಾರ್ ಬರ್ತ್​ಡೇ ಪ್ರಯುಕ್ತ ಮಾರ್ಚ್​ 17ರಂದು ಸಿನಿಮಾ ರಿಲೀಸ್​ ಆಗುತ್ತಿದೆ. ರಾಜ್ಯದ ಶೇ. 80 ಚಿತ್ರಮಂದಿರಗಳಲ್ಲಿ ‘ಜೆಮ್ಸ್​’ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಹೀಗಾಗಿ, ಕಲೆಕ್ಷನ್​ ವಿಚಾರದಲ್ಲಿ ಈ ಸಿನಿಮಾ ಬಹುದೊಡ್ಡ ದಾಖಲೆ ಬರೆಯುವ ಸೂಚನೆ ಸಿಕ್ಕಿದೆ. ಇದಕ್ಕೂ ಮೊದಲು ಚಿತ್ರತಂಡ ಪ್ರೀ-ರಿಲೀಸ್​ ಇವೆಂಟ್​ (James Pre-Release Event)ನಡೆಸೋಕೆ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್​ 13 ಅಂದರೆ ಭಾನುವಾರ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.

ಪ್ಯಾಲೇಸ್​ ಗ್ರೌಂಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಮುಖ್ಯ ಅತಿಥಿಯಾಗಿ ಪುನೀತ್​ ಸಹೋದರ ಶಿವರಾಜ್​ಕುಮಾರ್ ಆಗಮಿಸುತ್ತಿದ್ದಾರೆ. ಇವರಲ್ಲದೆ, ಚಿತ್ರರಂಗದ ಅನೇಕ ಪ್ರಮುಖರು ಈ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ. ಶ್ರೀಮುರಳಿ, ವಿನಯ್​ ರಾಜ್​ಕುಮಾರ್ ಮೊದಲಾದವರು ಈ ಅದ್ದೂರಿ ಪ್ರೀ-ರಿಲೀಸ್​ ಇವೆಂಟ್​ಗೆ ಸಾಕ್ಷಿಯಾಗಲಿದ್ದಾರೆ.

ಅಭಿಮಾನಿಗಳು ಈ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಈ ಇವೆಂಟ್​ ಓಪನ್​ ಗ್ರೌಂಡ್​ನಲ್ಲಿ ನಡೆಯುತ್ತಿದೆ. ಹೀಗಾಗಿ ಅಭಿಮಾನಿಗಳಿಗೆ ಯಾವುದೇ ಪಾಸ್​ ಅಗತ್ಯವಿರುವುದಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ಈ ಮೊದಲು ‘ಜೇಮ್ಸ್​’ ಪ್ರೀ-ರಿಲೀಸ್​ ಇವೆಂಟ್​ ಬಗ್ಗೆ ವದಂತಿ ಒಂದು ಹರಿದಾಡಿತ್ತು. ಚಿತ್ರತಂಡ ಮಾರ್ಚ್​ 6ರಂದು ಹೊಸಪೇಟೆಯಲ್ಲಿ ಭರ್ಜರಿ ಪ್ರೀ-ರಿಲೀಸ್​ ಇವೆಂಟ್​ ನಡೆಸಲು ನಿರ್ಧರಿಸಿದೆ ಎನ್ನಲಾಗಿತ್ತು. ಈ ಕಾರ್ಯಕ್ರಮಕ್ಕೆ ಜ್ಯೂ.ಎನ್​ಟಿಆರ್ ಹಾಗೂ ಚಿರಂಜೀವಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಈ ಬಗ್ಗೆ ಚಿತ್ರತಂಡವೇ ಸ್ಪಷ್ಟನೆ ನೀಡಿತ್ತು. ಈಗ ಬೆಂಗಳೂರಿನಲ್ಲೇ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದೆ.

ಬುಕಿಂಗ್​ ಶುರು:

ಈ ಮೊದಲು ‘ಜೇಮ್ಸ್​’ ಸಿನಿಮಾದ ಟೀಸರ್​ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಟೀಸರ್​ನಲ್ಲಿ ಪುನೀತ್​ ಸಖತ್​ ಮಾಸ್​ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ‘ಟ್ರೇಡ್​ಮಾರ್ಕ್​..’ ಸಾಂಗ್​ ರಿಲೀಸ್​ ಮಾಡಲಾಯಿತು. ಇದನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಈ ಹಾಡು ಯೂಟ್ಯೂಬ್​ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.  ಈ ಎಲ್ಲಾ ಕಾರಣಕ್ಕೆ ಪುನೀತ್​ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ವಿಶ್ವಾದ್ಯಂತ 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆನ್​ಲೈನ್​ ಬುಕಿಂಗ್​ ಓಪನ್​ ಆಗಿದೆ.

ಇದನ್ನೂ ಓದಿ: Salaam Soldier: ‘ಜೇಮ್ಸ್​’ ಹೊಸ ಹಾಡು ‘ಸಲಾಂ ಸೋಲ್ಜರ್​’ ರಿಲೀಸ್​; ಸಲಾಂ​ ಪುನೀತ್​ ಎಂದ ಅಪ್ಪು ಫ್ಯಾನ್ಸ್​​

ಸೈನಿಕನ ಗೆಟಪ್​ನಲ್ಲಿ ಆಹಾ ಎಷ್ಟು ಚಂದ ಪುನೀತ್​; ಇಲ್ಲಿವೆ ‘ಜೇಮ್ಸ್​’ ಸಿನಿಮಾದ ಫೋಟೋಗಳು

Published On - 7:34 am, Sat, 12 March 22

ಬೇರೆ ಘಟನೆ ಉಲ್ಲೇಖಿಸಿ ಸಿಎಂ ಹೊಣೆಗಾರಿಕೆ ತಪ್ಪಿಸಿಕೊಳ್ಳುತ್ತಿದ್ದಾರೆ: ರವಿ
ಬೇರೆ ಘಟನೆ ಉಲ್ಲೇಖಿಸಿ ಸಿಎಂ ಹೊಣೆಗಾರಿಕೆ ತಪ್ಪಿಸಿಕೊಳ್ಳುತ್ತಿದ್ದಾರೆ: ರವಿ
ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡವೆಂದರೂ ಸಿಎಂ ಒತ್ತಾಯಿಸಿದರು: ಅಶೋಕ
ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡವೆಂದರೂ ಸಿಎಂ ಒತ್ತಾಯಿಸಿದರು: ಅಶೋಕ
ನಿನ್ನೆ ಗುಡ್ಡ ಕುಸಿದರೂ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಜನ
ನಿನ್ನೆ ಗುಡ್ಡ ಕುಸಿದರೂ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಜನ
ಮಾಧ್ಯಮಗಳ ಜೊತೆ ಮಾತಾಡುವ ಮೊದಲು ಸೈಕ್ಲಿಂಗ್ ಮಾಡಿದ ಶಿವಕುಮಾರ್
ಮಾಧ್ಯಮಗಳ ಜೊತೆ ಮಾತಾಡುವ ಮೊದಲು ಸೈಕ್ಲಿಂಗ್ ಮಾಡಿದ ಶಿವಕುಮಾರ್
VIDEO: ಎರಡಂಕಿ ಸ್ಕೋರ್​ಗೆ ಆಲೌಟ್: RCB ದಾಖಲೆ ಸೇಫ್..!
VIDEO: ಎರಡಂಕಿ ಸ್ಕೋರ್​ಗೆ ಆಲೌಟ್: RCB ದಾಖಲೆ ಸೇಫ್..!
ಭೂಕುಸಿತದಿಂದ ಕುಸಿದಿರುವ ಮನೆ, ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ
ಭೂಕುಸಿತದಿಂದ ಕುಸಿದಿರುವ ಮನೆ, ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ
ಕರ್ನಾಟಕದವರೊಬ್ಬರ ಪರ್ಸ್​ ಕದ್ದು ಕೋತಿ ಮಾಡಿದ್ದೇನು ನೋಡಿ
ಕರ್ನಾಟಕದವರೊಬ್ಬರ ಪರ್ಸ್​ ಕದ್ದು ಕೋತಿ ಮಾಡಿದ್ದೇನು ನೋಡಿ
ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಸೈಪ್ರಸ್ ಭೇಟಿ ಮುಗಿಸಿ ಜಿ7 ಶೃಂಗಸಭೆಗಾಗಿ ಕೆನಡಾಗೆ ಬಂದಿಳಿದ ಪ್ರಧಾನಿ ಮೋದಿ
ಸೈಪ್ರಸ್ ಭೇಟಿ ಮುಗಿಸಿ ಜಿ7 ಶೃಂಗಸಭೆಗಾಗಿ ಕೆನಡಾಗೆ ಬಂದಿಳಿದ ಪ್ರಧಾನಿ ಮೋದಿ
ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ: ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತ
ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ: ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತ