AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರದ ಆ ಒಂದು ಸಾಂಗ್ ಬಗ್ಗೆ ನಿರ್ದೇಶಕರಿಗೆ ಮೂಡಿದೆ ಗೊಂದಲ

Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ. ಆದರೆ ಚಿತ್ರತಂಡ ಒಂದು ಹಾಡಿನ ಬಗ್ಗೆ ಇನ್ನೂ ಗೊಂದಲದಲ್ಲಿಯೇ ಇದೆ. ಗೊಂದಲಕ್ಕೆ ಕಾರಣವೇನು?

‘ಪುಷ್ಪ 2’ ಚಿತ್ರದ ಆ ಒಂದು ಸಾಂಗ್ ಬಗ್ಗೆ ನಿರ್ದೇಶಕರಿಗೆ ಮೂಡಿದೆ ಗೊಂದಲ
ಅಲ್ಲು ಅರ್ಜುನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 06, 2024 | 6:30 PM

Share

ತೆಲುಗು ಚಿತ್ರರಂಗದವರು ಸಾಂಗ್​ನ ಅದ್ದೂರಿಯಾಗಿ ಶೂಟ್ ಮಾಡಲು ಆದ್ಯತೆ ನೀಡುತ್ತಾರೆ. ಸಿನಿಮಾದ ಕೊನೆಯಲ್ಲಿ ಹಾಡನ್ನು ಶೂಟ್ ಮಾಡಲು ಮತ್ತು ಇದಕ್ಕೆ ದೊಡ್ಡ ಸೆಟ್ ಹಾಕಲು ತೆಲುಗು ಮಂದಿ ಬಯಸುತ್ತಾರೆ. ‘ಪುಷ್ಪ’ ಚಿತ್ರದಲ್ಲಿ ಭರ್ಜರಿ ಹಾಡುಗಳು ಇದ್ದವು. ಇವೆಲ್ಲ ಹಿಟ್ ಆಗಿದ್ದವು. ಈಗ ‘ಪುಷ್ಪ 2’ ಚಿತ್ರದಲ್ಲೂ ಸಾಂಗ್ಗೆ ಆದ್ಯತೆ ನೀಡಲಾಗಿದೆ. ಹಲವು ಸಾಂಗ್ಗಳ ಶೂಟ್ ಮಾಡಲಾಗಿದೆ. ಈಗ ಒಂದು ಹಾಡಿನ ಬಗ್ಗೆ ನಿರ್ದೇಶಕ ಸುಕುಮಾರ್ ಅವರು ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

‘ಪುಷ್ಪ’ ಚಿತ್ರದ ಐಟಂ ಸಾಂಗ್ ಹಿಟ್ ಆಗಿತ್ತು. ಅದೇ ರೀತಿ ‘ಪುಷ್ಪ 2’ ಚಿತ್ರದಲ್ಲೂ ವಿಶೇಷ ಸಾಂಗ್ ಇದೆ. ಇದನ್ನು ಸುಕುಮಾರ್ ಈ ವಾರ ಶೂಟ್ ಮಾಡಿ ಮುಗಿಸಲಿದ್ದಾರೆ. ಮತ್ತೊಂದು ಹಾಡಿನ ಶೂಟ್ ಬಗ್ಗೆ ಅವರು ಆಲೋಚನೆ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ನಡುವಿನ ಸಾಂಗ್ ಶೂಟ್ ಬೇಕೆ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿ ಇದ್ದಾರೆ.

‘ಪುಷ್ಪ 2’ ಸಿನಿಮಾದ ರಿಲೀಸ್ ದಿನಾಂಕ ಈಗಾಗಲೇ ಕೆಲವು ಬಾರಿ ಮುಂದಕ್ಕೆ ಹೋಗಿವೆ. ಈ ಸಿನಿಮಾ ರಿಲೀಸ್ಗೆ ಇರೋದು ಇನ್ನು ಒಂದು ತಿಂಗಳು ಮಾತ್ರ. ಅದಕ್ಕೂ ಮೊದಲು ‘ಪುಷ್ಪ 2’ ಚಿತ್ರದ ಶೂಟ್ನ ಪೂರ್ಣಗೊಳಿಸಬೇಕಿದೆ. ಕೆಲವು ವರದಿಗಳ ಪ್ರಕಾರ ಐಟಂ ಸಾಂಗ್ ಹಾಗೂ ಡ್ಯೂಯೆಟ್ ಸಾಂಗ್ ಪೂರ್ಣಗೊಂಡರೆ ಶೂಟಿಂಗ್ ಮುಗಿದಂತೆ. ಡ್ಯುಯೆಟ್ ಸಾಂಗ್​ನ ಮಾಡದಿರಲು ಸುಕುಮಾರ್ ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:‘ಪುಷ್ಪ 2’ ಪ್ರಚಾರಕ್ಕೆ ಖರ್ಚು ಮಾಡುತ್ತಿರುವ ಹಣದಲ್ಲಿ 3 ಸಿನಿಮಾ ನಿರ್ಮಿಸಬಹುದು

ಸದ್ಯ ‘ಸೂಸೇಕಿ..’ ಹಾಗೂ ಟೈಟಲ್ ಸಾಂಗ್ ‘ಪುಷ್ಪ ಪುಷ್ಪ..’ ರಿಲೀಸ್ ಆಗಿದೆ. ಜಾತ್ರೆಯಲ್ಲಿ ನಡೆಯೋ ಹಾಡನ್ನು ಕೂಡ ರಿಲೀಸ್ ಮಾಡಲು ತಂಡ ರೆಡಿ ಆಗಿದೆ. ಈಗ ಇದರ ಜೊತೆ ಮತ್ತೊಂದು ಹಾಡನ್ನು ಶೂಟ್ ಮಾಡೋದಾದರೆ ಸಿನಿಮಾದ ಅವಧಿ ಕೂಡ ಹೆಚ್ಚುತ್ತದೆ. ಅದನ್ನು ಕೇವಲ ಪ್ರಚಾರಕ್ಕೆ ಮಾತ್ರ ಬಳಕೆ ಮಾಡಿಕೊಳ್ಳೋಣ ಎಂದರೆ ಬಜೆಟ್ ಹೆಚ್ಚಲಿದೆ. ಹೀಗಾಗಿ, ಸುಕುಮಾರ್ ಈ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.

‘ಪುಷ್ಪ 2’ ಚಿತ್ರ ಡಿಸೆಂಬರ್ 5ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ