ನಟನ ಬಂಧನ, ನಿಂತಿರುವ ಚಿತ್ರೀಕರಣ ಮುಂದುವರೆಸಲು ‘ಪುಷ್ಪ 2’ ತಂಡ ಯೋಜನೆ

Pushpa 2: ‘ಪುಷ್ಪ’ ಸಿನಿಮಾದಲ್ಲಿ ನಾಯಕನ ಗೆಳೆಯ ಕೇಶವ ಪಾತ್ರದಲ್ಲಿ ನಟಿಸಿದ್ದ ಜಗದೀಶ್ ಜೈಲುಪಾಲಾಗಿರುವ ಕಾರಣ, ‘ಪುಷ್ಪ 2’ ಸಿನಿಮಾದ ಚಿತ್ರೀಕರಣಕ್ಕೆ ಸಮಸ್ಯೆಯಾಗಿದೆ. ಆದರೆ ಚಿತ್ರೀಕರಣ ಮುಂದುವರೆಸಲು ಚಿತ್ರತಂಡ ಯೋಜನೆಯೊಂದನ್ನು ಹಾಕಿಕೊಂಡಿದೆ.

ನಟನ ಬಂಧನ, ನಿಂತಿರುವ ಚಿತ್ರೀಕರಣ ಮುಂದುವರೆಸಲು ‘ಪುಷ್ಪ 2’ ತಂಡ ಯೋಜನೆ
ಪುಷ್ಪ 2
Follow us
|

Updated on: Dec 15, 2023 | 9:16 PM

ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾವನ್ನು 2024ರ ಆಗಸ್ಟ್ 15ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ. ‘ಪುಷ್ಪ’ ಸಿನಿಮಾದ ಮೊದಲ ಭಾಗಕ್ಕಿಂತಲೂ ಅದ್ಧೂರಿಯಾಗಿ ‘ಪುಷ್ಪ 2’ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಶ್ರಮಿಸುತ್ತಿದೆ. ಸಿನಿಮಾದ ಚಿತ್ರೀಕರಣ ಇನ್ನೂ ಅರ್ಧವಷ್ಟೆ ಮುಗಿದಿದ್ದು, ಇನ್ನೂ ಹಲವು ಭಾಗಗಳ ಚಿತ್ರೀಕರಣ ಬಾಕಿ ಇದೆ. ಹೀಗಿರುವಾಗ ಸಿನಿಮಾದ ಪ್ರಮುಖ ನಟ ಬಂಧನಕ್ಕೆ ಒಳಗಾದ ಕಾರಣ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಆದರೆ ಇದರ ನಡುವೆಯೂ ಚಿತ್ರೀಕರಣವನ್ನು ಮುಂದುವರೆಸಲು ಚಿತ್ರತಂಡ ಯೋಜನೆಯೊಂದನ್ನು ಹಾಕಿಕೊಂಡಿದೆ.

‘ಪುಷ್ಪ’ ಸಿನಿಮಾದಲ್ಲಿ ನಾಯಕನ ಪಾತ್ರದಷ್ಟೆ ಪ್ರಧಾನ್ಯತೆ ಆತನ ಗೆಳೆಯನ ಪಾತ್ರಕ್ಕೂ ಇದೆ. ಪುಷ್ಪ ಪಾತ್ರದೊಟ್ಟಿಗೆ ಸದಾ ನೆರಳಂತೆ ಇರುವ ಕೇಶವ ಅಲಿಯಾಸ್ ಮಂಡೇಲು ಪಾತ್ರದಲ್ಲಿ ನಟ ಜಗದೀಶ್ ನಟಿಸಿದ್ದರು. ಅಲ್ಲು ಅರ್ಜುನ್​ರ ಪಾತ್ರದಷ್ಟೆ ಮಹತ್ವವಾದ ಪಾತ್ರವಿದು, ಸಿನಿಮಾದ ಕತೆಯನ್ನು ನರೇಟ್ ಮಾಡುವುದೇ ಈ ಪಾತ್ರ. ಆದರೆ ಕೇಶವ ಪಾತ್ರದಲ್ಲಿ ನಟಿಸಿದ್ದ ನಟ ಜಗದೀಶ್ ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದಾರೆ.

ನಟ ಜಗದೀಶ್, ಯುವತಿಯೊಬ್ಬರ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ಇಟ್ಟುಕೊಂಡು ಆಕೆಗೆ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಯುವತಿಯು ನವೆಂಬರ್ 29ರಂದು ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದ್ದಾರೆ. ಆ ಯುವತಿ ಜಗದೀಶ್​ರ ಮಾಜಿ ಪ್ರೇಯಸಿ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಅನ್ನು ಡಿಸೆಂಬರ್ 6ರಂದು ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ಪ್ರಸ್ತುತ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ:ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ​; ‘ಪುಷ್ಪ’ ಚಿತ್ರದ ನಟ ಅರೆಸ್ಟ್​

ಜಗದೀಶ್ ಜೈಲಿನಲ್ಲಿರುವ ಕಾರಣ, ‘ಪುಷ್ಪ 2’ ಚಿತ್ರತಂಡ ಡ್ಯೂಪ್ ಬಳಸಿ ಚಿತ್ರೀಕರಣ ಮಾಡುತ್ತಿದೆ. ಆದರೆ ಕೆಲವು ದೃಶ್ಯಗಳಿಗಾದರೂ ಜಗದೀಶ್​ರ ಅವಶ್ಯಕತೆ ಇದೆ ಎನ್ನಲಾಗಿದ್ದು, ಈ ಕಾರಣಕ್ಕಾಗಿ ಚಿತ್ರತಂಡ, ಜಗದೀಶ್​ಗೆ ಜಾಮೀನು ಕೊಡಿಸಿ ಅವರನ್ನು ಹೊರಗೆ ಕರೆತರುವ ಪ್ರಯತ್ನವನ್ನೂ ಮಾಡುತ್ತಿದೆ, ವಿಶೇಷವಾಗಿ ಚಿತ್ರೀಕರಣದ ಕಾರಣಕ್ಕಾಗಿಯೇ ಜಗದೀಶ್ ಗೆ ಜಾಮೀನು ಕೊಡಿಸುವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ ಎನ್ನಲಾಗುತ್ತಿದೆ.

‘ಪುಷ್ಪ 2’ ಸಿನಿಮಾದ ಅರ್ಧ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಿನಿಮಾದ ಟೀಸರ್ ಅನ್ನು ಸಹ ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದೆ. ಆದರೆ ಇನ್ನೂ ಸಾಕಷ್ಟು ಚಿತ್ರೀಕರಣ ಬಾಕಿ ಇದೆ. ಹಾಡುಗಳು, ಆಕ್ಷನ್ ದೃಶ್ಯಗಳು ಹಾಗೂ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣವನ್ನು ಚಿತ್ರತಂಡ ಮಾಡಬೇಕಿದೆ. ಹಾಗಾಗಿ ನಟ ಜಗದೀಶ್​ರ ಅವಶ್ಯಕತೆ ಚಿತ್ರತಂಡಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ