AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Charan: ನಿಜಕ್ಕೂ ಆಸ್ಕರ್​ ಸಮಾರಂಭದಲ್ಲಿ ನಡೆದಿದ್ದು ಏನು? ಬಹುದಿನಗಳ ಬಳಿಕ ಬಾಯ್ಬಿಟ್ಟ ರಾಮ್ ಚರಣ್​

Naatu Naatu Song: ಮಾರ್ಚ್​ 12ರಂದು ಲಾಸ್​ ಏಂಜಲಿಸ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂದು ವೇದಿಕೆಯಲ್ಲಿ ಹೆಜ್ಜೆ ಹಾಕಲು ರಾಮ್​ ಚರಣ್​ ಸಿದ್ಧರಾಗಿದ್ದರು. ಆದರೆ ಅವಕಾಶ ಸಿಗಲಿಲ್ಲ.

Ram Charan: ನಿಜಕ್ಕೂ ಆಸ್ಕರ್​ ಸಮಾರಂಭದಲ್ಲಿ ನಡೆದಿದ್ದು ಏನು? ಬಹುದಿನಗಳ ಬಳಿಕ ಬಾಯ್ಬಿಟ್ಟ ರಾಮ್ ಚರಣ್​
ರಾಮ್ ಚರಣ್
ಮದನ್​ ಕುಮಾರ್​
|

Updated on: Apr 17, 2023 | 3:18 PM

Share

​ಭಾರತದ ಸಿನಿಮಾಗಳು ಆಸ್ಕರ್​ ಗೆಲ್ಲಬೇಕು ಎಂಬುದು ಭಾರತೀಯರ ಬಹು ವರ್ಷಗಳ ಕನಸಾಗಿತ್ತು. ಆ ಕನಸನ್ನು ‘ಆರ್​ಆರ್​ಆರ್​’ ಸಿನಿಮಾ ನನಸು ಮಾಡಿತು. ಈ ಸಿನಿಮಾದ ‘ನಾಟು ನಾಟು..’ ಹಾಡಿಗೆ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ (Oscar Awards) ಸಿಕ್ಕಿದ್ದು ಭಾರತೀಯರಿಗೆ ಹೆಮ್ಮೆ ತಂದಿದೆ. ಆದರೆ ಈ ಪ್ರಶಸ್ತಿ ಪಡೆದಿದ್ದರ ಹಿಂದೆ ಲಾಬಿ ಇದೆಯೇ ಎಂದು ಕೂಡ ಕೆಲವರು ಅನುಮಾನ ವ್ಯಕ್ತಪಡಿಸಿದ್ದುಂಟು. ಇನ್ನು, ಆಸ್ಕರ್​ ವೇದಿಕೆಯಲ್ಲಿ ‘ನಾಟು ನಾಟು..’ (Naatu Naatu Song) ಹಾಡಿಗೆ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ಡ್ಯಾನ್ಸ್​ ಮಾಡುತ್ತಾರೆ ಎಂದು ಕೂಡ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅವರಿಗೆ ಅಲ್ಲಿ ಡ್ಯಾನ್ಸ್​ ಮಾಡಲು ಯಾಕೆ ಅವಕಾಶ ಸಿಗಲಿಲ್ಲ ಎಂಬ ಪ್ರಶ್ನೆ ಎದ್ದಿತ್ತು. ಈಗ ಆ ಪ್ರಶ್ನೆಗೆ ರಾಮ್​ ಚರಣ್​ ಉತ್ತರ ನೀಡಿದ್ದಾರೆ. ‘ನಮ್ಮನ್ನು ಆಸ್ಕರ್​ ವೇದಿಕೆಗೆ ಕರೆಯುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅವರು ಕರೆಯಲೇ ಇಲ್ಲ’ ಎಂದು ರಾಮ್​ ಚರಣ್​ (Ram Charan) ಹೇಳಿದ್ದಾರೆ. ಆದರೆ ಈ ಮೊದಲು ಜೂನಿಯರ್​ ಎನ್​ಟಿಆರ್​ ನೀಡಿದ ಹೇಳಿಕೆಯೇ ಬೇರೆ ರೀತಿ ಇತ್ತು.

‘ಶೇ.100ರಷ್ಟು ರೆಡಿಯಾಗಿದ್ದೆ’ ಎಂದ ರಾಮ್​ ಚರಣ್​:

ಮಾರ್ಚ್​ 12ರಂದು ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂದು ವೇದಿಕೆಯಲ್ಲಿ ಹೆಜ್ಜೆ ಹಾಕಲು ರಾಮ್​ ಚರಣ್​ ಸಿದ್ಧರಾಗಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ‘ಅವರು ನಮ್ಮನ್ನು ಕರೆಯುತ್ತಾರೆ ಅಂತ ನಾನು ಶೇ.100ರಷ್ಟು ರೆಡಿಯಾಗಿದ್ದೆ. ಆದರೆ ನಿಜಕ್ಕೂ ಏನಾಯಿತೋ ನನಗೆ ತಿಳಿದಿಲ್ಲ. ಅವರು ನಮ್ಮನ್ನು ಕರೆಯಲಿಲ್ಲ. ಆ ಬಗ್ಗೆ ಈಗ ಮಾತನಾಡೋದು ಬೇಡ. ವೇದಿಕೆಯಲ್ಲಿ ಡ್ಯಾನ್ಸ್​ ಮಾಡಿದ ತಂಡದವರು ತುಂಬ ಚೆನ್ನಾಗಿ ಮಾಡಿದರು. ನಮಗಿಂತಲೂ ಚೆನ್ನಾಗಿ ಡ್ಯಾನ್ಸ್​ ಮಾಡಿದರು’ ಎಂದು ರಾಮ್​ ಚರಣ್​ ಹೇಳಿದ್ದಾರೆ.

ಇದನ್ನೂ ಓದಿ: Yentamma Song: ಪಂಚೆ ಎತ್ತಿಕಟ್ಟಿ ಕುಣಿದ ಸಲ್ಮಾನ್​ ಖಾನ್​, ರಾಮ್​ ಚರಣ್​, ವೆಂಕಟೇಶ್​; ಧೂಳೆಬ್ಬಿಸಿದ ‘ಯೆಂಟಮ್ಮಾ’ ಹಾಡು

ಇದನ್ನೂ ಓದಿ
Image
ನರ್ತನ್ ಚಿತ್ರಕ್ಕೆ ರಾಮ್​ ಚರಣ್ ಗ್ರೀನ್ ಸಿಗ್ನಲ್​? ಕೇಳಿ ಬರ್ತಿದೆ ಹೊಸ ಸುದ್ದಿ
Image
‘ಆರ್​ಆರ್​ಆರ್​’ನಿಂದ ರಾಮ್​ ಚರಣ್​ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್​ನಿಂದ ಬಂತು ಎರಡೆರಡು ಆಫರ್​
Image
ನೆಟ್​ಫ್ಲಿಕ್ಸ್​ ಜತೆ ಕೈ ಜೋಡಿಸಲಿರುವ ರಾಮ್​ ಚರಣ್​? ಹೊಸ ಡೀಲ್​ ಸಲುವಾಗಿ ಮುಂಬೈನಲ್ಲಿ ಮಾತುಕತೆ
Image
ವಿವಾದದಲ್ಲಿ ರಾಮ್​ ಚರಣ್​ ಪತ್ನಿ ಉಪಾಸನಾ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

‘ತಯಾರಿ ಮಾಡಿಕೊಂಡಿರಲಿಲ್ಲ’ ಎಂದಿದ್ದ ಜೂ.​ ಎನ್​ಟಿಆರ್​:

ಆಸ್ಕರ್​ ವೇದಿಕೆಯಲ್ಲಿ ‘ನಾಟು ನಾಟು..’ ಹಾಡಿಗೆ ಯಾಕೆ ಡ್ಯಾನ್ಸ್​ ಮಾಡಿಲ್ಲ ಎಂಬುದಕ್ಕೆ ಜ್ಯೂನಿಯರ್​ ಎನ್​ಟಿಆರ್​ ಅವರು ಬೇರೆಯದೇ ಕಾರಣ ನೀಡಿದ್ದರು. ಸೂಕ್ತ ತಯಾರಿ ಮಾಡಿಕೊಳ್ಳದ ಕಾರಣ ತಾವು ಡ್ಯಾನ್ಸ್​ ಮಾಡಿಲ್ಲ ಎಂದು ಅವರು ಹೇಳಿದ್ದರು. ‘ನಾನು ಡ್ಯಾನ್ಸ್​ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ರಿಹರ್ಸಲ್​ ಮಾಡಲು ನಮಗೆ ಸಮಯ ಸಿಕ್ಕಿಲ್ಲ. ನಾವು ಸೂಕ್ತ ತಯಾರಿ ಮಾಡಿಕೊಳ್ಳದೇ ಜಗತ್ತಿನ ಅತಿ ದೊಡ್ಡ ವೇದಿಕೆ ಏರಲು ಆಗುವುದಿಲ್ಲ. ನಾನು ಬ್ಯುಸಿ ಆಗಿದ್ದೆ. ರಾಮ್​ ಚರಣ್​ ಕೂಡ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ಬ್ಯುಸಿ ಆಗಿದ್ದರು. ರಿಹರ್ಸಲ್​ ಮಾಡಿಲ್ಲದ ಕಾರಣ ನಾವು ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಪರ್ಫಾರ್ಮ್​ ಮಾಡುವುದಿಲ್ಲ’ ಅಂತ ಜೂ.​ ಎನ್​ಟಿಆರ್​ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?