AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬುದ್ಧಿವಂತರು ಪ್ರೀತಿಸುತ್ತಾರೆ, ಮೂರ್ಖರು ಮದುವೆಯಾಗುತ್ತಾರೆ’; ರಾಮ್ ಗೋಪಾಲ್ ವರ್ಮ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ನೇರ ಮಾತುಗಳಿಂದ ಯಾವಾಗಲೂ ಚರ್ಚೆ ಆಗುತ್ತಾರೆ. ಅವರಿಗೆ ಹೀರೋಯಿನ್​ಗಳ ಬಗ್ಗೆ ವಿಶೇಷ ಪ್ರೀತಿ. ಯುವ ನಾಯಕಿಯರ ಜೊತೆ ಅವರು ಬೋಲ್ಡ್ ಆಗಿ ಕಾಣಿಸಿಕೊಂಡ ಉದಾಹರಣೆ ಇದೆ. ಅವರ ವಿವಾಹದ ಬಗ್ಗೆ ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಲೇ ಇರುತ್ತದೆ.

‘ಬುದ್ಧಿವಂತರು ಪ್ರೀತಿಸುತ್ತಾರೆ, ಮೂರ್ಖರು ಮದುವೆಯಾಗುತ್ತಾರೆ’; ರಾಮ್ ಗೋಪಾಲ್ ವರ್ಮ
ಆರ್​ಜಿವಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 07, 2025 | 8:05 AM

ರಾಮ್ ಗೋಪಾಲ್ ವರ್ಮ (Ram Gopal Varma) ಅವರಿಗೆ ಇಂದು (ಏಪ್ರಿಲ್ 7) ಜನ್ಮದಿನ. ವಿವಾದದ ಮೂಲಕವೇ ಸದಾ ಸುದ್ದಿ ಆದವರು ರಾಮ್ ಗೋಪಾಲ್ ವರ್ಮಾ. ಆರ್​ಜಿವಿ ಮಾಡಿಕೊಂಡ ವಿವಾದಗಳು ಒಂದೆರಡಲ್ಲ ಬಿಡಿ. ಆರ್​ಜಿವಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರಬಹುದು. ಆದರೆ, ವಿವಾದದ ಮೂಲಕ ಹೆಚ್ಚು ಸುದ್ದಿ ಆಗಲು ಅವರು ಇಷ್ಟಪಡುತ್ತಾರೆ ಎನ್ನಬಹುದು. ರಾಮ್ ಗೋಪಾಲ್ ವರ್ಮ ವಿವಾಹದ ಬಗ್ಗೆ ತಮ್ಮದೇ ಆದ ಆಲೋಚನೆ ಹೊಂದಿದ್ದಾರೆ. ಡಿವೋರ್ಸ್ ಹೊಂದಲು ಕೂಡ ಇದುವೇ ಕಾರಣ ಆಯಿತು.

ರಾಮ್ ಗೋಪಾಲ್ ವರ್ಮಾ ಅವರು ರತ್ನ ಹೆಸರಿನ ಯುವತಿಯನ್ನು ವಿವಾಹ ಆಗಿದ್ದರು. ಆ ಬಳಿಕ ಇವರು ವಿಚ್ಛೇದನ ಪಡೆದುಕೊಂಡರು. ಈ ದಂಪತಿಗೆ ಓರ್ವ ಮಗಳು ಇದ್ದಾಳೆ. ಅವರು ಕ್ಲಾಸಿಕಲ್ ಡ್ಯಾನ್ಸರ್. ರಾಮ್ ಗೋಪಾಲ್ ವರ್ಮಾ ಮದುವೆಯನ್ನು ಜೈಲು ಎಂದು ಕರೆದಿದ್ದರು. ಹೀಗಾಗಿ ಇದರಿಂದ ಅವರು ಹೊರ ಬಂದಿದ್ದಾರೆ

‘ಒಂದು ಮದುವೆಯಲ್ಲಿ ಪ್ರೀತಿ ಎಂಬುದು ಬಹಳ ಕಡಿಮೆ ದಿ ಇರುತ್ತದೆ. ಅವರು ಆಚರಿಸುವ ಮದುವೆ ದಿನಗಳಿಗಿಂತ ಕಡಿಮೆ ದಿನಗಳವರೆಗೆ ಪ್ರೀತಿ ಇರುತ್ತದೆ. ಅಂದರೆ ಪ್ರೀತಿ ಇರೋದು 3 ರಿಂದ 5 ದಿನಗಳು. ಬುದ್ಧಿವಂತ ಜನರು ಪ್ರೀತಿಸುತ್ತಾರೆ ಮತ್ತು ಮೂರ್ಖರು ಮದುವೆಯಾಗುತ್ತಾರೆ’ ಎಂದು ನೇರವಾಗಿ ಹೇಳಿದ್ದರು. ರಾಮ್ ಗೋಪಾಲ್ ವರ್ಮ ಅವರು ಉರ್ಮಿಳಾ ಮಾತೊಂಡ್ಕರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು. ಈ ಕಾರಣದಿಂದಲೇ ರತ್ನ ಜೊತೆ ಅವರು ವಿವಾಹ ಕೊನೆ ಮಾಡಿಕೊಂಡರು ಎನ್ನಲಾಗಿದೆ.

ಇದನ್ನೂ ಓದಿ
Image
ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್; ರವಿಚಂದ್ರನ್ ಬೇಸರ
Image
ಗಲ್ರಾನಿಗೆ ವಂಚನೆ ಮಾಡಿದವನಿಗೆ 61 ಲಕ್ಷ ದಂಡ, 6 ತಿಂಗಳು ಜೈಲು ಶಿಕ್ಷೆ
Image
ಫೋಟೋದಿಂದ ಬಯಲಾಯ್ತು ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಡುವಿನ ಗುಟ್ಟು
Image
ಶ್ರೀಲೀಲಾ ಶಾಕಿಂಗ್ ವಿಡಿಯೋ; ನಟಿಯನ್ನು ಬಲವಂತವಾಗಿ ಎಳೆದಾಡಿದ ಜನ

ಒಮ್ಮೆ ಸುಚಿತ್ರಾ ಕೃಷ್ಣಮೂರ್ತಿ ಅವರು ಹಾಸ್ಯಾಸ್ಪದವಾಗಿ ‘ನಾನು ಆರ್​ಜಿವಿನ ಮದುವೆ ಆಗುತ್ತೇನೆ’ ಎಂದಿದ್ದರು. ಇದನ್ನು ಗಂಭೀರವಾಗಿ ಸ್ವೀಕರಿಸಿದ್ದ ಆರ್​ಜಿವಿ, ಕಚೇರಿಗೆ ಅವರನ್ನು ಕರೆದು ಈ ಬಗ್ಗೆ ಗಂಭೀರವಾಗಿ ಮಾತನಾಡಿ, ಮದುವೆ ಬೇಡ ಎಂದಿದ್ದರಂತೆ.

‘ಒಂದೇ ವ್ಯಕ್ತಿಯೊಂದಿಗೆ ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುವ ಅಸಾಧಾರಣ ಸಾಮರ್ಥ್ಯವಿದ್ದರೆ ಮಾತ್ರ ಮದುವೆ ಯಶಸ್ವಿಯಾಗುತ್ತದೆ’ ಎಂದು ಅವರು ಸರಣಿ ಪೋಸ್ಟ್‌ಗಳಲ್ಲಿ ಬರೆದಿದ್ದರು.

ಇದನ್ನೂ ಓದಿ: ‘ನನಗೆ ತಾಯಿ ಅಷ್ಟೇ ಇಷ್ಟ, ಮಗಳಲ್ಲ’: ರಾಮ್ ಗೋಪಾಲ್ ವರ್ಮಾ ನೇರ ಮಾತು

ರಾಮ್ ಗೋಪಾಲ್ ವರ್ಮಾ ಅವರು ಅನೇಕ ಬಾರಿ ವಿವಾಹ ಟೀಕಿಸಿದ್ದಾರೆ. ಈಗ ಅವರು ಯುವ ಹೀರೋಯಿನ್​ಗಳ ಜೊತೆ ಕಾಣಿಸಿಕೊಳ್ಳುತ್ತಾರೆ ಮತ್ತು ಅವರ ಜೊತೆ ಆಪ್ತವಾಗಿ ನಡೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಟ್ರೋಲ್ ಆಗಿದ್ದೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ