AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಕಿಮ್​ ಚಂದ್ರ ಚಟರ್ಜಿ ಬಯೋಪಿಕ್​​: ಸ್ಕ್ರಿಪ್ಟ್​ ಕೆಲಸ ಒಪ್ಪಿಕೊಂಡ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​

Bankim Chandra Chatterjee Biopic: ಬಂಕಿಮ್​ ಚಂದ್ರ ಚಟರ್ಜಿ ಬಯೋಪಿಕ್​ ಕೆಲಸಗಳು ಚಾಲ್ತಿಯಲ್ಲಿವೆ. ವಿಜಯೇಂದ್ರ ಪ್ರಸಾದ್​ ಅವರು ಸ್ಕ್ರಿಪ್ಟ್​ ಬರೆಯಲು ಒಪ್ಪಿಕೊಂಡಿದ್ದಾರೆ.

ಬಂಕಿಮ್​ ಚಂದ್ರ ಚಟರ್ಜಿ ಬಯೋಪಿಕ್​​: ಸ್ಕ್ರಿಪ್ಟ್​ ಕೆಲಸ ಒಪ್ಪಿಕೊಂಡ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​
ಬಂಕಿಮ್ ಚಂದ್ರ ಚಟರ್ಜಿ, ವಿಜಯೇಂದ್ರ ಪ್ರಸಾದ್
TV9 Web
| Edited By: |

Updated on: Apr 11, 2022 | 9:12 AM

Share

ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್​ಗಳು (Biopic) ಯಶಸ್ಸು ಕಾಣುತ್ತಿವೆ. ಆ ಕಾರಣದಿಂದ ನಿರ್ಮಾಪಕರು ಇಂಥ ಸಿನಿಮಾ ಮಾಡಲು ಉತ್ಸಾಹ ತೋರುತ್ತಿದ್ದಾರೆ. ನಿಜ ಜೀವನದಲ್ಲಿ ಸಾಧನೆ ಮಾಡಿದ ಮಹಾನ್​ ವ್ಯಕ್ತಿಗಳ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವ ಟ್ರೆಂಡ್​​ ಜೋರಾಗಿದೆ. ದೊಡ್ಡ ಮಟ್ಟದಲ್ಲಿಯೇ ಇಂಥ ಚಿತ್ರಗಳನ್ನು ತಯಾರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು, ಖ್ಯಾತ ಸಾಹಿತಿಗಳು, ಯಶಸ್ವಿ ಉದ್ಯಮಿಗಳು, ಸಿನಿಮಾ ಜಗತ್ತಿನ ಸಾಧಕರು, ಕ್ರೀಡಾ ಲೋಕದ ಸೆಲೆಬ್ರಿಟಿಗಳು.. ಹೀಗೆ ಅನೇಕರ ಜೀವನದ ಕಥೆಯನ್ನು ಪರದೆ ಮೇಲೆ ಮೂಡಿಸುವ ಕೆಲಸ ಆಗುತ್ತಿದೆ. ಖ್ಯಾತ ಸಾಹಿತಿ ಬಂಕಿಮ್​ ಚಂದ್ರ ಚಟರ್ಜಿ (Bankim Chandra Chatterjee) ಅವರ ಬಯೋಪಿಕ್​ಗೆ ಈಗ ಸಿದ್ಧತೆ ನಡೆದಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ‘ಆರ್​ಆರ್​ಆರ್’ ಸಿನಿಮಾದ ಕಥೆಗಾರ​ ವಿಜಯೇಂದ್ರ ಪ್ರಸಾದ್​ (Vijayendra Prasad) ಅವರು ಕೂಡ ಈ ಪ್ರಾಜೆಕ್ಟ್​ನ ಭಾಗವಾಗಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಅವರ ಬಯೋಪಿಕ್​ಗೆ ಸ್ಕ್ರಿಪ್ಟ್​ ಬರೆಯಲು ಅವರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಆಗಿದೆ.

ರಾಜಮೌಳಿ ಅವರ ಯಶಸ್ಸಿನಲ್ಲಿ ಅವರ ತಂದೆ ವಿಜಯೇಂದ್ರ ಪ್ರಸಾದ್​ ಕೊಡುಗೆ ದೊಡ್ಡದಿದೆ. ಅವರ ಬಹುತೇಕ ಸಿನಿಮಾಗಳಿಗೆ ಕಥೆ ಬರೆದವರೇ ವಿಜಯೇಂದ್ರ ಪ್ರಸಾದ್​. ‘ಮಗಧೀರ’, ‘ಬಜರಂಗಿ ಭಾಯಿಜಾನ್​’, ‘ಬಾಹುಬಲಿ’, ‘ಆರ್​ಆರ್​ಆರ್​’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳ ಕಥೆ ಮೂಡಿಬಂದಿದ್ದು ವಿಜಯೇಂದ್ರ ಪ್ರಸಾದ್​ ಅವರ ಲೇಖನಿಯಲ್ಲಿ. ಈಗ ಅವರು ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್​ಗೆ ಸ್ಕ್ರಿಪ್ಟ್​ ಬರೆಯಲು ಒಪ್ಪಿಕೊಂಡಿದ್ದಾರೆ.

ಭಾರತೀಯ ಸಾಹಿತ್ಯ ವಲಯಕ್ಕೆ ಬಂಕಿಮ್ ಚಂದ್ರ ಚಟರ್ಜಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಅವರು ಬರೆದ ‘ವಂದೇ ಮಾತರಂ..’ ಗೀತೆಯು ಸ್ವಾತಂತ್ರ್ಯ ಹೋರಾಟದಲ್ಲಿ ದೇಶಭಕ್ತಿಯ ಭಾವ ಉಕ್ಕಿಸುವಲ್ಲಿ ಪ್ರಮಖ ಪಾತ್ರ ವಹಿಸಿತ್ತು. ಕವಿಯಾಗಿ, ಕಾದಂಬರಿಕಾರರಾಗಿ, ಪತ್ರಕರ್ತರಾಗಿ ಬಂಕಿಮ್​ ಚಂದ್ರ ಚಟರ್ಜಿ ಸಾಧನೆ ಮಾಡಿದ್ದರು. ಅವರು ಬರೆದ ‘ಆನಂದ ಮಠ್’ ಕಾದಂಬರಿ ತುಂಬ ಫೇಮಸ್​.

ಬಂಕಿಮ್​ ಚಂದ್ರ ಚಟರ್ಜಿ ಬಯೋಪಿಕ್​ಗೆ ಈಗ ಸ್ಕ್ರಿಪ್ಟ್​ ಕೆಲಸಗಳು ಚಾಲ್ತಿಯಲ್ಲಿವೆ. ವಿಜಯೇಂದ್ರ ಪ್ರಸಾದ್​ ಅವರು ಸ್ಕ್ರಿಪ್ಟ್​ ಬರೆಯಲು ಒಪ್ಪಿಕೊಂಡಿದ್ದಾರೆ ಎಂಬ ವಿಷಯ ಇತ್ತೀಚೆಗೆ ಬಹಿರಂಗ ಆಯಿತು. ಈ ಸಿನಿಮಾದ ಭಾಗವಾಗಿರುವುದಕ್ಕೆ ಅವರಿಗೆ ತುಂಬ ಖುಷಿ ಇದೆ. ಬಂಕಿಮ್​ ಚಂದ್ರ ಚಟರ್ಜಿ ಅವರ ‘ಆನಂದ ಮಠ್’ ಪುಸ್ತಕವನ್ನು ಬಹಳ ಹಿಂದೆಯೇ ವಿಜಯೇಂದ್ರ ಪ್ರಸಾದ್​ ಓದಿದ್ದರು. ಈಗ ಅದನ್ನು ಆಧರಿಸಿ ಸಿನಿಮಾ ಮಾಡುವ ಬಗ್ಗೆ ಮೊದಲು ವಿಷಯ ತಿಳಿದಾಗ ಅಚ್ಚರಿ ಆಯಿತು ಎಂದು ಅವರು ಹೇಳಿದ್ದಾರೆ. ರಾಮ್​ ಕಮಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.

‘ಆನಂದ ಮಠ್’ ಕೃತಿಯಲ್ಲಿನ ವಿವರಗಳು ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಸೂಕ್ತ ಎನಿಸುವುದಿಲ್ಲ ಎಂದು ವಿಜಯೇಂದ್ರ ಪ್ರಸಾದ್​ ಅಂದುಕೊಂಡಿದ್ದರು. ಆದರೆ ನಿರ್ದೇಶಕ ರಾಮ್​ ಕಮಲ್​ ಅವರು ಅನೇಕ ಎಮೋಷನ್​ಗಳನ್ನು ಸೇರಿಸಿ ಇದನ್ನೊಂದು ಕಮರ್ಷಿಯಲ್​ ಸಿನಿಮಾ ಆಗಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಇದು ನನ್ನ ಕನಸಿನ ಪ್ರಾಜೆಕ್ಟ್​ ಆಗಿದ್ದು, ಭಾರತದ ದೊಡ್ಡ ದೊಡ್ಡ ತಂತ್ರಜ್ಞರು ಇದಕ್ಕಾಗಿ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ’ ಎಂದು ರಾಮ್​ ಕಮಲ್​ ಹೇಳಿದ್ದಾರೆ. ‘1770- ಏಕ್​ ಸಂಗ್ರಾಮ್​’ ಎಂದು ಈ ಚಿತ್ರಕ್ಕೆ ಹೆಸರು ಇಡಲಾಗಿದೆ. ಹೈದರಾಬಾದ್​, ಪಶ್ಚಿಮ ಬಂಗಾಳ ಮತ್ತು ಲಂಡನ್​ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಬಂಕಿಮ್​ ಚಂದ್ರ ಚಟರ್ಜಿ ಅವರು 128ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಈ ಬಯೋಪಿಕ್​ ಅನೌನ್ಸ್​ ಆಗಿದೆ. ‘ಆರ್​ಆರ್​ಆರ್​’ ಸಿನಿಮಾದ ಯಶಸ್ಸಿನ ಬಳಿಕ ವಿಜಯೇಂದ್ರ ಪ್ರಸಾದ್​ ಅವರು ‘1770- ಏಕ್​ ಸಂಗ್ರಾಮ್​’ ಚಿತ್ರತಂಡವನ್ನು ಸೇರಿಕೊಂಡಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:

ಸರೋಜಿನಿ ನಾಯ್ಡು ಬಯೋಪಿಕ್​ನಲ್ಲಿ ಶಾಂತಿಪ್ರಿಯಾ, ಸೋನಲ್​: ಪ್ಯಾನ್​ ಇಂಡಿಯಾ ಚಿತ್ರಕ್ಕೆ ಕನ್ನಡಿಗನ ನಿರ್ದೇಶನ

ಲತಾ ಮಂಗೇಶ್ಕರ್​ ಕುರಿತು ಬರಲಿದೆ ಬಯೋಪಿಕ್​; ರೇಸ್​ನಲ್ಲಿದ್ದಾರೆ ಖ್ಯಾತ ನಿರ್ದೇಶಕರು

Follow Us
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಮಂಗಳೂರು: ಕಾಂಪೌಂಡ್ ಗೋಡೆ ಕುಸಿದು ಕಾರುಗಳು ನಜ್ಜುಗುಜ್ಜು!
ಮಂಗಳೂರು: ಕಾಂಪೌಂಡ್ ಗೋಡೆ ಕುಸಿದು ಕಾರುಗಳು ನಜ್ಜುಗುಜ್ಜು!
'ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!' ಪತಿ ಆಕ್ರೋಶ
'ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!' ಪತಿ ಆಕ್ರೋಶ
ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿದ ವ್ಯಕ್ತಿ
ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿದ ವ್ಯಕ್ತಿ