ನಿರ್ದೇಶಕರೊಟ್ಟಿಗೆ ಈ ವಿಷಯಕ್ಕೆ ಜಗಳ ಮಾಡುತ್ತಾರಂತೆ ಸಾಯಿ ಪಲ್ಲವಿ

ಸಾಯಿ ಪಲ್ಲವಿ ತಮ್ಮ ವಾರಗೆಯ ನಟಿಯರಿಗಿಂತಲೂ ಬಹಳ ಭಿನ್ನ. ನಾಯಕ ಪ್ರಧಾನ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ. ನಟಿಸಿದರೂ ಸಹ ತಮ್ಮ ಪಾತ್ರಕ್ಕೆ ತೂಕವಿದ್ದರಷ್ಟೆ ನಟಿಸುವುದು. ಈಗ ಸಾಯಿ ಪಲ್ಲವಿ ‘ಅಮರನ್’ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ನಟಿಸುವ ಮೊದಲೇ ನಿರ್ದೇಶಕರಿಗೆ ಕೆಲವು ಷರತ್ತುಗಳನ್ನು ಹಾಕಿದ್ದರಂತೆ.

ನಿರ್ದೇಶಕರೊಟ್ಟಿಗೆ ಈ ವಿಷಯಕ್ಕೆ ಜಗಳ ಮಾಡುತ್ತಾರಂತೆ ಸಾಯಿ ಪಲ್ಲವಿ
Follow us
|

Updated on: Oct 26, 2024 | 7:57 AM

ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿ. ತಮ್ಮ ವಾರಗೆಯ ಇತರೆ ನಟಿಯರಿಗಿಂತ ಬಹಳ ಭಿನ್ನ ಸಾಯಿ ಪಲ್ಲವಿ. ಮರ ಸುತ್ತುವ, ರೊಮ್ಯಾಂಟಿಕ್, ಗ್ಲಾಮರಸ್ ಪಾತ್ರಗಳನ್ನು ಸಾಯಿ ಪಲ್ಲವಿ ಒಪ್ಪಿಕೊಳ್ಳುವುದೇ ಇಲ್ಲ. ಅವರ ಪಾತ್ರಕ್ಕೆ ತೂಕವಿದ್ದರಷ್ಟೆ ನಟಿಸಲು ಎಸ್ ಎನ್ನುತ್ತಾರೆ. ನಾಯಕ ಪ್ರಧಾನ ಸಿನಿಮಾದಲ್ಲಿಯೂ ಸಹ ನಾಯಕಿ ಪಾತ್ರಕ್ಕೆ ತೂಕವಿದ್ದರಷ್ಟೆ ಸಾಯಿ ಪಲ್ಲವಿ ನಟಿಸುತ್ತಾರೆ ಇಲ್ಲವಾದರೆ ಇಲ್ಲ. ಇದೀಗ ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದು ನಾಯಕ ಪ್ರಧಾನ ಸಿನಿಮಾ ಆದರೆ ಈ ಸಿನಿಮಾದಲ್ಲಿ ನಟಿಸುವ ಮುಂಚೆ ಸಿನಿಮಾದ ನಿರ್ದೇಶಕನ ಬಳಿ ಜಗಳ ಮಾಡಿದ್ದರಂತೆ ಸಾಯಿ ಪಲ್ಲವಿ.

ಬಯೋಪಿಕ್ ಸಿನಿಮಾಗಳಲ್ಲಿಯೂ ಅದರಲ್ಲಿಯೂ ಪುರುಷರೊಬ್ಬರ ಬಯೋಪಿಕ್​ನಲ್ಲಿ ನಟಿಸುವಾಗ ಸಿನಿಮಾದಲ್ಲಿ ನಾಯಕನಿಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ. ಆದರೆ ಸಿನಿಮಾಗಳಲ್ಲಿಯೂ ನಾಯಕಿಗೂ ಸಮಾನ ಅವಕಾಶ, ಸಮಾನ ಸ್ಕ್ರೀನ್ ಟೈಂ ಇರಲೇ ಬೇಕೆಂದು ಬಯಸುವವಳು ನಾನು. ಆದರೆ ‘ಅಮರನ್’ ಸಿನಿಮಾ, ಮೇಜರ್ ಒಬ್ಬರ ಕತೆಯಾದ್ದರಿಂದ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಹೆಚ್ಚು ಆದ್ಯತೆ ಇರುತ್ತದೆ ಎಂದು ನಾನು ಎಣಿಸಿದ್ದೆ, ಆದರೆ ನಿರ್ದೇಶಕ ರಾಜಕುಮಾರ್ ಪೆರಿಸ್ವಾಮಿ ನಾಯಕಿ ಪಾತ್ರಕ್ಕೂ ಸಮಾನ ಅವಕಾಶ ಇದೆ ಎಂದರು. ಆಗ ಅವರ ಬಳಿ ಜಗಳವಾಡಿ ನಾನು ನಟಿಸಿದ ದೃಶ್ಯಗಳನ್ನು ಕತ್ತರಿಸಬಾರದು, ನನ್ನ ಪಾತ್ರವನ್ನು ಕಟ್ ಮಾಡಬಾರದು ಎಂದೆಲ್ಲ ಕಂಡೀಷನ್ ಹಾಕಿಸಿ ಅದನ್ನು ಒಪ್ಪಂದಂತೆ ಮಾಡಿಕೊಂಡ ಮೇಲೆಯೇ ನಾನು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು’ ಎಂದಿದ್ದಾರೆ ಸಾಯಿ ಪಲ್ಲವಿ.

ಇದನ್ನೂ ಓದಿ:ಸೈನಿಕರ ಬಗ್ಗೆ ಸಾಯಿ ಪಲ್ಲವಿ ಮಾತು: ಹಳೆ ವಿಡಿಯೋ ಹಂಚಿಕೊಂಡು ಟ್ರೋಲ್

‘ಬಹುತೇಕ ಸಂದರ್ಭಗಳಲ್ಲಿ ಬಯೋಪಿಕ್​ ಸಿನಿಮಾಗಳು ಪುರುಷ ಪ್ರಧಾನ ಸಿನಿಮಾಗಳಾಗಿರುತ್ತವೆ. ಅಲ್ಲಿ ನಾಯಕಿಯರಿಗೆ ಕಡಿಮೆ ಪ್ರಾಧಾನ್ಯತೆ ಇರುತ್ತದೆ. ಸಿನಿಮಾ ಉದ್ದವಾಯ್ತೆಂದೋ ಅಥವಾ ಬೇರೆ ಕೆಲವು ಕಾರಣಗಳಿಗೆ ನಾಯಕಿಯರು ನಟಿಸಿದ್ದ ದೃಶ್ಯಗಳನ್ನು ಕತ್ತಿರಿಸಿಬಿಡುತ್ತಾರೆ. ಆದರೆ ‘ಅಮರನ್’ ಸಿನಿಮಾದಲ್ಲಿ ನಟಿಸುವ ಮುಂಚೆ, ನಿರ್ದೇಶಕ ರಾಜಕುಮಾರ್, ನನಗೆ ಭರವಸೆ ನೀಡಿದ್ದರು, ನಾನು ನಟಿಸುತ್ತಿರುವ ಇಂದು ರೆಬೆಕಾ ವರ್ಗೀಸ್ ಪಾತ್ರ, ಮೇಜರ್ ಮುಕುಂದನ್ ಪಾತ್ರದಷ್ಟೆ ಮುಖ್ಯವಾದುದು ಎಂದು, ಅವರ ಬಳಿ ಮಾತನಾಡಿ ನನ್ನ ಪಾತ್ರಕ್ಕೆ ಕತ್ತರಿ ಪ್ರಯೋಗ ಆಗುವುದಿಲ್ಲ ಎಂದು ಖಾತ್ರಿಯಾದ ಬಳಿಕವಷ್ಟೆ ನಾನು ನಟಿಸಿದೆ’ ಎಂದಿದ್ದಾರೆ.

ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ ಸಿನಿಮಾ ಹುತಾತ್ಮ ಮೇಜರ್ ಮುಕುಂದನ್ ಅವರ ಕತೆ ಆಧರಿಸಿದೆ. ಮೇಜರ್ ಮುಕುಂದನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ. ಸಾಯಿ ಪಲ್ಲವಿ, ಮುಕುಂದನ್ ಪತ್ನಿ ರೆಬೆಕಾ ವರ್ಗಿಸ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಕಮಲ್ ಹಾಸನ್ ಬಂಡವಾಳ ಹೂಡಿದ್ದಾರೆ. ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ. ‘ಅಮರನ್’ ಹೊರತಾಗಿ ಸಾಯಿ ಪಲ್ಲವಿ ಬಾಲಿವುಡ್​ನ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ತಂಡೇಲ್’ ಸಿನಿಮಾದಲ್ಲಿ ನಟಿಸಿದ್ದು ಅದಿನ್ನೂ ಬಿಡುಗಡೆ ಆಗಬೇಕಿದೆ. ಆಮಿರ್ ಖಾನ್ ಪುತ್ರನ ಹೊಸ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೋರಿಕೆ ಈಡೇರಿಕೆಗೆ ಶಿವನ ಧ್ಯಾನ ಹೇಗೆ ಮಾಡಬೇಕು? ವಿಡಿಯೋ ನೋಡಿ
ಕೋರಿಕೆ ಈಡೇರಿಕೆಗೆ ಶಿವನ ಧ್ಯಾನ ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಹೂಡಿಕೆಯಿಂದ ಲಾಭವಾಗುತ್ತದೆ
Nithya Bhavishya: ಈ ರಾಶಿಯವರಿಗೆ ಇಂದು ಹೂಡಿಕೆಯಿಂದ ಲಾಭವಾಗುತ್ತದೆ
ಹಾಸನಾಂಬೆ ಬಳಿ ಡಿಕೆ ಶಿವಕುಮಾರ್​ ಬೇಡಿಕೊಂಡಿದ್ದು ಹೀಗಂತೆ
ಹಾಸನಾಂಬೆ ಬಳಿ ಡಿಕೆ ಶಿವಕುಮಾರ್​ ಬೇಡಿಕೊಂಡಿದ್ದು ಹೀಗಂತೆ
10 ಸೆಕೆಂಡ್​ನಲ್ಲಿ 5 ಬಾರಿ ಬಿಜೆಪಿ ನಾಯಕನಿಗೆ ನಮಸ್ಕರಿಸಿದ ಐಎಎಸ್​ ಅಧಿಕಾರಿ
10 ಸೆಕೆಂಡ್​ನಲ್ಲಿ 5 ಬಾರಿ ಬಿಜೆಪಿ ನಾಯಕನಿಗೆ ನಮಸ್ಕರಿಸಿದ ಐಎಎಸ್​ ಅಧಿಕಾರಿ
ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಯುವಕ ನಿಧನ
ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಯುವಕ ನಿಧನ
ದೇವರಾಜೇಗೌಡ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ವರಸೆ ಬದಲಿಸಿದ ರೇವಣ್ಣ
ದೇವರಾಜೇಗೌಡ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ವರಸೆ ಬದಲಿಸಿದ ರೇವಣ್ಣ
ಆ ಹೆಸರು ಹೇಳಲೂ ಹನುಮಂತನಿಗೆ ನಾಚಿಕೆ: ವಿಡಿಯೋ
ಆ ಹೆಸರು ಹೇಳಲೂ ಹನುಮಂತನಿಗೆ ನಾಚಿಕೆ: ವಿಡಿಯೋ
ನನ್ನ ಮನವೊಲಿಕೆಗೆ ಯಾವ ನಾಯಕನೂ ಪ್ರಯತ್ನಿಸಿಲ್ಲ: ಅಜ್ಜಂಪೀರ್ ಖಾದ್ರಿ
ನನ್ನ ಮನವೊಲಿಕೆಗೆ ಯಾವ ನಾಯಕನೂ ಪ್ರಯತ್ನಿಸಿಲ್ಲ: ಅಜ್ಜಂಪೀರ್ ಖಾದ್ರಿ
ಚನ್ನಪಟ್ಟಣ: ನಿಖಿಲ್ ಸ್ಪರ್ಧಿಸಬಾರದು ಅಂತ ಹೇಳೋದಿಕ್ಕಾಗುತ್ತೆಯೇ? ಶಿವಕುಮಾರ್
ಚನ್ನಪಟ್ಟಣ: ನಿಖಿಲ್ ಸ್ಪರ್ಧಿಸಬಾರದು ಅಂತ ಹೇಳೋದಿಕ್ಕಾಗುತ್ತೆಯೇ? ಶಿವಕುಮಾರ್
ಯುವತಿಯ ತುಟಿಗೆ ಮುತ್ತಿಡಲು ಹೋದ ಪೊಲೀಸ್; ವಿಡಿಯೋ ವೈರಲ್
ಯುವತಿಯ ತುಟಿಗೆ ಮುತ್ತಿಡಲು ಹೋದ ಪೊಲೀಸ್; ವಿಡಿಯೋ ವೈರಲ್