Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನ ಪ್ರತಿಭಾವಂತ ನಟನನ್ನು ತೆಲುಗಿಗೆ ಕರೆತಂದ ನಟಿ ಸಮಂತಾ

Samantha: ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಸ್ಟಾರ್ ನಟಿ ಆಗಿರುವ ಜೊತೆಗೆ ಪ್ರಭಾವಿ ನಟಿ ಸಹ ಹೌದು. ಬಾಲಿವುಡ್​ನಲ್ಲೂ ಸಾಕಷ್ಟು ಒಳ್ಳೆಯ ಸಂಪರ್ಕ ಹೊಂದಿರುವ ನಟಿ ಸಮಂತಾ, ಬಾಲಿವುಡ್​ನ ಪ್ರತಿಭಾವಂತ ಯುವ ನಟನಿಗೆ, ತಮ್ಮ ಪ್ರಭಾವ ಬಳಸಿ ತೆಲುಗು ಚಿತ್ರರಂಗದಲ್ಲಿ ಸಿನಿಮಾ ಸಿಗುವಂತೆ ಮಾಡಿದ್ದಾರೆ. ಒಳ್ಳೆಯ ನಟನಿಗೆ ಅವಕಾಶ ಕೊಡಿಸಲು ಸಮಂತಾ ಮಾಡಿರುವ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಲಿವುಡ್​ನ ಪ್ರತಿಭಾವಂತ ನಟನನ್ನು ತೆಲುಗಿಗೆ ಕರೆತಂದ ನಟಿ ಸಮಂತಾ
Samantha Ruth Prabhu
Follow us
ಮಂಜುನಾಥ ಸಿ.
|

Updated on: Mar 11, 2025 | 5:30 PM

ಸಮಂತಾ ಋತ್ ಪ್ರಭು (Samantha Ruth Prabhu) ಈಗ ಸ್ಟಾರ್ ನಟಿ ಮಾತ್ರವಲ್ಲ ಪ್ರಭಾವಿ ನಟಿ ಸಹ ಹೌದು. ಬಾಲಿವುಡ್ ಸಿನಿಮಾದವರು ದಕ್ಷಿಣ ಭಾರತದಲ್ಲಿ ಸಿನಿಮಾ ಪ್ರಚಾರಕ್ಕೆ ಬಂದಾಗ ಸಮಂತಾರನ್ನು ಅತಿಥಿಯಾಗಿ ಕರೆಸುತ್ತಾರೆ. ಸಮಂತಾಗೆ ಬಾಲಿವುಡ್​ನಲ್ಲೂ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಕಾಫಿ ವಿತ್ ಕರಣ್​ಗೂ ಸಹ ಸಮಂತಾ ಹೋಗಿ ಬಂದಿದ್ದಾಗಿದೆ. ಒಟ್ಟಾರೆ ತೆಲುಗು, ತಮಿಳು, ಹಿಂದಿ ಚಿತ್ರರಂಗ ಮೂರರಲ್ಲೂ ಪ್ರಭಾವ ಹೊಂದಿದ್ದಾರೆ ನಟಿ ಸಮಂತಾ. ಇದೀಗ ತಮ್ಮ ಪ್ರಭಾವ ಬಳಸಿ, ಬಾಲಿವುಡ್​ನ ಯುವ ಪ್ರತಿಭಾವಂತ ನಟನನ್ನು ತೆಲುಗು ಚಿತ್ರರಂಗಕ್ಕೆ ಕರೆತಂದಿದ್ದಾರೆ. ಆತನಿಗೆ ಸಿನಿಮಾ ಸಿಗುವಂತೆ ಮಾಡಿದ್ದಾರೆ.

ಆದರ್ಶ್ ಗೌರವ್, ಬಾಲಿವುಡ್​ನ ನಟ. ‘ದಿ ವೈಟ್ ಟೈಗರ್’ ಸಿನಿಮಾದಲ್ಲಿನ ಅವರ ನಟನೆ ನೋಡಿ ಭೇಷ್ ಎನ್ನದವರೇ ಇಲ್ಲ. ಅದ್ಭುತವಾದ ನಟರಾಗಿದ್ದರು ಸಹ ಬಾಲಿವುಡ್​ನಲ್ಲಿ ಹೆಚ್ಚು ಅವಕಾಶಗಳು ಅವರಿಗೆ ಸಿಗುತ್ತಿರಲಿಲ್ಲ. ಸಿಕ್ಕರೂ ಸಹ ಸಣ್ಣ-ಪುಟ್ಟ ಪಾತ್ರಗಳಷ್ಟೆ. ಪ್ರಮುಖ ಪಾತ್ರ ಸಿಕ್ಕ ಸಿನಿಮಾಗಳು ಉತ್ತಮ ಪ್ರದರ್ಶನ ಮಾಡುತ್ತಿರಲಿಲ್ಲ. ಈ ನಟನ ನಟನೆ ಕಂಡು ಬಹುವಾಗಿ ಮೆಚ್ಚಿದ್ದ ಸಮಂತಾ, ಇದೀಗ ಆದರ್ಶ್ ಗೌರವ್ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅದೂ ತಮ್ಮ ಪ್ರಭಾವ ಬಳಸಿ.

ಆದರ್ಶ್ ಗೌರವ್ ಹೇಳಿಕೊಂಡಿರುವಂತೆ, ಅವರು ಸಮಂತಾರನ್ನು ‘ಸಿಟಾಡೆಲ್’ ವೆಬ್ ಸರಣಿಗೆ ಸಂಬಂಧಿಸಿದ ಪಾರ್ಟಿಯೊಂದರಲ್ಲಿ ಭೇಟಿ ಆಗಿದ್ದರಂತೆ. ಸಮಂತಾ, ತಮ್ಮ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ, ತಮಗೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಆಸೆ ಇರುವುದಾಗಿ ಹೇಳಿಕೊಂಡಿದ್ದಾರೆ ನಟಿ ಸಮಂತಾ. ಕೂಡಲೇ ಸಮಂತಾ, ಕೆಲವು ತೆಲುಗು ನಿರ್ಮಾಣ ಸಂಸ್ಥೆಗಳಿಗೆ ಕರೆ ಮಾಡಿ, ಆಡಿಷನ್ ವ್ಯವಸ್ಥೆ ಮಾಡಿಸಿದರಂತೆ.

ಇದನ್ನೂ ಓದಿ:ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟಿ ಸಮಂತಾ

ಆದರ್ಶ್ ಸಹ ಹೈದರಾಬಾದ್​ಗೆ ಬಂದು ಕೆಲವು ಕಡೆ ಆಡಿಷನ್ ಕೊಟ್ಟಿದ್ದಾರೆ. ಮಾತ್ರವಲ್ಲದೆ, ಸಮಂತಾ, ತಮ್ಮ ಮ್ಯಾನೇಜರ್ ಅನ್ನು ಕೆಲ ದಿನಗಳ ಕಾಲ ಆದರ್ಶ್​ ಜೊತೆಗೆ ಇರುವಂತೆ ಹೇಳಿ, ತೆಲುಗು ಚಿತ್ರರಂಗದ ಕೆಲ ಮುಖ್ಯ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಕಾಸ್ಟಿಂಗ್ ನಿರ್ದೇಶಕರು ಹಾಗೂ ನಟರನ್ನು ಭೇಟಿ ಮಾಡಿಸುವಂತೆ ಸೂಚಿಸಿದರಂತೆ. ಅಂತೆಯೇ ಸಮಂತಾರ ಮ್ಯಾನೇಜರ್, ಆದರ್ಶ್ ಅವರನ್ನು ಕರೆದುಕೊಂಡು ತೆಲುಗು ಚಿತ್ರರಂಗದ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿಸಿದ್ದಾರೆ. ಎಲ್ಲರ ಬಳಿಯೂ ಆದರ್ಶ್​ಗೆ ಪಾತ್ರ ಇದ್ದರೆ ಕೊಡಿ ಎಂದು ಮನವಿ ಮಾಡಿದ್ದಾರೆ. ಅಂತೆಯೇ ಆದರ್ಶ್ ಸಹ ತಮ್ಮ ಆಡಿಷನ್ ದೃಶ್ಯಗಳನ್ನು, ಫೋಟೊಗಳನ್ನು ಸಹ ಪ್ರಮುಖರೊಟ್ಟಿಗೆ ಹಂಚಿಕೊಂಡಿದ್ದಾರೆ.

ಇದೀಗ ಆದರ್ಶ್ ಗೌರವ್​ಗೆ ತೆಲುಗಿನ ಸಿನಿಮಾ ಒಂದರಲ್ಲಿ ನಟಿಸುವ ಅವಕಾಶ ದೊರೆತಿದೆ. ಬಾಬಾ ಶಶಾಂಕ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಆದರ್ಶ್ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಬಂಡವಾಳ ತೊಡಗಿಸುತ್ತಿರುವ ‘ಆರ್​ಆರ್​ಆರ್’ ಸಿನಿಮಾದ ನಿರ್ಮಾಪಕ ಡಿವಿ ದಯಾನಂದ್ ಅವರ ಪುತ್ರಿ. ಆದರ್ಶ್ ನಟನೆಯ ‘ಸೂಪರ್ ಬಾಯ್ಸ್ ಆಫ್ ಮಲೆಗಾವ್’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಚೆನ್ನಾಗಿದ್ದರೂ ಸಹ ಜನರ ಪ್ರೀತಿ ಗಳಿಸಲು ವಿಫಲವಾಗಿದೆ. ಈಗ ತೆಲುಗು ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಆದರ್ಶ್ ಇಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!