AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯಿ ಬಾಬಾ ಭಕ್ತಿಗೀತೆಗೆ 7 ಸಂಗೀತ ನಿರ್ದೇಶಕರ ಧ್ವನಿ; ಪ್ರತಿ ಗುರುವಾರ ಒಂದೊಂದು ಗೀತೆ ರಿಲೀಸ್​

ವಿ. ಮನೋಹರ್ ಹಾಡಿರುವ ‘ಸಾಯಿ ನನ್ನಯ್ಯ’ ಆಲ್ಬಂನ ಮೊದಲ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಗುರುವಾರ ಒಂದೊಂದು ಹಾಡನ್ನು ಸೆಲೆಬ್ರಿಟಿಗಳಿಂದ ರಿಲೀಸ್​ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾಯಿ ಬಾಬಾ ಭಕ್ತಿಗೀತೆಗೆ 7 ಸಂಗೀತ ನಿರ್ದೇಶಕರ ಧ್ವನಿ; ಪ್ರತಿ ಗುರುವಾರ ಒಂದೊಂದು ಗೀತೆ ರಿಲೀಸ್​
ಸಾಯಿ ಬಾಬಾ ಭಕ್ತಿಗೀತೆ ಬಿಡುಗಡೆ
TV9 Web
| Updated By: ಮದನ್​ ಕುಮಾರ್​|

Updated on: Jun 17, 2022 | 3:49 PM

Share

ಸೆಲೆಬ್ರಿಟಿಗಳಿಂದ ಸಾಮಾನ್ಯರವರೆಗೆ ಅಸಂಖ್ಯಾತ ಭಕ್ತರು ಆರಾಧಿಸುವ ದೈವ ಸಾಯಿ ಬಾಬಾ. ಈಗಾಗಲೇ ಬಾಬಾ ಕುರಿತು ಹಲವಾರು ಭಕ್ತಿಗೀತೆಗಳಿವೆ. ಅದರ ಜೊತೆಗೆ ಕನ್ನಡದ ಖ್ಯಾತ ನಿರ್ದೇಶಕ ಮತ್ತು ಗೀತರಚನಕಾರ ಕೆ. ರಾಮ್​ ನಾರಾಯಣ್ (K Ram Narayan)​ ಅವರು 7 ಹೊಸ ಗೀತೆಗಳನ್ನು ರಚಿಸಿದ್ದಾರೆ. ಈ ಹಾಡುಗಳ ಮೂಲಕ ಸಾಯಿ ಬಾಬಾ (Sai Baba) ಅವರ ಗುಣಗಾನ ಮಾಡಲಾಗಿದೆ. ಈ ಭಕ್ತಿಗೀತೆಗಳಿಗೆ (Devotional Songs) ಎಸ್​. ನಾಗು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಹಾಡುಗಳನ್ನು ಹೇಳಿರುವುದು ಕನ್ನಡದ ಖ್ಯಾತ 7 ಮಂದಿ ಸಂಗೀತ ನಿರ್ದೇಶಕರು. ಹೌದು, ದೇವರ ಕಾರ್ಯಕ್ಕಾಗಿ ಇವರೆಲ್ಲರೂ ಒಂದಾಗಿದ್ದಾರೆ. ವಿ. ಮನೋಹರ್, ರವಿ ಬಸ್ರೂರು, ವೀರ್​ ಸಮರ್ಥ್, ಧರ್ಮ ವಿಶ್, ಅನೂಪ್‌ ಸೀಳನ್, ಶ್ರೀಧರ್‌ ವಿ. ಸಂಭ್ರಮ್ ಹಾಗೂ ಆರ್.ಎಸ್. ಗಣೇಶ್‌ ನಾರಾಯಣ್ ಅವರು ತಲಾ ಒಂದು ಗೀತೆಗೆ ಧ್ವನಿ ನೀಡಿದ್ದಾರೆ.

ಚಿತ್ರಸಾಹಿತಿ, ನಿರ್ದೇಶಕ ಕೆ. ರಾಮ್‌ ನಾರಾಯಣ್ ಅವರು ಅಪ್ಪಟ ಶಿರಡಿ ಸಾಯಿ ಬಾಬಾ ಭಕ್ತ. ಸದ್ಯ ಅವರ ನಿರ್ದೇಶನದಲ್ಲಿ ‘ರಾಜಮಾರ್ತಾಂಡ’ ಮತ್ತು ‘ಅಬ್ಬರ’ ಸಿನಿಮಾಗಳು ಮೂಡಿಬರುತ್ತಿವೆ. ಈ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದರೂ ಕೂಡ ಅವರು ಬಿಡುವು ಮಾಡಿಕೊಂಡು ‘ಸಾಯಿ ನನ್ನಯ್ಯ’ ಶೀರ್ಷಿಕೆಯಲ್ಲಿ ಏಳು ಹಾಡುಗಳನ್ನು ರಚಿಸಿದ್ದಾರೆ. ಈ ಭಕ್ತಿಗೀತೆಗಳು 7 ಸಂಗೀತ ನಿರ್ದೇಶಕರಿಗೆ ಮೆಚ್ಚುಗೆ ಆಗಿದೆ. ಹಾಗಾಗಿ ಅವರೆಲ್ಲರೂ ಧ್ವನಿ ನೀಡಲು ಒಪ್ಪಿಕೊಂಡರು. ಎಲ್ಲರೂ ಭಕ್ತಿ ಭಾವದಿಂದ ಹಾಡಿದ್ದೂ ಅಲ್ಲದೇ ತಂಡಕ್ಕೆ ಶುಭ ಕೋರಿದ್ದಾರೆ.

ಇದನ್ನು ಓದಿ: Spiritual: ಗುರುವಾರದಂದೂ ಸಾಯಿ ಬಾಬಾರ ಈ 12 ಮಂತ್ರವನ್ನು ಜಪಿಸಿ

ಇದನ್ನೂ ಓದಿ
Image
ಸಕಲ ಇಷ್ಟಾರ್ಥ ಸಿದ್ಧಿಗಾಗಿ ಪವಾಡ ಪುರುಷ, ಸಂತ ಶ್ರೀ ಶಿರಡಿ ಸಾಯಿಬಾಬಾರನ್ನು ಈ ದಿನ ಪೂಜಿಸಿ; ಇಲ್ಲಿವೆ ಮಂತ್ರಗಳು
Image
Temple Tour: ಚಿನ್ನದ ಗೋಪುರದ ಮಧ್ಯೆ ಪ್ರತಿಷ್ಠಾಪನೆಯಾಗಿರುವ ಸಾಯಿಬಾಬಾ
Image
ಸಂಪತ್ತಿನ ಶೇ.85ರಷ್ಟನ್ನು ಶ್ರೀ ಶಿರಡಿ ಸಾಯಿಬಾಬಾಗೆ ಸಮರ್ಪಿಸಿದ ಕೆ.ವಿ.ರಮಣಿ; ಶಿಕ್ಷಣವೆಂದರೆ ಸೇವೆ ಎನ್ನುವ ಉದ್ಯಮಿ ಇವರು
Image
Temple Tour: ಅಮೃತ ಶಿಲೆಯಲ್ಲಿ ಕಂಗೊಳಿಸುತ್ತಿರುವ ಸಾಯಿ ಬಾಬಾ

ಗುರುವಾರ (ಜೂನ್​ 16) ವಿ. ಮನೋಹರ್ ಹಾಡಿರುವ ‘ಸಾಯಿ ನನ್ನಯ್ಯ’ ಶೀರ್ಷಿಕೆಯ ಮೊದಲ ಗೀತೆಯನ್ನು ಬಾಬಾ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆರೆಂಜ್​ ಆಡಿಯೋಸ್​ ಯೂಟ್ಯೂಬ್​ ಚಾನೆಲ್​ ಮೂಲಕ ಈ ಹಾಡು ರಿಲೀಸ್​ ಆಗಿದೆ. ಇದೇ ರೀತಿ ಪ್ರತಿ ಗುರುವಾರ ಬೇರೆ ಬೇರೆ ಸೆಲೆಬ್ರಿಟಿಗಳಿಂದ ಒಂದೊಂದು ಹಾಡನ್ನು ಬಿಡುಗಡೆ ಮಾಡಿಸಲು ತಂಡ ಸಿದ್ಧವಾಗಿದೆ.

ಇದನ್ನೂ ಓದಿ: 1998ರಲ್ಲಿ ಸತ್ಯ ಸಾಯಿ ಬಾಬಾರ ಭೇಟಿ ಮಾಡಿದ್ದೆ, ಅವರ ಪುಸ್ತಕ ಓದಿ ಮಾಂಸಾಹಾರ ತ್ಯಜಿಸಿದೆ: ಸಿಎಂ ಬೊಮ್ಮಾಯಿ

ವಿಶೇಷ ಏನೆಂದರೆ ಈ ಹಾಡುಗಳನ್ನು ಪುನೀತ್​ ರಾಜ್​ಕುಮಾರ್​ ಅವರಿಗೆ ಅರ್ಪಿಸಲಾಗಿದೆ. ‘ಇದೊಂದು ಉತ್ತಮ ಪ್ರಯತ್ನ. ನಾವು 7 ಸಂಗೀತ ನಿರ್ದೇಶಕರು ಒಂದಾಗಿರುವುದು ವಿಶೇಷ. ಕೆ. ರಾಮ್​ ನಾರಾಯಣ್​ ಅವರ ಸಾಹಿತ್ಯ ತುಂಬ ಚೆನ್ನಾಗಿದೆ’ ಎಂದು ವಿ. ಮನೋಹರ್​ ಮೆಚ್ಚುಗೆ ಸೂಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ