AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವರ ಪ್ರಚೋದನೆಯಿಂದ ಕೆಲ ಜನ ತಾಳ್ಮೆ ಕಳಕೊಂಡರು, ತಪ್ಪಾಗಿದ್ದರೆ ಕ್ಷಮಿಸಿ ಎಂದ ಅಭಿಷೇಕ್

Abhishek Ambareesh: ಬೀಗರ ಔತಣ ಕೂಟದಲ್ಲಿ ಆದ ಕೆಲವು ಅವ್ಯವಸ್ಥೆಗಳ ಬಗ್ಗೆ ಅಭಿಷೇಕ್ ಅಂಬರೀಶ್ ಕ್ಷಮೆ ಕೇಳಿದ್ದಾರೆ. ಕೆಲವರು ಪ್ರಚೋದನೆಯಿಂದ ಕೆಲ ಜನ ತಾಳ್ಮೆ ಕಳೆದುಕೊಂಡರು ಎಂದಿದ್ದಾರೆ ಅಭಿಷೇಕ್.

ಕೆಲವರ ಪ್ರಚೋದನೆಯಿಂದ ಕೆಲ ಜನ ತಾಳ್ಮೆ ಕಳಕೊಂಡರು, ತಪ್ಪಾಗಿದ್ದರೆ ಕ್ಷಮಿಸಿ ಎಂದ ಅಭಿಷೇಕ್
ಅಭಿಷೇಕ್ ಅಂಬರೀಶ್
ಮಂಜುನಾಥ ಸಿ.
|

Updated on: Jun 16, 2023 | 9:03 PM

Share

ಅಭಿಷೇಕ್ ಅಂಬರೀಶ್ (Abhishek Ambareesh), ಅವಿವಾ ಬಿದಪ್ಪ (Aviva Bidappa) ಅವರ ವಿವಾಹದ ಪ್ರಯುಕ್ತ ಮಂಡ್ಯದ ಮದ್ದೂರು ಬಳಿಯ ಗೆಜ್ಜಲಗೆರೆಯಲ್ಲಿ ಬೀಗರ ಔತಣ ಕೂಟವನ್ನು ಆಯೋಜಿಸಲಾಗಿತ್ತು. ಸುಮಾರು 50,000 ಜನರಿಗೆ ಮಾಂಸದೂಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 11:30ರ ಸುಮಾರಿಗೆ ಊಟ ಆರಂಭವಾಯ್ತು. ಆದರೆ ಭಾರಿ ಸಂಖ್ಯೆಯ ಜನ ಆಗಮಿಸಿದ್ದರಿಂದ ಭಾರಿ ನೂಕು-ನುಗ್ಗಲು ಉಂಟಾಯ್ತು. ಮಧ್ಯಾಹ್ನ 2:30 ರ ಸಮಯದಲ್ಲಿ ಕೆಲವು ಜನರು ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ನುಗ್ಗಿ ಪಾತ್ರೆಗಳನ್ನು ಬೀಳಿಸಿದ ಘಟನೆಯೂ ನಡೆಯಿತು.

ಇಂದು ನಡೆದ ಬೀಗರ ಔತಣ ಕೂಟದ ಬಗ್ಗೆ ಮಾತನಾಡಲು ಅಭಿಷೇಕ್ ಅಂಬರೀಶ್ ಸುದ್ದಿಗೋಷ್ಠಿ ನಡೆಸಿದ್ದು, ನಾವು ಅಂದುಕೊಂಡಂತೆ ಕಾರ್ಯಕ್ರಮ ಯಶಸ್ವಿಯಾಗಿದೆ ಆದರೆ ಎಲ್ಲೋ ಕೆಲವರು ಮಾಡಿದ ತಪ್ಪಿನಿಂದ ನಾವು ಊಟದ ವ್ಯವಸ್ಥೆಯನ್ನು ಬೇಗನೆ ಮುಗಿಸಬೇಕಾಯ್ತು. ಬಹುತೇಕ ಎಲ್ಲರಿಗೂ ಊಟ ಸಿಕ್ಕಿದೆ ಆದರೆ ಊಟ ಸಿಗದೆ ತೊಂದರೆ ಪಟ್ಟವರಿಗೆ ನಾನು ಕ್ಷಮೆ ಕೇಳುತ್ತೇನೆ ಎಂದರು.

ನಾನು ಯಾರನ್ನೂ ದೂಷಿಸುವುದಿಲ್ಲ. ನಾವು ಸಾಕಷ್ಟು ಮುನ್ನೆಚ್ಚರಿಕೆಯಿಂದಲೇ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸುಮಾರು 250 ಮಂದಿ ಪೊಲೀಸರು ಸಹ ಸ್ಥಳದಲ್ಲಿ ನಿಯೋಜನೆಗೊಂಡು ಜನರನ್ನು ನಿಯಂತ್ರಿಸಿದರು. ಹಾಗಿದ್ದರೂ ಸಹ ಎಲ್ಲೋ ಕೆಲವು ಮಂದಿ ನಿಯಂತ್ರಣ ತಪ್ಪಿದರು. ಅಥವಾ ಅವರನ್ನು ಕೆಲವರು ಪ್ರಚೋದಿಸಿದ್ದರಿಂದಲೋ ಏನೋ ಅವರು ಅಡುಗೆ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ಅದರಿಂದಾಗಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟರು ಹಾಗೂ ಮಹಿಳೆಯರು ಗಾಬರಿಯಾಗಿಬಿಟ್ಟರು. ಇದರಿಂದ ಅಡುಗೆ ಬಡಿಸುವುದು ಸಹ ತಡವಾಗಿಬಿಟ್ಟಿತು. ಕಾರಣಗಳನ್ನು ಎಷ್ಟೆ ಹೇಳಿದರು ಸಣ್ಣ ಮಟ್ಟಿನ ಸಮಸ್ಯೆ ಆಗಿರುವುದಂತೂ ನಿಜವಾದ್ದರಿಂದ ನಾನು ಕ್ಷಮೆ ಕೇಳುತ್ತಿದ್ದೇನೆ” ಎಂದು ವಿಶಾಲ ಹೃದಯ ಪ್ರದರ್ಶಿಸಿದರು ಅಭಿಷೇಕ್.

ಇದನ್ನೂ ಓದಿ:Beegara Oota: ಅಭಿಷೇಕ್-ಅವಿವಾ ವಿವಾಹ ಬೀಗರ ಊಟ ಕಾರ್ಯಕ್ರಮದಲ್ಲೊಬ್ಬ ವಿಶಿಷ್ಟ ಅಂಬರೀಷ್ ಅಭಿಮಾನಿ!

ಊಟದ ಕೊರತೆ ಆಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತೋರಿಸಿದರು ಆದರೆ ಅದು ಸುಳ್ಳು. ಖಂಡಿತ ಆಹಾರದ ಕೊರತೆ ಆಗಿರಲಿಲ್ಲ. ಇನ್ನೂ ಸಾಕಷ್ಟು ಆಹಾರ ಇತ್ತು. ದೊಡ್ಡ ಕಾರ್ಯಕ್ರಮ ಮಾಡಿದಾಗ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಆಗುತ್ತವೆ, ಬಡಿಸುವುದರಲ್ಲಿ ತುಸು ತಡವಾಗಿದೆ ಆದರೆ ಅದನ್ನೇ ಇಟ್ಟುಕೊಂಡು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಜನ ತುಸು ಉದ್ರೇಕಕ್ಕೆ ಒಳಗಾದರು ಎನಿಸುತ್ತದೆ. ಆದರೆ ಅವರದ್ದು ತಪ್ಪಲ್ಲ. ಹೊಟ್ಟೆ ಹಸಿದಾಗ ತಾಳ್ಮೆ ಕಳೆದುಕೊಳ್ಳುವುದು ಸಹಜ” ಎಂದರು ಅಭಿಷೇಕ್.

ಕ್ಷಮೆಯ ಜೊತೆಗೆ ಧನ್ಯವಾದವನ್ನೂ ಹೇಳಿದ ಅಭಿಷೇಕ್, ನಮ್ಮ ಆಮಂತ್ರಣಕ್ಕೆ ಓಗೊಟ್ಟು ಆಗಮಿಸಿ ನಮ್ಮ ಔತಣ ಸ್ವೀಕರಿಸಿ ಹರಸಿದ ಎಲ್ಲರಿಗೂ ಧನ್ಯವಾದ. ಜೊತೆಗೆ ಮುಂದೆ ನಿಂತು ಇಷ್ಟು ದೊಡ್ಡ ಕಾರ್ಯಕ್ರಮ ನಡೆಸಿಕೊಟ್ಟ ಎಲ್ಲ ಆತ್ಮೀಯರಿಗೂ, ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ನಡೆಸಲು ಸಹಾಯ ಮಾಡಿದ ಪೊಲೀಸ್ ಸಿಬ್ಬಂದಿಗೆ ವಿಶೇಷ ಧನ್ಯವಾದ ಎಂದರು ಅಭಿಷೇಕ್ ಅಂಬರೀಶ್.

ಔತಣ ಕೂಟಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಜನ ಒಮ್ಮೆಲೆ ಆಗಮಿಸಿದ್ದರಿಂದ ಅಡುಗೆ ಬಡಿಸುವ ಕ್ರಮದಲ್ಲಿ ತುಸು ಏರು ಪೇರಾಯಿತು ಎನ್ನಲಾಗುತ್ತಿದೆ. ಕೆಲವು ಜನರು ಅಡುಗೆ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ಕಾರ್ಯಕ್ರಮದಲ್ಲಿ ಕೆಲವು ಅವ್ಯವಸ್ಥೆಗಳು ಸಹ ಇದ್ದುವಂತೆ. ವಾಹನ ನಿಲ್ಲಿಸಲು ಸೂಕ್ತವಾದ ವ್ಯವಸ್ಥೆ ಮಾಡಿರಲಿಲ್ಲ, ಜನರ ಪ್ರವೇಶ ಹಾಗೂ ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ