AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಮಾಡಿಕೊಂಡ ಡೀಲ್ ಏನು?

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ ನೀಡಲಾಗುತ್ತಿತ್ತು. ಹೀಗಾಗಿ, ಅವರು ಹಾಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ, ಬಳ್ಳಾರಿ ಜೈಲಿನಲ್ಲಿ ವಿಶೇಷ ಆತಿಥ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇದು ದರ್ಶನ್​ಗೆ ನುಂಗಲಾರದ ತುತ್ತಾಗಿದೆ. ಬೆಂಗಳೂರಲ್ಲಿ ದರ್ಶನ್ ಹಾಗೂ ನಾಗನ ಮಧ್ಯೆ ಡೀಲ್ ಆಗಿತ್ತು.

ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಮಾಡಿಕೊಂಡ ಡೀಲ್ ಏನು?
Darshan
Follow us
Kiran HV
| Updated By: ರಾಜೇಶ್ ದುಗ್ಗುಮನೆ

Updated on: Aug 30, 2024 | 9:46 AM

ನಟ ದರ್ಶನ್ ಅವರನ್ನು ಬಳ್ಳಾರಿಗೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರು ಜೈಲಿನಲ್ಲಿ ಅವರಿಗೆ ಸವಲತ್ತು ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ. ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವೆ ಡೀಲ್ ನಡೆದಿತ್ತು ಎನ್ನುವ ವಿಚಾರ ಈಗ ಹೊರಬಿದ್ದಿದೆ. ಈಗ ನಾವು ಹೇಳುತ್ತಿರುವುದು ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವಿನ ಒಳ ಒಪ್ಪಂದದ ಸ್ಟೋರಿ.

ವಿಲ್ಸನ್ ಗಾರ್ಡನ್ ನಾಗ ಮತ್ತು ದರ್ಶನ್ ಮಧ್ಯೆ ದೊಡ್ಡ ಮತ್ತಕ್ಕೆ ಇಬ್ಬರ ನಡುವೆ ಡೀಲ್ ಆಗಿತ್ತು. ಆ ಡೀಲ್ ಆಗಿದ್ದಕ್ಕೆ ನಾಗ ಎಲ್ಲವನ್ನೂ ನೋಡಿಕೊಂಡಿದ್ದ. ದರ್ಶನ್ ಕೊಲೆ ಕೇಸ್​ನ ಉಲ್ಟಾ ಮಾಡಲು ದೊಡ್ಡ ಪ್ಲ್ಯಾನ್ ನಡೆಸಲಾಗಿತ್ತಂತೆ. ಈ ಕಾರಣಕ್ಕೆ ನಟೋರಿಯಸ್ ನಾಗನ ಜೊತೆಗೆ ದರ್ಶನ್ ಕುಳಿತಿದ್ದ.

ದರ್ಶನ್ ಹಾಗೂ ನಾಗನ ನಡುವೆ ಆದ ಡೀಲ್ ಪ್ರಕಾರ, ಜೈಲಿನಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ರಾಯಲ್ ಆಗಿ ನೋಡಿಕೊಳ್ಳಲು ಅಧಿಕಾರಿಗಳನ್ನೇ ಡೀಲ್ ಮಾಡುವುದು ಕೂಡ ಇದನ್ನು ಒಳಗೊಂಡಿದೆ. ಬೇಕಾದ ಬಟ್ಟೆ, ಊಟ, ಹಾಸಿಗೆ, ಸಿಗರೇಟ್ ಕೊಡಿಸುವುದು ಒಪ್ಪಂದದಲ್ಲಿ ಇದೆ. ಜೈಲಿನಲ್ಲಿ ಯಾವುದೇ ರೀತಿ ಸಮಸ್ಯೆ ಆಗದದಂತೆ ನೋಡಿಕೊಳ್ಳಲಾಗುತ್ತದೆ. sದರ್ಶನ್ ಜೈಲಿನಿಂದ ಹೊರಗೆ ಬರುವ ತನಕ ಸಂಪೂರ್ಣ ಕೇರ್ ತೆಗೆದುಕೊಳ್ಳಲು ಡೀಲ್ ಆಗಿತ್ತು.

ಜೈಲಿನ ಹೊರಗೂ ಈ ಡೀಲ್​ ಕೆಲಸ ಮಾಡುತ್ತದೆ. ದರ್ಶನ್ ಕೇಸ್​ನಲ್ಲಿ ಸಾಕ್ಷಿಗಳನ್ನು ಬೆದರಿಕೆ ಹಾಕಿಸುವ ಕೆಲಸವೂ ಆಗುತ್ತದೆ. ಸಾಕ್ಷಿಗಳು ಕೊರ್ಟ್​ಗೆ ಬಂದು ಟ್ರಯಲ್​ನಲ್ಲಿ ಭಾಗಿ ಆಗಿಲ್ಲಾ ಎಂದರೆ ಕೇಸ್ ದುರ್ಬಲ ಆಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಹೊಸ ಜೈಲಿಗೆ ಅಡ್ಜಸ್ಟ್ ಆಗದ ದರ್ಶನ್; ರಾತ್ರಿಯೆಲ್ಲ ನಿದ್ದೆ ಇಲ್ಲದೆ ಒದ್ದಾಡಿದ ‘ಕರಿಯ’

ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಹಣ ನೀಡುವ ಕೆಲಸವೂ ಆಗುತ್ತಿತ್ತು. ಡಿ ಗ್ಯಾಂಗ್ ತಿಂಗಳಿಗೆ 25 ಸಾವಿರ ಹಣ ನೀಡುತ್ತಿತ್ತು. ಸುಮಾರು ಹತ್ತು ಜನ ಆರೋಪಿಗಳಿಗೆ ಹಣ ನೀಡಲಾಗಿದೆ ಎನ್ನಲಾಗಿದೆ. ಅವರು ಮುಂದಿನ ದಿನಗಳಲ್ಲಿ ಸಹ ದರ್ಶನ್ ವಿರುದ್ಧ ನ್ಯಾಯಾಲದಲ್ಲಿ ಹೇಳಿಕೆಗಳನ್ನು ನೀಡದೆ ಇರಿಸಲು ಪ್ಲಾನ್ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ