AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರ್ಟಿನ್’ ವಿಮರ್ಶೆ ವಿವಾದ: ಮತ್ತೆ ಕ್ಷಮೆ ಕೇಳಿದ ‘ಅಮೃತಾಂಜನ್’ ಸುಧಾಕರ್

ಜನವರಿ 30ರಂದು ಬಿಡುಗಡೆ ಆಗಲಿರುವ ‘ಅಮೃತ ಅಂಜನ್’ ಕನ್ನಡ ಸಿನಿಮಾದಲ್ಲಿ ಸುಧಾಕರ್ ಗೌಡ ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ಟಿವಿ9 ಜೊತೆ ಅವರು ಮಾತನಾಡಿದ್ದಾರೆ. ಹಲವು ವಿಷಯಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಾರ್ಟಿನ್’ ಸಿನಿಮಾದ ವಿಮರ್ಶೆಯಿಂದ ಆದ ವಿವಾದದ ಬಗ್ಗೆಯೂ ಸುಧಾಕರ್ ಅವರು ಮಾತಾಡಿದ್ದಾರೆ.

‘ಮಾರ್ಟಿನ್’ ವಿಮರ್ಶೆ ವಿವಾದ: ಮತ್ತೆ ಕ್ಷಮೆ ಕೇಳಿದ ‘ಅಮೃತಾಂಜನ್’ ಸುಧಾಕರ್
Dhurva Sarja, Sudhakar Gowda
ಮಾಲತೇಶ ಜಗ್ಗೀನ್
| Edited By: |

Updated on: Jan 13, 2026 | 9:22 PM

Share

ಯೂಟ್ಯೂಬ್ ಕಿರುಚಿತ್ರಗಳ ಮೂಲಕ ಫೇಮಸ್ ಆದ ಸುಧಾಕರ್ ಗೌಡ (Sudhakar Gowda) ಅಲಿಯಾಸ್ ಸ್ಟ್ರಾಂಗ್ ಸುಧಾಕರ ಅವರು ‘ಅಮೃತ ಅಂಜನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಜನವರಿ 30ರಂದು ಬಿಡುಗಡೆ ಆಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸುಧಾಕರ್ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ. ಈ ಮೊದಲು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಿಡುಗಡೆ ಆದಾಗ ಸುಧಾಕರ್ ಅವರು ವಿಮರ್ಶೆ (Martin Review) ಮಾಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ತಾವು ನಟಿಸಿರುವ ‘ಅಮೃತ ಅಂಜನ್’ (Amrutanjan) ಸಿನಿಮಾಗೆ ಧ್ರುವ ಸರ್ಜಾ ಅವರಿಂದಲೇ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

‘ನಾನು ಈಗ ಚಿತ್ರರಂಗಕ್ಕೆ ಬಂದವನಲ್ಲ. 2016ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮನಸು ಮಲ್ಲಿಗೆ ಸಿನಿಮಾದಲ್ಲಿ ಸ್ನೇಹಿತನ ಪಾತ್ರ ಮಾಡಿದ್ದೆ. ಇಡೀ ಸಿನಿಮಾದಲ್ಲಿ ಆ ಪಾತ್ರ ಇತ್ತು. 10 ವರ್ಷಗಳಿಂದಲೂ ಚಿತ್ರರಂಗದಲ್ಲಿ ಇದ್ದೇನೆ. ಆದರೆ ಜನರಿಗೆ ಗೊತ್ತಾಗಿದ್ದು ನಮ್ಮ ಶಾರ್ಟ್ ಫಿಲ್ಮ್ ಮತ್ತು ರೀಲ್ಸ್ ಮೂಲಕ. ಅಂದು ನಾನು ಅನಿಸಿದ್ದನ್ನು ಹೇಳಿದ್ದೆ. ನಾನು ಹೇಳಿದ ರೀತಿ ತಪ್ಪು ಇರಬಹುದು ಅಥವಾ ನಾನು ಹೇಳಿದ್ದೇ ತಪ್ಪು ಇರಬಹುದು. ನನಗೆ ಗೊತ್ತಿಲ್ಲ. ಅಂದು ಕ್ಷಮೆ ಕೇಳಿದ್ದೆ, ಇಂದು ಕೂಡ ಕ್ಷಮೆ ಕೇಳುತ್ತೇನೆ’ ಎಂದು ಸುಧಾಕರ್ ಅವರು ಹೇಳಿದ್ದಾರೆ.

‘ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ಅದನ್ನು ಯಾರೂ ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಅದೇ ಕೊನೇ ಸಿನಿಮಾ. ಆ ಬಳಿಕ ನಾನು ಯಾವುದೇ ಸಿನಿಮಾಗೆ ವಿಮರ್ಶೆಯನ್ನೇ ಮಾಡಿಲ್ಲ’ ಎಂದು ಸುಧಾಕರ್ ಹೇಳಿದ್ದಾರೆ. ‘ನಮ್ಮ ಸಿನಿಮಾದ ನಿರ್ದೇಶಕರು ಧ್ರುವ ಸರ್ಜಾ ಅವರಿಗೆ ಆಪ್ತರಾಗಿದ್ದಾರೆ. ಅವರ ಕೆಲಸವನ್ನು ಧ್ರುವ ಸರ್ಜಾ ಅವರು ಹೊಗಳಿದ್ದರು. ನಮ್ಮ ಸಿನಿಮಾದ ಶೂಟಿಂಗ್ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಈಗ ಚರ್ಚೆ ನಡೆಯುತ್ತಿದೆ. ಈಗ ಧ್ರುವ ಸರ್ಜಾ ಅವರು ಬಂದರೆ ನಮಗೆ ಸಹಾಯ ಆಗುತ್ತದೆ. ಅವರು ಈ ವಿಡಿಯೋ ನೋಡುತ್ತಿದ್ದರೆ ನಾನು ಕೂಡ ಮನವಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ಸುಧಾಕರ್.

‘ನಮ್ಮದು ಕಾಮಿಡಿ ಸಿನಿಮಾ. ಅದರ ಜೊತೆಗೆ ಅಮ್ಮ-ಅಪ್ಪನ ಸೆಂಟಿಮೆಂಟ್ ಹಾಗೂ ಒಂದು ಚಿಕ್ಕ ಲವ್ ಸ್ಟೋರಿ ಕೂಡ ಇದೆ. ಏನೋ ಹೊಸದಾಗಿ ಮಾಡಿದ್ದೇವೆ ಅನ್ನೋ ಥರ ಏನಿಲ್ಲ. ಸಿನಿಮಾ ನೋಡುವವರು ಒಂದು ಗಂಟೆ ಬಿದ್ದು ಬಿದ್ದು ನಗುವ ರೀತಿ ಸಿನಿಮಾ ಇರುತ್ತದೆ. ಜನರಿಗೆ ಬೇಕಿರುವುದೇ ಮನರಂಜನೆ. ನಾವು ಕಾಮಿಡಿ ಆಯ್ಕೆ ಮಾಡಿಕೊಂಡು ಜನರನ್ನು ನಗಿಸುತ್ತೇನೆ’ ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು

‘ನಮ್ಮ ಟ್ರೇಲರ್ ಬಿಡುಗಡೆ ಆದ್ಮೇಲೆ ಸಿನಿಮಾಗೆ ಹೈಪ್ ಸಿಗುತ್ತದೆ. ಟ್ರೇಲರ್ ನೋಡಿದರೆ ಈ ಹುಡುಗರು ಏನೋ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಯುತ್ತದೆ. ಟ್ರೇಲರ್ ರೀಚ್ ಆದರೆ ಖಂಡಿತವಾಗಿಯೂ ಜನರು ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾ ನೋಡುತ್ತಾರೆ. ಪ್ರೇಕ್ಷಕರಿಗೆ ನಾವು ನಿರಾಸೆ ಮಾಡಲ್ಲ’ ಎಂದು ಸುಧಾಕರ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ