AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belakina Kavithe: 3 ಮಿಲಿಯನ್​ ವೀಕ್ಷಣೆ ಕಂಡ ‘ಬೆಳಕಿನ ಕವಿತೆ’; ಝೈದ್​ ಖಾನ್​-ಸೋನಲ್​ ರೊಮ್ಯಾನ್ಸ್​ಗೆ ಫ್ಯಾನ್ಸ್​ ಫಿದಾ

Banaras Movie Songs: ‘ಬನಾರಸ್​’ ಚಿತ್ರದ ಹಾಡುಗಳಿಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಸಿನಿಪ್ರಿಯರಲ್ಲಿ ‘ಬೆಳಕಿನ ಕವಿತೆ..’ ಸಾಂಗ್​ ಒಂದು ಬಗೆಯ ಸೆನ್ಸೇಷನ್​ ಸೃಷ್ಟಿ ಮಾಡಿದೆ.

Belakina Kavithe: 3 ಮಿಲಿಯನ್​ ವೀಕ್ಷಣೆ ಕಂಡ ‘ಬೆಳಕಿನ ಕವಿತೆ’; ಝೈದ್​ ಖಾನ್​-ಸೋನಲ್​ ರೊಮ್ಯಾನ್ಸ್​ಗೆ ಫ್ಯಾನ್ಸ್​ ಫಿದಾ
ಝೈದ್ ಖಾನ್, ಸೋನಲ್ ಮಾಂಥೆರೋ
TV9 Web
| Edited By: |

Updated on:Nov 11, 2022 | 1:53 PM

Share

ಹೊಸ ಹೀರೋ ಝೈದ್​ ಖಾನ್​ (Zaid Khan) ಅಭಿನಯಿಸಿರುವ ‘ಬನಾರಸ್​’ ಸಿನಿಮಾ ನವೆಂಬರ್​ 4ರಂದು ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸಿನಿಪ್ರಿಯರು ಝೈದ್​ ಖಾನ್​ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಸಿನಿಮಾದ ಹಾಡುಗಳು ಸೂಪರ್​ ಹಿಟ್​ ಆಗಿವೆ. ‘ಬನಾರಸ್​’ (Banaras) ಚಿತ್ರಕ್ಕೆ ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೆಲೋಡಿ ಸಾಂಗ್ಸ್​ ನೀಡುವಲ್ಲಿ ಫೇಮಸ್​ ಆಗಿರುವ ಅವರು ‘ಮಾಯಗಂಗೆ..’ ಮತ್ತು ‘ಬೆಳಕಿನ ಕವಿತೆ..’ (Belakina Kavithe) ಹಾಡುಗಳ ಮೂಲಕ ‘ಬನಾರಸ್​’ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಈ ಸಿನಿಮಾದ ಹಾಡುಗಳು ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದು ಮುನ್ನುಗ್ಗುತ್ತಿವೆ. ಇದರಿಂದ ಚಿತ್ರದ ಮೈಲೇಜ್​ ಹೆಚ್ಚಲು ಸಹಕಾರಿ ಆಗಿದೆ. ಝೈದ್​ ಖಾನ್​ ಮತ್ತು ಸೋನಲ್​ ಮಾಂಥೆರೋ ಅವರ ಕೆಮಿಸ್ಟ್ರಿ ಕೂಡ ಚೆನ್ನಾಗಿ ಮೂಡಿಬಂದಿದೆ.

ಮೊದಲು ಬಿಡುಗಡೆಯಾದ ‘ಮಾಯಗಂಗೆ..’ ಹಾಡು ಕನ್ನಡ ವರ್ಷನ್​ನಲ್ಲಿ ಈವರೆಗೆ 4.5 ಮಿಲಿಯನ್​ ಬಾರಿ ವೀಕ್ಷಣೆ ಕಂಡಿದೆ. ಅದೇ ರೀತಿ, ‘ಬೆಳಕಿನ ಕವಿತೆ..’ ಹಾಡಿಗೆ 3 ಮಿಲಿಯನ್​ ವೀವ್ಸ್​ ಆಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ. ಎಲ್ಲ ಭಾಷೆಯಲ್ಲಿಯೂ ಹಾಡುಗಳನ್ನು ರಿಲೀಸ್​ ಮಾಡಲಾಗಿದೆ. ‘ಬೆಳಕಿನ ಕವಿತೆ..’ ಹಾಡಿನ ಎಲ್ಲ ಭಾಷೆಯ ವರ್ಷನ್​ಗಳನ್ನು ಸೇರಿಸಿದರೆ 7 ಮಿಲಿಯನ್​​ಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

‘ಬನಾರಸ್​’ ಹಾಡುಗಳಿಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ‘ಬೆಳಕಿನ ಕವಿತೆ..’ ಒಂದು ಬಗೆಯ ಸೆನ್ಸೇಷನ್​ ಸೃಷ್ಟಿ ಮಾಡಿದೆ. ಎಲ್ಲರ ರೀಲ್ಸ್​ನಲ್ಲಿ ಈ ಹಾಡು ರಾರಾಜಿಸುತ್ತಿದೆ. ತುಂಬ ರೊಮ್ಯಾಂಟಿಕ್​ ಆಗಿ ಈ ಗೀತೆ ಮೂಡಿಬಂದಿದೆ. ಸೋನಲ್​ ಮಾಂಥೆರೋ ಹಾಗೂ ಝೈದ್​ ಖಾನ್​ ಕಾಂಬಿನೇಷನ್​ ಕಂಡು ಸಿನಿಪ್ರಿಯರು ವಾವ್​ ಎಂದಿದ್ದಾರೆ.

ಇದನ್ನೂ ಓದಿ
Image
Banaras: ಶಾರುಖ್​ ಅಥವಾ ಸಲ್ಮಾನ್​.. ಇಬ್ಬರಲ್ಲಿ ಝೈದ್​ ಖಾನ್​ಗೆ ಹೆಚ್ಚು ಇಷ್ಟ ಯಾರು? ಉತ್ತರಿಸಿದ ಜಮೀರ್​ ಪುತ್ರ
Image
Zaid Khan: ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಜಮೀರ್​ ಪುತ್ರ ಝೈದ್​ ಖಾನ್​ ಭೇಟಿ; ‘ಬನಾರಸ್​​’ ಬಿಡುಗಡೆಗೆ ಸಜ್ಜು
Image
Zaid Khan: ಗಣೇಶೋತ್ಸವ ಸಂಭ್ರಮದಲ್ಲಿ ಭಾಗಿಯಾದ ಜಮೀರ್​ ಅಹ್ಮದ್​ ಪುತ್ರ, ‘ಬನಾರಸ್​’ ಹೀರೋ ಝೈದ್​ ಖಾನ್​
Image
Banaras: ಜಮೀರ್​ ಅಹ್ಮದ್​ ಪುತ್ರ ಜೈದ್​ ಖಾನ್​ ಬದ್ಧತೆಗೆ ಭೇಷ್​ ಎಂದ ‘ಬನಾರಸ್​’ ನಿರ್ದೇಶಕ ಜಯತೀರ್ಥ

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳ ಮೂಲಕ ಅಜನೀಶ್​ ಲೋಕನಾಥ್​ ಅವರು ಶೈನ್​ ಆಗುತ್ತಿದ್ದಾರೆ. ಅವರ ಸೂಪರ್​ ಹಿಟ್​ ಆಲ್ಬಂಗಳ ಸಾಲಿಗೆ ‘ಬನಾರಸ್​’ ಕೂಡ ಸೇರಿಕೊಂಡಿದೆ. ನಾಗೇಂದ್ರ ಪ್ರಸಾದ್​ ಅವರ ಸಾಹಿತ್ಯ, ಎ. ಹರ್ಷ ಕೊರಿಯೋಗ್ರಫಿ, ಅರುಣ್​ ಸಾಗರ್​ ಅವರ ಕಲಾ ನಿರ್ದೇಶನದ ಸಂಗಮದಿಂದಾಗಿ ಈ ಹಾಡಿನ ಮೆರುಗು ಇನ್ನಷ್ಟು ಹೆಚ್ಚಿದೆ.

ಸಂಚಿತ್ ಹೆಗಡೆ, ಸಂಗೀತಾ ರವೀಂದ್ರನಾಥ್​ ಅವರು ‘ಬೆಳಕಿನ ಕವಿತೆ..’ ಹಾಡಿಗೆ ಧ್ವನಿ ನೀಡಿದ್ದಾರೆ. ಯೂಟ್ಯೂಬ್​ನಲ್ಲಿ ಹಾಡು ನೋಡಿದ ಸಾವಿರಾರು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ಎಲ್ಲರಿಂದಲೂ ಪಾಸಿಟಿವ್​ ಮಾತುಗಳು ಕೇಳಿಬಂದಿವೆ. ಈ ಚಿತ್ರಕ್ಕೆ ಜಯತೀರ್ಥ ನಿರ್ದೇಶನ ಮಾಡಿದ್ದು, ತಿಲಕ್​ ರಾಜ್​ ಬಲ್ಲಾಳ್​ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:53 pm, Fri, 11 November 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್