AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belakina Kavithe: 3 ಮಿಲಿಯನ್​ ವೀಕ್ಷಣೆ ಕಂಡ ‘ಬೆಳಕಿನ ಕವಿತೆ’; ಝೈದ್​ ಖಾನ್​-ಸೋನಲ್​ ರೊಮ್ಯಾನ್ಸ್​ಗೆ ಫ್ಯಾನ್ಸ್​ ಫಿದಾ

Banaras Movie Songs: ‘ಬನಾರಸ್​’ ಚಿತ್ರದ ಹಾಡುಗಳಿಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಸಿನಿಪ್ರಿಯರಲ್ಲಿ ‘ಬೆಳಕಿನ ಕವಿತೆ..’ ಸಾಂಗ್​ ಒಂದು ಬಗೆಯ ಸೆನ್ಸೇಷನ್​ ಸೃಷ್ಟಿ ಮಾಡಿದೆ.

Belakina Kavithe: 3 ಮಿಲಿಯನ್​ ವೀಕ್ಷಣೆ ಕಂಡ ‘ಬೆಳಕಿನ ಕವಿತೆ’; ಝೈದ್​ ಖಾನ್​-ಸೋನಲ್​ ರೊಮ್ಯಾನ್ಸ್​ಗೆ ಫ್ಯಾನ್ಸ್​ ಫಿದಾ
ಝೈದ್ ಖಾನ್, ಸೋನಲ್ ಮಾಂಥೆರೋ
TV9 Web
| Edited By: |

Updated on:Nov 11, 2022 | 1:53 PM

Share

ಹೊಸ ಹೀರೋ ಝೈದ್​ ಖಾನ್​ (Zaid Khan) ಅಭಿನಯಿಸಿರುವ ‘ಬನಾರಸ್​’ ಸಿನಿಮಾ ನವೆಂಬರ್​ 4ರಂದು ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸಿನಿಪ್ರಿಯರು ಝೈದ್​ ಖಾನ್​ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಸಿನಿಮಾದ ಹಾಡುಗಳು ಸೂಪರ್​ ಹಿಟ್​ ಆಗಿವೆ. ‘ಬನಾರಸ್​’ (Banaras) ಚಿತ್ರಕ್ಕೆ ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೆಲೋಡಿ ಸಾಂಗ್ಸ್​ ನೀಡುವಲ್ಲಿ ಫೇಮಸ್​ ಆಗಿರುವ ಅವರು ‘ಮಾಯಗಂಗೆ..’ ಮತ್ತು ‘ಬೆಳಕಿನ ಕವಿತೆ..’ (Belakina Kavithe) ಹಾಡುಗಳ ಮೂಲಕ ‘ಬನಾರಸ್​’ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಈ ಸಿನಿಮಾದ ಹಾಡುಗಳು ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದು ಮುನ್ನುಗ್ಗುತ್ತಿವೆ. ಇದರಿಂದ ಚಿತ್ರದ ಮೈಲೇಜ್​ ಹೆಚ್ಚಲು ಸಹಕಾರಿ ಆಗಿದೆ. ಝೈದ್​ ಖಾನ್​ ಮತ್ತು ಸೋನಲ್​ ಮಾಂಥೆರೋ ಅವರ ಕೆಮಿಸ್ಟ್ರಿ ಕೂಡ ಚೆನ್ನಾಗಿ ಮೂಡಿಬಂದಿದೆ.

ಮೊದಲು ಬಿಡುಗಡೆಯಾದ ‘ಮಾಯಗಂಗೆ..’ ಹಾಡು ಕನ್ನಡ ವರ್ಷನ್​ನಲ್ಲಿ ಈವರೆಗೆ 4.5 ಮಿಲಿಯನ್​ ಬಾರಿ ವೀಕ್ಷಣೆ ಕಂಡಿದೆ. ಅದೇ ರೀತಿ, ‘ಬೆಳಕಿನ ಕವಿತೆ..’ ಹಾಡಿಗೆ 3 ಮಿಲಿಯನ್​ ವೀವ್ಸ್​ ಆಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ. ಎಲ್ಲ ಭಾಷೆಯಲ್ಲಿಯೂ ಹಾಡುಗಳನ್ನು ರಿಲೀಸ್​ ಮಾಡಲಾಗಿದೆ. ‘ಬೆಳಕಿನ ಕವಿತೆ..’ ಹಾಡಿನ ಎಲ್ಲ ಭಾಷೆಯ ವರ್ಷನ್​ಗಳನ್ನು ಸೇರಿಸಿದರೆ 7 ಮಿಲಿಯನ್​​ಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

‘ಬನಾರಸ್​’ ಹಾಡುಗಳಿಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ‘ಬೆಳಕಿನ ಕವಿತೆ..’ ಒಂದು ಬಗೆಯ ಸೆನ್ಸೇಷನ್​ ಸೃಷ್ಟಿ ಮಾಡಿದೆ. ಎಲ್ಲರ ರೀಲ್ಸ್​ನಲ್ಲಿ ಈ ಹಾಡು ರಾರಾಜಿಸುತ್ತಿದೆ. ತುಂಬ ರೊಮ್ಯಾಂಟಿಕ್​ ಆಗಿ ಈ ಗೀತೆ ಮೂಡಿಬಂದಿದೆ. ಸೋನಲ್​ ಮಾಂಥೆರೋ ಹಾಗೂ ಝೈದ್​ ಖಾನ್​ ಕಾಂಬಿನೇಷನ್​ ಕಂಡು ಸಿನಿಪ್ರಿಯರು ವಾವ್​ ಎಂದಿದ್ದಾರೆ.

ಇದನ್ನೂ ಓದಿ
Image
Banaras: ಶಾರುಖ್​ ಅಥವಾ ಸಲ್ಮಾನ್​.. ಇಬ್ಬರಲ್ಲಿ ಝೈದ್​ ಖಾನ್​ಗೆ ಹೆಚ್ಚು ಇಷ್ಟ ಯಾರು? ಉತ್ತರಿಸಿದ ಜಮೀರ್​ ಪುತ್ರ
Image
Zaid Khan: ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಜಮೀರ್​ ಪುತ್ರ ಝೈದ್​ ಖಾನ್​ ಭೇಟಿ; ‘ಬನಾರಸ್​​’ ಬಿಡುಗಡೆಗೆ ಸಜ್ಜು
Image
Zaid Khan: ಗಣೇಶೋತ್ಸವ ಸಂಭ್ರಮದಲ್ಲಿ ಭಾಗಿಯಾದ ಜಮೀರ್​ ಅಹ್ಮದ್​ ಪುತ್ರ, ‘ಬನಾರಸ್​’ ಹೀರೋ ಝೈದ್​ ಖಾನ್​
Image
Banaras: ಜಮೀರ್​ ಅಹ್ಮದ್​ ಪುತ್ರ ಜೈದ್​ ಖಾನ್​ ಬದ್ಧತೆಗೆ ಭೇಷ್​ ಎಂದ ‘ಬನಾರಸ್​’ ನಿರ್ದೇಶಕ ಜಯತೀರ್ಥ

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳ ಮೂಲಕ ಅಜನೀಶ್​ ಲೋಕನಾಥ್​ ಅವರು ಶೈನ್​ ಆಗುತ್ತಿದ್ದಾರೆ. ಅವರ ಸೂಪರ್​ ಹಿಟ್​ ಆಲ್ಬಂಗಳ ಸಾಲಿಗೆ ‘ಬನಾರಸ್​’ ಕೂಡ ಸೇರಿಕೊಂಡಿದೆ. ನಾಗೇಂದ್ರ ಪ್ರಸಾದ್​ ಅವರ ಸಾಹಿತ್ಯ, ಎ. ಹರ್ಷ ಕೊರಿಯೋಗ್ರಫಿ, ಅರುಣ್​ ಸಾಗರ್​ ಅವರ ಕಲಾ ನಿರ್ದೇಶನದ ಸಂಗಮದಿಂದಾಗಿ ಈ ಹಾಡಿನ ಮೆರುಗು ಇನ್ನಷ್ಟು ಹೆಚ್ಚಿದೆ.

ಸಂಚಿತ್ ಹೆಗಡೆ, ಸಂಗೀತಾ ರವೀಂದ್ರನಾಥ್​ ಅವರು ‘ಬೆಳಕಿನ ಕವಿತೆ..’ ಹಾಡಿಗೆ ಧ್ವನಿ ನೀಡಿದ್ದಾರೆ. ಯೂಟ್ಯೂಬ್​ನಲ್ಲಿ ಹಾಡು ನೋಡಿದ ಸಾವಿರಾರು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ಎಲ್ಲರಿಂದಲೂ ಪಾಸಿಟಿವ್​ ಮಾತುಗಳು ಕೇಳಿಬಂದಿವೆ. ಈ ಚಿತ್ರಕ್ಕೆ ಜಯತೀರ್ಥ ನಿರ್ದೇಶನ ಮಾಡಿದ್ದು, ತಿಲಕ್​ ರಾಜ್​ ಬಲ್ಲಾಳ್​ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:53 pm, Fri, 11 November 22

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ