AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Banaras: ಜಮೀರ್​ ಅಹ್ಮದ್​ ಪುತ್ರ ಜೈದ್​ ಖಾನ್​ ಬದ್ಧತೆಗೆ ಭೇಷ್​ ಎಂದ ‘ಬನಾರಸ್​’ ನಿರ್ದೇಶಕ ಜಯತೀರ್ಥ

Zaid Khan: ಜೈದ್​ ಖಾನ್​ ನಟನೆಯ ‘ಬನಾರಸ್​’ ಚಿತ್ರದ ಮೊದಲ ಹಾಡು ‘ಮಾಯಾಗಂಗೆ’ ಬಿಡುಗಡೆ ಆಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರತಂಡದವರು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Banaras: ಜಮೀರ್​ ಅಹ್ಮದ್​ ಪುತ್ರ ಜೈದ್​ ಖಾನ್​ ಬದ್ಧತೆಗೆ ಭೇಷ್​ ಎಂದ ‘ಬನಾರಸ್​’ ನಿರ್ದೇಶಕ ಜಯತೀರ್ಥ
ಜೈದ್​ ಖಾನ್​, ಸೋನಲ್​, ಜಯತೀರ್ಥ. ತಿಲಕ್​ ರಾಜ್​ ಬಲ್ಲಾಳ್​
Follow us
TV9 Web
| Updated By: ಮದನ್​ ಕುಮಾರ್​

Updated on: Jun 29, 2022 | 7:15 AM

ಸಿನಿಮಾ ಮತ್ತು ರಾಜಕಾರಣದ ನಡುವೆ ಒಂದು ನಂಟು ಮೊದಲಿನಿಂದಲೂ ಇದೆ. ಅದೇನೇ ಇರಲಿ, ಶಾಸಕ ಜಮೀರ್​ ಅಹ್ಮದ್​ ಅವರ ಪುತ್ರ ಜೈದ್​ ಖಾನ್ (Zaid Khan)​ ಅವರು ತಾನೊಬ್ಬ ರಾಜಕಾರಣಿಯ ಮಗ ಎಂಬುದನ್ನು ಮರೆತು ಮೊದಲ ಸಿನಿಮಾದಲ್ಲಿ ನಿರ್ದೇಶಕರಿಗೆ ಶರಣಾಗಿದ್ದಾರೆ. ಹೌದು, ಈ ಬಗ್ಗೆ ನಿರ್ದೇಶಕ ಜಯತೀರ್ಥ (Jayatheertha) ಮಾತನಾಡಿದ್ದಾರೆ. ‘ಬನಾರಸ್​’ ಚಿತ್ರಕ್ಕೆ ಅವರು ನಿರ್ದೇಶನ ಮಾಡಿದ್ದು, ಈ ಸಿನಿಮಾ ಮೂಲಕ ಜೈದ್​ ಖಾನ್​ ಹೀರೋ ಆಗಿದ್ದಾರೆ. ಅವರಿಗೆ ಜೋಡಿಯಾಗಿ ಸೋನಲ್ ಮಾಂತೆರೋ ನಟಿಸಿದ್ದಾರೆ. ‘ಬನಾರಸ್​​’ (Banaras) ಸಿನಿಮಾದ ಮೊದಲ ಹಾಡು ‘ಮಾಯಾಗಂಗೆ’ ರಿಲೀಸ್​ ಮಾಡಲಾಗಿದೆ. ಬಿ. ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜನೆ ಮಾಡಿದ ಈ ಹಾಡಿಗೆ ನಾಗೇಂದ್ರ ಪ್ರಸಾದ್​ ಅವರು ಸಾಹಿತ್ಯ ಬರೆದಿ​ದ್ದಾರೆ. ತಿಲಕ್​ ರಾಜ್​ ಬಲ್ಲಾಳ್​ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ‘ಬನಾರಸ್​’ ಬಿಡುಗಡೆ ಆಗಲಿದೆ.

ಜೈದ್​ ಖಾನ್​ ಅವರ ಬದ್ಧತೆ ಬಗ್ಗೆ ಜಯತೀರ್ಥ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಜೈದ್ ಖಾನ್ ನನ್ನ ಬಳಿ ಬಂದು ನಿರ್ದೇಶನ ಮಾಡಿ ಎಂದು ಕೇಳಿಕೊಂಡಾಗ ‘ನೀವು ಹೆಸರಾಂತ ರಾಜಕಾರಣಿ ಮಗನಾದ್ದರಿಂದ ನಿಮಗೆ ನಾನು ನಟನೆ ಕಲಿಸಬೇಕಾದರೆ ಸ್ವಲ್ಪ ಕಷ್ಟವಾಗಬಹುದು’ ಅಂದಿದ್ದೆ. ಅದಕ್ಕೆ ಅವರು ಚಪ್ಪಲಿ ಬಿಟ್ಟು ಕೆಳಗೆ ಕುಳಿತು, ‘ನೀವು ಹೇಳಿ ಕೊಟ್ಟಿದ್ದನ್ನು ಮಾಡುತ್ತೇನೆ’ ಎಂದಿದ್ದರು. ಹಾಗೆಯೇ ಮಾಡಿದರು. ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡಾಗಲೇ ಗೆದ್ದರು. ಅದರ ಫಲಿತಾಂಶ ಈಗ ಗೊತ್ತಾಗುತ್ತಿದೆ’ ಎಂದಿದ್ದಾರೆ ಜಯತೀರ್ಥ.

ಜೈದ್ ಖಾನ್​ ಅವರಿಗೆ ಇದು ಡ್ರೀಮ್ ಪ್ರಾಜೆಕ್ಟ್​. ಅದಕ್ಕಾಗಿ ಅವರು ತುಂಬ ಶ್ರಮಪಟ್ಟಿದ್ದಾರೆ. ಮುಂಬೈಗೆ ಹೋಗಿ ನಟನೆ ಕಲಿತುಕೊಂಡು ಬಂದಿದ್ದಾರೆ. ಈ ಚಿತ್ರವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಮಾಡುತ್ತಿರುವ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರಿಗೆ ಹಾಗೂ ಸಿನಿಮಾವನ್ನು ಅಚ್ಚುಕಟ್ಟಾಗಿ ನಿರ್ದೇಶಿಸಿದ ಜಯತೀರ್ಥ ಅವರಿಗೆ ಜೈದ್​ ಖಾನ್​ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ
Image
Upendra: ‘ಯುಐ’ ಚಿತ್ರಕ್ಕೆ ಶೂಟಿಂಗ್​ ಶುರು; ಸೆಟ್​ನಲ್ಲಿ ಡೈರೆಕ್ಟರ್​ ಕ್ಯಾಪ್​ ಧರಿಸಿ ನಿಂತ ಉಪೇಂದ್ರ
Image
Kichcha Sudeep: ತಮ್ಮ ಮನೆಗೆ ಬಂದು ಬೇರೆ ಹೀರೋ ಬಗ್ಗೆ ನೆಗೆಟಿವ್​ ಮಾತಾಡಿದ್ರೆ ಸುದೀಪ್​ ಗರಂ ಆಗ್ತಾರೆ; ಯಾಕೆ?
Image
ಭೂಮಿ ಶೆಟ್ಟಿ, ಸ್ವಪ್ನಾ ಜತೆ ‘ಸಂಚಿನ ಸುಳಿಯಲಿ’ ಸಿಲುಕಿದ ‘ಪುಟ್ಟಕ್ಕನ ಮಕ್ಕಳು’ ನಟ ಪವನ್ ಕುಮಾರ್​
Image
10 ತಲೆ ಹೊತ್ತು ಬಂದ ‘ನ್ಯಾನೋ ನಾರಾಯಣಪ್ಪ’; ಹೀರೋ ಆದ ‘ಕೆಜಿಎಫ್​’ ತಾತನ ಫಸ್ಟ್​ ಲುಕ್​ ಇಲ್ಲಿದೆ

‘ಬನಾರಸ್​’ ಚಿತ್ರಕ್ಕೆ ಸೆನ್ಸಾರ್​ ಕೂಡ ಮುಗಿದಿದೆ. ಶೀಘ್ರದಲ್ಲೇ ರಿಲೀಸ್​ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ‘ಮಾಯಾಗಂಗೆ’ ಹಾಡು ಬಿಡುಗಡೆಗೆ ಶೈಲಜಾ ನಾಗ್​, ಅಭಿಷೇಕ್​ ಅಂಬರೀಷ್​, ವಿನೋದ್​ ಪ್ರಭಾಕರ್​, ಯಶಸ್ ಸೂರ್ಯ, ಲಹರಿ ವೇಲು, ಚಂದ್ರು ಮುಂತಾದವರು ಬಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Maayagange Song: ‘ಬನಾರಸ್​’ ಮೊದಲ ಗೀತೆ ‘ಮಾಯಾಗಂಗೆ’ ಬಗ್ಗೆ ನಾಗೇಂದ್ರ ಪ್ರಸಾದ್​ ಮನದ ಮಾತು

ಶಾಸಕ ಜಮೀರ್ ಅಹಮದ್​ ಪುತ್ರ ಝೈದ್​ ಖಾನ್​ ದಾಖಲೆ; ಭಾರಿ ಮೊತ್ತಕ್ಕೆ ಲಹರಿ, ಟಿ ಸಿರೀಸ್​ ಪಾಲಾಯ್ತು ‘ಬನಾರಸ್​’ ಆಡಿಯೋ

ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ