AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ರಾಜ್ಯೋತ್ಸವ 2021: ಕನ್ನಡ ಮಣ್ಣಿನ ಕಂಪನ್ನು ಸಾರುವ ವಿಶಿಷ್ಟ ಚಿತ್ರಗಳ ಪಟ್ಟಿ‌ ಇಲ್ಲಿದೆ

Karnataka Rajyotsava 2021: ಕನ್ನಡ ಚಿತ್ರರಂಗದಲ್ಲಿ ಈ ಮಣ್ಣಿನ ಪರಂಪರೆ, ಶ್ರೇಷ್ಠತೆ, ವಿಶೇಷತೆಯನ್ನು ಸಾರುವ ಹಲವಾರು ಚಿತ್ರಗಳು ಬಂದಿವೆ. ಬಹುತೇಕ ಚಿತ್ರಗಳಲ್ಲಿ ಅವುಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಸ್ತಾಪಿತವಾಗುತ್ತವೆ. ಕನ್ನಡ ನಾಡು- ನುಡಿ ಕುರಿತ ಕತೆಯನ್ನು ಹೊಂದಿರುವ ಕೆಲವು ಚಿತ್ರಗಳ ಪಟ್ಟಿ ಇಲ್ಲಿದೆ.

ಕರ್ನಾಟಕ ರಾಜ್ಯೋತ್ಸವ 2021: ಕನ್ನಡ ಮಣ್ಣಿನ ಕಂಪನ್ನು ಸಾರುವ ವಿಶಿಷ್ಟ ಚಿತ್ರಗಳ ಪಟ್ಟಿ‌ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Nov 01, 2021 | 12:07 PM

Share

ಕನ್ನಡದಲ್ಲಿ ನಮ್ಮ ನೆಲ, ನುಡಿ, ಸಂಸ್ಕೃತಿಯನ್ನ ಬಿಂಬಿಸುವ ಹಲವಾರು ಚಿತ್ರಗಳು ಬಂದಿವೆ. ತಾರೆಯರ ಚಿತ್ರಗಳಲ್ಲಂತೂ ಬಹುತೇಕವಾಗಿ  ನಾಡಿನ ಕುರಿತಾದ ಕತಾ ಎಳೆಯೊಂದು ಇದ್ದೇ ಇರುತ್ತದೆ. ಇಂತಹ ಚಿತ್ರಗಳ ಹೊರತಾಗಿಯೂ, ನಾಡಿನ‌ ಕುರಿತಾಗಿಯೇ ಹಲವು ಚಿತ್ರಗಳು ಬಂದಿವೆ.‌ ಈ ಪಟ್ಟಿಯಲ್ಲಿ ಹಳೆಯ ಚಿತ್ರಗಳೂ ಸೇರಿದಂತೆ ಇತ್ತೀಚಿನ ಚಿತ್ರಗಳನ್ನೂ ನೀಡಲಾಗಿದೆ. ಈ ಚಿತ್ರಗಳು ಈ ನೆಲದ ಹಿರಿಮೆಯನ್ನು ಸಾರುತ್ತಾ,‌ ಜೊತೆಜೊತೆಗೆ ನಾಡಿನ ಜ್ವಲಂತ ಸಮಸ್ಯೆಗಳನ್ನೂ ಚರ್ಚಿಸಿವೆ. 66ನೇ‌ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಂತಹ ಕೆಲವು ಚಿತ್ರಗಳನ್ನು ಇಲ್ಲಿ ಮೆಲುಕು‌ ಹಾಕಲಾಗಿದೆ.

1. ಆಕಸ್ಮಿಕ: ತರಾಸು ಅವರ ಮೂರು ಕಾದಂಬರಿಗಳನ್ನಾಧರಿಸಿರುವ ಈ ಚಿತ್ರವನ್ನು ನಿರ್ದೇಶಿಸಿದವರು ಟಿ.ಎಸ್.ನಾಗಾಭರಣ. ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಹಾಗೂ ಸಂಗೀತ ನೀಡಿದ್ದಾರೆ. ಡಾ.ರಾಜಕುಮಾರ್ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಚಿತ್ರ‌ ಪ್ರತಿಯಬ್ಬ  ಕನ್ನಡಿಗನಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿತ್ತು. ಈ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಂತೂ ಕನ್ನಡ ಮನಸ್ಸುಗಳಲ್ಲಿ ರಾಷ್ಟ್ರಗೀತೆಯಷ್ಟೇ ಪ್ರಮುಖ ಸ್ಥಾನ ಪಡೆದಿದೆ.

2. ಗಂಧದ ಗುಡಿ: ಈ ಚಿತ್ರವು ಭಾರತದಲ್ಲಿಬತಯಾರಾದ ವನ್ಯಜೀವಿ‌ಸಂರಕ್ಣಣೆ ಕಲ್ಪನೆಯನ್ನು ಆಧರಿಸಿದ ಮೊದಲ‌ ಚಿತ್ರ. ರಾಜಕುಮಾರ್, ವಿಷ್ಣುವರ್ಧನ್, ಕಲ್ಪನಾ‌ ಸೇರಿದಂತೆ ಅನೇಕ ತಾರೆಯರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಬಹುದೊಡ್ಡ ಯಶಸ್ಸು ಕಂಡ ಈ‌ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದಾರೆ. ಇದೇ ಚಿತ್ರದ ‘ನಾವಾಡುವ ನುಡಿಯೇ ಕನ್ನಡ‌ನುಡಿ’ ಕನ್ನಡಿಗರ ಪ್ರಿಯ ಗೀತೆಗಳಲ್ಲೊಂದಾಗಿದೆ.

Gandhada Gudi

‘ಗಂಧದ ಗುಡಿ’ ಚಿತ್ರದ ಪೋಸ್ಟರ್

3. ವೀರ ಕನ್ನಡಿಗ: ಪುನೀತ್ ರಾಜಕುಮಾರ್ ಅಭಿನಯದ ಈ ಚಿತ್ರವನ್ನು ನಿರ್ದೇಶಿಸಿದವರು ಮೆಹೆರ್ ರಮೇಶ್. 2004ರಲ್ಲಿ ತೆರೆಕಂಡ‌ ಈ ಚಿತ್ರ ‘ಜೀವ ಕನ್ನಡ‌ದೇಹ ಕನ್ನಡ’ ಹಾಡು ಈಗಲೂ ಕೇಳುಗರಿಗೆ ರೋಮಾಂಚನ‌ ಹುಟ್ಟಿಸುತ್ತದೆ. ಈ ಚಿತ್ರಕ್ಕೆ ಚಕ್ರಿ ಸಂಗೀತ ನೀಡಿದ್ದಾರೆ.

4. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ರಿಷಬ್ ಶೆಟ್ಟಿ ನಿರ್ದೇಶಿಸಿರುವ ಈ ಚಿತ್ರ ಶತದಿನೋತ್ಸವ ಕಂಡಿತ್ತು. ಗಡಿನಾಡ ಕನ್ನಡ ಮಕ್ಕಳು ಹಾಗೂ ಅವರ ಶಿಕ್ಷಣದ‌ ಸಮಸ್ಯೆಗಳನ್ನು ಕಾಸರಗೋಡನ್ನು ಭೂಮಿಕೆಯನ್ನಾಗಿಸಿ ಕಟ್ಟಿಕೊಟ್ಟಿತ್ತು. ಭಾಷೆ, ಸಂಸ್ಕೃತಿಯ ಮೇಲೆ ಮಾನವ ನಿರ್ಮಿತ ಗಡಿಗಳು ಎಬ್ಬಿಸುವ ತಲ್ಲಣಗಳನ್ನು ಚಿತ್ರ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿತ್ತು. ಅನಂತನಾಗ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

Sa Hi Pra Shale Poster

ಸ.ಹಿ.ಪ್ರಾ.ಶಾಲೆ ಚಿತ್ರದ ಪೋಸ್ಟರ್

5. ಕನ್ನಡ ದೇಶದೊಳ್: ಕನ್ನಡ ಭಾಷೆಯ ಪ್ರಾಮುಖ್ಯತೆ, ಅದನ್ನು ಏಕೆ ಉಳಿಸಿ ಬೆಳೆಸಬೇಕು ಎನ್ನುವನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಅವಿರಾಮ್‌ ಕಂಠೀರವ ನಿರ್ದೇಶನದ ಈ ಚಿತ್ರದಲ್ಲಿ ತಾರಕ್‌ ಪೊನ್ನಪ್ಪ, ಸುಚೇಂದ್ರ‌ ಪ್ರಸಾದ್, ಜೇನ್ ವೊಲ್ಕೊವಾ ಮೊದಲಾದವರು ಅಭಿನಯಿಸಿದ್ದಾರೆ.

6. ಕನ್ನಡ್ ಗೊತ್ತಿಲ್ಲ: ಮಯೂರ್ ರಾಘವೇಂದ್ರ ಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು, ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡಿದ್ದಾರೆ. ಹೊರಭಾಷೆಯವರಿಗೆ ಕನ್ನಡ‌ ಕಲಿಸುವ ಎಳೆಯನ್ನು ಚಿತ್ರವು ಒಳಗೊಂಡಿದೆ.

Kannada Gothtilla

‘ಕನ್ನಡ್ ಗೊತ್ತಿಲ್ಲ’ ಚಿತ್ರದ ಪೋಸ್ಟರ್

7. ಕಾಳಿದಾಸ ಕನ್ನಡ ಮೇಷ್ಟ್ರು: ಪ್ರಾದೇಶಿಕ ಭಾಷೆಗಿಂತ ಆಂಗ್ಲ ಭಾಷೆಯ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವುದರ ವಿರುದ್ಧ ಕನ್ನಡ ಶಿಕ್ಷಕ ಹೋರಾಡುವ ಕತಾ ಎಳೆಯನ್ನು ಹಾಸ್ಯದ ಛಾಯೆಯೊಂದಿಗೆ ತೆರೆಯ ಮೇಲೆ‌ ತರಲಾಗಿದೆ. ಜಗ್ಗೇಶ್ ಹಾಗೂ ಮೇಘನಾ‌ ಗಾಂವ್ಕರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕವಿರಾಜ್ ನಿರ್ದೇಶಿಸಿರುವ ಈ ಚಿತ್ರಕ್ಕೆ‌ ಗುರುಕಿರಣ್ ಸಂಗೀತವಿದೆ.

ಇದನ್ನೂ ಓದಿ:

ಕನ್ನಡ ರಾಜ್ಯೋತ್ಸವ 2021: ಕನ್ನಡನಾಡಿನ ಭಾಗವಾಗಿರುವ ಬೆಳಗಾವಿಯನ್ನು ಮಹಾರಾಷ್ಟ್ರ ತನ್ನದೆನ್ನುವುದು ಉದ್ಧಟನತದ ಪರಮಾವಧಿ!

ಕನ್ನಡ ರಾಜ್ಯೋತ್ಸವ 2021: ಪ್ರತಿ ಬಾರಿ ಕೇಳುವಾಗಲೂ ಕನ್ನಡಿಗರಿಗೆ ರೋಮಾಂಚನ ನೀಡುವ ಅದ್ಭುತ ಚಿತ್ರಗೀತೆಗಳಿವು

Published On - 9:30 am, Mon, 1 November 21