AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಲ್​-ತರುಣ್​ ಸುಧೀರ್​ ಅದ್ದೂರಿ ರಿಸೆಪ್ಷನ್: ಆಶೀರ್ವಾದ ಮಾಡಿದ ಬಿ.ಎಸ್​. ಯಡಿಯೂರಪ್ಪ

ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಇಂದು (ಆಗಸ್ಟ್​ 10) ಒಂದೆಡೆ ಸೇರಿದ್ದಾರೆ. ಅದಕ್ಕೆ ಕಾರಣ ತರುಣ್​ ಸುಧೀರ್​ ಮತ್ತು ಸೋನಲ್​ ಮಾಂತೆರೋ ಅವರ ಆರತಕ್ಷತೆ ಸಮಾರಂಭ. ಚಿತ್ರರಂಗ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಬಂದು ನವ ಜೋಡಿಗೆ ಅಭಿನಂದನೆ ತಿಳಿಸಿದ್ದಾರೆ. ತುಂಬ ಅದ್ದೂರಿಯಾಗಿ ರಿಸೆಪ್ಷನ್​ ನಡೆಯುತ್ತಿದೆ.

ಸೋನಲ್​-ತರುಣ್​ ಸುಧೀರ್​ ಅದ್ದೂರಿ ರಿಸೆಪ್ಷನ್: ಆಶೀರ್ವಾದ ಮಾಡಿದ ಬಿ.ಎಸ್​. ಯಡಿಯೂರಪ್ಪ
ತರುಣ್​ ಸುಧೀರ್ ಆರತಕ್ಷತೆ
ಮದನ್​ ಕುಮಾರ್​
|

Updated on: Aug 10, 2024 | 9:36 PM

Share

‘ರಾಬರ್ಟ್​’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ನಿರ್ದೇಶಕ ತರುಣ್​ ಸುಧೀರ್​ ಹಾಗೂ ನಟಿ ಸೋನಲ್​ ಮಾಂತೆರೋ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆಪ್ತರು, ಸ್ನೇಹಿತರು, ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅವರ ವಿವಾಹ ಕಾರ್ಯ ನಡೆಯುತ್ತಿದೆ. ನಿನ್ನೆಯಿಂದಲೇ (ಆಗಸ್ಟ್ 09) ವಿವಾಹಪೂರ್ವ ಶಾಸ್ತ್ರಗಳು ಆರಂಭ ಆಗಿದ್ದವು. ಇಂದು (ಆಗಸ್ಟ್​ 10) ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್​ ನಡೆಯುತ್ತಿದೆ. ಬಿ.ಎಸ್​. ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಬಂದು ಆಶೀರ್ವಾದ ಮಾಡಿದ್ದಾರೆ. ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಆರತಕ್ಷತೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

ರೆಡ್​ ರೋಸ್​ ಥೀಮ್​ನಲ್ಲಿ ಆರತಕ್ಷತೆ ವೇದಿಕೆ ಸಿದ್ಧವಾಗಿದೆ. ಅವಾರ್ಡ್​ ಫಂಕ್ಷನ್​ ರೀತಿ ಇಡೀ ವಾತಾವರಣ ಸಿಂಗಾರಗೊಂಡಿದೆ. ಪವನ್​ ಒಡೆಯರ್​, ಅನಿರುದ್ಧ್​ ಜತ್ಕರ್​, ಸಂತೋಷ್​ ಆನಂದ್​ರಾಮ್​, ರವಿಶಂಕರ್​ ಗೌಡ, ಕಾರುಣ್ಯ ರಾಮ್​, ಉಮಾಪತಿ ಶ್ರೀನಿವಾಸ್​ ಗೌಡ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಸೆಲೆಬ್ರಿಟಿಗಳು ಬಂದು ನವ ಜೋಡಿಯನ್ನು ಹರಸಿದ್ದಾರೆ. ‘ನಟನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡ ತರುಣ್​ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವೃತ್ತಿಜೀವನ ಮತ್ತು ಖಾಸಗಿ ಬದುಕಿನಲ್ಲಿ ದೇವರು ಅವರಿಗೆ ಒಳ್ಳೆಯದು ಮಾಡಿದ್ದಾರೆ. ಈ ಜೋಡಿಗೆ ನನ್ನ ಅಭಿನಂದನೆಗಳು’ ಎಂದು ಸಂತೋಷ್​ ಆನಂದ್​ ರಾಮ್ ಹೇಳಿದ್ದಾರೆ.

‘ರಾಬರ್ಟ್​’ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ಮಾತನಾಡಿ, ‘ನಮ್ಮ ಸಿನಿಮಾದ ಶೂಟಿಂಗ್​ನಲ್ಲಿ ನಾಯಕ ನಟರು ಅಣಕಿಸುತ್ತಿದ್ದರು. ಆದರೆ ಸೀರಿಯಸ್​ ಆಗಿ ಈ ಮದುವೆ ಆಗುತ್ತದೆ ಅಂತ ನಾವು ಅಂದುಕೊಂಡಿರಲಿಲ್ಲ. ಸೋನಲ್​-ತರುಣ್​ ಜೋಡಿ ಚೆನ್ನಾಗಿದೆ. ನಮ್ಮ ಸಿನಿಮಾ ಮಾಡಿದ್ದರಿಂದ ಈ ರೀತಿ ಒಳ್ಳೆಯದು ಆಯಿತು ಅಂತ ನಮಗೆ ಖುಷಿ’ ಎಂದಿದ್ದಾರೆ.

ತರುಣ್​ ಸುಧೀರ್​-ಸೋನಲ್​ ಆರತಕ್ಷತೆಗೆ 180 ಬಗೆಯ ಊಟ; ಸಿದ್ಧವಾಗಿದೆ ಭರ್ಜರಿ ಭೋಜನ

‘ಇಂದು ನಮ್ಮ ತರುಣ್​ ಮದುವೆ. ನನ್ನ ಬಳಗದಲ್ಲಿ ಇದ್ದ ಬ್ಯಾಚುಲರ್​ ಅವನೊಬ್ಬನೇ. ಅವನು ಇಂದು ಮದುವೆ ಆಗುತ್ತಿರುವುದಕ್ಕೆ ನಮಗೆಲ್ಲ ತುಂಬ ಸಂತೋಷ. ತರುಣ್​-ಸೋನಲ್​ ವೈವಾಹಿಕ ಜೀವನ ಸುಖಮಯವಾಗಿ ಇರಲಿ’ ಎಂದು ರವಿಶಂಕರ್​ ಗೌಡ ಹಾರೈಸಿದ್ದಾರೆ. ‘ತರುಣ್​ ನನಗೆ ಬಹಳ ವರ್ಷಗಳಿಂದ ಸ್ನೇಹಿತ. ಅವರ ಮದುವೆ ವಿಷಯ ಮೊದಲು ತಿಳಿದು ಬಹಳ ಖುಷಿ ಆಯ್ತು. ಈಗ ಅವರು ವಿವಾಹಿತರ ಕ್ಲಬ್​ಗೆ ಬಂದಿರುವುದು ನಮಗೆ ಖುಷಿ ಆಗಿದೆ’ ಎಂದು ಪವನ್ ಒಡೆಯರ್​ ಹೇಳಿದ್ದಾರೆ. ಪವನ್​ ಒಡೆಯರ್​ ಪತ್ನಿ ಅಪೇಕ್ಷಾ ಪುರೋಹಿತ್​ ಕೂಡ ಆರತಕ್ಷತೆಗೆ ಬಂದು ವಿಶ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!