AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ಸ್ಟೈಲ್​ನಲ್ಲಿ ಬಂದ ‘ಓ ಏ ಲಡ್ಕಿ’ ಹಾಡಿಗೆ ಸಾಥ್​ ನೀಡಿದ ರಾಗಿಣಿ ದ್ವಿವೇದಿ

‘ಓ ಏ ಲಡ್ಕಿ’ ಹಾಡನ್ನು ‘ಆಕಾಶ್ ಆಡಿಯೋ’ ಮೂಲಕ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಅಧೀರ ಸಂತು ಅವರ ನಿರ್ದೇಶನವಿದೆ. ನಿರ್ಮಾಣ ಕೂಡ ಅವರದ್ದೇ. ನಟಿ ರಾಗಿಣಿ ದ್ವಿವೇದಿ ಅವರು ಸಾಂಗ್ ಬಿಡುಗಡೆ ಮಾಡುವ ಮೂಲಕ ತಂಡಕ್ಕೆ ಸಾಥ್​ ನೀಡಿದ್ದಾರೆ. ಸಮೀರ್, ಅಮೃತಾ ಹಾಗೂ ಉಗ್ರಂ ರವಿ ಅವರು ‘ಓ ಏ ಲಡ್ಕಿ’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್​ ಸ್ಟೈಲ್​ನಲ್ಲಿ ಬಂದ ‘ಓ ಏ ಲಡ್ಕಿ’ ಹಾಡಿಗೆ ಸಾಥ್​ ನೀಡಿದ ರಾಗಿಣಿ ದ್ವಿವೇದಿ
‘ಓ ಏ ಲಡ್ಕಿ’ ಸಾಂಗ್​ ರಿಲೀಸ್​ ಕಾರ್ಯಕ್ರಮ
ಮದನ್​ ಕುಮಾರ್​
|

Updated on: Aug 10, 2024 | 2:58 PM

Share

ಕನ್ನಡದಲ್ಲಿ ಅನೇಕ ಮ್ಯೂಸಿಕ್​ ವಿಡಿಯೋಗಳು ಜನಮನ ಗೆದ್ದಿವೆ. ಹಾಗಾಗಿ ಅಂಥ ಪ್ರಯತ್ನಗಳು ಆಗಾಗ ನಡೆಯುತ್ತವೆ. ಈಗ ಅಧೀರ ಸಂತು ಅವರು ಒಂದು ಹೊಸ ಆಲ್ಬಂ ಸಾಂಗ್​ ಮಾಡಿದ್ದಾರೆ. ‘ಓ ಏ ಲಡ್ಕಿ’ ಎಂಬುದು ಇದರ ಶೀರ್ಷಿಕೆ. ಈ ಟೈಟಲ್​ಗೆ ತಕ್ಕಂತೆಯೇ ಬಾಲಿವುಡ್​ ಶೈಲಿಯಲ್ಲಿ ಸಾಂಗ್​ ಮೂಡಿಬಂದಿದೆ. ಈ ಹಾಡನ್ನು ನಟಿ ರಾಗಿಣಿ ದ್ವಿವೇದಿ ಅವರು ಇತ್ತೀಚೆಗೆ ರಿಲೀಸ್​ ಮಾಡಿ ಶುಭ ಹಾರೈಸಿದರು. ‘ಆಕಾಶ್ ಆಡಿಯೋ’ ಸಂಸ್ಥೆಯ ಮೂಲಕ ಈ ಗೀತೆ ರಿಲೀಸ್​ ಆಗಿದೆ. ಅಧೀರ ಸಂತು ಅವರೇ ನಿರ್ಮಾಣ ಕೂಡ ಮಾಡಿದ್ದಾರೆ.

ಸಾಂಗ್​ ರಿಲೀಸ್​ ಬಳಿಕ ಮಾತನಾಡಿದ ಅಧೀರ ಸಂತು ಅವರು ‘ನಾನು ಚಿತ್ರರಂಗಕ್ಕೆ ಹೊಸಬನಲ್ಲ. ಉಪೇಂದ್ರ ಅವರ 50ನೇ ಸಿನಿಮಾವನ್ನು ನಾನೇ ಮಾಡಬೇಕಿತ್ತು. ಅವರು ಕಥೆ ಕೇಳಿದ ಬಳಿಕ ಡೇಟ್ಸ್ ಸಹ ನೀಡಿದ್ದರು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟ್​ ಡ್ರಾಪ್ ಆಯಿತು. ಈಗ ಸ್ನೇಹಿತರ ಸಹಕಾರದಿಂದ ಈ ಹಾಡನ್ನು ನಿರ್ದೇಶಿಸಿದ್ದೇನೆ. ರಾಗಿಣಿ ದ್ವಿವೇದಿ ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಹಾಡು ಮಾಡಿದ್ದೇವೆ. ರಾಗಿಣಿ ಬ್ಯುಸಿ ಇದ್ದ ಕಾರಣದಿಂದ ಬೇರೆ ನಟಿ ಇದರಲ್ಲಿ ನಟಿಸಿದರು. ರಾಗಿಣಿ ಜೊತೆ ಮುಂದಿನ ದಿನಗಳಲ್ಲಿ ಇನ್ನೊಂದು ಆಲ್ಬಂ ಸಾಂಗ್​ ಮಾಡುವ ಪ್ಲ್ಯಾನ್​ ಇದೆ’ ಎಂದರು.

ಇದನ್ನೂ ಓದಿ: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು

‘ಓ ಏ ಲಡ್ಕಿ’ ಸಾಂಗ್​ ರಿಲೀಸ್​ ವೇಳೆ ಇದರ ಇದರ ಲಿರಿಕಲ್ ವಿಡಿಯೋ ಮತ್ತು ರಿಮಿಕ್ಸ್ ವರ್ಷನ್ ಸಹ ಪ್ರದರ್ಶನ ಮಾಡಲಾಯಿತು. ಅಧೀರ ಸಂತು ಅವರೇ ಈ ಗೀತೆಗೆ ಸಾಹಿತ್ಯ ಬರೆದು ಹಾಡಿದ್ದಾರೆ. ಸಾಮಾನ್ಯ ಡೆಲಿವರಿ ಹುಡುಗನೊಬ್ಬ ಒಬ್ಬ ತನ್ನ ಡ್ಯಾನ್ಸ್​ ಮೂಲಕ ಎನ್.ಆರ್.ಐ. ಹುಡುಗಿಯನ್ನು ಹೇಗೆ ಮೆಚ್ಚಿಸುತ್ತಾನೆ ಎಂಬುದನ್ನು ಈ ಹಾಡಲ್ಲಿ ತೋರಿಸಲಾಗಿದೆ.

ಎಂಎಸ್. ತ್ಯಾಗರಾಜ್ ಸಂಗೀತ, ಎಸ್. ಹಾಲೇಶ್ ಛಾಯಾಗ್ರಹಣದಲ್ಲಿ ಈ ಸಾಂಗ್​ ಮೂಡಿಬಂದಿದೆ. ತಂಡದ ಕೆಲಸವನ್ನು ರಾಗಿಣಿ ದ್ವಿವೇದಿ ಮೆಚ್ಚಿಕೊಂಡು ಭೇಷ್​ ಎಂದಿದ್ದಾರೆ. ‘ಈ ಹಾಡು ಬಹಳ ಚೆನ್ನಾಗಿದೆ. ನನಗೂ ಅವರ ಜೊತೆ ಕೆಲಸ ಮಾಡಬೇಕೆಂಬ ಆಸೆಯಿದೆ’ ಎಂದು ಅವರು ಹೇಳಿದರು. ಉಗ್ರಂ ರವಿ ಅವರು ಇದೇ ಮೊದಲ ಬಾರಿಗೆ ಮ್ಯೂಸಿಕ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಅನುಭವ ಹಂಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!