AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಂದ್ರಜಿತ್ ಲಂಕೇಶ್ ಗಂಡಸಾಗಿದ್ರೆ ನನ್ನ ಆಡಿಯೋ ಕ್ಲಿಪ್ ಬಿಡಲಿ’; ದರ್ಶನ್ ಸವಾಲು

ಮೈಸೂರಿನ ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನುವ ಪ್ರಕರಣ ನಾನಾ ತಿರುವು ಪಡೆದುಕೊಂಡಿದೆ. ಆರೋಪ ಪ್ರತ್ಯಾರೋಪ ಮುಂದುವರಿಯುತ್ತಲೇ ಇದೆ.

‘ಇಂದ್ರಜಿತ್ ಲಂಕೇಶ್ ಗಂಡಸಾಗಿದ್ರೆ ನನ್ನ ಆಡಿಯೋ ಕ್ಲಿಪ್ ಬಿಡಲಿ’; ದರ್ಶನ್ ಸವಾಲು
ದರ್ಶನ್​
TV9 Web
| Edited By: |

Updated on: Jul 17, 2021 | 6:03 PM

Share

ನಟ ದರ್ಶನ್​ ಹಾಗೂ ಇಂದ್ರಜಿತ್​ ನಡುವಿನ ತಿಕ್ಕಾಟ ದಿನ ಕಳೆದಂತೆ ಮತ್ತಷ್ಟು ಜಟಿಲವಾಗುತ್ತಿದೆ. ದರ್ಶನ್​ ಹಾಗೂ ಇಂದ್ರಜಿತ್​ ನಡುವೆ ವಾಗ್ವಾದ ಶನಿವಾರವೂ ಮುಂದುವರಿದಿದೆ. ಇಂದ್ರಜಿತ್​ ಲಂಕೇಶ್​ ಅವರು ತಮ್ಮ ಬಳಿ ದರ್ಶನ್​ ಆಡಿಯೋ ಇದೆ ಎಂದಿದ್ದರು. ಇದನ್ನು ರಿಲೀಸ್​ ಮಾಡೋಕೆ ದರ್ಶನ್​ ಆಗ್ರಹಿಸಿದ್ದಾರೆ.

‘ಇಂದ್ರಜಿತ್​ ಸೆಲೆಬ್ರಿಟಿಗಳು ಅವಿದ್ಯಾವಂತ ಅಂದ್ರು. ಬೇರೆಯವರ ಬಗ್ಗೆ ನಾನು ಮಾತನಾಡಲ್ಲ. ನಾನು 10ನೇ ಕ್ಲಾಸ್​ ಪಾಸ್. ನಾನು ಒಪ್ಪಿಕೊಳ್ತೀನಿ. ಅವನಿಗೆ ಯೋಗ್ಯತೆ ಇದ್ರೆ ಒಂದು ಚಿತ್ರ ನಿರ್ದೇಶನ ಮಾಡಲಿ. ಸರಿಯಾಗಿ ಒಂದು ಚಿತ್ರ ಮಾಡಲಿ. ನಾನು ಮಾತಾಡಿರುವ ಆಡಿಯೋ ಇದೆ ಎಂದು ಹೇಳುತ್ತಿದ್ದಾರೆ. ಗಂಡಸು ಆಗಿದ್ದರೆ ಇಂದು ಸಂಜೆಯೇ ಬಿಡುಗಡೆ ಮಾಡಲಿ. ತೋಟದಲ್ಲಿ ರೇವ್ ಪಾರ್ಟಿ ಎಂದು ಇಂದ್ರಜಿತ್ ಆರೋಪ ಮಾಡಿದ್ದಾರೆ.  ನನ್ನ ತೋಟದಲ್ಲಿ ರೇವ್ ಪಾರ್ಟಿ ಮಾಡಲು ಆಗುತ್ತಾ?’  ಎಂದು ದರ್ಶನ್​ ಪ್ರಶ್ನೆ ಮಾಡಿದ್ದಾರೆ.

‘ನಾನು ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುವುದಕ್ಕೆ ರೆಡಿ. ಸಂಗೊಳ್ಳಿ ರಾಯಣ್ಣ ಮಾಡಲೂ ರೆಡಿ, ಮೆಜೆಸ್ಟಿಕ್​ ಮಾಡಲು ಸಿದ್ಧ. ನಾನ್ಯಾಕೆ ಕ್ಷಮೆ ಕೇಳಲಿ, ಯಾಕೆ ಕ್ಷಮೆ ಕೇಳಬೇಕು. ಇಂದ್ರಜಿತ್​ ಗಂಡಸು ಆಗಿದ್ರೆ ಇಂದೇ ಆಡಿಯೋ ಬಿಡಲಿ. ಸಿನಿಮಾ ಮಾಡುತ್ತೀರಾ ಬನ್ನಿ ಸಿನಿಮಾ ಮಾಡೋಣ. ಆದರೆ ವೈಯಕ್ತಿಕವಾಗಿ ಈ ರೀತಿ ಮಾಡುವುದು ಬೇಡ. 25 ಕೋಟಿ ವಂಚನೆ ಯತ್ನ ಪ್ರಕರಣ ಎಲ್ಲಿಗೆ ಹೋಯ್ತು? ಯಾಕೆ ಪ್ರಕರಣ ದೊಡ್ಮನೆಯತ್ತ ಹೋಗುತ್ತಿದೆ. ಇದೆಲ್ಲಾ ಉಮಾಪತಿಯಿಂದಲೇ ಡೈವರ್ಟ್​ ಆಗುತ್ತಿದೆ’ ಎಂದರು ದರ್ಶನ್​.

ಇದನ್ನೂ ಓದಿ: ನನ್ನ ತೋಟದಲ್ಲಿ ಗಂಜಲು ವಾಸನೆ ಬಿಟ್ರೆ ಮತ್ತೇನಿದೆ? ದರ್ಶನ್ ನೇರಾನೇರ ಪ್ರಶ್ನೆ 

ದರ್ಶನ್ ಸುದ್ದಿಗೋಷ್ಠಿ: ದೊಡ್ಮನೆ ಆಸ್ತಿ ವಿವಾದದಲ್ಲಿ ದರ್ಶನ್ ಹೆಸರು: ಸ್ಪಷ್ಟನೆ ನೀಡಿದ ಡಿ ಬಾಸ್

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ