AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಂದ್ರಜಿತ್ ಲಂಕೇಶ್ ಗಂಡಸಾಗಿದ್ರೆ ನನ್ನ ಆಡಿಯೋ ಕ್ಲಿಪ್ ಬಿಡಲಿ’; ದರ್ಶನ್ ಸವಾಲು

ಮೈಸೂರಿನ ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನುವ ಪ್ರಕರಣ ನಾನಾ ತಿರುವು ಪಡೆದುಕೊಂಡಿದೆ. ಆರೋಪ ಪ್ರತ್ಯಾರೋಪ ಮುಂದುವರಿಯುತ್ತಲೇ ಇದೆ.

‘ಇಂದ್ರಜಿತ್ ಲಂಕೇಶ್ ಗಂಡಸಾಗಿದ್ರೆ ನನ್ನ ಆಡಿಯೋ ಕ್ಲಿಪ್ ಬಿಡಲಿ’; ದರ್ಶನ್ ಸವಾಲು
ದರ್ಶನ್​
TV9 Web
| Edited By: |

Updated on: Jul 17, 2021 | 6:03 PM

Share

ನಟ ದರ್ಶನ್​ ಹಾಗೂ ಇಂದ್ರಜಿತ್​ ನಡುವಿನ ತಿಕ್ಕಾಟ ದಿನ ಕಳೆದಂತೆ ಮತ್ತಷ್ಟು ಜಟಿಲವಾಗುತ್ತಿದೆ. ದರ್ಶನ್​ ಹಾಗೂ ಇಂದ್ರಜಿತ್​ ನಡುವೆ ವಾಗ್ವಾದ ಶನಿವಾರವೂ ಮುಂದುವರಿದಿದೆ. ಇಂದ್ರಜಿತ್​ ಲಂಕೇಶ್​ ಅವರು ತಮ್ಮ ಬಳಿ ದರ್ಶನ್​ ಆಡಿಯೋ ಇದೆ ಎಂದಿದ್ದರು. ಇದನ್ನು ರಿಲೀಸ್​ ಮಾಡೋಕೆ ದರ್ಶನ್​ ಆಗ್ರಹಿಸಿದ್ದಾರೆ.

‘ಇಂದ್ರಜಿತ್​ ಸೆಲೆಬ್ರಿಟಿಗಳು ಅವಿದ್ಯಾವಂತ ಅಂದ್ರು. ಬೇರೆಯವರ ಬಗ್ಗೆ ನಾನು ಮಾತನಾಡಲ್ಲ. ನಾನು 10ನೇ ಕ್ಲಾಸ್​ ಪಾಸ್. ನಾನು ಒಪ್ಪಿಕೊಳ್ತೀನಿ. ಅವನಿಗೆ ಯೋಗ್ಯತೆ ಇದ್ರೆ ಒಂದು ಚಿತ್ರ ನಿರ್ದೇಶನ ಮಾಡಲಿ. ಸರಿಯಾಗಿ ಒಂದು ಚಿತ್ರ ಮಾಡಲಿ. ನಾನು ಮಾತಾಡಿರುವ ಆಡಿಯೋ ಇದೆ ಎಂದು ಹೇಳುತ್ತಿದ್ದಾರೆ. ಗಂಡಸು ಆಗಿದ್ದರೆ ಇಂದು ಸಂಜೆಯೇ ಬಿಡುಗಡೆ ಮಾಡಲಿ. ತೋಟದಲ್ಲಿ ರೇವ್ ಪಾರ್ಟಿ ಎಂದು ಇಂದ್ರಜಿತ್ ಆರೋಪ ಮಾಡಿದ್ದಾರೆ.  ನನ್ನ ತೋಟದಲ್ಲಿ ರೇವ್ ಪಾರ್ಟಿ ಮಾಡಲು ಆಗುತ್ತಾ?’  ಎಂದು ದರ್ಶನ್​ ಪ್ರಶ್ನೆ ಮಾಡಿದ್ದಾರೆ.

‘ನಾನು ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುವುದಕ್ಕೆ ರೆಡಿ. ಸಂಗೊಳ್ಳಿ ರಾಯಣ್ಣ ಮಾಡಲೂ ರೆಡಿ, ಮೆಜೆಸ್ಟಿಕ್​ ಮಾಡಲು ಸಿದ್ಧ. ನಾನ್ಯಾಕೆ ಕ್ಷಮೆ ಕೇಳಲಿ, ಯಾಕೆ ಕ್ಷಮೆ ಕೇಳಬೇಕು. ಇಂದ್ರಜಿತ್​ ಗಂಡಸು ಆಗಿದ್ರೆ ಇಂದೇ ಆಡಿಯೋ ಬಿಡಲಿ. ಸಿನಿಮಾ ಮಾಡುತ್ತೀರಾ ಬನ್ನಿ ಸಿನಿಮಾ ಮಾಡೋಣ. ಆದರೆ ವೈಯಕ್ತಿಕವಾಗಿ ಈ ರೀತಿ ಮಾಡುವುದು ಬೇಡ. 25 ಕೋಟಿ ವಂಚನೆ ಯತ್ನ ಪ್ರಕರಣ ಎಲ್ಲಿಗೆ ಹೋಯ್ತು? ಯಾಕೆ ಪ್ರಕರಣ ದೊಡ್ಮನೆಯತ್ತ ಹೋಗುತ್ತಿದೆ. ಇದೆಲ್ಲಾ ಉಮಾಪತಿಯಿಂದಲೇ ಡೈವರ್ಟ್​ ಆಗುತ್ತಿದೆ’ ಎಂದರು ದರ್ಶನ್​.

ಇದನ್ನೂ ಓದಿ: ನನ್ನ ತೋಟದಲ್ಲಿ ಗಂಜಲು ವಾಸನೆ ಬಿಟ್ರೆ ಮತ್ತೇನಿದೆ? ದರ್ಶನ್ ನೇರಾನೇರ ಪ್ರಶ್ನೆ 

ದರ್ಶನ್ ಸುದ್ದಿಗೋಷ್ಠಿ: ದೊಡ್ಮನೆ ಆಸ್ತಿ ವಿವಾದದಲ್ಲಿ ದರ್ಶನ್ ಹೆಸರು: ಸ್ಪಷ್ಟನೆ ನೀಡಿದ ಡಿ ಬಾಸ್

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?