AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಱಪರ್​ ಚಂದನ್ ಬೊಂಬೆ ನಿವಿ ಮದುವೆ ಇಂದು: ಕಂಪ್ಲಿಟ್​ ಡೀಟೈಲ್ಸ್ ಇಲ್ಲಿದೆ

ಱಪರ್​ ಚಂದನ್​ ಶೆಟ್ಟಿ ಮತ್ತು ಚಂದನ್​ ಬೊಂಬೆ ನಿವೇದಿತ ಗೌಡ ಹೊಸ ಬಾಲಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಮೈಸೂರಿನಲ್ಲಿ ಈ ಜೋಡಿಯ ಆರತಕ್ಷತೆ ನಡೆಯಲಿದೆ. ಹಾಗಿದ್ರೆ, ಚಂದನ್​ ನಿವೇದಿತ ಮದುವೆಯ ವಿಶೇಷತೆಗಳೇನು ಅನ್ನೋದ್ರ ಕಂಪ್ಲಿಟ್​ ಡೀಟೈಲ್ಸ್​ ಈ ಸ್ಟೋರಿಯಲ್ಲಿದೆ. ಚಂದನ್ ಮತ್ತು ನಿವೇದಿತ ಗೌಡ ಸ್ಯಾಂಡಲ್​ವುಡ್​ನ ಕಿವ್ಟ್​ ಜೋಡಿ. ಬಿಗ್​ ಬಾಸ್ ಮನೆಯಲ್ಲಿ ಚಂದನ್​ಗೆ ಸಿಕ್ಕ ನಿವೇದಿತ, ಈಗ ಚಂದನ್​ ಬಾಳಿಗೆ ಬೆಳಕಾಗಿ, ಅವ್ರ ಕುಟುಂಬಕ್ಕೆ ಜೊತೆಯಾಗ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸ್ನೇಹಿತರಾಗಿ, ನಂತ್ರ ಪ್ರೇಮಿಗಳಾಗಿ ಈಗ ಮದುವೆ ಅನ್ನೋ […]

ಱಪರ್​ ಚಂದನ್ ಬೊಂಬೆ ನಿವಿ ಮದುವೆ ಇಂದು: ಕಂಪ್ಲಿಟ್​ ಡೀಟೈಲ್ಸ್ ಇಲ್ಲಿದೆ
Follow us
ಸಾಧು ಶ್ರೀನಾಥ್​
|

Updated on: Feb 25, 2020 | 12:19 PM

ಱಪರ್​ ಚಂದನ್​ ಶೆಟ್ಟಿ ಮತ್ತು ಚಂದನ್​ ಬೊಂಬೆ ನಿವೇದಿತ ಗೌಡ ಹೊಸ ಬಾಲಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಮೈಸೂರಿನಲ್ಲಿ ಈ ಜೋಡಿಯ ಆರತಕ್ಷತೆ ನಡೆಯಲಿದೆ. ಹಾಗಿದ್ರೆ, ಚಂದನ್​ ನಿವೇದಿತ ಮದುವೆಯ ವಿಶೇಷತೆಗಳೇನು ಅನ್ನೋದ್ರ ಕಂಪ್ಲಿಟ್​ ಡೀಟೈಲ್ಸ್​ ಈ ಸ್ಟೋರಿಯಲ್ಲಿದೆ.

ಚಂದನ್ ಮತ್ತು ನಿವೇದಿತ ಗೌಡ ಸ್ಯಾಂಡಲ್​ವುಡ್​ನ ಕಿವ್ಟ್​ ಜೋಡಿ. ಬಿಗ್​ ಬಾಸ್ ಮನೆಯಲ್ಲಿ ಚಂದನ್​ಗೆ ಸಿಕ್ಕ ನಿವೇದಿತ, ಈಗ ಚಂದನ್​ ಬಾಳಿಗೆ ಬೆಳಕಾಗಿ, ಅವ್ರ ಕುಟುಂಬಕ್ಕೆ ಜೊತೆಯಾಗ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸ್ನೇಹಿತರಾಗಿ, ನಂತ್ರ ಪ್ರೇಮಿಗಳಾಗಿ ಈಗ ಮದುವೆ ಅನ್ನೋ ಬಂಧಕ್ಕೆ ಇಬ್ಬರು ಸಾಕ್ಷಿ ಆಗ್ತಿದ್ದಾರೆ.

ನಿವೇದಿತ, ಚಂದನ್ ಮದುವೆ ಇಂದು ಮತ್ತು ನಾಳೆ ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನ ನ್ಯೂ ಸ್ಪೆಕ್ಟ್ರಾ ಕನ್ವೆಷನ್​ ಹಾಲ್​ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಇಂದು ಸಂಜೆ 7 ಗಂಟೆಯ ನಂತ್ರ ಆರತಕ್ಷತೆ ಕಾರ್ಯಮ ನಡೆಯಲಿದೆ. ಮತ್ತು ಫೆಬ್ರವರಿ 26 ಅಂದ್ರೆ ನಾಳೆ ಬೆಳಗ್ಗೆ ಮುಹೂರ್ಥ ಜರುಗಲಿದೆ.

ನಾಳೆ ಬೆಳಿಗ್ಗೆ ಎಂಟು ಹದಿನೈದರಿಂದ ಒಂಭತ್ತು ಗಂಟೆಯ ನಡುವಿನ ಶುಭಮೀನಾ ಲಗ್ನದಲ್ಲಿ ಕಲ್ಯಾಣ ಮುಹೂರ್ಥವನ್ನ ನಿಗಧಿ ಪಡಿಸಲಾಗಿದೆ. ದಸರ ಸಂಭ್ರಮದಲ್ಲಿ ನಿವೇದಿತಾಗೆ ಚಂದನ್​ ಪ್ರಪೋಸ್​ ಮಾಡಿದ್ರು. ನಂತ್ರ ಮೈಸೂರಿನಲ್ಲಿ ಮದುವೆ ನಿಶ್ವಿತಾರ್ಥವನ್ನು ಮಾಡಿಕೊಂಡ್ರು. ಈಗ ಮದುವೆಯನ್ನೂ ಕೂಡ ಮೈಸೂರಿನಲ್ಲೇ ಮಾಡಿಕೊಳ್ತಿದೆ ಈ ಜೋಡಿ.

ಚಂದನ್ ಮತ್ತು ನಿವೇದಿತ ಏನೇ ಮಾಡಿದ್ರು, ಅದ್ರಲ್ಲಿ ವಿಭಿನ್ನತೆಯನ್ನ ಹುಡುಕುವವರು. ಅಂತೆಯೆ ಇವ್ರ ಮದುವೆ ಆಮಂತ್ರಣ ಪತ್ರ ಕೂಡ ವಿಭಿನ್ನವಾಗೇ ಇತ್ತು. ಎರಡು ವಿನ್ಯಾಸಗಳಲ್ಲಿ ಪತ್ರಿಕೆಗಳನ್ನ ಮಾಡಿಸಲಾಗಿತ್ತು. ಇದೆಷ್ಟೇ ಅಲ್ಲಾ ಪ್ರೀವೆಡ್ಡಿಂಗ್ ಫೊಟೋ ಶೂಟ್​ಗಾಗಿ ಈ ಜೋಡಿ ತಮ್ಮದೇ ಆದ ಹಾಡೊಂದನ್ನ ಕಂಪೋಸ್​ ಮಾಡಿದೆ. ಗೆಟ್ ಹೈ ಅನ್ನೋ ಈ ಹಾಡಿನ ಟೀಸರ್ ರಿಲೀಸ್ ಆಗಿದೆ. ಇಂದು ಸಂಜೆ ವೇಳೆ ಪೂರ್ತಿ ಹಾಡನ್ನ ರಿಲೀಸ್ ಮಾಡೋ ಪ್ಲ್ಯಾನ್​ನಲ್ಲಿದ್ದಾರೆ ಚಂದನ್ ನಿವಿ.

ಗುರುಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಈ ಚಂದನ್ ಮತ್ತು ನಿವೇದಿತ ಕಲ್ಯಾಣ ಅದ್ದೂರಿಯಾಗಿ ಜರುಗಲಿದೆ. ಈ ನವ ಜೋಡಿಯ ಮದುವೆಗೆ ಸಿನಿಮಾರಂಗದ ಮತ್ತು ರಾಜಕೀಯ ಗಣ್ಯರು ಸಾಕ್ಷಿ ಆಗಲಿದ್ದಾರೆ.

ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ