AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಱಪರ್​ ಚಂದನ್ ಬೊಂಬೆ ನಿವಿ ಮದುವೆ ಇಂದು: ಕಂಪ್ಲಿಟ್​ ಡೀಟೈಲ್ಸ್ ಇಲ್ಲಿದೆ

ಱಪರ್​ ಚಂದನ್​ ಶೆಟ್ಟಿ ಮತ್ತು ಚಂದನ್​ ಬೊಂಬೆ ನಿವೇದಿತ ಗೌಡ ಹೊಸ ಬಾಲಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಮೈಸೂರಿನಲ್ಲಿ ಈ ಜೋಡಿಯ ಆರತಕ್ಷತೆ ನಡೆಯಲಿದೆ. ಹಾಗಿದ್ರೆ, ಚಂದನ್​ ನಿವೇದಿತ ಮದುವೆಯ ವಿಶೇಷತೆಗಳೇನು ಅನ್ನೋದ್ರ ಕಂಪ್ಲಿಟ್​ ಡೀಟೈಲ್ಸ್​ ಈ ಸ್ಟೋರಿಯಲ್ಲಿದೆ. ಚಂದನ್ ಮತ್ತು ನಿವೇದಿತ ಗೌಡ ಸ್ಯಾಂಡಲ್​ವುಡ್​ನ ಕಿವ್ಟ್​ ಜೋಡಿ. ಬಿಗ್​ ಬಾಸ್ ಮನೆಯಲ್ಲಿ ಚಂದನ್​ಗೆ ಸಿಕ್ಕ ನಿವೇದಿತ, ಈಗ ಚಂದನ್​ ಬಾಳಿಗೆ ಬೆಳಕಾಗಿ, ಅವ್ರ ಕುಟುಂಬಕ್ಕೆ ಜೊತೆಯಾಗ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸ್ನೇಹಿತರಾಗಿ, ನಂತ್ರ ಪ್ರೇಮಿಗಳಾಗಿ ಈಗ ಮದುವೆ ಅನ್ನೋ […]

ಱಪರ್​ ಚಂದನ್ ಬೊಂಬೆ ನಿವಿ ಮದುವೆ ಇಂದು: ಕಂಪ್ಲಿಟ್​ ಡೀಟೈಲ್ಸ್ ಇಲ್ಲಿದೆ
ಸಾಧು ಶ್ರೀನಾಥ್​
|

Updated on: Feb 25, 2020 | 12:19 PM

Share

ಱಪರ್​ ಚಂದನ್​ ಶೆಟ್ಟಿ ಮತ್ತು ಚಂದನ್​ ಬೊಂಬೆ ನಿವೇದಿತ ಗೌಡ ಹೊಸ ಬಾಲಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಮೈಸೂರಿನಲ್ಲಿ ಈ ಜೋಡಿಯ ಆರತಕ್ಷತೆ ನಡೆಯಲಿದೆ. ಹಾಗಿದ್ರೆ, ಚಂದನ್​ ನಿವೇದಿತ ಮದುವೆಯ ವಿಶೇಷತೆಗಳೇನು ಅನ್ನೋದ್ರ ಕಂಪ್ಲಿಟ್​ ಡೀಟೈಲ್ಸ್​ ಈ ಸ್ಟೋರಿಯಲ್ಲಿದೆ.

ಚಂದನ್ ಮತ್ತು ನಿವೇದಿತ ಗೌಡ ಸ್ಯಾಂಡಲ್​ವುಡ್​ನ ಕಿವ್ಟ್​ ಜೋಡಿ. ಬಿಗ್​ ಬಾಸ್ ಮನೆಯಲ್ಲಿ ಚಂದನ್​ಗೆ ಸಿಕ್ಕ ನಿವೇದಿತ, ಈಗ ಚಂದನ್​ ಬಾಳಿಗೆ ಬೆಳಕಾಗಿ, ಅವ್ರ ಕುಟುಂಬಕ್ಕೆ ಜೊತೆಯಾಗ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸ್ನೇಹಿತರಾಗಿ, ನಂತ್ರ ಪ್ರೇಮಿಗಳಾಗಿ ಈಗ ಮದುವೆ ಅನ್ನೋ ಬಂಧಕ್ಕೆ ಇಬ್ಬರು ಸಾಕ್ಷಿ ಆಗ್ತಿದ್ದಾರೆ.

ನಿವೇದಿತ, ಚಂದನ್ ಮದುವೆ ಇಂದು ಮತ್ತು ನಾಳೆ ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನ ನ್ಯೂ ಸ್ಪೆಕ್ಟ್ರಾ ಕನ್ವೆಷನ್​ ಹಾಲ್​ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಇಂದು ಸಂಜೆ 7 ಗಂಟೆಯ ನಂತ್ರ ಆರತಕ್ಷತೆ ಕಾರ್ಯಮ ನಡೆಯಲಿದೆ. ಮತ್ತು ಫೆಬ್ರವರಿ 26 ಅಂದ್ರೆ ನಾಳೆ ಬೆಳಗ್ಗೆ ಮುಹೂರ್ಥ ಜರುಗಲಿದೆ.

ನಾಳೆ ಬೆಳಿಗ್ಗೆ ಎಂಟು ಹದಿನೈದರಿಂದ ಒಂಭತ್ತು ಗಂಟೆಯ ನಡುವಿನ ಶುಭಮೀನಾ ಲಗ್ನದಲ್ಲಿ ಕಲ್ಯಾಣ ಮುಹೂರ್ಥವನ್ನ ನಿಗಧಿ ಪಡಿಸಲಾಗಿದೆ. ದಸರ ಸಂಭ್ರಮದಲ್ಲಿ ನಿವೇದಿತಾಗೆ ಚಂದನ್​ ಪ್ರಪೋಸ್​ ಮಾಡಿದ್ರು. ನಂತ್ರ ಮೈಸೂರಿನಲ್ಲಿ ಮದುವೆ ನಿಶ್ವಿತಾರ್ಥವನ್ನು ಮಾಡಿಕೊಂಡ್ರು. ಈಗ ಮದುವೆಯನ್ನೂ ಕೂಡ ಮೈಸೂರಿನಲ್ಲೇ ಮಾಡಿಕೊಳ್ತಿದೆ ಈ ಜೋಡಿ.

ಚಂದನ್ ಮತ್ತು ನಿವೇದಿತ ಏನೇ ಮಾಡಿದ್ರು, ಅದ್ರಲ್ಲಿ ವಿಭಿನ್ನತೆಯನ್ನ ಹುಡುಕುವವರು. ಅಂತೆಯೆ ಇವ್ರ ಮದುವೆ ಆಮಂತ್ರಣ ಪತ್ರ ಕೂಡ ವಿಭಿನ್ನವಾಗೇ ಇತ್ತು. ಎರಡು ವಿನ್ಯಾಸಗಳಲ್ಲಿ ಪತ್ರಿಕೆಗಳನ್ನ ಮಾಡಿಸಲಾಗಿತ್ತು. ಇದೆಷ್ಟೇ ಅಲ್ಲಾ ಪ್ರೀವೆಡ್ಡಿಂಗ್ ಫೊಟೋ ಶೂಟ್​ಗಾಗಿ ಈ ಜೋಡಿ ತಮ್ಮದೇ ಆದ ಹಾಡೊಂದನ್ನ ಕಂಪೋಸ್​ ಮಾಡಿದೆ. ಗೆಟ್ ಹೈ ಅನ್ನೋ ಈ ಹಾಡಿನ ಟೀಸರ್ ರಿಲೀಸ್ ಆಗಿದೆ. ಇಂದು ಸಂಜೆ ವೇಳೆ ಪೂರ್ತಿ ಹಾಡನ್ನ ರಿಲೀಸ್ ಮಾಡೋ ಪ್ಲ್ಯಾನ್​ನಲ್ಲಿದ್ದಾರೆ ಚಂದನ್ ನಿವಿ.

ಗುರುಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಈ ಚಂದನ್ ಮತ್ತು ನಿವೇದಿತ ಕಲ್ಯಾಣ ಅದ್ದೂರಿಯಾಗಿ ಜರುಗಲಿದೆ. ಈ ನವ ಜೋಡಿಯ ಮದುವೆಗೆ ಸಿನಿಮಾರಂಗದ ಮತ್ತು ರಾಜಕೀಯ ಗಣ್ಯರು ಸಾಕ್ಷಿ ಆಗಲಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?