ಚಂದನ್​ ಶೆಟ್ಟಿ ಕಂಠದಲ್ಲಿ ‘ಇಂಟರ್​ವಲ್​’ ಸಿನಿಮಾ ಸಾಂಗ್​; ಇದು ಗಣೇಶನ ಹಾಡು

ಶಶಿರಾಜ್ ಅವರು ‘ಇಂಟರ್​ವಲ್​’ ಸಿನಿಮಾಗೆ ಹೀರೋ ಆಗಿದ್ದಾರೆ. ಗಣೇಶ ಚರ್ತುರ್ಥಿ ಪ್ರಯುಕ್ತ ಈ ಸಿನಿಮಾದ ಹೊಸ ಸಾಂಗ್​ ರಿಲೀಸ್​ ಆಗಿದೆ. ಚಂದನ್​ ಶೆಟ್ಟಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಹಬ್ಬದ ಸೀಸನ್​ನಲ್ಲಿ ಬಿಡುಗಡೆ ಆಗಿರುವ ಈ ಹಾಡು ಗಣೇಶನಿಗೆ ಸಂಬಂಧಿಸಿದ್ದು ಎಂಬುದು ವಿಶೇಷ. ‘ಇಂಟರ್​ವಲ್​’ ಸಿನಿಮಾ ತಂಡದ ಬಗ್ಗೆ ಇಲ್ಲಿದೆ ಮಾಹಿತಿ..

ಚಂದನ್​ ಶೆಟ್ಟಿ ಕಂಠದಲ್ಲಿ ‘ಇಂಟರ್​ವಲ್​’ ಸಿನಿಮಾ ಸಾಂಗ್​; ಇದು ಗಣೇಶನ ಹಾಡು
‘ಇಂಟರ್​ವಲ್’
Follow us
|

Updated on: Sep 11, 2024 | 7:16 PM

ಕೆಲವು ದಿನಗಳ ಹಿಂದೆ ಫಸ್ಟ್ ಲುಕ್ ಪೋಸ್ಟರ್ ಮೂಲಕ ‘ಇಂಟರ್​​ವಲ್’ ಸಿನಿಮಾ ಗಮನ ಸೆಳೆದಿತ್ತು. ಹೊಸ ನಿರ್ದೇಶಕ ಭರತ್ ವರ್ಷ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ಯುವಕರು ಮೆಚ್ಚುವಂತಹ ಕಥೆ ಇರಲಿದೆ ಎಂಬುದಕ್ಕೆ ಫಸ್ಟ್​ ಲುಕ್​ ಸುಳಿವು ನೀಡಿತ್ತು. ಈಗ ‘ಆನಂದ್ ಆಡಿಯೋ’ ಮೂಲಕ ‘ಇಂಟರ್​ವಲ್’ ಸಿನಿಮಾದ ಹೊಸ ಸಾಂಗ್​ ಬಿಡುಗಡೆ ಆಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲ ಕಡೆಗಳಿಂದ ಈ ಹಾಡಿಗೆ ಪಾಸಿಟಿವ್​ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

ಇದು ಗಣೇಶ ಚತುರ್ಥಿ ಸೀಸನ್​. ಗಣಪತಿ ಹಬ್ಬ ಎಂದರೆ ಯುವಕರಿಗೆ ಸಖತ್​ ಉತ್ಸಾಹ. ಈಗ ‘ಇಂಟರ್​ವಲ್​’ ಸಿನಿಮಾದಿಂದ ರಿಲೀಸ್​ ಆಗಿರುವ ಸಾಂಗ್​ ಕೂಡ ಗಣಪತಿಗೆ ಸಂಬಂಧಿಸಿದೆ ಎಂಬುದು ವಿಶೇಷ. ಈಗಾಗಲೇ ಗಣೇಶನ ಬಗ್ಗೆ ಇರುವ ಫೇಮಸ್​ ಹಾಡುಗಳ ಸಾಲಿಗೆ ಈ ಸಾಂಗ್​ ಕೂಡ ಸೇರ್ಪಡೆ ಆಗಿದೆ. ‘ಭರತವರ್ಷ್ ಪಿಕ್ಚರ್ಸ್’ ಬ್ಯಾನರ್​ ಮೂಲಕ ‘ಇಂಟರ್​ವಲ್’ ಸಿನಿಮಾ ಮೂಡಿಬಂದಿದೆ. ಈ ಗೀತೆಗೆ ಚಂದನ್ ಶೆಟ್ಟಿ ಅವರು ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಸಂದೇಶ ಕಳಿಸುವವರಿಗೆ ದರ್ಶನ್ ಪ್ರಕರಣ ಎಚ್ಚರಿಕೆ ಘಂಟೆ: ಚಂದನ್ ಶೆಟ್ಟಿ

ಈ ಹಾಡಿಗೆ ವಿಜಯ್ ಈಶ್ವರ್ ಅವರು ಸಾಹಿತ್ಯ ಬರೆದಿದ್ದಾರೆ. ವಿಕಾಸ್ ವಸಿಷ್ಠ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಗಣ ಗಣ ಗಣಪತಿ ಫಂಕ್ಷನ್ ಹಲೋ ಎವ್ರಿಬಡಿ ಸ್ವಲ್ಪ ಅಟೆನ್ಷನ್..’ ಎಂದು ಆರಂಭ ಆಗುವ ಈ ಸಾಂಗ್ ಬಹುತೇಕರ ಜೀವನದ ಗತವೈಭವವನ್ನು ತೆರೆದಿಡುವಂತಿದೆ. ಈ ಹಾಡಿನ ಜೊತೆಯಲ್ಲಿ ಸಿನಿಮಾದ ಕೆಲವು ಪಾತ್ರಗಳ ಪರಿಚಯ ಸಹ ಮಾಡಿಕೊಡಲಾಗಿದೆ. ಇಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕುವ ಯುವಕರ ಗುಂಪಿನ ಹೋರಾಟದ ಕಥೆ ‘ಇಂಟರ್​ವಲ್​’ ಸಿನಿಮಾದಲ್ಲಿ ಇದೆ. ಅದಕ್ಕೆ ಜೊತೆಗೆ ರೋಚಕ ಅಂಶಗಳನ್ನು ಸೇರಿಸಿ ಸುಕಿ ಅವರು ಕಥೆ ಬರೆದಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ.

ಬೆಂಗಳೂರು, ಶಿವಮೊಗ್ಗ ಸುತ್ತಮುತ್ತ ಶೂಟಿಂಗ್​ ಮಾಡಲಾಗಿದೆ. ಈಗ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಸ ಪೂರ್ಣಗೊಂಡಿವೆ. ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿರುವ ಶಶಿರಾಜ್ (ಬಾಲಾ) ಅವರು ‘ಇಂಟರ್​ವಲ್’ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಪ್ರಜ್ವಲ್ ಗೌಡ, ಸುಖಿ, ರಂಗನಾಥ್ ಶಿವಮೊಗ್ಗ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಜ್ ಕಾಂತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಮೋದ್ ಮರವಂತೆ ಹಾಗೂ ಸುಖಿ ಸಾಹಿತ್ಯ ಬರೆದಿದ್ದಾರೆ. ಶಶಿಧರ್ ಅವರು ಸಂಕಲನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರಯೂ ನದಿಯಲ್ಲಿ ಮುಳುಗಿದ ಸರ್ಕಾರಿ ಶಾಲೆ; ಶಾಕಿಂಗ್ ವಿಡಿಯೋ ವೈರಲ್
ಸರಯೂ ನದಿಯಲ್ಲಿ ಮುಳುಗಿದ ಸರ್ಕಾರಿ ಶಾಲೆ; ಶಾಕಿಂಗ್ ವಿಡಿಯೋ ವೈರಲ್
ಬಿಜೆಪಿ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಬಿಜೆಪಿ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು