AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊರೊನಾ ಸುಳ್ಳು, ಇದೊಂದು ಮೆಡಿಕಲ್ ಮಾಫಿಯಾ’; ಸಂಚಲನ ಸೃಷ್ಟಿಸಿದ ಅಗ್ನಿ ಶ್ರೀಧರ್​​ ಹೇಳಿಕೆ

ಕೊವಿಡ್​ ಇದೆ ಮತ್ತು ಇಲ್ಲ ಎನ್ನುವ ಬಗ್ಗೆ ಕೊರೊನಾ ಕಾಣಿಸಿಕೊಂಡಾಗಿನಿಂದಲೂ ಚರ್ಚೆ ನಡೆಯುತ್ತಿದೆ. ಹಣ ಮಾಡಿಕೊಳ್ಳೋಕೆ ನಡೆಯುತ್ತಿರುವ ದಂಧೆ ಇದು ಎಂದು ಈ ಮೊದಲಿನಿಂದಲೂ ಹಲವರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.

‘ಕೊರೊನಾ ಸುಳ್ಳು, ಇದೊಂದು ಮೆಡಿಕಲ್ ಮಾಫಿಯಾ’; ಸಂಚಲನ ಸೃಷ್ಟಿಸಿದ ಅಗ್ನಿ ಶ್ರೀಧರ್​​ ಹೇಳಿಕೆ
ಅಗ್ನಿ ಶ್ರೀಧರ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jan 13, 2022 | 8:33 PM

Share

ದೇಶದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಈಗ ಮೂರನೇ ಅಲೆಯ ಭಯದಲ್ಲಿ ಎಲ್ಲರೂ ಇದ್ದಾರೆ. ಕೊರೊನಾ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ಆತಂಕ ಮೂಡಿದೆ. ಅನೇಕ ಇಂಡಸ್ಟ್ರಿಗಳು ಅನಿಶ್ಚಿತತೆ ಎದುರಿಸುತ್ತಿವೆ. ಚಿತ್ರರಂಗಕ್ಕೆ ಕೊರೊನಾ ದೊಡ್ಡ ಹೊಡೆತ ನೀಡಿದೆ. ಸಿನಿಮಾ ಕೆಲಸಗಳು ನಿಂತಿವೆ. ಕೊವಿಡ್ ಕಾರಣದಿಂದ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಅವಕಾಶದ ನಿಯಮ ಬಂದಿರುವುದರಿಂದ ಯಾವ ಚಿತ್ರಗಳೂ ರಿಲೀಸ್​ ಆಗುತ್ತಿಲ್ಲ. ಈ ಮಧ್ಯೆ, ನಿರ್ದೇಶಕ ಹಾಗೂ ಚಿತ್ರಕಥೆ ಬರಹಗಾರ ಅಗ್ನಿ ಶ್ರೀಧರ್ (Agni Shridhar) ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ‘ಕೊವಿಡ್​ ಇಲ್ಲ. ಇದೊಂದು ಮೆಡಿಕಲ್​ ಮಾಫಿಯಾ’ ಎನ್ನುವ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

ಕೊವಿಡ್​ ಇದೆ ಮತ್ತು ಇಲ್ಲ ಎನ್ನುವ ಬಗ್ಗೆ ಕೊರೊನಾ ಕಾಣಿಸಿಕೊಂಡಾಗಿನಿಂದಲೂ ಚರ್ಚೆ ನಡೆಯುತ್ತಿದೆ. ಹಣ ಮಾಡಿಕೊಳ್ಳೋಕೆ ನಡೆಯುತ್ತಿರುವ ದಂಧೆ ಇದು ಎಂದು ಈ ಮೊದಲಿನಿಂದಲೂ ಹಲವರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಅಗ್ನಿ ಶ್ರೀಧರ್​​ ಅವರು ಮಾಡಿರುವ ಗಂಭೀರ ಆರೋಪ ಸಂಚಲನ ಸೃಷ್ಟಿಸಿದೆ.

‘ಕೊರೊನಾ ಎಂಬುದೇ ಸುಳ್ಳು. ಇದೊಂದು ಮೆಡಿಕಲ್​ ಮಾಫಿಯಾ. ನಾನು ಇದುವರೆಗೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಮ್ಮ ಕುಟುಂಬದಲ್ಲಿ ಯಾರೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಅವರ ಎದುರಿಗೂ ನಾನು ಇದನ್ನೇ ಹೇಳಿದ್ದೇನೆ. ರಾಜಕಾರಣಿಗಳು ತಳ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸಿದ್ದಾರೆ’ ಎಂದು ಅಗ್ನಿ ಶ್ರೀಧರ್​​ ಅವರು ‘ಕ್ರೀಂ‌’‌ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

‘ನನ್ನ ಕುಟುಂಬದ ಯಾರೊಬ್ಬರೂ ಕೊವಿಡ್​ ಲಸಿಕೆ ತೆಗೆದುಕೊಂಡಿಲ್ಲ. ನನಗೆ ಗೊತ್ತಿದೆ ಶೇ. 60 ವೈದ್ಯರು ಈ ಲಸಿಕೆ ಪಡೆದಿಲ್ಲ. ಇದು ಫ್ಯಾಕ್ಟ್​. ಯಾರೂ ಕೊವಿಡ್​ನಿಂದ ಸತ್ತಿಲ್ಲ. ಸತ್ತ ವ್ಯಕ್ತಿಯಲ್ಲಿ ನೂರಾರು ವೈರಸ್​ ಇದೆ. ಇದನ್ನು ಹೈಲೈಟ್​ ಮಾಡಲಾಗಿದೆ. ಇದು ನನ್ನ ಅಭಿಪ್ರಾಯ’ ಎಂದು ಅಗ್ನಿ ಶ್ರೀಧರ್​​ ಹೇಳಿದ್ದಾರೆ.

ಇದನ್ನೂ ಓದಿ: ರಾಧಿಕಾ ಪಂಡಿತ್​ ಮೊಬೈಲ್​ನಲ್ಲಿ ಯಶ್​ ಹೆಸರು ಏನೆಂದು ಸೇವ್​ ಆಗಿದೆ? ವೈರಲ್​ ಆಯ್ತು ವಿಡಿಯೋ

Arjun Sarja: ಶ್ರುತಿ ಹರಿಹರನ್​ ಮೀಟೂ ಪ್ರಕರಣ: ಅರ್ಜುನ್​ ಸರ್ಜಾಗೆ ಜಯ

Published On - 5:11 pm, Thu, 13 January 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ