AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ಜನ ಸೇರಿ ಒಬ್ಬನಿಗೆ ಹೊಡೀತಿದ್ರು; ದರ್ಶನ್​ ಮತ್ತು ಸ್ನೇಹಿತರ ಮೇಲೆ ಸಂದೇಶ್ ಸ್ಫೋಟಕ ಆರೋಪ

Sandesh Phone Audio: ಗಲಾಟೆ ಆದಾಗ ನಾನು ಬೈದೆ. 15 ಜನ ಸೇರಿಕೊಂಡು ಒಬ್ಬ ಕೆಲಸಗಾರನಿಗೆ ಹೊಡೆಯುವಾಗ ನೋಡ್ಕೊಂಡು ನಿಂತಿದ್ದೀರಲ್ಲ ನಾಚಿಕೆ ಆಗಲ್ವಾ ಎಂದು ನಾನು ಬೈಯ್ದಿದ್ದೆ ಎಂದು ಸಂದೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್​ ಲಭ್ಯವಾಗಿದೆ.

15 ಜನ ಸೇರಿ ಒಬ್ಬನಿಗೆ ಹೊಡೀತಿದ್ರು; ದರ್ಶನ್​ ಮತ್ತು ಸ್ನೇಹಿತರ ಮೇಲೆ ಸಂದೇಶ್ ಸ್ಫೋಟಕ ಆರೋಪ
15 ಜನ ಸೇರಿ ಒಬ್ಬನಿಗೆ ಹೊಡೀತಿದ್ರು; ದರ್ಶನ್​ ಮತ್ತು ಸ್ನೇಹಿತರ ಮೇಲೆ ಸಂದೇಶ್ ಸ್ಫೋಟಕ ಆರೋಪ
TV9 Web
| Edited By: |

Updated on: Jul 16, 2021 | 6:14 PM

Share

ನಟ ದರ್ಶನ್​ ಹಲ್ಲೆ ಪ್ರಕರಣ ಕ್ಷಣಕ್ಷಣಕ್ಕೂ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಮೈಸೂರಿನ ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ನ ಸಿಬ್ಬಂದಿ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್​​ ಮಾಡಿದ್ದರು. ಅದಕ್ಕೆ ಪೂರಕ ಎಂಬಂತೆ ಈಗ ಒಂದು ಫೋನ್​ ಕಾಲ್​ ರೆಕಾರ್ಡ್​ ಲಭ್ಯವಾಗಿದೆ. ವ್ಯಕ್ತಿಯೊಬ್ಬರ ಜೊತೆ ಹೋಟೆಲ್​ ಮಾಲೀಕ ಸಂದೇಶ್​ ಮಾತನಾಡಿರುವುದು ಎನ್ನಲಾದ ಫೋನ್​ ಕಾಲ್​ ರೆಕಾರ್ಡ್​ ವೈರಲ್​ ಆಗುತ್ತಿದೆ. ಅದರಲ್ಲಿ ದರ್ಶನ್​ ಮತ್ತು ಅವರ ಸ್ನೇಹಿತರ ಬಗ್ಗೆ ಸಂದೇಶ್​ ಕೆಲವು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.

‘ದರ್ಶನ್​ಗೆ ನಾನು ಬುದ್ಧಿ ಹೇಳಿದ್ದೆ. ತೋಟಕ್ಕೆ ಬಾ ಅಂತ ನನ್ನನ್ನು ಕರೆದ. ದಯವಿಟ್ಟು ನನ್ನನ್ನು ಬಿಟ್ಟುಬಿಡು ಅಂದೆ. ಈಗ ನಾನು ಆರಾಮಾಗಿ ಇದ್ದೇನೆ. ಅವನು ಫೋನ್​ ಮಾಡಿದ್ದ ಎಂದು ಗೊತ್ತಾಗ ತಕ್ಷಣ ಡ್ಯಾಡಿ ಕೆಂಡಾಮಂಡಲ ಆಗಿದ್ದರು. ಮತ್ತೆ ಅವನು ಬಂದರೆ ಕಷ್ಟ. ಅವನು ತಪ್ಪು ಮಾಡಿರುವ ಗಿಲ್ಟ್ ಹಾಗೇ ಇರಲಿ. ಅವನು ಮತ್ತೆ ಬಂದರೆ ಹೋಟೆಲ್​ ಸ್ಟಾಫ್​ ಎದುರಲ್ಲಿ ಮತ್ತು ಗಾಂಧಿನಗರದಲ್ಲಿ ನನಗೆ ಬೆಲೆ ಇರುವುದಿಲ್ಲ ಅಂತ ಡ್ಯಾಡಿ ಹೇಳಿದ್ರು’ ಎಂದು ಸಂದೇಶ್​ ಮಾತನಾಡಿರುವ ಆಡಿಯೋ ಕ್ಲಿಪ್​ ವೈರಲ್​ ಆಗಿದೆ.

ನಿರ್ಮಾಪಕ ಉಮಾಪತಿಗೆ ದರ್ಶನ್ ಬ್ಲಾಕ್​ಮೇಲ್​ ಮಾಡಿದ್ದಾರೆ ಎಂಬ ಅನುಮಾನ ಕೂಡ ವ್ಯಕ್ತವಾಗುವ ರೀತಿಯಲ್ಲಿ ಸಂದೇಶ್​ ಮಾತನಾಡಿದ್ದಾರೆ. ‘ಅವನು ಹುಡುಗಿ ಜೊತೆ ಫ್ಲರ್ಟ್​ ಮಾಡಿರುವುದನ್ನು ಇಟ್ಟುಕೊಂಡು ನೀನು ಅವನ ಮನೆ ಹಾಳು ಮಾಡಿದರೆ ಅವನು ಸುಮ್ಮನೇ ಬಿಡುತ್ತಾನಾ? ನೀನು ಅವನನ್ನು ಬ್ಲಾಕ್​ ಮೇಲ್​ ಮಾಡೋಕೆ ಹೋಗ್ತಾ ಇದೀಯ. ತಪ್ಪು ಅದು. ನಿನ್ನದು ಒಂದು ನಿಮಿಷಕ್ಕೆ ಸಾವಿರ ಬರುತ್ತವೆ ಅಂತ ನಾನು ಹೇಳಿದ್ದೆ. ಈಗ ನಾನು ನಿರ್ಮಾಪಕರ ಪರ ಅಂತ ಹೇಳ್ತಾ ಇದಾನೆ. ಇದೆಲ್ಲ ಬೇಕಾ’ ಎಂದು ಸಂದೇಶ್​ ಮಾತನಾಡಿದ್ದಾರೆ.

‘ಗಲಾಟೆ ಆದಾಗ ದರ್ಶನ್​ ಗೆಳೆಯರು ನೋಡ್ತಾ ನಿಂತಿದ್ದರು. ಹರ್ಷನಿಗೆ ನಾನು ಬೈದೆ. 15 ಜನ ಸೇರಿಕೊಂಡು ಒಬ್ಬ ಕೆಲಸಗಾರನಿಗೆ ಹೊಡೆಯುವಾಗ ನೋಡ್ಕೊಂಡು ನಿಂತಿದ್ದೀರಲ್ಲ, ನೀವು ಒಬ್ಬ ಹೋಟೆಲ್​ ಮಾಲೀಕರಾಗಿ ನಾಚಿಕೆ ಆಗಲ್ವಾ ಎಂದು ನಾನು ಬೈಯ್ದಿದ್ದೆ. ಅವರೆಲ್ಲ ಪೋಲಿಗಳು. ರಾಕೇಶ್​ ಪಾಪಣ್ಣನ ಅಪ್ಪನಿಗೆ ಮೈಸೂರಿನಲ್ಲಿ ಒಂದು ರೂಪಾಯಿ ಬೆಲೆ ಇಲ್ಲ. ಹರ್ಷ ಊರು ತುಂಬ ಸಾಲ ಮಾಡಿಕೊಂಡಿದ್ದಾನೆ. ಅವನದ್ದು ಏನೂ ಸ್ವಂತ ಇಲ್ಲ. ಅದು ಬ್ಯುಸಿನೆಸ್​. ತಪ್ಪು ಅಂತ ನಾನು ಹೇಳಲ್ಲ’ ಎಂದು ಸಂದೇಶ್​ ಅವರು ಮಾತನಾಡಿರುವುದು ಫೋನ್​ ಕಾಲ್ ರೆಕಾರ್ಡ್​ ಮೂಲಕ ಗೊತ್ತಾಗಿದೆ.

ಇದನ್ನೂ ಓದಿ:

ದರ್ಶನ್​ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು; ಅಂದು ಯಾವುದೇ ಜಗಳ ನಡೆದೇ ಇಲ್ಲ ಎಂದ ಗಂಗಾಧರ್​

ದರ್ಶನ್​ ಹಲ್ಲೆ ಪ್ರಕರಣ: ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಗಂಗಾಧರ್​ ಹೇಳಿಕೆ ಪಡೆದ ಪೊಲೀಸರು

Follow Us
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ