AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘30 ವರ್ಷಗಳಿಂದ ಜಿಮ್ ಮಾಡಿದ ದೇಹ, ಏಕಾಏಕಿ ವರ್ಕೌಟ್ ಬಿಟ್ಟರೆ..’; ದರ್ಶನ್ ಬಗ್ಗೆ ಜಿಮ್ ರವಿ ಆತಂಕ

ದರ್ಶನ್​ಗೆ ಜಿಮ್​ನಲ್ಲಿ ಕೋಚ್​ಗಳು ಇದ್ದರು. ಸಿನಿಮಾಗೆ ತಕ್ಕಂತೆ ಅವರು ಬಾಡಿನ ಶೇಪ್ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಜೈಲಲ್ಲಿ ಯಾರೂ ಕೋಚ್ ಇಲ್ಲ. ಈ ಬಗ್ಗೆ ಜಿಮ್ ರವಿ ಅವರು ಮತನಾಡಿದ್ದಾರೆ. ಇತ್ತೀಚೆಗೆ ದರ್ಶನ್ ಅವರು ಮನೆಯ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಇದಕ್ಕೆ ಕೋರ್ಟ್ ಅನುಮತಿ ನೀಡಿರಲಿಲ್ಲ.

‘30 ವರ್ಷಗಳಿಂದ ಜಿಮ್ ಮಾಡಿದ ದೇಹ, ಏಕಾಏಕಿ ವರ್ಕೌಟ್ ಬಿಟ್ಟರೆ..’; ದರ್ಶನ್ ಬಗ್ಗೆ ಜಿಮ್ ರವಿ ಆತಂಕ
ದರ್ಶನ್- ಜಿಮ್ ರವಿ
Follow us
Mangala RR
| Updated By: ರಾಜೇಶ್ ದುಗ್ಗುಮನೆ

Updated on:Jul 27, 2024 | 12:22 PM

ನಟ ದರ್ಶನ್ ಅವರು ಅರೆಸ್ಟ್ ಆಗಿ ಜೈಲಿನಲ್ಲಿ ಇದ್ದಾರೆ. ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಇದ್ದವರು. ಹೀಗಾಗಿ ಅವರು ಹೊರಗಿದ್ದಾಗ ಸರಿಯಾದ ರೀತಿಯಲ್ಲಿ ಆಹಾರ ಕ್ರಮ ಅನುಸರಿಸುತ್ತಿದ್ದರು. ಆದರೆ, ಈಗ ಜೈಲಿಗೆ ಸೇರಿರುವುದರಿಂದ ಅಲ್ಲಿ ನೀಡಿದ ಊಟವನ್ನು ಸ್ವೀಕರಿಸಬೇಕಿದೆ. ಅಂದುಕೊಂಡ ವರ್ಕೌಟ್ ಮಾಡೋಕೂ ಸಾಧ್ಯವಾಗುತ್ತಿಲ್ಲ. ದರ್ಶನ್ ಫಿಟ್ನೆಸ್ ಬಗ್ಗೆ, ಒಂದೊಮ್ಮೆ ಜಿಮ್ ಮಾಡದೆ ಇದ್ದರೆ ಆಗುವ ಸಮಸ್ಯೆಗಳ ಬಗ್ಗೆ ನಟ ಹಾಗೂ ಬಾಡಿಬಿಲ್ಡರ್ ಜಿಮ್ ರವಿ ಮಾತನಾಡಿದ್ದಾರೆ.

‘ದರ್ಶನ್ ಸರ್ ಜೊತೆ ಸುಂಟರಗಾಳಿ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಅವರ ಜೊತೆ 25 ದಿನ ಶೂಟಿಂಗ್ ಮಾಡಿದ್ದೇನೆ. ಆಗ ಅವರ ಜೊತೆ ವರ್ಕೌಟ್ ಮಾಡಿದ್ದೇನೆ. ದರ್ಶನ್ ಜೊತೆ ಆಹಾರ ಕ್ರಮ, ವರ್ಕೌಟ್ ಬಗ್ಗೆ ಮಾತಾಡಿದ್ದೇನೆ. ನಾ ಕಂಡಂತೆ ದರ್ಶನ್ ಅವರು ಜಿಮ್ ಬಗ್ಗೆ, ವರ್ಕೌಟ್ ಬಗ್ಗೆ ಅಡಿಕ್ಟ್ ಆಗಿದ್ದರು. ಸಡನ್ ಆಗಿ ಜಿಮ್ ಇಲ್ಲ, ವರ್ಕೌಟ್ ಇಲ್ಲ ಎಂದರೆ ಡಿಪ್ರೆಶನ್​ಗೆ ಹೋಗೋದು ಸಹಜ’ ಎಂದು ಆತಂಕ ಹೊರಹಾಕಿದ್ದಾರೆ ಜಿಮ್ ರವಿ.

‘ಅಷ್ಟು ವರ್ಷದಿಂದ ವರ್ಕೌಟ್ ಮಾಡಿದ ವ್ಯಕ್ತಿ ಸಡನ್ ಆಗಿ ಜಿಮ್ ಬಿಡೋಕೆ ಆಗುವುದಿಲ್ಲ. ಹಾಗಾದಾಗ ದೇಹ ಸಪೋರ್ಟ್ ಮಾಡುವುದಿಲ್ಲ. ಹೀಗಾಗಿ ಸಣ್ಣ-ಪುಟ್ಟ ವರ್ಕೌಟ್ ಮಾಡಲೇಬೇಕು. ಇರೋ ಜಾಗದಲ್ಲೇ ಪ್ರೀವರ್ಕೌಟ್, ಯೋಗ, ಧ್ಯಾನ ಮಾಡಿದ್ರೆ ಏನು ಸಮಸ್ಯೆ ಆಗುವುದಿಲ್ಲ’ ಎಂದಿದ್ದಾರೆ ರವಿ.

ಇದನ್ನೂ ಓದಿ: ವಿಗ್ ಹಾಕಿಸಿದ್ದೇ ದರ್ಶನ್​ಗೆ ಕಂಟಕ: ಕಾಳಿ ಉಪಾಸಕಿ ಚಂದಾ ಪಾಂಡೆ

ದರ್ಶನ್​ಗೆ ಜಿಮ್​ನಲ್ಲಿ ಕೋಚ್​ಗಳು ಇದ್ದರು. ಸಿನಿಮಾಗೆ ತಕ್ಕಂತೆ ಅವರು ಬಾಡಿನ ಶೇಪ್ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಜೈಲಲ್ಲಿ ಯಾರೂ ಕೋಚ್ ಇಲ್ಲ. ಈ ಬಗ್ಗೆ ಮಾತನಾಡಿರೋ ರವಿ, ‘ದರ್ಶನ್ ಕೇವಲ ವರ್ಕೌಟ್ ಮಾಡೊದಿಲ್ಲ. ಅವರಿಗೆ ಅವರೇ ಕೋಚ್. ಈ ಊಟಕ್ಕೆ ಯಾವ ವರ್ಕೌಟ್ ಮಾಡಹುದು ಎಂಬುದು ಅವರಿಗೆ ಚನ್ನಾಗಿ ತಿಳಿದಿರುತ್ತದೆ. ದರ್ಶನ್ ಅವರ ವರ್ಕೌಟ್​ಗೆ ತಕ್ಕಂತೆ ಅವರ ಊಟವೇ ಬೇರೆ ಆಗಿರುತ್ತದೆ. ಬಾಡಿಯನ್ನು ಯಾವ ರೀತಿ ರೆಡಿ ಮಾಡ್ಕೊಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ’ ಎಂದಿದ್ದಾರೆ. ಇತ್ತೀಚೆಗೆ ದರ್ಶನ್ ಅವರು ಮನೆಯ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಇದಕ್ಕೆ ಕೋರ್ಟ್ ಅನುಮತಿ ನೀಡಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:17 pm, Sat, 27 July 24

ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ