ತೂಗುದೀಪ ಶ್ರೀನಿವಾಸ್​, ದರ್ಶನ್​, ದಿನಕರ್​ ಬಗ್ಗೆ ಮೀನಾ ತೂಗುದೀಪ ಅಪರೂಪದ ಮಾತುಗಳು

Meena Thoogudeepa: ಹಲವು ವರ್ಷಗಳ ಹಿಂದಿನ ಒಂದು ವಿಡಿಯೋ ಸಂದರ್ಶನದ ತುಣುಕನ್ನು ನಟ ರಘುರಾಮ್​ ಅವರು ಈಗ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಲವು ಅಪರೂಪದ ವಿಚಾರಗಳ ಬಗ್ಗೆ ಮೀನಾ ಮಾತನಾಡಿದ್ದರು.

ತೂಗುದೀಪ ಶ್ರೀನಿವಾಸ್​, ದರ್ಶನ್​, ದಿನಕರ್​ ಬಗ್ಗೆ ಮೀನಾ ತೂಗುದೀಪ ಅಪರೂಪದ ಮಾತುಗಳು
ದಿನಕರ್ - ಮೀನಾ ತೂಗುದೀಪ - ದರ್ಶನ್
Follow us
| Updated By: ರಾಜೇಶ್ ದುಗ್ಗುಮನೆ

Updated on: May 15, 2021 | 5:51 PM

ತೂಗುದೀಪ ಶ್ರೀನಿವಾಸ್​ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅವರ ನಂತರದಲ್ಲಿ ಪುತ್ರ ದರ್ಶನ್​ ಸಹ ದೊಡ್ಡ ಸ್ಟಾರ್​ ನಟನಾಗಿ ಬೆಳೆದರು. ದರ್ಶನ್​ ಸಹೋದರ ದಿನಕರ್​ ತೂಗುದೀಪ ಕೂಡ ನಿರ್ದೇಶಕನಾಗಿ ಒಳ್ಳೆಯ ಖ್ಯಾತಿ ಗಳಿಸಿದರು. ಈ ಮೂವರ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದವರು ದರ್ಶನ್​ ತಾಯಿ ಮೀನಾ ತೂಗುದೀಪ. ಹಲವು ವರ್ಷಗಳ ಹಿಂದೆಯೇ ಮಾಡಲಾದ ಅವರ ಒಂದು ವಿಡಿಯೋ ಸಂದರ್ಶನದ ತುಣುಕನ್ನು ನಟ ರಘುರಾಮ್​ ಅವರು ಈಗ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಲವು ಅಪರೂಪದ ವಿಚಾರಗಳ ಬಗ್ಗೆ ಮೀನಾ ಮಾತನಾಡಿದ್ದರು.

‘ಶ್ರೀನಿವಾಸ್​ ಅವರ ಪತ್ನಿಯಾಗಿ ನನಗೆ ಹೆಚ್ಚು ಗೌರವ ಸಿಗುತ್ತಿತ್ತು. ನಂತರ ದರ್ಶನ್​ ಹೀರೋ ಆದ. ಅವನು ಹೀರೋ ಆಗಬೇಕು ಎಂಬುದೇ ನನ್ನ ಆಸೆ ಆಗಿತ್ತು. ನಮ್ಮ ಯಜಮಾನ್ರು ತೀರಿಕೊಂಡ ಬಳಿಕ ನಮ್ಮ ಮನೆಯಲ್ಲಿ ಚಿತ್ರರಂಗದ ಮಾತೇ ಇರಲಿಲ್ಲ. ಚಿತ್ರರಂಗದ ಅನ್ನವನ್ನೇ ತುಂಬು ಬೆಳೆದವಳು ನಾನು. ತಂದೆಯ ಹೆಸರನ್ನು ಮಗ ಉಳಿಸಬೇಕು. ಶ್ರೀನಿವಾಸ ತೂಗುದೀಪ ಅವರ ಮಗ ಎನ್ನುವ ಹೆಸರು ಚಿತ್ರರಂಗದಲ್ಲಿ ಬರಲೇಬೇಕು ಎಂಬುದು ನನ್ನ ಆಸೆ ಆಗಿತ್ತು. ಅದಕ್ಕೋಸ್ಕರವೇ ನಾನು ಪಣತೊಟ್ಟಿದ್ದೆ’ ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ ಮೀನಾ.

‘ಶ್ರೀನಿವಾಸ್​ ಅವರು ಇದ್ದಾಗಲೇ ದರ್ಶನ್​ ನೀನಾಸಂಗೆ ಹೋಗಿದ್ದ. ಒಬ್ಬ ತಾಯಿಯಾಗಿ ನಾನು ಅವನಿಗಾಗಿ ಮಾಡಬಹುದಾದ ಎಲ್ಲ ಕರ್ತವ್ಯ ಮಾಡಿದ್ದೇನೆ. ನಂತರ ದಿನಕರ್​ ಕೂಡ ಅದೇ ರೀತಿ ಹೆಸರು ಮಾಡಬೇಕು ಅಂತ ಕನಸು ಕಂಡೆ. ಚಿಕ್ಕ ವಯಸ್ಸಿನಿಂದಲೇ ಅವನಿಗೆ ಕಥೆ ಬರೆಯುವ ಆಸಕ್ತಿ ಇತ್ತು. ನಾನು ಗಮನ ಕೊಟ್ಟಿರಲಿಲ್ಲ. ಸರ್ಕಾರಿ ಕೆಲಸ ಸಿಗಲಿ ಎಂದು ಬಯಸಿದ್ದೆ. ಆದರೆ ಅವನು ಜೊತೆ ಜೊತೆಯಲಿ ಸಿನಿಮಾ ಮಾಡಿ ಯಶಸ್ವಿಯಾದ. ನಾನು ನಿರ್ಮಾಪಕಿ ಆದೆ. ತೂಗುದೀಪ ಪ್ರೊಡಕ್ಷನ್​ ಮೂಲಕ ಅವನು ತಂದೆಯ ಹೆಸರನ್ನು ಚಿರಾಯುವಾಗಿ ಉಳಿಸಿದ್ದಾನೆ’ ಎಂದು ಮಕ್ಕಳ ಬಗ್ಗೆ ಮೀನಾ ಹೆಮ್ಮೆಯಿಂದ ಮಾತನಾಡಿದ್ದರು.

ತೂಗುದೀಪ ಶ್ರೀನಿವಾಸ್​ ಅವರ 2 ಕಿಡ್ನಿ ವೈಫಲ್ಯವಾದಾಗ ಮೀನಾ ಅವರು ಒಂದು ಕಿಡ್ನಿ ನೀಡಿದ್ದರು. ಆ ಘಟನೆಯ ಬಗ್ಗೆಯೂ ಮೀನಾ ಆ ಸಂದರ್ಶನದಲ್ಲಿ ಮಾತನಾಡಿದ್ದರು. ‘ಅದು ನನಗೆ ಈಗ ಪ್ರತಿ ದಿನ ನೆನಪಾಗುತ್ತದೆ. ಕಿಡ್ನಿ ಕೊಟ್ಟ ಮೇಲೆ ಒಂದು ವರ್ಷ ಅವರು ನಮ್ಮ ಜೊತೆ ಚೆನ್ನಾಗಿ ಇದ್ದರು. ನಾನು ಕಿಡ್ನಿ ಕೊಡುವಾಗ ನಮ್ಮ ಮೂರು ಮಕ್ಕಳಿಗೆ ತುಂಬ ಬೇಜಾರಾಗಿತ್ತಂತೆ. ಕಿಡ್ನ ಕೊಟ್ಟಮೇಲೆ ನನಗೆ ಪ್ರಜ್ಞೆ ಬಂದಿದ್ದೇ ಎರಡು ದಿನದ ಮೇಲೆ. ನಾವು ಒಂದೇ ಆಸ್ಪತ್ರೆಯಲ್ಲಿ ಇದ್ದರೂ ಕೂಡ ಅವರು ನನಗೆ ಒಂದು ಲೆಟರ್​ ಬರೆದಿದ್ದರು. ನಂತರ ಚಿತ್ರರಂಗದ ಎಲ್ಲರಿಗೂ ನನ್ನ ಬಗ್ಗೆ ಹೇಳುತ್ತಿದ್ದರು. ನನಗೆ ಪುನರ್​ಜನ್ಮ ಕೊಟ್ಟ ದೇವತೆ ಎಂದು ಹೇಳುತ್ತಿದ್ದರು’ ಎಂಬುದು ಪತಿಯ ಬಗ್ಗೆ ಮೀನಾ ಅವರ ಭಾವುಕ ಮಾತುಗಳು.

ಇದನ್ನೂ ಓದಿ:

ಅಂದು ಅಣ್ಣಾವ್ರ ಜತೆ ತೂಗುದೀಪ ಶ್ರೀನಿವಾಸ್​; ಇಂದು ಅಪ್ಪು ಜತೆ ದಿನಕರ್​ ತೂಗುದೀಪ! ಇಲ್ಲಿದೆ ಗುಡ್​ ನ್ಯೂಸ್​

‘ನರಮನ್ಸ ನರಮನ್ಸ ಬದುಕೋದು ಹೀಗಲ್ಲ’; ಕೊವಿಡ್​ ದುಸ್ಥಿತಿಯಲ್ಲಿ ವೈರಲ್​ ಆಗುತ್ತಿರುವ ದರ್ಶನ್​ ಹಾಡಿನ ವಿಶೇಷ ಏನು?

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ