AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ಗೆ ಹಸು ಸಾಕುವ ಹವ್ಯಾಸ ಬಂದಿದ್ದು ಹೇಗೆ? ಎಲ್ಲವನ್ನೂ ಹೇಳಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್

ದರ್ಶನ್ ಅವರು ಹತ್ತನೇ ತರಗತಿ ಮುಗಿದ ಬಳಿಕ ಡಿಪ್ಲೋಮಾ ಸೇರಿಕೊಂಡರು. ಮನೆಯವರ ಒತ್ತಾಯದಿಂದ ಅವರು ಇದನ್ನು ಓದೋಕೆ ಹೋಗಿದ್ದರು. ಎರಡು ತಿಂಗಳು ಕಾಲೇಜಿಗೆ ಹೋದರು. ಬಳಿಕ ಅವರಿಗೆ ಓದೋಕೆ ಆಗಲೇ ಇಲ್ಲ. ಹೀಗಾಗಿ, ನಟನೆಯನ್ನು ಅವರು ಆಯ್ಕೆ ಮಾಡಿಕೊಂಡರು.

ದರ್ಶನ್​ಗೆ ಹಸು ಸಾಕುವ ಹವ್ಯಾಸ ಬಂದಿದ್ದು ಹೇಗೆ? ಎಲ್ಲವನ್ನೂ ಹೇಳಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್
ದರ್ಶನ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Feb 16, 2024 | 7:12 AM

Share

ನಟ ದರ್ಶನ್ (Darshan) ಅವರಿಗೆ ಪ್ರಾಣಿಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಅವರು ಪ್ರಾಣಿಗಳ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಾರೆ. ಮೈಸೂರಿನಲ್ಲಿ ಇರುವ ಫಾರ್ಮ್​​ಹೌಸ್​ನಲ್ಲಿ ದರ್ಶನ್ ಹಸುಗಳನ್ನು ಸಾಕಿದ್ದಾರೆ. ಅವುಗಳ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಾರೆ. ದರ್ಶನ್ ಅವರಿಗೆ ಪ್ರಾಣಿಗಳ ಬಗ್ಗೆ ಪ್ರಿತಿ ಇರೋದು ನಿನ್ನೆ ಮೊನ್ನೆಯಿಂದ ಅಲ್ಲ. ಚಿತ್ರರಂಗಕ್ಕೆ ಕಾಲಿಡುವುದಕ್ಕಿಂತ ಮೊದಲೇ ಅವರು ಹಸುಗಳನ್ನು ಸಾಕಿದ್ದರು. 11 ವರ್ಷಗಳ ಹಿಂದೆ ಜೀ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು.

ಹತ್ತನೇ ತರಗತಿ ಮುಗಿದ ಬಳಿಕ ದರ್ಶನ್ ಅವರು ಡಿಪ್ಲೋಮಾ ಸೇರಿದರು. ಅವರು ಇದನ್ನು ಓದೋಕೆ ಹೋಗಿದ್ದು ಮನೆಯವರ ಒತ್ತಾಸೆಯಿಂದ. ಅಲ್ಲಿ ಆರು ಸಬ್ಜೆಕ್ಟ್ ಇತ್ತು. ಎರಡು ತಿಂಗಳು ಕಾಲೇಜಿಗೆ ಹೋದರು. ಆ ಬಳಿಕ ದರ್ಶನ್​​ಗೆ ಓದೋಕೆ ಆಗಲೇ ಇಲ್ಲ. ಹೀಗಾಗಿ, ನಟನೆಯನ್ನು ಅವರು ಆಯ್ಕೆ ಮಾಡಿಕೊಂಡರು. ತಂದೆಗೆ ಇದು ಇಷ್ಟ ಇರಲಿಲ್ಲ. ಆದರೆ, ತಾಯಿ ದರ್ಶನ್​ನ ಬೆಂಬಲಿಸಿದರು. ನಂತರ ನೀನಾಸಂಗೆ ಸೇರಿದರು. ಅಲ್ಲಿ ನಟನೆ ಕಲಿತರು. ಎಲ್ಲೇ ಹೋದರೂ ಬದುಕುತ್ತೇನೆ ಎನ್ನುವ ಕಾನ್ಫಿಡೆನ್ಸ್ ಕಲಿಸಿದ್ದು ನೀನಾಸಂ ಎಂದು ದರ್ಶನ್ ಹೇಳಿಕೊಂಡಿದ್ದರು.

‘ಬೆಳಿಗ್ಗೆ ಥಿಯರಿ ಕ್ಲಾಸ್ ಇರುತ್ತಿತ್ತು. ಮಧ್ಯಾಹ್ನ ಪ್ರ್ಯಾಕ್ಟಿಕಲ್ ಇರುತ್ತಿತ್ತು. ನೀನಾಸಂ ಮುಗಿದ ಬಳಿಕ ಚಾನ್ಸ್​​ಗಾಗಿ ಪ್ರಯತ್ನಿಸಿದೆ. ಆದರೆ ಎಲ್ಲಿಯೂ ವರ್ಕೌಟ್ ಆಗಲಿಲ್ಲ. ಮನೆಯಲ್ಲೇ ಇದ್ದೆ. ಆಗ ರ‍್ಯಾಂಪ್​ ಶೋ ಟ್ರೆಂಡ್ ಶುರುವಾಯಿತು. ಮೈಸೂರಿಗೆ ಹೋಗಿ ಅಲ್ಲಿ ರ‍್ಯಾಂಪ್ ವಾಕ್ ಮಾಡಿದೆ. ಅದರಿಂದ ಬಂದ ಹಣದಲ್ಲಿ ಹಸು ಸಾಕೋಣ ಎಂದು ಹಸು ತೆಗೆದುಕೊಂಡೆವು. ಒಂದು ಹಸು ಸಾಕಿದೆ. ನಂತರ ಅದು ಮೂರಾಯ್ತು. ಒಟ್ಟೂ ಎಂಟು ಹಸು ಸಾಕಿದ್ದೆ’ ಎಂದಿದ್ದರು ದರ್ಶನ್. ವಿಶೇಷ ಎಂದರೆ ಅವರೇ ಹಾಲು ಕರೆಯುತ್ತಿದ್ದರು.

ದರ್ಶನ್ ಸಂದರ್ಶನ

‘ಸೈಕಲ್​ಗೆ ಕ್ಯಾನ್ ಹಾಕಿ ಹಾಲು ಕೊಡಲು ಮನೆ ಮನೆಗೆ ಹೋಗುತ್ತಿದ್ದೆ. ಎರಡು ವರ್ಷ ಅದರಿಂದಲೇ ಜೀವನ ಸಾಗಿತ್ತು. ಬೆಳಿಗ್ಗೆ ಜಿಮ್ ಹೋಗುತ್ತಿದ್ದೆ. ಆ ಬಳಿಕ ಹಾಲು ಕರೆದು ಮನೆಗೆ ಹಾಕಿ ಬರುತ್ತಿದ್ದೆ. ನಂತರ ಹಾಯಾಗಿ ಟಿವಿ ನೋಡುತ್ತಿದ್ದೆ. ಮಧ್ಯಾಹ್ನ ಮತ್ತೆ ಹಸುವಿನ ಕೆಲಸ ಶುರುವಾಗುತ್ತಿತ್ತು. ಎಲ್ಲಾ ಮುಗಿಸಿ ಮನೋಜ್ ಎಂಬ ಫ್ರೆಂಡ್ ಮನೆಗೆ ಹೋಗುತ್ತಿದ್ದೆ’ ಎಂದಿದ್ದರು ದರ್ಶನ್.

ಇದನ್ನೂ ಓದಿ: ಇದು ಫೋಟೋ ತೆಗೆದರೆ ಕೈ ಮುರಿಯೋ ‘ಡೆವಿಲ್’; ಹೊಸ ಅವತಾರದಲ್ಲಿ ಬಂದ ದರ್ಶನ್

‘ಮೈಸೂರು ಜೀವನಕ್ಕೆ ಎಷ್ಟು ಬೇಕೋ ಅಷ್ಟು ಹಣ ಬರುತ್ತಿತ್ತು. ಮನೆಗೆ ಚಿನ್ನಪ್ಪಣ್ಣ ಬಂದಿದ್ದರು. ಅವರು ನಟನೆ ಶುರು ಮಾಡಿಸುವಂತೆ ಅಮ್ಮನಿಗೆ ಕಿವಿಮಾತು ಹೇಳಿದರು. ನಾನು ಬೆಂಗಳೂರಿಗೆ ಹೋಗಿ ಬರೋವರೆಗೆ ಹಸುಗಳನ್ನು ಮಾರಾಟ ಮಾಡಲಾಗಿತ್ತು. ಅಮ್ಮ ನಟನೆ ನೋಡು ಎಂದು ಹೇಳಿದರು. ಹಾಲು ಹಾಕಿದ್ದರಿಂದ ನಾಲ್ಕು ವರ್ಷ ಜೀವನ ನಡೆದಿದೆ. ಹೀಗಾಗಿ ಈಗಲೂ ಹಸು ಸಾಕಿದ್ದೇನೆ’ ಎಂದು ಹೇಳಿದ್ದರು ದರ್ಶನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Fri, 16 February 24

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ