AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಜಾಹೀರಾತಿನಲ್ಲಿ ನಟಿಸೋಕೆ ಜಾನಿ ಸಿನ್ಸ್ ಮನ ಒಲಿಸಿದ್ದು ಈ ಸ್ಟಾರ್ ನಟ  

ರಣವೀರ್ ಸಿಂಗ್ ಅವರಿಗೆ ಜಾಹೀರಾತಿನ ಬಗ್ಗೆ ಕೇಳಿ ಖುಷಿ ಆಯಿತು. ಆದರೆ ಜಾನಿ ಸಿನ್ಸ್ ಜೊತೆ ಮಾತನಾಡೋದು ಯಾರು ಎನ್ನುವ ಪ್ರಶ್ನೆ ಮೂಡಿದಾಗ ರಣವೀರ್ ಸಿಂಗ್ ಅವರೇ ಮುಂದಾಳತ್ವ ತೆಗೆದುಕೊಂಡರು. ತಾವೇ ಅವರನ್ನು ಕರೆತರುವುದಾಗಿ ಹೇಳಿದರು. ಅಂತೆಯೇ ನಡೆದುಕೊಂಡರು.

ಭಾರತದ ಜಾಹೀರಾತಿನಲ್ಲಿ ನಟಿಸೋಕೆ ಜಾನಿ ಸಿನ್ಸ್ ಮನ ಒಲಿಸಿದ್ದು ಈ ಸ್ಟಾರ್ ನಟ  
ರಣವೀರ್ ಸಿಂಗ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 16, 2024 | 8:58 AM

Share

ರಣವೀರ್ ಸಿಂಗ್ (Ranveer Singh) ಹಾಗೂ ಜಾನಿ ಸಿನ್ಸ್ ಇತ್ತೀಚೆಗೆ ಜಾಹೀರಾತಿನಲ್ಲಿ ನಟಿಸಿದ್ದರು. ಲೈಂಗಿಕ ಶಕ್ತಿ ಹೆಚ್ಚಿಸುವ ಟ್ಯಾಬ್ಲೆಟ್ ಒಂದರ ಜಾಹೀರಾತು ಇದಾಗಿತ್ತು. ಇದನ್ನು ಭಾರತದ ಧಾರಾವಾಹಿಯ ಶೈಲಿಯಲ್ಲಿ ಸಿದ್ಧಪಡಿಸಲಾಗಿತ್ತು. ಜಾನಿ ಸಿನ್ಸ್​​ಗೂ ಭಾರತಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಆದಾಗ್ಯೂ ಅವರು ಹಿಂದಿ ಜಾಹೀರಾತಿನಲ್ಲಿ ನಟಿಸಿದ್ದು ಹೇಗೆ? ಅವರನ್ನು ಒಪ್ಪಿಸಿದ್ದು ಯಾರು ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆಲ್ಲ ಕಾರಣ ಆಗಿದ್ದು ರಣವೀರ್ ಸಿಂಗ್. ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ರಣವೀರ್ ಸಿಂಗ್ ಅವರು ಸದಾ ಜೋಶ್​ನಲ್ಲಿ ಇರುತ್ತಾರೆ. ಅವರು ಎಲ್ಲಾ ವಿಚಾರಗಳಲ್ಲೂ ಸಾಕಷ್ಟು ಉತ್ಸಾಹ ತೋರಿಸುತ್ತಾರೆ. ಈ ರೀತಿ ಜಾಹೀರಾತಿನಲ್ಲಿ ನಟಿಸಬೇಕು ಎಂದಾಗ ಅವರಿಗೆ ಸಖತ್ ಖುಷಿ ಆಯಿತು. ಆದರೆ, ಜಾನಿ ಸಿನ್ಸ್ ಜೊತೆ ಮಾತನಾಡೋದು ಯಾರು? ಅವರನ್ನು ಭಾರತಕ್ಕೆ ಕರೆತರೋದು ಯಾರು ಎನ್ನುವ ಪ್ರಶ್ನೆ ಮೂಡಿದಾಗ ರಣವೀರ್ ಸಿಂಗ್ ಅವರೇ ಮುಂದಾಳತ್ವ ತೆಗೆದುಕೊಂಡರು. ತಾವೇ ಅವರನ್ನು ಕರೆತರುವುದಾಗಿ ಹೇಳಿದರು. ಅಂತೆಯೇ ಮಾಡಿದರು.

‘ಜಾನಿ ಸಿನ್ಸ್ ಅವರು ಈ ಜಾಹೀರಾತಿನಲ್ಲಿ ಇರಲಿದ್ದಾರೆ ಎನ್ನುವ ವಿಚಾರ ಕೇಳಿದಾಗ ರಣವೀರ್ ಸಿಂಗ್ ಸಖತ್ ಖುಷಿಪಟ್ಟರು. ಅವರನ್ನು ಕಾಂಟ್ಯಾಕ್ಟ್ ಮಾಡೋದು ಹೇಗೆ? ಅವರನ್ನು ಕರೆತರೋದು ಹೇಗೆ ಎನ್ನುವ ಚಿಂತೆಯಲ್ಲಿ ತಂಡ ಇತ್ತು. ಆಗ ರಣವೀರ್ ಸಿಂಗ್ ಯಾರೂ ಊಹಿಸದ ರೀತಿ ನಡೆದುಕೊಂಡರು. ರಣವೀರ್ ತಮ್ಮ ತಂಡಕ್ಕೆ ಜಾನಿ ಸಿನ್ಸ್​ಗೆ ಇನ್​ಸ್ಟಾಗ್ರಾಮ್​ನಲ್ಲಿ ಮೆಸೇಜ್ ಮಾಡುವಂತೆ ಹೇಳಿದರು. ಒಂದೇ ವಾರದಲ್ಲಿ ಜಾನಿ ಸಿನ್ಸ್ ಕಾಂಟ್ರ್ಯಾಕ್ಟ್​ಗೆ ಸಹಿ ಹಾಕಾಗಿತ್ತು’ ಎಂದು ಮೂಲಗಳು ಹೇಳಿರುವುದಾಗಿ ಬಾಲಿವುಡ್ ಹಂಗಾಮ ವರದಿ ಮಾಡಿದೆ.

ರಣವೀರ್ ಸಿಂಗ್ ಹಾಗೂ ಜಾನಿ ಸಿನ್ಸ್​ ಮೊದಲ ಬಾರಿಗೆ ಒಂದಾಗಿದ್ದಾರೆ. ರಣವೀರ್ ಸಿಂಗ್ ಅವರು ಐಡಿಯಾನ ಜಾನಿ ಸಿನ್ಸ್​ ಬಳಿ ಹೇಳಿಕೊಂಡರು. ತಕ್ಷಣಕ್ಕೆ ಅವರು ಒಪ್ಪಿಕೊಂಡರು. ಆ ಬಳಿಕ ಅವರು ಜಾಹೀರಾತಿಗೆ ಬಂದರು.

ಇದನ್ನೂ ಓದಿ: ‘ಕಿರುತೆರೆಗೆ ಮಾಡಿದ ಅವಮಾನ’; ಜಾನಿ ಸಿನ್ಸ್ ಹಾಗೂ ರಣವೀರ್ ಜಾಹೀರಾತಿಗೆ ಬಹಿಷ್ಕಾರದ ಭೀತಿ

ಜಾನಿ ಸಿನ್ಸ್ ಅವರು ಈ ಜಾಹೀರಾತಿನ ಶೂಟಿಂಗ್​ಗಾಗಿ ಭಾರತಕ್ಕೆ ಬಂದಿದ್ದರು. ಎರಡು ದಿನಗಳ ಕಾಲ ಅವರು ಭಾರತದಲ್ಲಿ ಶೂಟ್ ಮಾಡಿದ್ದಾರೆ. ಆ ಬಳಿಕ ಅವರು ಮರಳಿ ತಮ್ಮ ದೇಶಕ್ಕೆ ತೆರಳಿದ್ದಾರೆ. ಈ ಅಡ್ವಟೈಸ್​​ಮೆಂಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗುತ್ತಿದೆ.

ಜಾಹೀರಾತಿನಲ್ಲಿ ಏನಿದೆ?

ಪತಿ ಪತ್ನಿ ಮಧ್ಯೆ ಲೈಂಗಿಕ ಜೀವನ ಉತ್ತಮವಾಗಿರುವುದಿಲ್ಲ. ಈ ಕಾರಣಕ್ಕೆ ಪತ್ನಿ ಮನೆಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಒಂದು ಟ್ಯಾಬ್ಲೆಟ್ ತಿಂದ ಬಳಿಕ ಪತಿಗೆ ಲೈಂಗಿಕವಾಗಿ ಶಕ್ತಿ ಬರುತ್ತದೆ. ಇದನ್ನು ಧಾರಾವಾಹಿ ಶೈಲಿಯಲ್ಲಿ ತೋರಿಸಲಾಗಿತ್ತು. ಅನೇಕ ಕಿರುತೆರೆ ಕಲಾವಿದರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ