AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiccha Sudeep: ಸುದೀಪ್​ ಜತೆ ಪ್ರೇಮ್ಸ್​ ಮತ್ತೊಂದು ಸಿನಿಮಾ; ಆದರೆ, ಇದು ಸತ್ಯವಲ್ಲ!

Kiccha Sudeep: ಟ್ವೀಟ್​ ನೋಡಿದ ಅಭಿಮಾನಿಗಳು ಖುಷಿಯಾಗಿದ್ದರು. ಪ್ರೇಮ್​-ಸುದೀಪ್​ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆಯಲ್ಲ ಎಂದು ಸಂತಸಗೊಂಡಿದ್ದರು.

Kiccha Sudeep: ಸುದೀಪ್​ ಜತೆ ಪ್ರೇಮ್ಸ್​ ಮತ್ತೊಂದು ಸಿನಿಮಾ; ಆದರೆ, ಇದು ಸತ್ಯವಲ್ಲ!
ಪ್ರೇಮ್​ ಹಾಗೂ ಸುದೀಪ್​
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on: Feb 12, 2021 | 3:37 PM

Share

ನಟ ಕಿಚ್ಚ ಸುದೀಪ್​ ಹಾಗೂ ನಿರ್ದೇಶಕ ಪ್ರೇಮ್​ ವಿಲನ್​ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್​ ಜತೆ ಶಿವರಾಜ್​ಕುಮಾರ್​ ಕೂಡ ಬಣ್ಣ ಹಚ್ಚಿದ್ದರು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ನಂತರ ನೆಲಕಚ್ಚಿತ್ತು. ಈ ಸಿನಿಮಾ ತೆರೆಕಂಡು ಮೂರು ವರ್ಷಗಳೇ ಕಳೆದಿವೆ. ಈಗ ಅಚ್ಚರಿ ಎಂಬಂತೆ ಈಗ ಪ್ರೇಮ್​​ ಸುದೀಪ್​ ಜತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ! ಆದರೆ, ಈ ವಿಚಾರಕ್ಕೆ ಒಂದು ಟ್ವಿಸ್ಟ್​ ಇದೆ.

ಇಂದು ಮುಂಜಾನೆ 11 ಗಂಟೆಗೆ ಪ್ರೇಮ್​​ ಟ್ವಿಟ್ಟರ್​ ಖಾತೆಯಿಂದ ಟ್ವೀಟ್​ ಒಂದನ್ನು ಮಾಡಲಾಗಿದೆ. ನನ್ನ ಮತ್ತು ಸುದೀಪ್ ಅವರ ಕಾಂಬಿನೇಷನ್ ಅಲ್ಲಿ ಬರುತ್ತಿರುವ #NewAvatarSoon ಚಿತ್ರದ ಬಗ್ಗೆ ಒಂದು ಮುಖ್ಯವಾದ ಸುದ್ದಿ ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ. ಭಾರತದಲ್ಲೇ ಮಾಡದ ಸಿನಿಮಾವನ್ನು ನಾನು ಮಾಡಲು ಹೊರಟಿದ್ದೇನೆ. ದಯವಿಟ್ಟು ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ನಲ್ಲಿ ಹಿಸ್ಟರಿ ರಿಪೀಟ್ಸ್​ ಎನ್ನುವ ಹ್ಯಾಶ್​ಟ್ಯಾಗ್​ ಕೂಡ ಇದೆ.

ಇದನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದರು. ಪ್ರೇಮ್​-ಸುದೀಪ್​ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆಯಲ್ಲ ಎಂದು ಸಂತಸಗೊಂಡಿದ್ದರು. ಯಾವಾಗ ಸಿನಿಮಾ ಸೆಟ್ಟೇರುತ್ತದೆ, ಸಿನಿಮಾ ಕತೆ ಹೇಗಿರಲಿದೆ ಎಂದು ಪ್ರಶ್ನೆ ಮಾಡಿದ್ದರು.

ನಿಜವಾದ ಟ್ವಿಟರ್​ ಖಾತೆ ಹಾಗೂ ನಕಲಿ ಖಾತೆ

ಆದರೆ, ಅಸಲಿ ವಿಚಾರ ಏನೆಂದರೆ ಪ್ರೇಮ್​​ ಹೆಸರಲ್ಲಿ ಮಾಡಿಕೊಂಡಿರುವ ನಕಲಿ ಖಾತೆ ಇದು. ನಿರ್ದೇಶಕ ಪ್ರೇಮ್​ ಅವರ ಟ್ವಿಟ್ಟರ್​ ಖಾತೆಯಲ್ಲಿರುವ ಪ್ರೊಫೈಲ್​ ಪಿಕ್ಚರ್ ಅನ್ನೇ​ ಈ ನಕಲಿ ಖಾತೆಯ ಡಿಪಿಯಲ್ಲೂ ಬಳಸಲಾಗಿದೆ. ಪ್ರೇಮ್​​​ ಖಾತೆಯ ಬಳಕೆದಾರರ ಐಡಿ @directorprems ಎಂದಿದ್ದರೆ, ನಕಲಿ ಖಾತೆಗೆ ಕೊನೆಯಲ್ಲಿ ಒಂದು S​ ಹೆಚ್ಚಾಗಿ ಸೇರಿಸಲಾಗಿದೆ. ಅಂದರೆ, ನಕಲಿ ಖಾತೆಯ ಬಳಕೆದಾರರ ಐಡಿ @directorpremss ಎಂದಿದೆ. ಪ್ರೊಫೈಲ್​ ಒಳಗೆ ಇಣುಕಿದರೆ ಮಾತ್ರ ಅದು ನಕಲಿ ಖಾತೆ ಎಂದು ಗೊತ್ತಾಗುತ್ತದೆ. ಟ್ವೀಟ್​ ಅಷ್ಟನ್ನೇ ನೋಡಿ ಮುಂದುವರಿದರೆ ನೀವು ಮೋಸ ಹೋಗುವುದು ಗ್ಯಾರಂಟಿ.

ಇದನ್ನೂ ಓದಿ: Bigg Boss Kannada 8: ಬಿಗ್​ ಬಾಸ್​ ಮನೆಯಷ್ಟೇ ಅಲ್ಲ; ಸಾರಥಿ ಕಿಚ್ಚ ಚಹರೆಯೂ ಬದಲಾಗಿದೆ! ಏನದು? ಇಲ್ಲಿದೆ ನೋಡಿ…

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ