AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR ಎದುರು ಫೈಟ್​ ನೀಡಲು ಸಜ್ಜಾಗಿದ್ದ ಕನ್ನಡದ ‘ಡಿಎನ್​ಎ’ ಚಿತ್ರಕ್ಕೀಗ ನಿರಾಳ; ಇದರ ಹೈಲೈಟ್ಸ್​​ ಏನು?

‘ಡಿಎನ್​ಎ’ ಚಿತ್ರಕ್ಕೆ ಪ್ರಕಾಶ್​ ರಾಜ್​ ಮೇಹು ನಿರ್ದೇಶನ ಮಾಡಿದ್ದಾರೆ. ರೋಜರ್​ ನಾರಾಯಣ್​, ಎಸ್ತರ್​ ನರೋನಾ, ಯಮುನಾ, ಅಚ್ಯುತ್​ ಕುಮಾರ್​ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

RRR ಎದುರು ಫೈಟ್​ ನೀಡಲು ಸಜ್ಜಾಗಿದ್ದ ಕನ್ನಡದ ‘ಡಿಎನ್​ಎ’ ಚಿತ್ರಕ್ಕೀಗ ನಿರಾಳ; ಇದರ ಹೈಲೈಟ್ಸ್​​ ಏನು?
ಎಸ್ತರ್​ ನರೋನಾ, ರೋಜರ್​ ನಾರಾಯಣ್​
TV9 Web
| Edited By: |

Updated on: Jan 02, 2022 | 8:25 PM

Share

ಕರ್ನಾಟಕದಲ್ಲಿ ಪರಭಾಷೆಯ ದೊಡ್ಡ ಸಿನಿಮಾ ಬಿಡುಗಡೆ ಆಗುತ್ತದೆ ಎಂದಾಗ ಇಲ್ಲಿನ ಸ್ಟಾರ್​ ಕಲಾವಿದರ ಚಿತ್ರಗಳು ಕೂಡ ಚಿತ್ರಮಂದಿರಗಳನ್ನು ಪಡೆಯಲು ಕಷ್ಟ ಪಡಬೇಕಾದ ಪರಿಸ್ಥಿತಿ ಇದೆ. ಆ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದುಂಟು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ‘ಆರ್​ಆರ್​ಆರ್​’ (RRR Movie) ಚಿತ್ರ ಬಿಡುಗಡೆ ಆಗಬೇಕಿತ್ತು. ಅದೇ ದಿನ ಆ ಚಿತ್ರದ ಎದುರು ಫೈಟ್​ ನೀಡಲು ಸಜ್ಜಾಗಿತ್ತು ಕನ್ನಡದ ‘ಡಿಎನ್​ಎ’ ಚಿತ್ರ! ಸದ್ಯಕ್ಕೆ ‘ಆರ್​ಆರ್​ಆರ್​’ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಆದ್ದರಿಂದ ‘ಡಿಎನ್​ಎ’  (DNA Kannada Movie)ಸಿನಿಮಾಗೆ ಹೆಚ್ಚು ಚಿತ್ರಮಂದಿರಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಆ ವಿಚಾರಕ್ಕೆ ಚಿತ್ರತಂಡ ನಿರಾಳವಾಗಿದೆ.

ಈ ಚಿತ್ರಕ್ಕೆ ಪ್ರಕಾಶ್​ ರಾಜ್​ ಮೇಹು ಅವರು ನಿರ್ದೇಶನ ಮಾಡಿದ್ದಾರೆ. ಕಥೆ-ಚಿತ್ರಕಥೆ ಕೂಡ ಅವರದ್ದೇ. ರೋಜರ್​ ನಾರಾಯಣ್​, ಎಸ್ತರ್​ ನರೋನಾ, ಯಮುನಾ, ಅಚ್ಯುತ್​ ಕುಮಾರ್​ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ಆರ್​ಆರ್​ಆರ್ ಸಿನಿಮಾದ ಎದುರು ಬರಲು ನಮಗೆ ಯಾವುದೇ ಭಯ ಇರಲಿಲ್ಲ. ಯಾಕೆಂದರೆ ನಮ್ಮ ಸಿನಿಮಾದ ಆಡಿಯನ್ಸ್​ ಬೇರೆ, ಆರ್​ಆರ್​ಆರ್​ ಚಿತ್ರದ ಆಡಿಯನ್ಸ್​ ಬೇರೆ. ಫ್ಯಾಮಿಲಿ ಪ್ರೇಕ್ಷಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ನಮ್ಮ ಚಿತ್ರವನ್ನು ಖಂಡಿತಾ ಮೆಚ್ಚಿಕೊಳ್ಳುತ್ತಾರೆ’ ಎಂದಿದ್ದಾರೆ ನಿರ್ದೇಶಕ ಪ್ರಕಾಶ್​ ರಾಜ್​ ಮೇಹು. ಈ ಚಿತ್ರಕ್ಕೆ ಮೈಲಾರಿ ಎಂ. ಬಂಡವಾಳ ಹೂಡಿದ್ದಾರೆ.

‘ಜನುಮದ ಜೋಡಿ’ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದವರು ಪ್ರಕಾಶ್ ರಾಜ್​ ಮೇಹು. ಆ ಬಳಿಕ ‘ನಾಗ ಮಂಡಲ’, ‘ತಾಯಿ ಸಾಹೇಬ’, ‘ದೇವೀರಿ’, ‘ಪರಮಾತ್ಮ’ ಮುಂತಾದ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ‘ಡಿಎನ್​ಎ’ ಚಿತ್ರವನ್ನು ಜನರ ಮುಂದಿಡುತ್ತಿದ್ದಾರೆ. ‘ಈಗಾಗಲೇ ನಾವು ಆಯ್ದ ಕೆಲವು ಪ್ರೇಕ್ಷಕರಿಗೆ ಸಿನಿಮಾ ತೋರಿಸಿ, ಅವರಿಂದ ಪ್ರತಿಕ್ರಿಯೆ ಪಡೆದುಕೊಂಡಿದ್ದೇವೆ. ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರುವುದರಿಂದ ಅನೇಕ ಚಿತ್ರಗಳಿಗೆ ಅನುಕೂಲ ಆಗಿದೆ. ಚಿತ್ರಮಂದಿರಗಳನ್ನು ಪಡೆಯುವಲ್ಲಿ ಹಲವು ಸಿನಿಮಾಗಳು ನಿರಾಳವಾಗಿವೆ. ‘ಡಿಎನ್​ಎ’ ಸಿನಿಮಾಗೂ ಹೆಚ್ಚು ಥಿಯೇಟರ್​ ಸಿಗುತ್ತಿದೆ. ಕರ್ನಾಟಕದಾದ್ಯಂತ ಅಂದಾಜು 80 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಪೋಸ್ಟರ್​ಗಳಲ್ಲಿ ‘ಇದು ಹೃದಯವಂತರಿಗೆ ಮಾತ್ರ’ ಎನ್ನುವ ಟ್ಯಾಗ್​ ಲೈನ್​ ಮೂಲಕ ಇದೊಂದು ಭಾವನಾತ್ಮಕ ಸಿನಿಮಾ ಎಂಬುದನ್ನು ನಿರ್ದೇಶಕರು ಒತ್ತಿ ಹೇಳಿದ್ದಾರೆ.

(ಡಿಎನ್​ಎ ಸಿನಿಮಾ ಟ್ರೇಲರ್​)

‘ಡಾ. ರಾಜ್​ಕುಮಾರ್​ ಅವರ ಸಿನಿಮಾಗಳಲ್ಲಿ ಇರುತ್ತಿದ್ದಂತಹ ಗಟ್ಟಿ ವಿಚಾರಗಳು ನಮ್ಮ ಸಿನಿಮಾದಲ್ಲಿ ಇವೆ. ಸ್ಟಾರ್​ ಕಲಾವಿದರನ್ನು ಇಟ್ಟುಕೊಂಡು ನಾನು ಈ ಸಿನಿಮಾ ಮಾಡಿಲ್ಲ. ನಮ್ಮ ಚಿತ್ರಕ್ಕೆ ಕಥೆಯೇ ಸ್ಟಾರ್​’ ಎನ್ನುವ ಪ್ರಕಾಶ್​ ರಾಜ್​ ಮೇಹು ಅವರು ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾದಿದ್ದಾರೆ. ಅನಿತಾ ಭಟ್​ ಕೂಡ ಈ ಸಿನಿಮಾದಲ್ಲೊಂದು ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

‘ಲವ್​ ಯೂ ರಚ್ಚು’ ವಿಮರ್ಶೆ: ಕೌತುಕದ ಕಥೆಯಲ್ಲಿ ಟ್ವಿಸ್ಟ್​ ಓಕೆ; ಪ್ರೇಕ್ಷಕರ ರಂಜನೆಗೆ ಇಷ್ಟೇ ಸಾಕೆ?

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ