RRR ಎದುರು ಫೈಟ್​ ನೀಡಲು ಸಜ್ಜಾಗಿದ್ದ ಕನ್ನಡದ ‘ಡಿಎನ್​ಎ’ ಚಿತ್ರಕ್ಕೀಗ ನಿರಾಳ; ಇದರ ಹೈಲೈಟ್ಸ್​​ ಏನು?

‘ಡಿಎನ್​ಎ’ ಚಿತ್ರಕ್ಕೆ ಪ್ರಕಾಶ್​ ರಾಜ್​ ಮೇಹು ನಿರ್ದೇಶನ ಮಾಡಿದ್ದಾರೆ. ರೋಜರ್​ ನಾರಾಯಣ್​, ಎಸ್ತರ್​ ನರೋನಾ, ಯಮುನಾ, ಅಚ್ಯುತ್​ ಕುಮಾರ್​ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

RRR ಎದುರು ಫೈಟ್​ ನೀಡಲು ಸಜ್ಜಾಗಿದ್ದ ಕನ್ನಡದ ‘ಡಿಎನ್​ಎ’ ಚಿತ್ರಕ್ಕೀಗ ನಿರಾಳ; ಇದರ ಹೈಲೈಟ್ಸ್​​ ಏನು?
ಎಸ್ತರ್​ ನರೋನಾ, ರೋಜರ್​ ನಾರಾಯಣ್​
Follow us
| Updated By: ಮದನ್​ ಕುಮಾರ್​

Updated on: Jan 02, 2022 | 8:25 PM

ಕರ್ನಾಟಕದಲ್ಲಿ ಪರಭಾಷೆಯ ದೊಡ್ಡ ಸಿನಿಮಾ ಬಿಡುಗಡೆ ಆಗುತ್ತದೆ ಎಂದಾಗ ಇಲ್ಲಿನ ಸ್ಟಾರ್​ ಕಲಾವಿದರ ಚಿತ್ರಗಳು ಕೂಡ ಚಿತ್ರಮಂದಿರಗಳನ್ನು ಪಡೆಯಲು ಕಷ್ಟ ಪಡಬೇಕಾದ ಪರಿಸ್ಥಿತಿ ಇದೆ. ಆ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದುಂಟು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ‘ಆರ್​ಆರ್​ಆರ್​’ (RRR Movie) ಚಿತ್ರ ಬಿಡುಗಡೆ ಆಗಬೇಕಿತ್ತು. ಅದೇ ದಿನ ಆ ಚಿತ್ರದ ಎದುರು ಫೈಟ್​ ನೀಡಲು ಸಜ್ಜಾಗಿತ್ತು ಕನ್ನಡದ ‘ಡಿಎನ್​ಎ’ ಚಿತ್ರ! ಸದ್ಯಕ್ಕೆ ‘ಆರ್​ಆರ್​ಆರ್​’ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಆದ್ದರಿಂದ ‘ಡಿಎನ್​ಎ’  (DNA Kannada Movie)ಸಿನಿಮಾಗೆ ಹೆಚ್ಚು ಚಿತ್ರಮಂದಿರಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಆ ವಿಚಾರಕ್ಕೆ ಚಿತ್ರತಂಡ ನಿರಾಳವಾಗಿದೆ.

ಈ ಚಿತ್ರಕ್ಕೆ ಪ್ರಕಾಶ್​ ರಾಜ್​ ಮೇಹು ಅವರು ನಿರ್ದೇಶನ ಮಾಡಿದ್ದಾರೆ. ಕಥೆ-ಚಿತ್ರಕಥೆ ಕೂಡ ಅವರದ್ದೇ. ರೋಜರ್​ ನಾರಾಯಣ್​, ಎಸ್ತರ್​ ನರೋನಾ, ಯಮುನಾ, ಅಚ್ಯುತ್​ ಕುಮಾರ್​ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ಆರ್​ಆರ್​ಆರ್ ಸಿನಿಮಾದ ಎದುರು ಬರಲು ನಮಗೆ ಯಾವುದೇ ಭಯ ಇರಲಿಲ್ಲ. ಯಾಕೆಂದರೆ ನಮ್ಮ ಸಿನಿಮಾದ ಆಡಿಯನ್ಸ್​ ಬೇರೆ, ಆರ್​ಆರ್​ಆರ್​ ಚಿತ್ರದ ಆಡಿಯನ್ಸ್​ ಬೇರೆ. ಫ್ಯಾಮಿಲಿ ಪ್ರೇಕ್ಷಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ನಮ್ಮ ಚಿತ್ರವನ್ನು ಖಂಡಿತಾ ಮೆಚ್ಚಿಕೊಳ್ಳುತ್ತಾರೆ’ ಎಂದಿದ್ದಾರೆ ನಿರ್ದೇಶಕ ಪ್ರಕಾಶ್​ ರಾಜ್​ ಮೇಹು. ಈ ಚಿತ್ರಕ್ಕೆ ಮೈಲಾರಿ ಎಂ. ಬಂಡವಾಳ ಹೂಡಿದ್ದಾರೆ.

‘ಜನುಮದ ಜೋಡಿ’ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದವರು ಪ್ರಕಾಶ್ ರಾಜ್​ ಮೇಹು. ಆ ಬಳಿಕ ‘ನಾಗ ಮಂಡಲ’, ‘ತಾಯಿ ಸಾಹೇಬ’, ‘ದೇವೀರಿ’, ‘ಪರಮಾತ್ಮ’ ಮುಂತಾದ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ‘ಡಿಎನ್​ಎ’ ಚಿತ್ರವನ್ನು ಜನರ ಮುಂದಿಡುತ್ತಿದ್ದಾರೆ. ‘ಈಗಾಗಲೇ ನಾವು ಆಯ್ದ ಕೆಲವು ಪ್ರೇಕ್ಷಕರಿಗೆ ಸಿನಿಮಾ ತೋರಿಸಿ, ಅವರಿಂದ ಪ್ರತಿಕ್ರಿಯೆ ಪಡೆದುಕೊಂಡಿದ್ದೇವೆ. ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರುವುದರಿಂದ ಅನೇಕ ಚಿತ್ರಗಳಿಗೆ ಅನುಕೂಲ ಆಗಿದೆ. ಚಿತ್ರಮಂದಿರಗಳನ್ನು ಪಡೆಯುವಲ್ಲಿ ಹಲವು ಸಿನಿಮಾಗಳು ನಿರಾಳವಾಗಿವೆ. ‘ಡಿಎನ್​ಎ’ ಸಿನಿಮಾಗೂ ಹೆಚ್ಚು ಥಿಯೇಟರ್​ ಸಿಗುತ್ತಿದೆ. ಕರ್ನಾಟಕದಾದ್ಯಂತ ಅಂದಾಜು 80 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಪೋಸ್ಟರ್​ಗಳಲ್ಲಿ ‘ಇದು ಹೃದಯವಂತರಿಗೆ ಮಾತ್ರ’ ಎನ್ನುವ ಟ್ಯಾಗ್​ ಲೈನ್​ ಮೂಲಕ ಇದೊಂದು ಭಾವನಾತ್ಮಕ ಸಿನಿಮಾ ಎಂಬುದನ್ನು ನಿರ್ದೇಶಕರು ಒತ್ತಿ ಹೇಳಿದ್ದಾರೆ.

(ಡಿಎನ್​ಎ ಸಿನಿಮಾ ಟ್ರೇಲರ್​)

‘ಡಾ. ರಾಜ್​ಕುಮಾರ್​ ಅವರ ಸಿನಿಮಾಗಳಲ್ಲಿ ಇರುತ್ತಿದ್ದಂತಹ ಗಟ್ಟಿ ವಿಚಾರಗಳು ನಮ್ಮ ಸಿನಿಮಾದಲ್ಲಿ ಇವೆ. ಸ್ಟಾರ್​ ಕಲಾವಿದರನ್ನು ಇಟ್ಟುಕೊಂಡು ನಾನು ಈ ಸಿನಿಮಾ ಮಾಡಿಲ್ಲ. ನಮ್ಮ ಚಿತ್ರಕ್ಕೆ ಕಥೆಯೇ ಸ್ಟಾರ್​’ ಎನ್ನುವ ಪ್ರಕಾಶ್​ ರಾಜ್​ ಮೇಹು ಅವರು ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾದಿದ್ದಾರೆ. ಅನಿತಾ ಭಟ್​ ಕೂಡ ಈ ಸಿನಿಮಾದಲ್ಲೊಂದು ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

‘ಲವ್​ ಯೂ ರಚ್ಚು’ ವಿಮರ್ಶೆ: ಕೌತುಕದ ಕಥೆಯಲ್ಲಿ ಟ್ವಿಸ್ಟ್​ ಓಕೆ; ಪ್ರೇಕ್ಷಕರ ರಂಜನೆಗೆ ಇಷ್ಟೇ ಸಾಕೆ?

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್