AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಪಕ್ಷ ಕಟ್ತಾರಾ ಸುಮಲತಾ ಅಂಬರೀಷ್?​; ಅಭಿಮಾನಿಗಳಿಂದ ಹೆಚ್ಚಾಯ್ತು ಒತ್ತಾಯ

‘ಅಂಬರೀಷ್​ ಅವರ ದಾರಿಯಲ್ಲಿ ನಾನು ಹೋಗುತ್ತೇನೆ. ಅವರ ಹೆಸರನ್ನು ನಾನು ಕಾಪಾಡಿಕೊಳ್ತೀನಿ. ನಿಮ್ಮ ಈ ಅಭಿಮಾನವೇ ನನಗೆ ಶಕ್ತಿ. ಯಾರೂ ಕೆಟ್ಟ ದಾರಿಯಲ್ಲಿ ಹೋಗಬೇಡಿ’ ಎಂದು ಸುಮಲತಾ ಅಭಿಮಾನಿಗಳಿಗೆ ಕೈ ಮುಗಿದಿದ್ದಾರೆ.

ಪ್ರತ್ಯೇಕ ಪಕ್ಷ ಕಟ್ತಾರಾ ಸುಮಲತಾ ಅಂಬರೀಷ್?​; ಅಭಿಮಾನಿಗಳಿಂದ ಹೆಚ್ಚಾಯ್ತು ಒತ್ತಾಯ
ಸುಮಲತಾ ಅಂಬರೀಷ್​ (ಸಂಗ್ರಹ ಚಿತ್ರ)
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 11, 2021 | 4:12 PM

ಕೆಆರ್​ಎಸ್​ ಡ್ಯಾಂ​ನಲ್ಲಿ ನೀರು ಸೋರುತ್ತಿದ್ದರೆ ಸುಮಲತಾ ಅವರನ್ನು ಅಡ್ಡಲಾಗಿ ಮಲುಗಿಸಬೇಕು ಎಂದು ಎಚ್​​.ಡಿ. ಕುಮಾರಸ್ವಾಮಿ ಅವರು ಹೇಳಿದ್ದರು. ಈ ವಿಚಾರ ಸುಮಲತಾ ಅಂಬರೀಷ್ ಹಾಗೂ ಅವರ ​ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಹೀಗಾಗಿ, ಅಂಬರೀಷ್​ ಸಮಾಧಿ ಇರುವ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇವರನ್ನು ಇಂದು (ಜುಲೈ 11) ಸುಮಲತಾ ಭೇಟಿ ಆಗಿದ್ದಾರೆ. ಈ ವೇಳೆ, ಪ್ರತ್ಯೇಕ ಪಕ್ಷ ಕಟ್ಟುವಂತೆ ಸುಮಲತಾ ಬಳಿ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.

‘ನಿಮ್ಮ ಜತೆ ನಾವಿದ್ದೇವೆ, ನಿಮಗೋಸ್ಕರ ಜೀವಕೊಡಲು ಸಿದ್ಧರಿದ್ದೇವೆ. ಯಾವುದಕ್ಕೂ ಹೆದರದೆ ನೀವು ಮುನ್ನುಗ್ಗಿ, ನಾವಿರುತ್ತೇವೆ. ಯಾರೊಬ್ಬರ ಟೀಕೆ, ಆರೋಪಗಳಿಗೆ ನೀವು ಹೆದರಬೇಡಿ. ನೀವು ಯಾವಾಗಲೂ ಮಂಡ್ಯ ಕ್ಷೇತ್ರದ ಸಂಸದರಾಗಿರಬೇಕು. ಈಗ ನೀವು‘ಸ್ವಾಭಿಮಾನಿ ಪಕ್ಷ’ ಘೋಷಿಸಿ. ಮಂಡ್ಯದ ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಿಲ್ಲಿಸಿ. ನಾವು ಅವರನ್ನು ಗೆಲ್ಲಿಸುತ್ತೇವೆ’ ಎಂದು ಎಂದು ಅಭಿಮಾನಿಗಳು ಸುಮಲತಾ ಅವರನ್ನು ಒತ್ತಾಯಿಸಿದ್ದಾರೆ. ಪ್ರತಿಭಟನೆ ಕುರಿತಂತೆ ಮಾತನಾಡಿರುವ ಸುಮಲತಾ, ‘ಪ್ರತಿಭಟನೆ ಮಾಡುವವರ ಪರ ನಾನು ನಿಂತಿಲ್ಲ. ಅಂಬರೀಷ್​ ಅವರ ಅಭಿಮಾನಿಗಳಿಗೆ ನೋವಾಗಿದೆ. ನನಗೆ ದಿನನಿತ್ಯ ನೂರಾರು ಫೋನ್​ಗಳು ಬರುತ್ತಿವೆ. ಅಕ್ರಮ ಏನಾಗ್ತಿದೆ ಅದನ್ನ ನಿಯಂತ್ರಿಸಿ ಎಂದು ನಾನು ಹೇಳುತ್ತಿದ್ದೇನೆ. ಈಗ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದ್ದಾರೆ. ಅಕ್ರಮದ ಮಾಹಿತಿ ನಾನು ಕೇಳಿದ್ದೇನೆ, ಈವರೆಗೆ ಕೊಟ್ಟಿಲ್ಲ. ರೈತರ ಪರವಾಗಿ ನಾನು ನಿಲ್ತೀನಿ. ಅವರ ಪರ ಹೋರಾಟ ಮಾಡ್ತೀನಿ’ ಎಂದಿದ್ದಾರೆ ಸುಮಲತಾ.

‘ಅಂಬರೀಷ್​ ಅವರ ದಾರಿಯಲ್ಲಿ ನಾನು ಹೋಗುತ್ತೇನೆ. ಅವರ ಹೆಸರನ್ನು ನಾನು ಕಾಪಾಡಿಕೊಳ್ತೀನಿ. ನಿಮ್ಮ ಈ ಅಭಿಮಾನವೇ ನನಗೆ ಶಕ್ತಿ. ಯಾರೂ ಕೆಟ್ಟ ದಾರಿಯಲ್ಲಿ ಹೋಗಬೇಡಿ’ ಎಂದು ಸುಮಲತಾ ಅಭಿಮಾನಿಗಳಿಗೆ ಕೈ ಮುಗಿದಿದ್ದಾರೆ.

ಕೆಆರ್​ಎಸ್​ನಲ್ಲಿ ನೀರು ಸೋರುತ್ತಿದೆ ಎಂದು ಸುಮಲತಾ ಹೇಳಿದ್ದರು. ಈ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ, ‘ಮಂಡ್ಯದಲ್ಲಿ ಇಂತಹ ಸಂಸದರು ಬಂದಿಲ್ಲ, ಬರೋದಿಲ್ಲ. ಕೆಆರ್​ಎಸ್​ ಇವರೇ ರಕ್ಷಿಸುತ್ತಿದ್ದಾರೆ ಅನ್ನೋ ರೀತಿ ಹೇಳಿದ್ದಾರೆ. ಕೆಆರ್​ಎಸ್​ ಸೋರುತ್ತಿದ್ದರೆ ಅಲ್ಲಿ ಸುಮಲತಾರನ್ನ ಮಲಗಿಸಬೇಕು’ ಎಂದು ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಏನಮ್ಮಾ ಮಂಡ್ಯ ಗಲಾಟೆ ಎಂದ ಸಿದ್ದರಾಮಯ್ಯಗೆ ಹೀಗೆ ನಡೀತಾ ಇದೆ ಎಂದ ಸುಮಲತಾ; ನಡುವೆ ಹಾಸ್ಯ ಚಟಾಕಿ ಹಾರಿಸಿದ ಈಶ್ವರಪ್ಪ

Published On - 3:08 pm, Sun, 11 July 21

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್