‘ಅಜಯ್​ ರಾವ್​ ಅಲ್ಲೇ ಇದ್ರೂ ಸಹಾಯಕ್ಕೆ ಬರಲಿಲ್ಲ’: ಗಾಯಾಳು ರಂಜಿತ್​ ಆರೋಪ; ಅಜಯ್​ ಪ್ರತಿಕ್ರಿಯೆ ಏನು?

| Updated By: ಮದನ್​ ಕುಮಾರ್​

Updated on: Aug 10, 2021 | 12:39 PM

‘ಕ್ರೇನ್​ ಆಪರೇಟರ್​ ತಪ್ಪಿನಿಂದಾಗಿ ಈ ರೀತಿ ಆಗಿದೆ. ಘಟನೆ ನಡೆದಾಗ ಹತ್ತಿರದಲ್ಲೇ ಅಜಯ್​ ರಾವ್​ ಟೆಂಟ್​ನೊಳಗೆ ಕುಳಿತಿದ್ದರು. ಆದರೂ ಸಹಾಯಕ್ಕೆ ಬರಲಿಲ್ಲ’ ಎಂದು ಗಾಯಾಳು ರಂಜಿತ್​ ಹೇಳಿದ್ದಾರೆ.

‘ಅಜಯ್​ ರಾವ್​ ಅಲ್ಲೇ ಇದ್ರೂ ಸಹಾಯಕ್ಕೆ ಬರಲಿಲ್ಲ’: ಗಾಯಾಳು ರಂಜಿತ್​ ಆರೋಪ; ಅಜಯ್​ ಪ್ರತಿಕ್ರಿಯೆ ಏನು?
ಅಜಯ್​ ರಾವ್​
Follow us on

‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಚಿತ್ರೀಕರಣದ ವೇಳೆ ಫೈಟರ್​ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಸೋಮವಾರ (ಆ.9) ಸಾಹಸ ಸನ್ನಿವೇಶದ ಶೂಟಿಂಗ್​ ಸಂದರ್ಭದಲ್ಲಿ ಫೈಟರ್​ ವಿವೇಕ್​ (Fighter Vivek) ಅವರು ವಿದ್ಯುತ್​ ತಗುಲಿ ಮೃತಪಟ್ಟರು. ಮತ್ತೋರ್ವ ಫೈಟರ್​ ರಂಜಿತ್​ ಅವರಿಗೂ ವಿದ್ಯುತ್​ ಶಾಕ್​ ತಗುಲಿದ್ದು, ಅವರಿಗೆ ರಾಜರಾಜೇಶ್ವರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಂಜಿತ್​ ಹೇಳಿಕೆ ನೀಡಿರುವ ವಿಡಿಯೋ ಲಭ್ಯವಾಗಿದೆ. ಈ ಅವಘಡಕ್ಕೆ ನಿಜಕ್ಕೂ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಘಟನೆ ನಡೆದಾಗ ಹೀರೋ ಅಜಯ್​ ರಾವ್​ (Ajay Rao) ಅವರು ಸ್ಥಳದಲ್ಲೇ ಇದ್ದರೂ ಕೂಡ ಸಹಾಯಕ್ಕೆ ಬರಲಿಲ್ಲ ಎಂದು ರಂಜಿತ್​ ಆರೋಪಿಸಿದ್ದಾರೆ.

ವಿವೇಕ್​ ಮೃತಪಟ್ಟಿರುವ ಸುದ್ದಿ ಹೊರಬಿದ್ದ ಬಳಿಕ ಮಾಧ್ಯಮಗಳಿಗೆ ಅಜಯ್​ ರಾವ್​ ಹೇಳಿಕೆ ನೀಡಿದ್ದರು. ‘ನಾನು 200 ಮೀಟರ್​ ದೂರದಲ್ಲಿದ್ದೆ. ಹುಡುಗರ ಬಂದು ಹೇಳಿದಾಗ ವಿಷಯ ತಿಳಿಯಿತು’ ಎಂದು ಹೇಳಿದ್ದರು. ಆದರೆ ರಂಜಿತ್​ ಹೇಳಿರುವ ಪ್ರಕಾರ ಅಜಯ್​ ರಾವ್​ ಅವರು ಕೇವಲ 10-20 ಮೀಟರ್​ ಅಂತರದಲ್ಲೇ ಇದ್ದರು! ‘ಇದರಲ್ಲಿ ಫೈಟ್​ ಮಾಸ್ಟರ್​ ವಿನೋದ್​ ಅವರ ತಪ್ಪು ಇಲ್ಲ. ಕ್ರೇನ್​ ಆಪರೇಟರ್​ ತಪ್ಪಿನಿಂದಾಗಿ ಈ ರೀತಿ ಆಗಿದೆ. ಘಟನೆ ನಡೆದಾಗ ಹತ್ತಿರದಲ್ಲೇ ಇರುವ ಟೆಂಟ್​ನೊಳಗೆ ಅಜಯ್​ ರಾವ್ ಕುಳಿತಿದ್ದರು. ಆದರೂ ಸಹಾಯಕ್ಕೆ ಬರಲಿಲ್ಲ’ ಎಂದು ರಂಜಿತ್​ ಹೇಳಿದ್ದಾರೆ.

ರಂಜಿತ್​ ಅವರ ಈ ಹೇಳಿಕೆ ಬಗ್ಗೆ ಅಜಯ್​ ರಾವ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಘಟನೆ ನಡೆದಾಗ ಹೀರೋಯಿಸಂ ತೋರಿಸೋಕೆ ಆಗಲ್ಲ. ಅಲ್ಲಿ ಆಗಲೇ ಜನರು ಗುಂಪು ಸೇರಿದ್ದರು. ಹುಡುಗರು ಬಂದು ಹೇಳುವವರೆಗೆ ನನಗೆ ಏನೂ ತಿಳಿದಿರಲಿಲ್ಲ. ನಾನು ಬರಬೇಕಿತ್ತು ಎಂದು ಭಾವುಕನಾಗಿ ರಂಜಿತ್​ ನಿರೀಕ್ಷಿಸಿದ್ದರಲ್ಲಿ ತಪ್ಪಿಲ್ಲ. ರಂಜಿತ್​ ಅವರನ್ನು ಭೇಟಿ ಮಾಡೋಕೆ ನಾನು ಆಸ್ಪತ್ರೆಗೆ ಹೋಗಿದ್ದೆ. ಆದರೆ ಅಲ್ಲಿ ನಮ್ಮನ್ನು ಐಯುಸಿ ಒಳಗೆ ಬಿಡಲಿಲ್ಲ. ನಿನ್ನೆಯಿಂದಲೂ ನಾನು ಎಲ್ಲರಿಗೂ ಉತ್ತರ ನೀಡುತ್ತಿದ್ದೇನೆ. ಮೃತ ವಿವೇಕ್ ಅವರ​ ಚಿಕ್ಕಪ್ಪನ ಬಳಿಕ ನಾನು ಮಾತನಾಡಿದ್ದೇನೆ. ಅವರ ಜೊತೆಗೆ ನಾನಿದ್ದೇನೆ’ ಎಂದು ಅಜಯ್​ ರಾವ್​ ಹೇಳಿದ್ದಾರೆ.

ಇದನ್ನೂ ಓದಿ:

ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್​ಗೆ ನ್ಯಾಯ ಸಿಗುವವರೆಗೆ ಶೂಟಿಂಗ್​ಗೆ​ ಬರಲ್ಲ’; ಅಜಯ್​ ರಾವ್

ಫೈಟರ್​​ ಸಾವು ಪ್ರಕರಣ: ನಿರ್ಮಾಪಕ ಗುರು ದೇಶಪಾಂಡೆ ಪರಾರಿ; ಐವರ ವಿರುದ್ಧ ಎಫ್​ಐಆರ್​

(Fighter Vivek Death: Love You Racchu hero Ajay Rao reaction to Ranjith allegations)