AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಹೋ ಸೋಲಿನ ಬಳಿಕ ಎಚ್ಚೆತ್ತ ಬಾಹುಬಲಿ, ಟಾಲಿವುಡ್​ನಲ್ಲೀಗ ಜಾನ್-ಜಾನು ಗುದ್ದಾಟ

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಹೆದರಿದ್ದಾರಂತೆ. ಸಾಹೋ ನಂತ್ರ ಬರ್ತಿರೋ ಸಿನಿಮಾ ಟೈಟಲ್ ಬಗ್ಗೆ ತುಂಬಾನೇ ಯೋಚ್ನೆ ಮಾಡ್ತಿದ್ದಾರಂತೆ. ಅಷ್ಟಕ್ಕೂ ಪ್ರಭಾಸ್ ಹೆದರಿಕೆಗೂ ಅವ್ರ ಮುಂದಿನ ಚಿತ್ರಕ್ಕೂ ಏನು ಸಂಬಂಧ ಅನ್ನೋದ್ರ ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ. ಟಾಲಿವುಡ್ ರೆಬೆಲ್​ಸ್ಟಾರ್​ ಪ್ರಭಾಸ್​ ಬಾಹುಬಲಿ ಸಿನಿಮಾ ಮೂಲಕ ಇಂಟರ್​ನ್ಯಾಷನಲ್ ಸ್ಟಾರ್​ ಆಗಿ ಶೈನ್ ಆಗಿದ್ದಾರೆ. ಬಾಹುಬಲಿ ಸೀಕ್ವೆಲ್​ ಸೂಪರ್ ಹಿಟ್ ಆದ ಮೇಲಂತೂ ಕಥೆ ಆಯ್ಕೆಯಲ್ಲಿ ಪ್ರಭಾಸ್ ತುಂಬಾ ಚ್ಯೂಸಿಯಾಗಿದ್ದಾರಂತೆ. ಅದ್ರಲ್ಲೂ, ಸಾಕಷ್ಟು ನಿರೀಕ್ಷೆಯೊಂದಿಗೆ ಬಂದ ಸಾಹೋ ಸಿನಿಮಾ ನಿರೀಕ್ಷೆಗೆ […]

ಸಾಹೋ ಸೋಲಿನ ಬಳಿಕ ಎಚ್ಚೆತ್ತ ಬಾಹುಬಲಿ, ಟಾಲಿವುಡ್​ನಲ್ಲೀಗ ಜಾನ್-ಜಾನು ಗುದ್ದಾಟ
ಸಾಧು ಶ್ರೀನಾಥ್​
|

Updated on:Feb 01, 2020 | 2:27 PM

Share

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಹೆದರಿದ್ದಾರಂತೆ. ಸಾಹೋ ನಂತ್ರ ಬರ್ತಿರೋ ಸಿನಿಮಾ ಟೈಟಲ್ ಬಗ್ಗೆ ತುಂಬಾನೇ ಯೋಚ್ನೆ ಮಾಡ್ತಿದ್ದಾರಂತೆ. ಅಷ್ಟಕ್ಕೂ ಪ್ರಭಾಸ್ ಹೆದರಿಕೆಗೂ ಅವ್ರ ಮುಂದಿನ ಚಿತ್ರಕ್ಕೂ ಏನು ಸಂಬಂಧ ಅನ್ನೋದ್ರ ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ.

ಟಾಲಿವುಡ್ ರೆಬೆಲ್​ಸ್ಟಾರ್​ ಪ್ರಭಾಸ್​ ಬಾಹುಬಲಿ ಸಿನಿಮಾ ಮೂಲಕ ಇಂಟರ್​ನ್ಯಾಷನಲ್ ಸ್ಟಾರ್​ ಆಗಿ ಶೈನ್ ಆಗಿದ್ದಾರೆ. ಬಾಹುಬಲಿ ಸೀಕ್ವೆಲ್​ ಸೂಪರ್ ಹಿಟ್ ಆದ ಮೇಲಂತೂ ಕಥೆ ಆಯ್ಕೆಯಲ್ಲಿ ಪ್ರಭಾಸ್ ತುಂಬಾ ಚ್ಯೂಸಿಯಾಗಿದ್ದಾರಂತೆ. ಅದ್ರಲ್ಲೂ, ಸಾಕಷ್ಟು ನಿರೀಕ್ಷೆಯೊಂದಿಗೆ ಬಂದ ಸಾಹೋ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಹಿಟ್ ಆಗದಿದ್ದರೂ, ಬಾಕ್ಸಾಫೀಸ್​ನಲ್ಲಿ ಗೆದ್ದು ಬೀಗಿತ್ತು.

ಸಾಹೋ ಚಿತ್ರದ ಬಳಿಕ ಪ್ರಭಾಸ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲಕ್ಕೆ ಬ್ರೇಕ್ ಹಾಕಿದ್ದೇ ಜಾನ್ ಸಿನಿಮಾ. ಸಾಹೋ ಎಡವಟ್ಟಿನ ನಂತ್ರ ಜಾನ್ ಸಿನಿಮಾವನ್ನ ಪ್ರಭಾಸ್ ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರಕ್ಕೆ ನಿರ್ದೇಶಕ ರಾಧಾಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗ್ಲೆ ಸಿನಿಮಾದ ಶೂಟಿಂಗ್​ ಭರ್ಜರಿಯಾಗಿ ಸಾಗಿದ್ದು, ಜಾನ್​ನಲ್ಲಿನ ಪ್ರಭಾಸ್​ ಲುಕ್​ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಇದೇ ಜಾನ್​ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಚಿತ್ರದ ಟೈಟಲ್​ ಬದಲಿಸುವ ಯೋಚನೆಯಲ್ಲಿದೆ ಚಿತ್ರತಂಡ. ಹೌದು ಚಿತ್ರದ ಟೈಟಲ್ ವಿಚಾರಕ್ಕೆ ಪ್ರಭಾಸ್​ ಗೊಂದಲದಲ್ಲಿದ್ದಾರಂತೆ. ಅಷ್ಟಕ್ಕೂ ಪ್ರಭಾಸ್​ರನ್ನ ಗೊಂದಕ್ಕೆ ದೂಡಿದ್ದು ನಟಿ ಸಮಂತಾ. ಹೌದು, ಸಮಂತಾ ಅಭಿನಯದ ಜಾನು ಸಿನಿಮಾದಿಂದಾಗಿ ಪ್ರಭಾಸ್​ ಹೆದರಿದ್ದಾರಂತೆ.

ಸಮಂತಾ ಮತ್ತು ಶರ್ವಾನಂದ್​ ಅಭಿನಯದ ಜಾನು ಚಿತ್ರದ ಟ್ರೇಲರ್​ ಈಗಾಗ್ಲೆ, ರಿಲೀಸ್​ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸಿನಿಮಾರಂಗದಲ್ಲಿ ದಶಕ ಕಳೆದು ಸಮಂತಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜೊತೆಗೆ ಸಮಂತಾ ಚಿತ್ರಗಳ ಬಗ್ಗೆ ಒಂದು ಕ್ರೇಜ್ ಇದೆ. ಈಗಾಗ್ಲೆ ಸಮಂತಾಳನ್ನ ಜಾನು ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ.

ಜಾನು ಮತ್ತು ಜಾನ್​ ಎರಡೂ ಟೈಟಲ್​ಗಳು ಒಂದೇ ರೀತಿ ಇವೆ. ಎರಡರ ಮಧ್ಯೆ ಅಷ್ಟೇನು ವ್ಯತ್ಯಾಸವಿಲ್ಲ. ಹಾಗಾಗಿ ಪ್ರಭಾಸ್​ ಜಾನ್​ ಟೈಟಲ್ ಬದಲಿಸುವಂತೆ ಸಿನಿಮಾತಂಡಕ್ಕೆ ಸೂಚಿಸಿದ್ದಾರಂತೆ. ಪ್ರಭಾಸ್​ ಸಿನಿಮಾಗಳು ಅಂದ್ರೆ ಅಲ್ಲಿ ಟೈಟಲ್​ನದ್ದೇ ಒಂದು ಟ್ರೆಂಡ್​ ಇರುತ್ತೆ. ಹಾಗಾಗಿ, ಮತ್ತೊಮ್ಮೆ ಟ್ರೆಂಡ್​ ಹುಟ್ಟುಹಾಕಲು ಪ್ರಭಾಸ್​ ಸಿದ್ಧವಾಗಿದ್ದು, ಹೊಸ ಟೈಟಲ್​ನೊಂದಿಗೆ ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಡಲಿದ್ದಾರೆ.

Published On - 2:08 pm, Sat, 1 February 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ