AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneetha Parva: ‘ಪುನೀತ ಪರ್ವ’ ವೇದಿಕೆಯಲ್ಲಿ ಏನೆಲ್ಲ ನಡೆಯಲಿದೆ? ಇಲ್ಲಿದೆ ಕಾರ್ಯಕ್ರಮಗಳ ಪೂರ್ಣ ಪಟ್ಟಿ

Gandhada Gudi: ಅಚ್ಚುಕಟ್ಟಾಗಿ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ವೇಳಾಪಟ್ಟಿ ಸಿದ್ಧವಾಗಿದೆ. ಏನೆಲ್ಲ ನಡೆಯಲಿದೆ ಎಂಬುದರ ಪೂರ್ತಿ ವಿವರ ಇಲ್ಲಿದೆ..

Puneetha Parva: ‘ಪುನೀತ ಪರ್ವ’ ವೇದಿಕೆಯಲ್ಲಿ ಏನೆಲ್ಲ ನಡೆಯಲಿದೆ? ಇಲ್ಲಿದೆ ಕಾರ್ಯಕ್ರಮಗಳ ಪೂರ್ಣ ಪಟ್ಟಿ
ಪುನೀತ ಪರ್ವ
TV9 Web
| Updated By: ಮದನ್​ ಕುಮಾರ್​|

Updated on: Oct 21, 2022 | 5:42 PM

Share

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಅ.28ರಂದು ಬಿಡುಗಡೆ ಆಗಲಿದೆ. ಅದರ ಪ್ರೀ-ರಿಲೀಸ್​ ಇವೆಂಟ್​ ಕಾರ್ಯಕ್ರಮ ಇಂದು (ಅ.21) ನಡೆಯಲಿದೆ. ಇದಕ್ಕಾಗಿ ಬೆಂಗಳೂರಿನ ಅರಮನೆ ಮೈದಾನ (Palace Ground) ಸಜ್ಜಾಗಿದೆ. ಡಾ. ರಾಜ್​ಕುಮಾರ್​ ಕುಟುಂಬದ ಎಲ್ಲ ಸದಸ್ಯರು ಇದರಲ್ಲಿ ಭಾಗಿ ಆಗಲಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ರಾಜ್ಯದ ಮೂಲೆಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಪರಭಾಷೆಯ ಅನೇಕ ಸ್ಟಾರ್​ ನಟ-ನಟಿಯರು ಕೂಡ ಇದರಲ್ಲಿ ಹಾಜರಿ ಹಾಕಲಿದ್ದಾರೆ. ಸಂಜೆ 6.30ಕ್ಕೆ ‘ಪುನೀತ ಪರ್ವ’ (Puneetha Parva) ಕಾರ್ಯಕ್ರಮ ಆರಂಭ ಆಗಲಿದೆ.

60ರಿಂದ 80 ಅಡಿ ಇರುವ ಬೃಹತ್​ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಆರ್ಕೆಸ್ಟ್ರಾ ಮೂಲಕ ಕಾರ್ಯಕ್ರಮ ಶುರು ಆಗುತ್ತದೆ. 7 ನಿಮಿಷಗಳ ಕಾಲ ಇದು ನಡೆಯಲಿದೆ. ಬಳಿಕ ನಿರೂಪಕಿ ಅನುಶ್ರೀ ಅವರು ವೇದಿಕೆಗೆ ಎಂಟ್ರಿ ನೀಡುತ್ತಾರೆ. ಕಾರ್ಯಕ್ರಮದ ಬಗ್ಗೆ ಅವರು ಪರಿಚಯ ಮಾಡಿಕೊಡುತ್ತಾರೆ. ಬಳಿಕ ಎಲ್​ಇಡಿ ಪರದೆ ಮೇಲೆ ಎ.ವಿ. ಬಿತ್ತರ ಆಗಲಿದೆ. ನಂತರ 15 ಕಟೌಟ್​ಗಳು ಅನಾವರಣಗೊಳ್ಳಲಿವೆ. ಆ ಬಳಿಕ ಪುನೀತ್​ ರಾಜ್​ಕುಮಾರ್​ ಅವರ ಕುರಿತು ಸ್ಕಿಟ್​ ಪ್ರದರ್ಶನ ಇರಲಿದೆ.

ಸ್ಕಿಟ್​ ಬಳಿಕ ರಾಘವೇಂದ್ರ ರಾಜ್​ಕುಮಾರ್​ ಅವರು ವೇದಿಕೆಗೆ ಬರಲಿದ್ದಾರೆ. ‘ಬಾನ ದಾರಿಯಲ್ಲಿ..’ ಗೀತೆಯ ಕುರಿತು ವಿಶೇಷ ಮಾಹಿತಿಯನ್ನು ಹಂಚಿಕೊಂಡು, ನಂತರ ಹಾಡು ಹೇಳಲಿದ್ದಾರೆ. ಆ ನಂತರ ರಮೇಶ್​ ಅರವಿಂದ್​ ಅವರನ್ನು ವೇದಿಕೆಗೆ ಆಹ್ವಾನಿಸಲಾಗುತ್ತದೆ. ರಮೇಶ್​ ಅರವಿಂದ್​ ಅವರ ಧ್ವನಿಯಲ್ಲಿ ಪುನೀತ್ ರಾಜ್​ಕುಮಾರ್​ ಕುರಿತ ಎ.ವಿ. ಪ್ರಸಾರ ಆಗಲಿದೆ. ಬಳಿಕ ರಮೇಶ್ ಮಾತನಾಡುತ್ತಾರೆ. ನಂತರ ಡ್ಯಾನ್ಸ್ ಗ್ರೂಪ್​ಗಳನ್ನು ವೇದಿಕೆಗೆ ಬರಮಾಡಿಕೊಳ್ಳುತ್ತಾರೆ. ​ಶಿವರಾಜ್​ಕುಮಾರ್​ ಅವರು ಡ್ಯಾನ್ಸ್​ ಮಾಡಿ, ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಾರೆ.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿ 75 ಕಟೌಟ್​; ಮೊದಲ ವರ್ಷದ ಪುಣ್ಯಸ್ಮರಣೆಗೆ ಫ್ಯಾನ್ಸ್​ ಸಿದ್ಧತೆ
Image
Puneeth Rajkumar: ‘ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಅಪ್ಪು ಫ್ಯಾನ್ಸ್​ ಮನವಿ; ‘ಪುನೀತ ಪರ್ವ’ಕ್ಕೆ ತಯಾರಿ ಜೋರು
Image
Puneeth Rajkumar: ‘ಗಂಧದ ಗುಡಿ’ ಪ್ರೀ-ರಿಲೀಸ್ ಇವೆಂಟ್​; ಸಿಎಂಗೆ ಆಹ್ವಾನ ನೀಡಿದ ಡಾ. ರಾಜ್​ಕುಮಾರ್ ಕುಟುಂಬ
Image
Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ

ಶಿವಣ್ಣ ಮಾತಾಡಿದ ನಂತರ ಗಾಯಕರಾದ ವಿಜಯ್​ ಪ್ರಕಾಶ್​, ಕುನಾಲ್​ ಗಾಂಜಾವಾಲಾ, ಟಿಪ್ಪು ಮತ್ತು ಅರ್ಮಾನ್​ ಮಲಿಕ್​ ಅವರು ಗಾನನಮನ ಸಲ್ಲಿಸುತ್ತಾರೆ. ಬಳಿಕ ರವಿಚಂದ್ರನ್​, ಶರತ್​ಕುಮಾರ್​, ಅನಂತ್​​ ನಾಗ್​ ಮಾತನಾಡುತ್ತಾರೆ. ರಮ್ಯಾ ಕೂಡ ವೇದಿಕೆಯಲ್ಲಿ ಡ್ಯಾನ್ಸ್​ ಮಾಡಲಿದ್ದಾರೆ. ಬಳಿಕ 6 ಸೆಲೆಬ್ರಿಟಿಗಳು ಅಪ್ಪು ಬಗ್ಗೆ ತಮ್ಮ ನುಡಿಗಳನ್ನು ಹಂಚಿಕೊಳ್ಳುತ್ತಾರೆ. ನಂತರ ಪ್ರಭುದೇವ ಅವರು ಬಂದು ಡ್ಯಾನ್ಸ್​ ಮಾಡುತ್ತಾರೆ. ಬಳಿಕ ವಿಜಯ್​ ಪ್ರಕಾಶ್​ ಅವರು ‘ಬೊಂಬೆ ಹೇಳುತೈತೆ..’ ಗೀತೆ ಹಾಡುತ್ತಾರೆ. ಆನಂತರ ಪ್ರಕಾಶ್​ ರೈ​ ಅವರು ‘ಗಂಧದ ಗುಡಿ’ ಬಗ್ಗೆ ಮಾತನಾಡುತ್ತಾರೆ. ಅದರ ಬೆನ್ನಲ್ಲೇ ಟ್ರೇಲರ್​ ಬಿತ್ತರ ಆಗುತ್ತದೆ.

ಟ್ರೇಲರ್​ ನೋಡಿದ ಬಳಿಕ ರಾಣಾ ದಗ್ಗುಬಾಟಿ, ಸೂರ್ಯ, ಯಶ್​, ಬಾಲಕೃಷ್ಣ ಅವರು ವೇದಿಕೆಯಲ್ಲಿ ಮಾತನಾಡುತ್ತಾರೆ. ಅದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಇರಲಿದೆ. ಆನಂತರ ರಾಘವೇಂದ್ರ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಅವರು ವಂದನಾರ್ಪಣೆ ಮಾಡುತ್ತಾರೆ. ಕೊನೆಯಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಎಂಟ್ರಿ ನೀಡುತ್ತಾರೆ. ಥೀಮ್​ ಸಾಂಗ್​ ಬಿತ್ತರ ಆಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ