AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಹುಟ್ಟಿದ್ದು ಹೇಗೆ? ಚಿತ್ರಕತೆಯಲ್ಲಿ ಇಲ್ಲದ ಹಾಡು ಸಿನಿಮಾಕ್ಕೆ ಸೇರಿದ್ದು ಹೇಗೆ?

Dr Rajkumar: 'ಆಕಸ್ಮಿಕ' ಸಿನಿಮಾದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಕರ್ನಾಟಕದ ಅನಧಿಕೃತ ನಾಡಗೀತೆ. ಆದರೆ ನಿರ್ದೇಶಕ ನಾಗಾಭರಣ ಸಿನಿಮಾದ ಚಿತ್ರಕತೆ ಬರೆದಾಗ ಹಾಡು ಇರಲಿಲ್ಲ, ಆದರೆ ನಂತರ ಹಾಡು ಸೇರ್ಪಡೆ ಆಗಿದ್ದು ಹೇಗೆ? ಏಕೆ? ಯಾರಿಂದ?

'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಹುಟ್ಟಿದ್ದು ಹೇಗೆ? ಚಿತ್ರಕತೆಯಲ್ಲಿ ಇಲ್ಲದ ಹಾಡು ಸಿನಿಮಾಕ್ಕೆ ಸೇರಿದ್ದು ಹೇಗೆ?
ಆಕಸ್ಮಿಕ
ಮಂಜುನಾಥ ಸಿ.
|

Updated on: Aug 05, 2023 | 8:23 PM

Share

ಕನ್ನಡ ನಾಡು, ನೆಲ, ಜಲವನ್ನು ಕೊಂಕಾಡುವ ನೂರಾರು ಹಾಡುಗಳು ಕನ್ನಡ ಸಿನಿಮಾಗಳಲ್ಲಿ ಬಂದಿವೆ, ಬರುತ್ತಿವೆ, ಮುಂದೆಯೂ ಬರುತ್ತವೆ ಆದರೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಮೀರಿಸಬಲ್ಲ ಮತ್ತೊಂದು ಹಾಡು ಬರುವುದು ಬಹುತೇಕ ಅನುಮಾನ. ‘ಆಕಸ್ಮಿಕ‘ (Akasmika) ಸಿನಿಮಾದ ಈ ಹಾಡು ಅನಧಿಕೃತ ‘ನಾಡಗೀತೆ’ಯೇ ಆಗಿ ಹೋಗಿದೆ. ವಿಶೇಷವೆಂದರೆ ನಿರ್ದೇಶಕ ನಾಗಾಭರಣ, ‘ಆಕಸ್ಮಿಕ’ ಸಿನಿಮಾದ ಚಿತ್ರಕತೆ ಬರೆದಾಗ ಅದನ್ನು ಅಣ್ಣಾವ್ರ ಮುಂದೆ ಹೇಳಿದಾಗ ಈ ಹಾಡು ಇರಲಿಲ್ಲ. ಆ ಸನ್ನಿವೇಶದಲ್ಲಿ ಹಾಡಿನ ಅವಶ್ಯಕತೆ ಇದೆ ಎಂದು ನಾಗಾಭರಣ (Naghabarana) ಅವರಿಗೆ ಅನಿಸಿರಲಿಲ್ಲ. ಆದರೆ ಆ ಹಾಡು ಸೇರಿದ್ದು ಚಿತ್ರಕತೆ ಜೀನಿಯಸ್ ಒಬ್ಬರ ಸಲಹೆಯಿಂದ!

ನಾಗಾಭರಣ ಅವರ ‘ಆಕಸ್ಮಿಕ’ ಸಿನಿಮಾದ ಕತೆಯನ್ನು ಅಣ್ಣಾವ್ರ ಸಹೋದರ ವರದಣ್ಣ ಅವರ ಬಳಿ ಹೇಳಿದಾಗ ಇಲ್ಲೊಂದು ಹಾಡು ಇದ್ದರೆ ಒಳ್ಳೆಯದು ಎಂದರಂತೆ. ಆದರೆ ಅದು ನಾಗಾಭರಣ ಅವರಿಗೆ ಸರಿ ಎನಿಸಿರಲಿಲ್ಲ. ಸಿನಿಮಾ ಕ್ಲೈಮ್ಯಾಕ್ಸ್​ಗೆ ಬಂದಿದೆ ಇಲ್ಲಿ ಹಾಡು ಇಟ್ಟರೆ ಕ್ಲೈಮ್ಯಾಕ್ಸ್​ನ ರೋಚಕತೆ ಹಾಳಾಗುತ್ತದೆ, ನೋಡುಗನ ಗಮನ ಕತೆಯಿಂದ ವಿಚಲಿತವಾಗುತ್ತದೆ ಎಂಬುದು ನಾಗಾಭರಣ ವಾದ ಆದರೆ ವರದಣ್ಣ, ”ಅದೇ ಬೇಕಾಗಿರುವುದು, ನೋಡುಗ ಕತೆಯನ್ನು ಮರೆತು ಹಾಡಿನಲ್ಲಿ ಕಳೆದು ಹೋಗಿ, ನಂತರ ಶಾಕ್ ಮಾದರಿಯಲ್ಲಿ ಅವನನ್ನು ಮತ್ತೆ ಕತೆಗೆ ಎಳೆದುಕೊಂಡು ಬರಬೇಕು. ಇದು ಚೆನ್ನಾಗಿ ವರ್ಕೌಟ್ ಆಗುತ್ತದೆ” ಎಂದರಂತೆ. ಅದು ನಾಗಾಭರಣ ಅವರಿಗೂ ಸರಿ ಎನಿಸಿ ಹಾಡು ಇಡಲು ನಿಶ್ಚಯಿಸಿದರಂತೆ.

ಹಾಗಾದರೆ ಯಾವ ರೀತಿಯ ಹಾಡು ಸೂಕ್ತ ಎಂದು ಚರ್ಚಿಸಿದಾಗ, ಅಣ್ಣಾವ್ರು ಬಹಳ ದಿನಗಳಿಂದ ಕನ್ನಡದ ಬಗೆಗಿನ ಹಾಡು ಹಾಡಿಲ್ಲ ಅದನ್ನೇ ಇಡಿ ಎಂಬ ಸಲಹೆಯನ್ನೂ ವರದಣ್ಣನೇ ನೀಡಿದರಂತೆ. ಆಗ ನಾಗಾಭರಣ ಅವರು ಕುವೆಂಪು ಇನ್ನಿತರೆ ಸಾಹಿತಿಗಳ ಕವಿತೆಗಳ ಪುಸ್ತಕವನ್ನೆಲ್ಲ ತೆಗೆದುಕೊಂಡು ರೆಫೆರೆನ್ಸ್​ಗಾಗಿ ಹಂಸಲೇಖ ಅವರಿಗೆ ಕೊಟ್ಟರಂತೆ. ಆಗಲೂ ಹಂಸಲೇಖ ಬೇಸರ ಮಾಡಿಕೊಂಡು, ನೀವು ರಾಶಿ-ರಾಶಿ ಪುಸ್ತಕಗಳನ್ನು ತರಬೇಡಿ ಓದಲು ಸಮಯವಿಲ್ಲ ಎನ್ನುತ್ತಿದ್ದರಂತೆ.

ಇದನ್ನೂ ಓದಿ:ಶಿವಣ್ಣ ನಟಿಸಬೇಕಿದ್ದ ಆಕಸ್ಮಿಕ ಸಿನಿಮಾದಲ್ಲಿ ಅಣ್ಣಾವ್ರು ನಟಿಸಿದ್ದು ಹೇಗೆ?

ಹಂಸಲೇಖ ಅವರು, ಡಿವಿಜಿ ಅವರ ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ’ ಸಾಲಿನಿಂದ ಪ್ರೇರಣೆ ಪಡೆದು ‘ಬದುಕಿದು ಜಟಕಾ ಬಂಡಿ, ವಿಧಿ ಓಡಿಸುವಾ ಬಂಡಿ’ ಸಾಲು ಮಾಡಿಕೊಂಡು ಅದಕ್ಕೆ ಇನ್ನೊಂದಿಷ್ಟು ಸಾಲುಗಳನ್ನು ಸೇರಿಸಿ ಅಣ್ಣಾವ್ರ ಮನೆಗೆ ಹೋಗಿ ಅದನ್ನು ಹಾಡಿ ತೋರಿಸಿದರಂತೆ. ಹಾಡಿನ ಸಾಲುಗಳು ಇಷ್ಟವಾಗಿ ಅದರ ಬಗ್ಗೆ ಚರ್ಚೆ ಮಾಡುತ್ತಾ ಮಾಡುತ್ತಾ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಸಾಲು ಬಂತಂತೆ. ಅದನ್ನೇ ಪಲ್ಲವಿ ಮಾಡಿಕೊಂಡು ಇತರೆ ಸಾಲುಗಳನ್ನು ಸೇರಿಸಿ ಬೆಳೆಸಿ ಹಂಸಲೇಖ ಅವರು ಕನ್ನಡಿಗರು ಎಂದೂ ಮರೆಯಲಾಗದ ಹಾಡು ಕೊಟ್ಟುಬಿಟ್ಟಿದ್ದು ಈಗ ಇತಿಹಾಸ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ