AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wheel Chair Romeo Movie: ಮೇ 27ಕ್ಕೆ ರಿಲೀಸ್ ಆಗುತ್ತಿದೆ ‘ವೀಲ್ ಚೇರ್ ರೋಮಿಯೋ’; ಈ ಚಿತ್ರದ ಕತೆ ಸಿಕ್ಕಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ವಿಚಾರ

Ram Chetan | Mayuri Kyatari: ‘ವೀಲ್ ಚೇರ್ ರೋಮಿಯೋ’ ಟ್ರೇಲರ್ ಆಂಡ್ ಸಾಂಗ್ಸ್​ಗಳನ್ನು ನೋಡಿ, ಕಥೆಯ ಗಟ್ಟಿತನಕ್ಕೆ ಆಶ್ಚರ್ಯಚಕಿತರಾಗದವರಿಲ್ಲ. ಅಷ್ಟು ಭಿನ್ನವಾಗಿದೆ ವೀಲ್ ಚೇರ್ ರೋಮಿಯೋ ಕಥಾನಕ. ಆದರೆ ಈ ಕಥೆ ಹುಟ್ಟಿದ್ದು ಹೇಗೆ ಎಂಬ ಕುತೂಹಲದ ಪ್ರಶ್ನೆಗಳಂತು ನಿಮ್ಮಲ್ಲಿ ಆಗಾಗ ಹೊಗೆಯಾಡುತ್ತಿರುತ್ತದೆ. ಅದಕ್ಕೆ ನಿರ್ದೇಶಕ ನಟರಾಜ್ ಅವರೇ ಉತ್ತರ ನೀಡಿದ್ದಾರೆ.

Wheel Chair Romeo Movie: ಮೇ 27ಕ್ಕೆ ರಿಲೀಸ್ ಆಗುತ್ತಿದೆ ‘ವೀಲ್ ಚೇರ್ ರೋಮಿಯೋ’; ಈ ಚಿತ್ರದ ಕತೆ ಸಿಕ್ಕಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ವಿಚಾರ
‘ವೀಲ್​ಚೇರ್ ರೋಮಿಯೋ’ ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಚಿತ್ರ
Follow us
TV9 Web
| Updated By: shivaprasad.hs

Updated on:May 24, 2022 | 1:20 PM

ಜಿಯಾಗ್ರಫಿ ಚಾನೆಲ್​ನ ಎಪಿಸೋಡ್ ಒಂದರಲ್ಲಿ ಸಿಕ್ಕಿದ ಕಥೆಯೇ ವೀಲ್ ಚೇರ್ ರೋಮಿಯೋ..! ಇದನ್ನು ಕೇಳಿ ನಿಮಗೆ ಒಮ್ಮೆಲೆ ಶಾಕ್ ಆಗಿರಬಹುದು. ಯಾಕಂದ್ರೆ ‘ವೀಲ್ ಚೇರ್ ರೋಮಿಯೋ’ (Wheel Chair Romeo Movie) ಟ್ರೇಲರ್ ಆಂಡ್ ಸಾಂಗ್ಸ್​ಗಳನ್ನು ನೋಡಿ, ಕಥೆಯ ಗಟ್ಟಿತನಕ್ಕೆ ಆಶ್ಚರ್ಯಚಕಿತರಾಗದವರಿಲ್ಲ. ಅಷ್ಟು ಭಿನ್ನವಾಗಿದೆ ವೀಲ್ ಚೇರ್ ರೋಮಿಯೋ ಕಥಾನಕ. ಆದರೆ ಈ ಕಥೆ ಹುಟ್ಟಿದ್ದು ಹೇಗೆ ಎಂಬ ಕುತೂಹಲದ ಪ್ರಶ್ನೆಗಳಂತು ನಿಮ್ಮಲ್ಲಿ ಆಗಾಗ ಹೊಗೆಯಾಡುತ್ತಿರುತ್ತದೆ. ಅದಕ್ಕೆ ನಿರ್ದೇಶಕ ನಟರಾಜ್ (Nataraj) ಅವರೇ ಉತ್ತರ ನೀಡಿದ್ದಾರೆ. ಸಿನಿಮಾಗಳ ಕಥೆ ಹುಟ್ಟುವುದೇ ರೋಮಾಂಚಕ. ಎಲ್ಲೋ ಕುಳಿತಾಗ, ಏನೋ ನೋಡಿದಾಗ, ತಮ್ಮ ಸುತ್ತಮುತ್ತಲಿನ ಅನುಭವ ಕಥೆಯಾದಾಗ ಕತೆ ಹುಟ್ಟಲು ಅನೇಕ ಕಾರಣಗಳು ಸಿಗುತ್ತವೆ. ಅದೇ ರೀತಿ ವೀಲ್ ಚೇರ್ ರೋಮಿಯೋ ಕಥೆ ಹುಟ್ಟಿದ್ದು ಆ ಒಂದು ಎಪಿಸೋಡ್ ನೋಡುವಾಗ ಎಂಬುದು ವಿಶೇಷ. ಯಾವುದದು? ಮುಂದೆ ಓದಿ.

ನ್ಯಾಷನಲ್ ಜಿಯೋಗ್ರಫಿ ಚಾನೆಲ್ ನೋಡುಗರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಅಷ್ಟು ಆಸಕ್ತಿದಾಯಕ ವಿಚಾರಗಳು ಸಿಗುತ್ತವೆ. ಬೆರಗುಗಣ್ಣಿನಿಂದಲೇ ನೋಡುವಂತ ಎಪಿಸೋಡಿನಲ್ಲಿ, ಆಸ್ಟ್ರೇಲಿಯಾದ ತಂದೆಯೊಬ್ಬ ಮಗನನ್ನು ವೇಶ್ಯಾ ಗೃಹಕ್ಕೆ ಕರೆದೊಯ್ಯುವ ಸನ್ನಿವೇಶಗಳಿದ್ದವಂತೆ. ಅದನ್ನು ಭಾರತೀಯ ಸಮಾಜ ಒಪ್ಪಿಕೊಳ್ಳುವುದಿರಲಿ, ಅರಗಿಸಿಕೊಳ್ಳುವುದೂ ಕಷ್ಟವಿದೆ. ಆದರೆ ನಿರ್ದೇಶಕ ನಟರಾಜ್ ಅವರಿಗೆ ಅದೊಂದು ಎಳೆ ನಾನಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚಿತ್ತು.

Mayuri Kyatari in Wheelchair Romeo

‘ವೀಲ್​ಚೇರ್ ರೋಮಿಯೋ’ ಚಿತ್ರದಲ್ಲಿ ಮಯೂರಿ ಕ್ಯಾತರಿ

ಅದರ ಚುಂಗು ಹಿಡಿದು ಹೊರಟು, ಒಂದಷ್ಟು ಕಾಲ ಆಲೋಚಿಸಿ ಒಂದು ಚೆಂದದ ಕಥೆಗೆ ಜೀವ ಕೊಡಲಾರಂಭಿಸಿದ್ದರು. ಅದರ ಫಲವಾಗಿ ಜೀವ ತಳೆದಿದ್ದು ವೀಲ್‌ಚೇರ್ ರೋಮಿಯೋ ಕಥೆ. ವೀಲ್ ಚೇರ್ ರೋಮಿಯೋ ಕಣ್ಣಿಲ್ಲ ವೇಶ್ಯೆ ಮೇಲೆ ವೀಲ್ ಚೇರ್ ನಲ್ಲೇ ಜೀವನ ಸವೆಸಿದ ಹುಡುಗನಿಗೆ ಪ್ರೀತಿಯಾಗುತ್ತೆ. ಇಷ್ಟು ಗಂಭೀರ ಎಳೆಯಿರುವ ಚಿತ್ರ ನಿರ್ದೇಶಕರ ಯೋಚನೆಗೆ ತಕ್ಕಂತೆ ಮೂಡಿ ಬಂದಿದೆ. ಇದೇ 27ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.

ಇದನ್ನೂ ಓದಿ
Image
Bhool Bhulaiyaa 2 Box Office Collection: ಬಾಕ್ಸಾಫೀಸ್​ನಲ್ಲಿ ಮುಂದುವರೆದ ‘ಭೂಲ್ ಭುಲಯ್ಯ 2’ ಓಟ; ನಾಲ್ಕನೇ ದಿನದ ಕಲೆಕ್ಷನ್ ಎಷ್ಟು?
Image
Ragini Dwivedi Birthday: ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ರಾಗಿಣಿ; ‘ತುಪ್ಪದ ಬೆಡಗಿ’ಯ ಗ್ಲಾಮರಸ್ ಫೋಟೋಗಳು ಇಲ್ಲಿವೆ
Image
ಟ್ರೇಲರ್​ನಿಂದ ನಿರೀಕ್ಷೆ ಮೂಡಿಸಿದ ‘ಮನಸ್ಮಿತ’ ಸಿನಿಮಾ; ಅತುಲ್​ ಕುಲಕರ್ಣಿ ಜೊತೆ ಹೊಸ ಕಲಾವಿದರ ಸಂಗಮ
Image
ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಂದ ಸಿಕ್ತು ಮಿಲಿಯನ್​ ಲೈಕ್ಸ್​
Wheel Chair Romeo stills (1)

‘ವೀಲ್​ಚೇರ್ ರೋಮಿಯೋ’ ಚಿತ್ರದ ಒಂದು ದೃಶ್ಯ

ಕೇಳುವುದಕ್ಕೆ ಇಷ್ಟೊಂದು ಆಶ್ಚರ್ಯ ಕಾಡಿದರೆ ಇನ್ನು‌ಸಿನಿಮಾ ನೋಡುವಾಗ ಎಷ್ಟೆಲ್ಲಾ ಮನಸ್ಸು ಭಾರವಾಗುವ ಸನ್ನಿವೇಶ ಸಿಗಬಹುದು ಎಂಬುದನ್ನು ಥಿಂಕ್ ಮಾಡಿ. ಇಷ್ಟೆಲ್ಲಾ ಭಾವಪರವಶ ಮಾಡುವಂತ ವೀಲ್ ಚೇರ್ ರೋಮಿಯೋನಾ ರೋಮ್ಯಾಂಟಿಕ್ ಕಥೆಯನ್ನು ಥಿಯೇಟರ್ ನಲ್ಲಿಯೇ ನೋಡಿದರೆ ಮಜಾ ಸಿಗುವುದು ಗ್ಯಾರಂಟಿ.

‘ವೀಲ್​ಚೇರ್ ರೋಮಿಯೋ’ ಡೈಲಾಗ್​ ಟ್ರೇಲರ್ ಇಲ್ಲಿದೆ:

‘ವೀಲ್​ಚೇರ್ ರೋಮಿಯೋ’ ಚಿತ್ರದಲ್ಲಿ ರಾಮ್​ ಚೇತನ್, ಮಯೂರಿ ಕ್ಯಾತರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಸೇರಿದಂತೆ ಖ್ಯಾತ ಕಲಾವಿದರ ದಂಡೇ ಚಿತ್ರದಲ್ಲಿದೆ. ಈಗಾಗಲೇ ಹಾಡು ಹಾಗೂ ಟ್ರೇಲರ್ ಮೂಲಕ ಮನಗೆದ್ದಿರುವ ಚಿತ್ರ ಮೇ 27ರಂದು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:12 pm, Tue, 24 May 22

ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು