AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟನಾಗಿ ಮಿಂಚಬೇಕು ಎಂಬ ಆಸಕ್ತಿ ಇದೆಯೇ? ಮಂಡ್ಯ ರಮೇಶ್ ಕೊಟ್ಟಿದ್ದಾರೆ ಟಿಪ್ಸ್

ಮಂಡ್ಯ ರಮೇಶ್ ಅವರು ನಟನಾಗಲು ಬೇಕಾದ ಗುಣಗಳು, ರಂಗಭೂಮಿಯ ಪ್ರಾಮುಖ್ಯತೆ ಮತ್ತು ‘ನಟನ’ ಶಾಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇಚ್ಛಾಶಕ್ತಿ, ಜೀವನದ ಅರಿವು ಮತ್ತು ನಿರಂತರ ಕಲಿಕೆ ನಟನಿಗೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ರಂಗಭೂಮಿ ಸೇರಿದರೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದೂ ಅವರು ತಿಳಿಸಿದ್ದಾರೆ.

ನಟನಾಗಿ ಮಿಂಚಬೇಕು ಎಂಬ ಆಸಕ್ತಿ ಇದೆಯೇ? ಮಂಡ್ಯ ರಮೇಶ್ ಕೊಟ್ಟಿದ್ದಾರೆ ಟಿಪ್ಸ್
ಮಂಡ್ಯ ರಮೇಶ್
ರಾಜೇಶ್ ದುಗ್ಗುಮನೆ
|

Updated on:Jan 18, 2025 | 3:14 PM

Share

ನಟನಾಗಬೇಕು ಎಂಬುದು ಅನೇಕರ ಕನಸು. ಆದರೆ, ಸರಿಯಾದ ವೇದಿಕೆ ಸಿಗದೆ, ಬೇರೆ ಬೇರೆ ಒತ್ತಡಗಳ ಕಾರಣದಿಂದ ಅದು ಸಾಧ್ಯವಾಗಿರುವುದಿಲ್ಲ. ರಂಗಭೂಮಿ ಸೇರದೆಯೂ ಉತ್ತಮ ನಟನಾಗಬಹುದು. ಅದು ಹೇಗೆ? ರಂಗಭೂಮಿ ಸೇರಿದರೆ ಆಗುವ ಪ್ರಯೋಜನಗಳು ಏನು ಎಂಬಿತ್ಯಾದಿ ವಿಚಾರಗಳನ್ನು ಹಿರಿಯ ನಟ, ‘ನಟನ’ ರಂಗಶಾಲೆಯ ಸ್ಥಾಪಕ ಮಂಡ್ಯ ರಮೇಶ್ ಹೇಳಿದ್ದಾರೆ.

ನಟನಾಗಬೇಕು ಎಂಬುವವರಿಗೆ ಕೆಲವು ವಿಚಾರಗಳು ಮುಖ್ಯವಾಗಿ ಬೇಕು ಎಂಬುದು ರಮೇಶ್ ಅಭಿಪ್ರಾಯ. ‘ನಟನಾಗಬೇಕು ಎಂಬುವವನಿಗೆ ಇಚ್ಛಾಶಕ್ತಿ ಬೇಕು. ಅದರ ಕೊರತೆ ಎಲ್ಲ ಕಡೆಗಳಲ್ಲೂ ಕಾಣುತ್ತಿದೆ. ಜೀವನದ ಗೃಹಿಕೆ. ಮುಖ್ಯವಾಗಿ ಇರಬೇಕು. ಯಾವುದೇ ನಟ ತನ್ನ ನೆಲ, ಭಾಷೆ, ಪರಿಸರ ದಟ್ಟವಾಗಿ ಜನಾಂಗೀಯ ಅಧ್ಯಯನ ಮಾಡಿಕೊಳ್ಳಬೇಕು. ಸಂವೇದನಾಶೀಲನಾಗಿರಬೇಕು. ನಟನಾಗುವವನಿಗೆ ಬದುಕಿರುವವರೆಗೂ ವಿಶ್ರಾಂತಿ ಇಲ್ಲ. ಆತ ದಿನವೂ ಆಧುನಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ನಾನು ನಟನಾಗಿದ್ದೆ, ಈಗ ಅಲ್ಲ ಎಂಬಂತಿಲ್ಲ’ ಎಂದಿದ್ದಾರೆ ರಮೇಶ್.

‘ನಟನೆ ಮಾಡುವ ವ್ಯಕ್ತಿ ಬಡವನಾಗಿರಲ್ಲ, ಶ್ರೀಮಂತನೂ ಆಗಿರಲ್ಲ. ಆತ ರಾಮನಲ್ಲ, ಕೃಷ್ಣ ಅಲ್ಲ. ಆದರೆ, ಬಡವನ ಪಾತ್ರ ಮಾಡುವ ಮೂಲಕ ಬಡತನದ ನೋವನ್ನು ಅನಾವರಣ ಮಾಡುತ್ತಾನೆ.  ಪ್ರತಿದಿನ ಕಲಿಕೆ ಇರುತ್ತದೆ. ತುಂಬಾ ತಾಳ್ಮೆ ಅಗತ್ಯ. ನಿಜವಾದ ನಟ ಹುಟ್ಟುವುದು 40 ವರ್ಷಗಳ ಮೇಲೆ. ಅವನ ಅನುಭವಗಳ ಮೂಲಕ’ ಎಂದಿದ್ದಾರೆ ರಮೇಶ್.

‘ನಟನಿಗೆ ಮುಗ್ಧತೆ ಬೇಕೆ ಬೇಕು. ರಾಜ್​ಕುಮಾರ್ ಅವರ ಕಣ್ಣಲ್ಲಿ, ಚಾರ್ಲಿ ಚಾಪ್ಲಿನ್ ಕಣ್ಣಲ್ಲಿ ಆ ಮುಗ್ಧತೆ ನೋಡಿದ್ದೇನೆ. ಕಲಾವಿದನಿಗೆ ನೀರಿನ ಗುಣ ಬೇಕು. ಯಾವ ಬಣ್ಣ ಹಾಕಿದರೂ ಆ ಬಣ್ಣಕ್ಕೆ ತಿರುಗಬೇಕು. ಬಣ್ಣದ ನೀರಿಗೆ ಬಣ್ಣ ಹಾಕೋದು ಕಷ್ಟ. ತಿಳಿ ನೀರಿಗೆ ಬಣ್ಣ ಹಾಕುವುದು ಸುಲಭ. ಓದಿನ ಮೂಲಕ, ಪ್ರವಾಸದ ಮೂಲಕ ಹೀಗೆ ಹಲವು ವಿವಿಧಗಳ ಹಂತದಲ್ಲಿ ನಟನೆ ಕಲಿಯಬೇಕು’ ಎಂದಿದ್ದಾರೆ ಅವರು.

‘ಎಲ್ಲಿಯೋ ಆಗುವ ಘಟನೆಗೆ ಕಲಾವಿದ ಸ್ಪಂದಿಸಬೇಕು. ಸುತ್ತಲು ಇರುವ ಸಮಾಜವೇ ಅವನ ಶಾಲೆ ಆಗಬೇಕು. ರಂಗಭೂಮಿಗೆ ಬರದೆಯೂ ಉತ್ತಮ ನಟನಾಗಬಹುದು. ಆದರೆ, ಜೀವನ ಗೃಹಿಕೆ ಎಷ್ಟು ಆಳಕ್ಕೆ ಹೋಗಿದೆ ಎಂಬುದು ಮುಖ್ಯವಾಗುತ್ತದೆ. ರಂಗಭೂಮಿಯಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ’ ಎಂದಿದ್ದಾರೆ ಮಂಡ್ಯ ರಮೇಶ್.

ನಟಗೆ ವಿದ್ಯಾರ್ಹತೆ ಮುಖ್ಯವೇ? ಈ ಬಗ್ಗೆ ಮಂಡ್ಯ ರಮೇಶ್ ಹೇಳೋದೇ ಬೇರೆ. ‘ರಾಜ್​ಕುಮಾರ್ ಅವರು ಹೆಚ್ಚು ಕಲಿತಿಲ್ಲ. ಆದರೆ, ಅವರು ರಾಮಾಯಣ, ಮಹಾಭಾರತದ ಕೇಳುವ ಮೂಲಕ ಅವರು ಎಲ್ಲವನ್ನೂ ತಿಳಿದುಕೊಂಡಿದ್ದರು. ಅವರು ಜೀವನದಿಂದ ಸಾಕಷ್ಟು ಕಲಿಕೆ ಮಾಡಿದ್ದರು. ನಟನಾದವನಿಗೆ ಸಾತ್ವಿಕನಾಗಿರಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ರಂಗಭೂಮಿಯಿಂದ ಸಿನಿಮಾಕ್ಕೆ ಬಂದ ಮಂಡ್ಯ ರಮೇಶ್​ಗೆ ಮೊದಲು ಸಿಕ್ಕ ಸಂಭಾವನೆ ಎಷ್ಟು? ಶಿವಣ್ಣ ಹೇಳಿದ್ದೇನು?

ನಟನ ಶಾಲೆಯ ಬಗ್ಗೆ..

‘ನಟನ’ ಶಾಲೆ ಮೂಲಕ ಮಂಡ್ಯ ರಮೇಶ್ ಅವರು ಅನೇಕರಿಗೆ ನಟನೆ ಕಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಮೇಶ್, ‘ನಾವು ಅವರಿಗೆ ಕಲಿಸುತ್ತಿದ್ದೇವೆ ಎಂಬುದಕ್ಕಿಂತ ಕಲಿಯುತ್ತಿದ್ದೇವೆ. ನಮ್ಮ ಶಾಲೆಯ ಮೂಲಕ ಏಕಾಗೃತೆ, ಗ್ರಹಣ ಶಕ್ತಿ, ಎಲ್ಲ ಪಂಥಗಳನ್ನು ಗೌರವಿಸಬೇಕು, ದೇಹ ಫ್ಲಿಕ್ಸಿಬೆಲ್ ಆಗಿ ಹೇಗೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳನ್ನು ಕಲಿಸಿಕೊಡುತ್ತೇವೆ. ರಂಗಭೂಮಿಗೆ ಸಂಬಂಧಿಸಿದ 15 ಸಾವಿರ ಪುಸ್ತಕ ಇದೆ. ಕಾಸ್ಟ್ಯೂಮ್ ಮಾಡೋದು ಗೇ್ಎ ಎಂದು ಹೇಳಿಕೊಡುತ್ತೇವೆ. ಸಂಗೀತದ ಬಗ್ಗೆ ತಿಳಿಸುತ್ತೇವೆಸೆಟ್ ಡಿಸೈನ್ ಹೇಳಿಕೊಡುತ್ತೇವೆ. ಬಣ್ಣಗಳ ಬಳಕೆ ಬಗ್ಗೆ ಹೇಳಿಕೊಡುತ್ತೇವೆ’ ಎನ್ನುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:08 pm, Sat, 18 January 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ