AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲೊಂದು ‘ಕಾಕ್ಟೇಲ್​’; ಹೊಸ ಪ್ರಯೋಗ ಮಾಡಲು ಬಂದು ಹೊಸಬರ ಟೀಮ್​

‘ಕಾಕ್ಟೇಲ್​’ ಚಿತ್ರಕ್ಕೆ ವೀರೇನ್​ ಕೇಶವ್​ ಹೀರೋ. ಅವರಿಗೆ ಜೋಡಿಯಾಗಿ ಚರೀಷ್ಮಾ ನಟಿಸಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಸಿನಿಮಾ.

ಕನ್ನಡದಲ್ಲೊಂದು ‘ಕಾಕ್ಟೇಲ್​’; ಹೊಸ ಪ್ರಯೋಗ ಮಾಡಲು ಬಂದು ಹೊಸಬರ ಟೀಮ್​
ಚರೀಷ್ಮಾ, ವೀರೇನ್ ಕೇಶವ್
TV9 Web
| Updated By: ಮದನ್​ ಕುಮಾರ್​|

Updated on: Dec 22, 2021 | 6:37 PM

Share

ಹೊಸಬರ ತಂಡವೊಂದು ‘ಕಾಕ್ಟೇಲ್​’ (Cocktail) ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದೆ. ಈ ಟೈಟಲ್​ ಹೇಳುತ್ತಿದ್ದಂತೆಯೇ ಹಾಲಿವುಡ್​ ಮತ್ತು ಬಾಲಿವುಡ್​ ಸಿನಿಮಾಗಳು ನೆನಪಾಗುತ್ತವೆ. ಇದೇ ಶೀರ್ಷಿಕೆ ಇಟ್ಟುಕೊಂಡು 1988ರಲ್ಲಿ ಹಾಲಿವುಡ್​ ಹಾಗೂ 2012ರಲ್ಲಿ ಬಾಲಿವುಡ್​ನಲ್ಲಿ ಸಿನಿಮಾ ಮೂಡಿಬಂದಿದ್ದವು. ಆದರೆ ಆ ಚಿತ್ರಗಳಿಗೂ ಕನ್ನಡದ ಈ ‘ಕಾಕ್ಟೇಲ್​’ (Cocktail Movie) ಸಿನಿಮಾಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ ನಿರ್ದೇಶಕ ಶ್ರೀರಾಮ್​. ಈ ಚಿತ್ರಕ್ಕೆ ಈಗಾಗಲೇ ಎರಡು ಹಂತದ ಶೂಟಿಂಗ್​ ಮುಗಿದಿದೆ. ಪ್ರಸ್ತುತ ಡಬ್ಬಿಂಗ್​ ಕೆಲಸಗಳು ನಡೆಯುತ್ತಿವೆ. ಈ ಚಿತ್ರದ ನಿರೂಪಣೆಯಲ್ಲಿ ಹೊಸತನವನ್ನು ತೋರಿಸಲು ಪ್ರಯತ್ನಿಸಿರುವುದಾಗಿ ಹೇಳುವ ನಿರ್ದೇಶಕ ಶ್ರೀರಾಮ್​ ಅವರು ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

‘ಕಾಕ್ಟೇಲ್​’ ಚಿತ್ರಕ್ಕೆ ವೀರೇನ್​ ಕೇಶವ್​ ಹೀರೋ. ಅವರಿಗೆ ಜೋಡಿಯಾಗಿ ಚರೀಷ್ಮಾ ನಟಿಸಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಸಿನಿಮಾ. ಅನುಪಮ್​ ಖೇರ್​ ಅವರ ಸಂಸ್ಥೆಯಲ್ಲಿ ನಟನೆಯ ಪಾಠಗಳನ್ನು ವೀರೇನ್​ ಕೇಶವ್​ ಕಲಿತು ಬಂದಿದ್ದಾರೆ. ಚರೀಷ್ಮಾ ಅವರಿಗೆ ಚಿತ್ರತಂಡವೇ ವರ್ಕ್​ಶಾಪ್​ ಮಾಡಿದೆ. ಆಡಿಷನ್​ ಮೂಲಕ ಇಬ್ಬರನ್ನೂ ಆಯ್ಕೆ ಮಾಡಿಕೊಳ್ಳಲಾಯಿತು.

‘ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ. ಮರ್ಡರ್​ ಮಿಸ್ಟರಿ ಕಥೆಯನ್ನು ಹೊಂದಿದೆ. ಒಂದೇ ಹೆಸರಿನ, ಒಂದೇ ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಆದರೆ ಕ್ಲೈಮ್ಯಾಕ್ಸ್​ನಲ್ಲಿ ಬೇರೆಯದೇ ವಿಷಯಗಳು ತೆರೆದುಕೊಳ್ಳುತ್ತವೆ. ಅನೇಕ ಅಂಶಗಳನ್ನು ಬೆರೆಸಿ, ಕಾಕ್ಟೇಲ್​ ಪಾನೀಯದ ರೀತಿಯಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಈ ಚಿತ್ರದ ನಿರೂಪಣೆ’ ಎಂದಿದ್ದಾರೆ ನಿರ್ದೇಶಕರು.

ವಿಜಯಲಕ್ಷ್ಮೀ ಕಂಬೈನ್ಸ್​ ಬ್ಯಾನರ್​ನಲ್ಲಿ ಡಾ. ಶಿವಣ್ಣ ಅವರು ‘ಕಾಕ್ಟೇಲ್​’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಶೋಭರಾಜ್​, ಮಹಾಂತೇಶ್​, ಶಿವಮಣಿ, ಚಂದ್ರಕಲಾ ಮೋಹನ್​, ಕರಿಸುಬ್ಬು, ರಮೇಶ್​ ಪಂಡಿತ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೋಕಿತವಸ್ಯ ಸಂಗೀತ, ಮೋಹನ್​ ಬಿ. ರಂಗಕಹಳೆ ಸಂಕಲನ ಮಾಡಿದ್ದಾರೆ. ಹೃದಯಶಿವ ಹಾಗೂ ಸಿರಾಜ್​ ಮಿಜಾರ್​ ಸಾಹಿತ್ಯ ಬರೆದಿದ್ದಾರೆ. ನರಸಿಂಹ ಸಾಹಸ, ಸುನಿಲ್​ ನೃತ್ಯ ನಿರ್ದೇಶನ ಮಾಡಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ ಟ್ರೇಲರ್​ ಬಿಡುಗಡೆ ಮಾಡಬೇಕು ಎಂದು ‘ಕಾಕ್ಟೇಲ್​’ ತಂಡ ಗುರಿ ಇಟ್ಟುಕೊಂಡಿದೆ. ಫೆಬ್ರವರಿ ಕೊನೇ ಅಥವಾ ಮಾರ್ಚ್​ ಮೊದಲ ವಾರದಲ್ಲಿ ಥಿಯೇಟರ್​ಗಳ ಲಭ್ಯತೆ ನೋಡಿಕೊಂಡು ಸಿನಿಮಾ ರಿಲೀಸ್​ ಮಾಡಲು ಪ್ಲ್ಯಾನ್​ ಮಾಡಿಕೊಳ್ಳಲಾದೆ. ‘ನಮ್ಮ ಸಿನಿಮಾದ ರಿಲೀಸ್​ ಪ್ಲ್ಯಾನ್​ ಬಗ್ಗೆ ಪುನೀತ್​ ರಾಜ್​ಕುಮಾರ್​ ಅವರ ಜತೆ ಮಾತುಕತೆ ಮಾಡಿದ್ದೆವು. ಒಟಿಟಿ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ ಆ ಯೋಜನೆ ಕೈಗೂಡುವುದಕ್ಕೂ ಮುನ್ನವೇ ಅವರು ನಿಧನರಾಗಿದ್ದು ನೋವಿನ ಸಂಗತಿ’ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ.

Charishma Viren Keshav (1)

(ವೀರೇನ್ ಕೇಶವ್, ಚರೀಷ್ಮಾ)

ಇದನ್ನೂ ಓದಿ:

‘ಭಜರಂಗಿ 2’ ಚಿತ್ರವನ್ನು ಪುನೀತ್​ ರಾಜ್​ಕುಮಾರ್​ಗೆ ಅರ್ಪಿಸಿದ ಶಿವರಾಜ್​ಕುಮಾರ್​

‘ಅಪ್ಪು ಅವರನ್ನು ಬೆಳೆಸಿದ್ದು ನಾವಲ್ಲ, ಅಭಿಮಾನಿಗಳು’: ಪುನೀತ್​ ಬಗ್ಗೆ ಮಧು ಬಂಗಾರಪ್ಪ ಮಾತು