‘ಕಾಂತಾರ’ ಚಿತ್ರದ ಕೋಣಕ್ಕೆ ಇರೋ ಸವಲತ್ತು ಒಂದೆರಡಲ್ಲ; ಇವನ್ನು ಸಾಕೋ ವಿಧಾನವೇ ಬೇರೆ

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿ ಕೋಣಗಳನ್ನು ಓಡಿಸಿದ್ದಾರೆ. ಅವರಿಗೆ ಮೊದಲು ಈ ಅನುಭವ ಇರಲಿಲ್ಲ. ಸಾಕಷ್ಟು ಕಷ್ಟಪಟ್ಟು ಇದನ್ನು ಕಲಿತಿದ್ದಾರೆ ಅವರು. ಸಿನಿಮಾದಲ್ಲಿ ಆ ದೃಶ್ಯಗಳು ಮೈನವರೇಳಿಸುವಂತಿದೆ.

‘ಕಾಂತಾರ’ ಚಿತ್ರದ ಕೋಣಕ್ಕೆ ಇರೋ ಸವಲತ್ತು ಒಂದೆರಡಲ್ಲ; ಇವನ್ನು ಸಾಕೋ ವಿಧಾನವೇ ಬೇರೆ
Follow us
|

Updated on: Nov 27, 2023 | 1:11 PM

‘ಕಾಂತಾರ’ ಚಿತ್ರದಲ್ಲಿ ಕಂಬಳದ ದೃಶ್ಯ ಬರುತ್ತದೆ. ಇದರಲ್ಲಿ ರಿಷಬ್ ಶೆಟ್ಟಿ (Rishab Shetty) ಅವರು ಕೋಣ ಓಡಿಸಿದ್ದರು. ಅದೇ ಕೋಣಗಳು ಬೆಂಗಳೂರಿಗೆ ಬಂದಿದ್ದವು. ಬೆಂಗಳೂರಿನಲ್ಲಿ ಇತ್ತೀಚೆಗೆ ಕಂಬಳ ನಡೆದಿತ್ತು. ಈ ಕಂಬಳದಲ್ಲಿ ‘ಕಾಂತಾರ’ ಕೋಣಗಳು ಭಾಗವಹಿಸಿ ಜಯಭೇರಿ ಬಾರಿಸಿವೆ. ಈ ಕೋಣಗಳನ್ನು ಓಡಿಸಿದವರು ಟಿವಿ 9 ಕನ್ನಡದ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕೋಣಗಳನ್ನು ಸಾಕೋದು ಅಷ್ಟು ಸುಲಭದಲ್ಲಿ ಇಲ್ಲ ಎಂಬುದು ಅವರ ಮಾತು.

ಕನಹಲಗೆಯ ಕಂಬಳ ವಿಭಾಗದಲ್ಲಿ ಬೋಳಂಬಳ್ಳಿ ಪರಮೇಶ್ವರ್ ಭಟ್ ಮಾಲೀಕತ್ವದ ಕೋಣಗಳು ವಿಜಯ ಸಾಧಿಸಿವೆ. ಈ ಮೂಲಕ ಚಿನ್ನದ ಪದಕ ಗೆದ್ದಿವೆ. ಇವುಗಳನ್ನು ಓಡಿಸಿದವರು ಕೋಣದ ವಿಶೇಷತೆ ಕುರಿತು ಮಾತನಾಡಿದ್ದಾರೆ. ಈ ಕೋಣಗಳಿಗೆ ಕಿಟ್ಟು-ಅಪ್ಪು ಎಂದು ಹೆಸರು ಇಡಲಾಗಿದೆ. ಕಿಟ್ಟುಗೆ 12 ವರ್ಷ ಹಾಗೂ ಅಪ್ಪುಗೆ 10 ವರ್ಷ. ಒಂದು ದಿನಕ್ಕೆ ಪ್ರತಿ ಕೋಣಕ್ಕೆ ಎರಡು ಶೇರು ಹುರಳಿ, 10 ಕಟ್ಟು ಹುಲ್ಲು, ವಾರಕ್ಕೆ ಒಮ್ಮೆ ಎಣ್ಣೆಯ ಸ್ನಾನ ಮಾಡಿಸಲಾಗುತ್ತದೆ. ಈ ಕೋಣಗಳು ಸಾಕಷ್ಟು ವೇಗವಾಗಿ ಓಡಬೇಕು. ಹೀಗಾಗಿ, ಅವುಗಳಿಗೆ ಹೆಚ್ಚಿನ ಆಹಾರದ ಅಗತ್ಯ ಇರುತ್ತದೆ. ಹೀಗಾಗಿ, ಕೋಣಗಳನ್ನು ವಿಶೇಷ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ.

‘ರಿಷಬ್ ಶೆಟ್ಟಿ ನಮ್ಮ ಊರಿನವರೇ. ಕೋಣಗಳನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡರು. ರಿಷಬ್ ಮನೆಯಲ್ಲಿ ಕೋಣಗಳಿದ್ದವು. ಅವರು ಮೊದಲು ಕೋಣಗಳನ್ನು ನೋಡಿದ್ದರಿಂದ ಕಂಬಳ ಓಡಿಸುವುದನ್ನು ಬೇಗ ಕಲಿತರು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ತೆರೆ, ಫೈನಲ್​ನಲ್ಲಿ ಚಿನ್ನ ಬೇಟೆಯಾಡಿದ ಕೋಣಗಳ ವಿವರ ಇಲ್ಲಿದೆ

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿ ಕೋಣಗಳನ್ನು ಓಡಿಸಿದ್ದಾರೆ. ಅವರಿಗೆ ಮೊದಲು ಈ ಅನುಭವ ಇರಲಿಲ್ಲ. ಸಾಕಷ್ಟು ಕಷ್ಟಪಟ್ಟು ಇದನ್ನು ಕಲಿತಿದ್ದಾರೆ ಅವರು. ಸಿನಿಮಾದಲ್ಲಿ ಆ ದೃಶ್ಯಗಳು ಮೈನವರೇಳಿಸುವಂತಿದೆ. ‘ಕಾಂತಾರ 2’ ಚಿತ್ರಕ್ಕೆ ಕೋಣಗಳು ಬೇಕಾದರೆ ಪರಮೇಶ್ವರ ಭಟ್ಟರು ಇವುಗಳನ್ನು ಕೊಡಲು ಸಿದ್ಧರಿದ್ದಾರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ