Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಸಿಕ್ಕ ಬಳಿಕ ಕಾರ್ತಿಕ್ ಮಹೇಶ್​ಗೆ ಗೆಳೆಯರಿಂದ ಆಗ್ತಿರೋ ಸಮಸ್ಯೆ ಒಂದೆರಡಲ್ಲ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಗೆದ್ದವರಿಗೆ ಮಾರುತಿ ಬ್ರೇಜಾ ಸಿಗಲಿದೆ ಎನ್ನುವ ಘೋಷಣೆಯನ್ನು ಮಾಡಲಾಗಿತ್ತು. ಅದೇ ರೀತಿ ಕಾರ್ತಿಕ್ ಮಹೇಶ್​​ಗೆ ಕಾರು ಸಿಕ್ಕಿತ್ತು. ಎಲ್ಲಾ ಪ್ರಕ್ರಿಯೆ ಮುಗಿದು ಕಾರು ಬರಲು ಸ್ವಲ್ಪ ತಡವಾಗಿದೆ. ಈ ಕಾರು ಬಂದ ಬಳಿ ಕಾರ್ತಿಕ್ ಮಹೇಶ್​ಗೆ ತೊಂದರೆ ಹೆಚ್ಚಿದೆಯಂತೆ.

ಕಾರು ಸಿಕ್ಕ ಬಳಿಕ ಕಾರ್ತಿಕ್ ಮಹೇಶ್​ಗೆ ಗೆಳೆಯರಿಂದ ಆಗ್ತಿರೋ ಸಮಸ್ಯೆ ಒಂದೆರಡಲ್ಲ
ಕಾರು ಸಿಕ್ಕ ಬಳಿಕ ಕಾರ್ತಿಕ್ ಮಹೇಶ್​ಗೆ ಗೆಳೆಯರಿಂದ ಆಗ್ತಿರೋ ಸಮಸ್ಯೆ ಒಂದೆರಡಲ್ಲ
Follow us
ರಾಜೇಶ್ ದುಗ್ಗುಮನೆ
|

Updated on:Sep 28, 2024 | 6:57 AM

ನಟ ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಗೆಲುವು ಕಂಡು ಹೆಸರು ಮಾಡಿದರು. ಅವರ ಖ್ಯಾತಿ ದೊಡ್ಡ ಮಟ್ಟದಲ್ಲಿ ಹೆಚ್ಚಾಯಿತು. ಅಷ್ಟೇ ಅಲ್ಲ ಅವರಿಗೆ 50 ಲಕ್ಷ ಕ್ಯಾಶ್ ಪ್ರೈಜ್ ಜೊತೆ ಕಾರ್ ಕೂಡ ಗಿಫ್ಟ್ ಆಗಿ ಸಿಕ್ಕಿತ್ತು. ಈ ಕಾರು ಮನೆಗೆ ಬಂದ ಬಳಿಕ ಕಾರ್ತಿಕ್ ಮಹೇಶ್​ಗೆ ಸಾಕಷ್ಟು ತೊಂದರೆಗಳು ಆಗುತ್ತಿವೆ. ಈ ಬಗ್ಗೆ ಅವರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಗೆದ್ದವರಿಗೆ ಮಾರುತಿ ಬ್ರೇಜಾ ಸಿಗಲಿದೆ ಎನ್ನುವ ಘೋಷಣೆಯನ್ನು ಮಾಡಲಾಗಿತ್ತು. ಅದೇ ರೀತಿ ಕಾರ್ತಿಕ್ ಮಹೇಶ್​​ಗೆ ಕಾರು ಸಿಕ್ಕಿತ್ತು. ಬಿಗ್ ಬಾಸ್ ಮುಗಿದ ಹಲವು ತಿಂಗಳ ಬಳಿಕ ಅವರ ಕೈಗೆ ಕಾರು ಸೇರಿದೆ. ಎಲ್ಲಾ ಪ್ರಕ್ರಿಯೆ ಮುಗಿದು ಕಾರು ಬರಲು ಸ್ವಲ್ಪ ತಡವಾಗಿದೆ. ಈ ಕಾರು ಬಂದ ಬಳಿ ಕಾರ್ತಿಕ್ ಮಹೇಶ್​ಗೆ ತೊಂದರೆ ಹೆಚ್ಚಿದೆಯಂತೆ.

ಕಾಮಿಡಿಯನ್, ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಸ್ಪರ್ಧಿ ರಘು ವೈನ್ ಸ್ಟೋರ್ ಹಾಗೂ ಯೂಟ್ಯೂಬರ್ ದೀಪಕ್ ಜೊತೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಘು ಹಾಗೂ ದೀಪಕ್ ಅವರು ಕಾರ್ತಿಕ್ ಮಹೇಶ್ ಗೆಳೆಯರಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಕಾರು ಬಂದ ಬಳಿಕ ಅವರು ಆಡೋ ಆಟಗಳನ್ನು ನೋಡಿ ಕಾರ್ತಿಕ್ ಬೇಸತ್ತು ಹೋಗಿದ್ದಾರೆ.

ಇದನ್ನೂ ಓದಿ: ‘ನಾನು ರೂಲ್ಸ್​​ನ ಸೆಟ್​​ ಮಾಡ್ತೀನಿ’; ಹೊಸ ರಿಯಾಲಿಟಿ ಶೋಗೆ ಹೋಸ್ಟ್ ಆದ ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ದೂರದಿಂದ ಬರುವಾಗ ರಘು ಹಾಗೂ ದೀಪಕ್ ಕಾರಿಗೆ ಒರಗಿ ನಿಂತಿರುತ್ತಾರೆ. ಅವರು ಹತ್ತಿರ ಬರುತ್ತಿದ್ದಂತೆ ಶರ್ಟ್ ಬಿಚ್ಚಿ ಅದನ್ನು ಒರೆಸೋಕೆ ಆರಂಭಿಸುತ್ತಾರೆ. ಮತ್ತೊಂದು ದೃಶ್ಯದಲ್ಲಿ ಕಾರ್ತಿಕ್ ಮಹೇಶ್​ಗೆ ಕರೆ ಮಾಡೋ ರಘು ತುರ್ತಾಗಿ ಕಾರು ತೆಗೆದುಕೊಂಡು ಬರುವಂತೆ ಕೋರುತ್ತಾರೆ. ಕಾರು ತೆಗೆದುಕೊಂಡು ಬಂದು ನೋಡಿದರೆ ‘ಕೊತ್ತುಂಬರಿ ಸೊಪ್ಪು ತರೋದು ಇತ್ತು ಅದಕ್ಕೆ ಕರೆಸಿದೆ’ ಎನ್ನುತ್ತಾರೆ. ಈ ರೀತಿ ಹಾಸ್ಯ ರೂಪದಲ್ಲಿ ಈ ವಿಡಿಯೋನ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:55 am, Sat, 28 September 24

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ