AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಡೈಲಾಗ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್

KGF Chapter 2: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಡೈಲಾಗ್​ಗಳು ತುಂಬ ಫೇಮಸ್​ ಆಗಿವೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ವಾಯ್ಲೆನ್ಸ್​.. ವಾಯ್ಲೆನ್ಸ್​..’ ಡೈಲಾಗ್​ಗಳು ಬೇರೆ ರೂಪ ಪಡೆದುಕೊಂಡಿದೆ.

ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಡೈಲಾಗ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್
ಯಶ್​, ವೈರಲ್​ ಆಗಿರುವ ಆಮಂತ್ರಣ ಪತ್ರಿಕೆ
TV9 Web
| Edited By: |

Updated on: Apr 20, 2022 | 1:46 PM

Share

ಕನ್ನಡದ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಎಷ್ಟು ಮೋಡಿ ಮಾಡಿದೆ ಎಂಬುದನ್ನು ವಿವರಿಸುವುದು ಕಷ್ಟ. ಪ್ರೇಕ್ಷಕರ ವಲಯದಲ್ಲಿ ಈ ಚಿತ್ರ ಒಂದು ಬಗೆಯ ಗಂಗು ಹಿಡಿಸಿದೆ. ಚಿಕ್ಕ ಟೀಸರ್​ ರಿಲೀಸ್​ ಆದ ದಿನದಿಂದಲೂ ಯಶ್​ ( Yash) ಅಭಿಮಾನಿಗಳು ಈ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ರೇಲರ್​ ಬಿಡುಗಡೆ ಆದಾಗ ಆ ನಿರೀಕ್ಷೆ ದುಪ್ಪಟ್ಟಾಯಿತು. ಈಗ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಪ್ರತಿ ಡೈಲಾಗ್​ ಕೂಡ ವೈರಲ್​ ಆಗಿದೆ. ಅದರಲ್ಲೂ ಯಶ್​ ಹೇಳಿದ ‘ವಾಯ್ಲೆನ್ಸ್​ ವಾಯ್ಲೆನ್ಸ್​ ವಾಯ್ಲೆನ್ಸ್​..’ ಡೈಲಾಗ್​ ದೇಶಾದ್ಯಂತ ಫೇಮಸ್​ ಆಗಿದೆ. ರೀಲ್ಸ್​ ತುಂಬೆಲ್ಲ ಈ ಡೈಲಾಗ್​ ಕೇಳಿಸುತ್ತಿದೆ. ಇದೇ ಡೈಲಾಗ್​ ಇಟ್ಟುಕೊಂಡು ಕೆಲವರು ಹೊಸ ಹೊಸ ವರ್ಷನ್​ ಮಾಡುತ್ತಿದ್ದಾರೆ. ಈಗ ಮದುವೆ ಆಹ್ವಾನ ಪತ್ರಿಕೆಯ ಮೇಲೂ ‘ವಾಯ್ಲೆನ್ಸ್​ ವಾಯ್ಲೆನ್ಸ್​ ವಾಯ್ಲೆನ್ಸ್​..’ ಡೈಲಾಗ್​ನ ಶೈಲಿಯಲ್ಲಿ ಒಂದು ಸಾಲು ಬರೆಯಲಾಗಿದೆ. ಆ ಮದುವೆ ಕಾರ್ಡ್ (Wedding Card)​ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ ಅದರಲ್ಲಿ ಬರೆದಿರುವುದು ಏನು? ಈ ಮದುವೆ ಎಲ್ಲಿ ನಡೆಯುತ್ತಿದೆ? ಇಲ್ಲಿದೆ ಪೂರ್ತಿ ಮಾಹಿತಿ.

ಚಂದ್ರಶೇಖರ್​ ಮತ್ತು ಶ್ವೇತಾ ಎಂಬುವವರು ಮೇ 13ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಳಗಾವಿಯಲ್ಲಿ ಇವರ ಮದುವೆ ನಡೆಯಲಿದೆ. ವಿವಾಹದ ಆಮಂತ್ರಣ ಪತ್ರಿಕೆಯನ್ನು ಇಂಗ್ಲಿಷ್​ನಲ್ಲಿ ಮುದ್ರಿಸಲಾಗಿದೆ. ಇದರಲ್ಲಿ ಈ ರೀತಿ ಒಂದು ಸಾಲು ಬರೆಯಲಾಗಿದೆ. ‘ಮ್ಯಾರೇಜ್​ ಮ್ಯಾರೇಜ್​ ಮ್ಯಾರೇಜ್​.. ಐ ಡೋಂಟ್​ ಲೈಕ್​ ಇಟ್​. ಐ ಅವಾಯ್ಡ್​.. ಬಟ್​ ಮೈ ರಿಲೇಟಿವ್ಸ್​ ಲೈಕ್​ ಮ್ಯಾರೇಜ್​. ಐ ಕಾಂಟ್​ ಅವಾಯ್ಡ್​’ ಎಂದು ಬರೆದಿರುವುದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಬಾಕ್ಸ್​ ಆಫೀಸ್​ನಲ್ಲಿ ‘ಕೆಜಿಎಫ್​ 2’ ಆರ್ಭಟ:

ವಿಶ್ವಾದ್ಯಂತ ‘ಕೆಜಿಎಫ್​ 2’ ಸಿನಿಮಾ ಧೂಳೆಬ್ಬಿಸಿದೆ. ಎಲ್ಲ ಭಾಷೆಗಳಿಂದ ಈಗಾಗಲೇ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿದೆ. ಚಿತ್ರಕ್ಕೆ ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಭರ್ಜರಿ ಲಾಭದಲ್ಲಿದೆ. ಯಶ್​ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಬಹು ದೊಡ್ಡ ಗೆಲುವು ಸಿಕ್ಕಿದೆ. ‘ಕೆಜಿಎಫ್​ 2’ ಸಿನಿಮಾದ ಲೈಫ್​ ಟೈಮ್​ ಕಲೆಕ್ಷನ್​ ಎಷ್ಟಾಗಬಹುದು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಅವರು ನಟಿಸಿದ್ದಾರೆ. ಉತ್ತರ ಭಾರತದ ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಪ್ರಕಾಶ್​ ರೈ, ರಾವ್​ ರಮೇಶ್​ ಮುಂತಾದ ಕಲಾವಿದರ ನಟನೆಯಿಂದಾಗಿ ಚಿತ್ರದ ತೂಕ ಹೆಚ್ಚಿದೆ. ಈ ಸಿನಿಮಾ ಮಾಡುತ್ತಿರುವ ದಾಖಲೆಗಳನ್ನು ಕಂಡು ಪರಭಾಷೆ ಮಂದಿ ಕೂಡ ಫಿದಾ ಆಗಿದ್ದಾರೆ. ವಿಶಾಲ್​, ಕಾರ್ತಿ, ಜಗಪತಿ ಬಾಬು, ಶಿವಕಾರ್ತಿಕೇಯನ್​, ಕೃತಿ ಕರಬಂಧ ಸೇರಿದಂತೆ ಅನೇಕರು ‘ಕೆಜಿಎಫ್​ 2’ ಸಿನಿಮಾದ ಸಾಧೆನಯನ್ನು ಕೊಂಡಾಡುತ್ತಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗೆ ಹಿಂದಿ ಮಾರುಕಟ್ಟೆಯಲ್ಲೂ ಅತ್ಯುತ್ತಮ ಕಲೆಕ್ಷನ್​ ಆಗುತ್ತಿದೆ. ಮೊದಲ ದಿನ 53.95 ಕೋಟಿ ರೂಪಾಯಿ, ಎರಡನೇ ದಿನ 46.79 ಕೋಟಿ, ಮೂರನೇ ದಿನ 42.90 ಕೋಟಿ, ನಾಲ್ಕನೇ ದಿನ 50.35 ಕೋಟಿ, ಐದನೇ ದಿನ 25.57 ಕೋಟಿ ಹಾಗೂ ಆರನೇ ದಿನ 19.14 ಕೋಟಿ ರೂಪಾಯಿ ಕಲೆಕ್ಷನ್​ ಹಿಂದಿ ಅವತರಣಿಕೆಯಿಂದ ಆಗಿದೆ.

ಇದನ್ನೂ ಓದಿ:

ರಾಕಿ ಭಾಯ್​ ತಾಯಿ ಪಾತ್ರ ಮಾಡಿದ ‘ಕೆಜಿಎಫ್​ 2’ ನಟಿ ಅರ್ಚನಾ ಜೋಯಿಸ್​ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್​

‘RRR​’ ಚಿತ್ರದ ಹಿಂದಿ ಕಲೆಕ್ಷನ್​ ಹಿಂದಿಕ್ಕಲು ‘ಕೆಜಿಎಫ್​ 2’ ಸಿನಿಮಾಗೆ ಇನ್ನೆಷ್ಟು ಕೋಟಿ ರೂ. ಬಾಕಿ? ​ಇಲ್ಲಿದೆ ಲೆಕ್ಕ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ