‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?

Kriti Kharbanda | Yash: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸೂಪರ್​ ಹಿಟ್​ ಆಗಿದ್ದಕ್ಕೆ ನಟಿ ಕೃತಿ ಕರಬಂಧ ಅವರು ಯಶ್​ಗೆ ಅಭಿನಂದನೆ ತಿಳಿಸಿದ್ದಾರೆ. ಅದು ಕೂಡ ‘ಗೂಗ್ಲಿ’ ಸಿನಿಮಾದ ಶೈಲಿಯಲ್ಲಿ.

‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
ಕೃತಿ ಕರಬಂಧ, ಯಶ್
Follow us
| Updated By: ಮದನ್​ ಕುಮಾರ್​

Updated on: Apr 17, 2022 | 2:21 PM

ಎಲ್ಲ ಭಾಷೆಯ ಚಿತ್ರರಂಗದವರೂ ಈಗ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇಡೀ ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ಹೆಮ್ಮೆ ತಂದಿದೆ. ನಿರ್ದೇಶಕ ಪ್ರಶಾಂತ್​ ನೀಲ್​, ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ನಟ ಯಶ್ (Yash)​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಈ ಸಿನಿಮಾ ವಿಶ್ವಾದ್ಯಂತ ಅಬ್ಬರಿಸುತ್ತಿದೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಗಲ್ಲಾಪೆಟ್ಟಿಗೆ ಕಲೆಕ್ಷನ್​ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಯಶ್​ ಅವರ ಸಾಧನೆಗೆ ಪರಭಾಷೆ ಮಂದಿ ಕೂಡ ಭೇಷ್​ ಎನ್ನುತ್ತಿದ್ದಾರೆ. ಅದೇ ರೀತಿ, ನಟಿ ಕೃತಿ ಕರಬಂಧ (Kriti Kharbanda) ಅವರು ಕೊಂಚ ಡಿಫರೆಂಟ್​ ಆಗಿ ಅಭಿನಂದನೆ ಸಲ್ಲಿಸಿದ್ದಾರೆ. ಯಶ್​ ಜೊತೆ ಅವರು ಈ ಹಿಂದೆ ‘ಗೂಗ್ಲಿ’ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದ ಒಂದು ದೃಶ್ಯವನ್ನು ಅವರೀಗ ಮತ್ತೆ ನೆನಪಿಸಿದ್ದಾರೆ. ‘ಕಬ್ಬಿನ ಹಾಲಿನ’ ಟ್ರೀಟ್​ ಬೇಕು ಎಂದು ಅವರು ಯಶ್​ ಬಳಿ ಕೇಳಿದ್ದಾರೆ.

ಮೊದಲ ದಿನವೇ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಬರೋಬ್ಬರಿ 134.5 ಕೋಟಿ ರೂಪಾಯಿ ಗಳಿಸಿರುವುದು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಸಾಧನೆ. ಎರಡನೇ ದಿನಕ್ಕೆ ಒಟ್ಟು ಗಳಿಕೆ 240 ಕೋಟಿ ರೂಪಾಯಿ ಆಯಿತು. ಮೂರು ಮತ್ತು ನಾಲ್ಕನೇ ದಿನವೂ ಈ ಚಿತ್ರದ ನಾಗಾಲೋಟ ಮುಂದುವರಿದಿದೆ. ಈ ಬೃಹತ್​ ಗೆಲುವಿನಿಂದ ಚಿತ್ರತಂಡ ಖುಷ್​ ಆಗಿದೆ. ಇಡೀ ಟೀಮ್​ಗೆ ಕೃತಿ ಕರಬಂಧ ಕಂಗ್ರಾಜ್ಯುಲೇಷನ್​ ತಿಳಿಸಿದ್ದಾರೆ.

‘ಯಶ್​ ಇದು ಕಬ್ಬಿನ ಹಾಲು ಟ್ರೇಟ್​ ಕೊಡಿಸುವ ಸಮಯ. ಕೆಜಿಎಫ್​ 2 ಸಿನಿಮಾದ ದೊಡ್ಡ ಗೆಲುವಿಗೆ ಅಭಿನಂದನೆಗಳು’ ಎಂದು ಕೃತಿ ಕರಬಂಧ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಕಮೆಂಟ್​ ಮಾಡಿರುವ ಯಶ್​ ಅವರು ‘ಧನ್ಯವಾದಗಳು’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಟ್ವೀಟ್​ ನೋಡಿದ ಬಳಿಕ ಅಭಿಮಾನಿಗಳು ‘ಗೂಗ್ಲಿ’ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಆ ಸಿನಿಮಾ 2013ರಲ್ಲಿ ತೆರೆಕಂಡಿತ್ತು. ಪವನ್​ ಒಡೆಯರ್​ ಅವರು ನಿರ್ದೇಶನ ಮಾಡಿದ್ದರು.

‘ಗೂಗ್ಲಿ’ ಸಿನಿಮಾದಲ್ಲಿ ನಾಯಕ-ನಾಯಕಿ ಭೇಟಿ ಆದಾಗ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಕುಡಿಯುವ ದೃಶ್ಯ ಇದೆ. ‘ಕಬ್ಬಿನ ಹಾಲು ಕಾಫಿಗಿಂತಲೂ ಹೆಚ್ಚು ಹೀಟ್​’ ಎಂದು ಕೃತಿ ಕರಬಂಧ ಡೈಲಾಗ್​ ಹೊಡೆದಾಗ, ‘ಇರಲಿ ಬಿಡಿ, ಯುವಕರು ಯಾವಾಗಲೂ ಹೀಟಲ್ಲೇ ಇರಬೇಕು’ ಅಂತ ಯಶ್​ ಹೇಳಿದ ಡೈಲಾಗ್​ ಸಖತ್​ ವೈರಲ್​ ಆಗಿತ್ತು. ಈಗ ‘ಕೆಜಿಎಫ್​ 2’ ಗೆಲುವು ಕಂಡಿರುವ ಈ ಸಂದರ್ಭದಲ್ಲಿ ಕೃತಿ ಕರಬಂಧ ಅವರು ಈ ಟ್ವೀಟ್​ ಮೂಲಕ ಆ ದೃಶ್ಯವನ್ನು ಮತ್ತೆ ನೆನಪಿಸಿದ್ದಾರೆ.

‘ಗೂಗ್ಲಿ’ ಸಿನಿಮಾ ನಿರ್ದೇಶಕ ಪವನ್​ ಒಡೆಯವರ್​ ಅವರು ಕೂಡ ‘ಕೆಜಿಎಫ್​ 2’ ತಂಡದ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ. ‘ರಾಕಿಂಗ್​ ಸ್ಟಾರ್​ ಯಶ್​. ಹೌದು, ಇಡೀ ಪ್ರಪಂಚವೇ ನಿಮ್ಮ ಟೆರಿಟರಿ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತದೆ’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

‘ಕೆಜಿಎಫ್​ 2’ ಬ್ಲಾಕ್​ ಬಸ್ಟರ್​ ಗೆಲುವು ಕಂಡ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ಚಿಂತೆ ಶುರು; ಏನಿದು ಟಾಕ್​?

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ