AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬ್ಯಾಟ್ ಹಿಡಿದು ಬಂದ ಕಿಚ್ಚ ಸುದೀಪ್: ಕೆಸಿಸಿ ಟೂರ್ನಿಯಲ್ಲಿ ಈ ಬಾರಿ ಕೆಲವು ಬದಲಾವಣೆ

KCC: ಕಿಚ್ಚ ಸುದೀಪ್ ಮುನ್ನೆಲೆಯಲ್ಲಿ ನಿಂತು ಆಯೋಜಿಸುವ ಕೆಸಿಸಿ ಕ್ರಿಕೆಟ್ ಟೂರ್ನಿ ಮತ್ತೆ ಬಂದಿದೆ. ಈ ವರ್ಷದ ಟೂರ್ನಿಯ ಬಗ್ಗೆ ಮಾತನಾಡಿರುವ ಸುದೀಪ್, ಈ ಬಾರಿ ಏನೇನು ಭಿನ್ನತೆ ಇರಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಮತ್ತೆ ಬ್ಯಾಟ್ ಹಿಡಿದು ಬಂದ ಕಿಚ್ಚ ಸುದೀಪ್: ಕೆಸಿಸಿ ಟೂರ್ನಿಯಲ್ಲಿ ಈ ಬಾರಿ ಕೆಲವು ಬದಲಾವಣೆ
ಸುದೀಪ್-ಕೆಸಿಸಿ
ಮಂಜುನಾಥ ಸಿ.
|

Updated on: Nov 24, 2023 | 8:23 PM

Share

ಕಿಚ್ಚ ಸುದೀಪ್​ (Sudeep) ಅವರದ್ದು ಬಹುಮುಖ ಪ್ರತಿಭೆ. ಸಿನಿಮಾ ಮಾತ್ರವೇ ಅಲ್ಲದೆ ಕ್ರೀಡೆ, ಅಡುಗೆ, ಹಾಡುಗಾರಿಕೆ, ಸಂಗೀತ ಹೀಗೆ ಹಲವು ಹವ್ಯಾಸಗಳನ್ನು ಸುದೀಪ್ ಇಟ್ಟುಕೊಂಡಿದ್ದಾರೆ. ಸಿನಿಮಾದಷ್ಟೆ ಉತ್ಕಟವಾಗಿ ಅವರು ಕ್ರಿಕೆಟ್ ಮತ್ತು ಅಡುಗೆಯನ್ನೂ ಪ್ರೀತಿಸುತ್ತಾರೆ. ಅದ್ಭುತ ಕ್ರಿಕೆಟ್ ಪ್ರೇಮಿಯಾಗಿರುವ ಸುದೀಪ್, ಚಿತ್ರರಂಗವೇ ಕ್ರಿಕೆಟ್ ಅನ್ನು ಸಂಭ್ರಮಿಸುವಂತೆ ಮಾಡಿದ್ದಾರೆ. ಚಿತ್ರರಂಗ ಮೊದಲಿನಿಂದಲೂ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುತ್ತಾ ಆಡುತ್ತಾ ಬಂದಿದೆ. ಅದಕ್ಕೆ ಒಂದು ಶಿಸ್ತು, ದೊಡ್ಡ ಮಟ್ಟಿಗಿನ ಪ್ರಚಾರ, ಪ್ರಸಾರವನ್ನು ಸುದೀಪ್ ನೀಡಿದ್ದಾರೆ. ಸುದೀಪ್​ ಮುನ್ನೆಲೆಯಲ್ಲಿ ನಿಂತು ಆಯೋಜಿಸುವ ಕೆಸಿಸಿ ಕರ್ನಾಟಕ ಕ್ರಿಕೆಟ್ ರಂಗದಲ್ಲಿ ಪ್ರಮುಖ ಟೂರ್ನಿಗಳಲ್ಲಿ ಒಂದಾಗಿದೆ. ಇದೀಗ ಈ ವರ್ಷ ಮತ್ತೆ ಕೆಸಿಸಿ ಬಂದಿದ್ದು, ಈ ಬಾರಿ ಕೆಲವು ಬದಲಾವಣೆಗಳಿವೆ.

ಈ ವರ್ಷದ ಕೆಸಿಸಿ ಟೂರ್ನಿ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ನಟ ಸುದೀಪ್, ‘‘ಈ ಬಾರಿ ಕೆಲವು ಬದಲಾವಣೆಗಳು ಇರುತ್ತವೆ. ಕಳೆದ ಬಾರಿ ಎರಡು ದಿನಗಳ ಕಾಲ ಮಾತ್ರವೇ ಟೂರ್ನಿ ನಡೆಯುತ್ತಿತ್ತು. ಇರುವ ಆರು ತಂಡಗಳಿಗೆ ತಲಾ ಎರಡು ಅಥವಾ ಮೂರು ಪಂದ್ಯಗಳಷ್ಟೆ ಆಡಲು ಸಿಗುತ್ತಿತ್ತು. ಆದರೆ ಈ ಬಾರಿ ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ. ಹಾಗೂ ರೌಂಡ್ ರಾಬಿನ್ ವಿಧಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಪ್ರತಿ ತಂಡಕ್ಕೆ ಕನಿಷ್ಟ ಆರು ಪಂದ್ಯಗಳು ಆಡಲು ಸಿಗಲಿವೆ’’ ಎಂದರು.

ಇದನ್ನೂ ಓದಿ:KCC Trophy: ಡಿಸೆಂಬರ್​ನಲ್ಲಿ ‘ಕನ್ನಡ ಚಲನಚಿತ್ರ ಕಪ್’; ಮಾಹಿತಿ ನೀಡಿದ ಕಿಚ್ಚ ಸುದೀಪ್

‘‘ರಾಜ್ಯದ ಹಲವೆಡೆ ಒಳ್ಳೆಯ ಕ್ರಿಕೆಟ್ ಪಿಚ್​ಗಳಿವೆ. ನಮಗೂ ಅಲ್ಲೆಲ್ಲ ಹೋಗಿ ಜನರ ಮುಂದೆ ಆಡಬೇಕು ಎಂಬ ಆಸೆಯಿದೆ ಆದರೆ ಆ ಗ್ರೌಂಡ್​ಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಹಲವು ಸ್ಟಾರ್​ಗಳು ಒಂದೆಡೆ ಸೇರುವ ಕಾರಣ ದೊಡ್ಡ ಸಂಖ್ಯೆಯ ಜನ ಹರಿದು ಬರುತ್ತಾರೆ. ಅವರನ್ನೆಲ್ಲ ಕಂಟ್ರೋಲ್ ಮಾಡುವುದು ಆ ಗ್ರೌಂಡ್​ಗಳಲ್ಲಿ ಕಷ್ಟವಾಗುತ್ತದೆ. ಮುಂದೆ ಮೂಲಸೌಕರ್ಯಗಳು ಆ ಗ್ರೌಂಡ್​ಗಳಲ್ಲಿ ಹೆಚ್ಚಾದಾಗ ಬೇರೆ ನಗರಗಳಿಗೂ ಬಂದು ಆಡುತ್ತೇವೆ’’ ಎಂದಿದ್ದಾರೆ ಸುದೀಪ್.

‘‘ಈ ಬಾರಿಯೂ ಸಹ ವಿದೇಶಿ ಆಟಗಾರರು ನಮ್ಮ ತಂಡಗಳಲ್ಲಿ ಆಡಲಿದ್ದಾರೆ ಎಂದಿರುವ ಸುದೀಪ್, ಈ ಬಾರಿ ಕೆಲವು ಟಿವಿ ನಟರು ಸಹ ತಂಡಗಳನ್ನು ಸೇರಿಕೊಂಡಿದ್ದಾರೆ. ಕೆಲವು ಮಾಧ್ಯಮಗಳ ಪ್ರತಿನಿಧಿಗಳು ಸಹ ತಂಡಗಳನ್ನು ಸೇರಿಕೊಂಡಿದ್ದಾರೆ. ಈ ಬಾರಿ ಹೆಚ್ಚಿನ ಆಕ್ಷನ್ ಅನ್ನು, ಹೆಚ್ಚು ಜಿದ್ದಾ-ಜಿದ್ದಿನ ಪಂದ್ಯಗಳನ್ನು ನಿರೀಕ್ಷಿಸಬಹುದು. ಕೆಲವೇ ದಿನಗಳಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು ಆ ಹರಾಜು ಪ್ರಕ್ರಿಯೆಯ ಲೈವ್ ಅನ್ನು ಯೂಟ್ಯೂಬ್ ಹಾಗೂ ಟಿವಿಗಳಲ್ಲಿ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ’’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ