AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲವ್ ಓಟಿಪಿ’ಗೆ ನೀರಸ ಪ್ರತಿಕ್ರಿಯೆ, ಕಣ್ಣೀರಿಡುತ್ತಾ ನೋವು ತೋಡಿಕೊಂಡ ನಟ

Love OTP movie: ‘ಅಕಿರ’, ‘ವಾಸು ನಾನ್ ಪಕ್ಕಾ ಲೋಕಲ್’ ಇತ್ತೀಚೆಗಿನ ‘ಆರಾಮ್ ಅರವಿಂದ ಸ್ವಾಮಿ’ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ ನಿನ್ನೆ (ಶುಕ್ರವಾರ) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಪ್ರಕಟಗೊಂಡಿವೆ. ಆದರೆ ಜನ ಸಿನಿಮಾ ನೋಡಲು ಬಂದಿಲ್ಲ. ಇದು ಅನೀಶ್ ಅವರಿಗೆ ತೀವ್ರ ನೋವುಂಟು ಮಾಡಿದ್ದು, ಕಣ್ನೀರು ಹಾಕುತ್ತಾ ಭಾವುಕವಾಗಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

‘ಲವ್ ಓಟಿಪಿ’ಗೆ ನೀರಸ ಪ್ರತಿಕ್ರಿಯೆ, ಕಣ್ಣೀರಿಡುತ್ತಾ ನೋವು ತೋಡಿಕೊಂಡ ನಟ
Love Otp Aniish
ಮಂಜುನಾಥ ಸಿ.
|

Updated on: Nov 15, 2025 | 3:31 PM

Share

ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ (Love OTP) ಇದೇ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಪ್ರೇಮಕತೆಯುಳ್ಳ ಈ ಸಿನಿಮಾವನ್ನು ಲವ-ಲವಿಕೆಯಿಂದ ನಿರ್ದೇಶಕರು ತೆರೆಗೆ ತಂದಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ಬಂದ ಹೊರತಾಗಿಯೂ ಚಿತ್ರಮಂದಿರಗಳಿಗೆ ಜನ ಬಂದಿಲ್ಲ. ಇದು ನಟ ಅನೀಶ್ ಅವರಿಗೆ ಬೇಸರ ತರಿಸಿದ್ದು, ಕಣ್ಣೀರು ಹಾಕುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

‘ನನ್ನ ಹದಿನಾರು ವರ್ಷದ ನಟನಾ ವೃತ್ತಿ ಜೀವನದಲ್ಲಿ ಇಷ್ಟು ಒಳ್ಳೆಯ ವಿಮರ್ಶೆಗಳು ನನ್ನ ಇನ್ಯಾವ ಸಿನಿಮಾಕ್ಕೂ ಸಿಕ್ಕಿರಲಿಲ್ಲ. ಸಿನಿಮಾ ನೋಡಿದವರೆಲ್ಲ ಬ್ಲಾಕ್ ಬಸ್ಟರ್ ವಿಮರ್ಶೆಗಳನ್ನೇ ನೀಡಿದ್ದಾರೆ. ವಿಮರ್ಶೆಗಳನ್ನು ನೋಡಿ ಒಂದೊಳ್ಳೆ ಸಿನಿಮಾ ಕೊಟ್ಟೆವು ಎಂಬ ನೆಮ್ಮದಿಯಲ್ಲಿ ಇದ್ದೆ. ಆದರೆ ಇಂದು (ನವೆಂಬರ್ 15) ಬೆಳಿಗ್ಗೆ ಕಲೆಕ್ಷನ್​​ಗಳನ್ನು ನೋಡಿದಾಗ ಬಹಳ ಬೇಸರ ಆಯ್ತು. ನಾನು ಚಿತ್ರರಂಗದಲ್ಲಿ ಇರಬೇಕಾ ಬೇಡವಾ ಎಂಬ ಪ್ರಶ್ನೆಗಳು ನನಗೆ ಹುಟ್ಟಿಕೊಂಡಿವೆ’ ಎಂದು ಭಾವುಕರಾಗಿದ್ದಾರೆ ನಟ.

‘ಸಿನಿಮಾ ರಂಗದಲ್ಲಿ ನಾನು ಇರಬೇಕಾ ಬೇಡವಾ ಎನಿಸಿತು. ನನ್ನಿಂದ ಪ್ರೇಕ್ಷಕರನ್ನು ಸೆಳೆಯಲು ಆಗುತ್ತಿಲ್ಲವಾ ಅನಿಸಲು ಶುರುವಾಗಿದೆ. ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿಬಿಡಬೇಕಾ ಎನಿಸಿದೆ. ಏಕೆಂದರೆ ಎಂಥಹಾ ಒಳ್ಳೆಯ ಸಿನಿಮಾ ಮಾಡಿ, ಅದಕ್ಕೆ ಬಹಳ ಒಳ್ಳೆಯ ವಿಮರ್ಶೆಗಳು ಬಂದಿದ್ದರೂ ಸಹ ಜನರನ್ನು ರೀಚ್ ಆಗಲು ಆಗುತ್ತಿಲ್ಲ. ಸಿನಿಮಾ ನೋಡಿದ ಪತ್ರಕರ್ತ ಮಿತ್ರರು ಕರೆ ಮಾಡಿ ಖುಷಿ ವ್ಯಕ್ತಪಡಿಸಿದರು. ಒಳ್ಳೆಯ ಸಿನಿಮಾ ಮಾಡಿದ್ದೀರಿ ಎಂದು ಆದರೆ ಜನ ಬರುತ್ತಿಲ್ಲ ಎಂಬುದು ಅವರಿಗೇ ಶಾಕ್ ಆಗಿದೆ’ ಎಂದಿದ್ದಾರೆ ಅನೀಶ್.

ಇದನ್ನೂ ಓದಿ:ಸಿನಿಮಾ ಒಳ್ಳೆ ವಿಮರ್ಶೆ ಪಡೆದರೂ ಜನ ಬರ್ತಿಲ್ಲ ಎಂದು ಅನೀಶ್ ಕಣ್ಣೀರು

‘ನನ್ನ ‘ಅಕಿರ’, ‘ವಾಸು ನಾನ್ ಪಕ್ಕಾ ಲೋಕಲ್’ ಇತ್ತೀಚೆಗಿನ ‘ಆರಾಮ್ ಅರವಿಂದ ಸ್ವಾಮಿ’ ಅಂತಹಾ ಸಿನಿಮಾಗಳನ್ನು ನೋಡಿ ನನ್ನ ಮೇಲೆ ನಂಬಿಕೆ ಇರಿಸಿಕೊಂಡವರಿಗೆ ಹೇಳುತ್ತಿದ್ದೇನೆ. ಮುಂದಿನ ವಾರ ನೋಡುತ್ತೀನಿ, ಒಟಿಟಿಗೆ ಬಂದ ಮೇಲೆ ನೋಡುತ್ತೀನಿ ಎಂದೆಲ್ಲ ಅಂದುಕೊಳ್ಳಬೇಡಿ. ಯಾಕೆಂದರೆ ನನಗೆಂದೂ ಯಾರೂ ಇಲ್ಲ. ನಾನು ಒಬ್ಬಂಟಿ, ನಟನೆ ಜೊತೆಗೆ ಎಲ್ಲವನ್ನೂ ನಾನೇ ಮಾಡಬೇಕು. ಹಣ ಕೊಟ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಉಳಿಸಿಕೊಳ್ಳಲು ಆಗುವುದಿಲ್ಲ. ನನ್ನನ್ನು ಉಳಿಸಬೇಕು ಎಂದರೆ ಈ ಎರಡು ದಿನಗಳು ಮಾತ್ರವೇ ಇರುವುದು. ಇದು ಮಿಸ್ ಆದರೆ, ಇದು ನನ್ನ ಕೊನೆಯ ಪ್ರಯತ್ನ ಎನಿಸಿಕೊಳ್ಳುತ್ತೆ’ ಎಂದಿದ್ದಾರೆ ಅನೀಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್